ರಬ್ಬರ್‌, ಟಯರ್‌ ಆಮದಿಗೆ ಅನುಮತಿ ನೀಡಬಾರದು | ರಬ್ಬರ್‌ ಉದ್ಯಮ, ರಬ್ಬರ್ ಬೆಳೆಗಾರರನ್ನು ಬೆಂಬಲಿಸಬಹುದಾದ ಕ್ರಮಗಳು |

May 21, 2024
1:40 PM
ರಬ್ಬರ್‌ ಆಮದು ತಡೆಯಾದರೆ ಟಯರ್‌ ಉದ್ಯಮ ಹಾಗೂ ರಬ್ಬರ್‌ ಬೆಳೆಗಾರರ ರಕ್ಷಣೆ ಸಾಧ್ಯವಿದೆ ಎಂದು ಟಯರ್ ತಯಾರಕರ ಸಂಘ ಹೇಳಿದೆ.

ಭಾರತವು ಸಾಕಷ್ಟು ದೇಶೀಯ ಟಯರ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ. ಹೀಗಾಗಿ ಮುಕ್ತ ವ್ಯಾಪಾರ ಒಪ್ಪಂದಗಳ ಮೂಲಕ ಟಯರ್‌ ಹಾಗೂ ರಬ್ಬರ್ ಆಮದು ಮಾಡಬಾರದು ಎಂದು ಅಟೋಮೋಟಿವ್ ಟಯರ್ ತಯಾರಕರ ಸಂಘ (‌ATMA) ಕೇಂದ್ರ ಸರ್ಕಾರವನ್ನು ಒತ್ತಾಯಿಸಿದೆ.

ದೇಶದ 10 ಲಕ್ಷಕ್ಕೂ ಹೆಚ್ಚು ರಬ್ಬರ್ ಬೆಳೆಗಾರರು ರಬ್ಬರ್‌ ನಂಬಿ ಬದುಕು ಸಾಗಿಸುತ್ತಿದ್ದಾರೆ. ದೇಶೀಯ ರಬ್ಬರ್‌ನ ‌ ಉತ್ಪಾದನೆಯ ಶೇಕಡಾ 70 ಕ್ಕಿಂತ ಹೆಚ್ಚು  ಟಯರ್ ಉದ್ಯಮದಲ್ಲಿ ಬಳಸಲಾಗುತ್ತಿದೆ. ಹೀಗಾಗಿ ಟಯರ್‌ ಉದ್ಯಮವನ್ನು ಕೂಡಾ ರಕ್ಷಣೆ ಮಾಡಬೇಕಿದೆ, ರಬ್ಬರ್‌ ಆಮದು ತಡೆಯಬೇಕಿದೆ ಎಂದು ಟಯರ್ ತಯಾರಕರ ಸಂಘ ಹೇಳಿದೆ.

ದೇಶೀಯ ರಬ್ಬರ್‌ ಹಾಗೂ ಟಯರ್ ಉತ್ಪಾದನೆಯನ್ನು ಉತ್ತೇಜಿಸುವ ಮೂಲಕ ಮತ್ತು ತಾಂತ್ರಿಕ ಪ್ರಗತಿಯನ್ನು ಹೆಚ್ಚಿಸುವ ಮೂಲಕ, ಉದ್ಯೋಗವನ್ನು ಸೃಷ್ಟಿಸುವ, ಸುಸ್ಥಿರತೆಯನ್ನು ಉತ್ತೇಜಿಸುವ ಮತ್ತು ಆರ್ಥಿಕ ಬೆಳವಣಿಗೆಯನ್ನು‌ ವೃದ್ಧಿ ಮಾಡಬಹುದು ಹಾಗೂ ಭಾರತವು ಟಯರ್ ಉದ್ಯಮದಲ್ಲಿ ಪ್ರಮುಖ ಸ್ಥಾನ ಪಡೆಯಲು ಸಾಧ್ಯವಿದೆ ಎಂದು ATMA ಹೇಳಿದೆ.

ಭಾರತದಲ್ಲಿ ದೇಶೀಯ ಟಯರ್‌  ಉತ್ಪಾದನೆಯ  ಹೊರತಾಗಿಯೂ ಕಳೆದ ವರ್ಷ2,000 ಕೋಟಿ ಮೌಲ್ಯದ ಟಯರ್‌  ಆಮದು ಮಾಡಿಕೊಳ್ಳಲಾಗಿದೆ. ಭಾರತವು ಸಾಕಷ್ಟು ಟಯರ್ ಉತ್ಪಾದನಾ ಸಾಮರ್ಥ್ಯವನ್ನು ಹೊಂದಿದೆ.‌ ಹೀಗಾಗಿ ಆಮದು ಸುಂಕದ ರಿಯಾಯಿತಿಗಳ ಮೂಲಕ ಮುಕ್ತ ಒಪ್ಪಂದದ ಆಧಾರದ ಮೂಲಕ ರಬ್ಬರ್‌ ಹಾಗೂ ಟಯರ್‌ ಗೆ ಆಮದುಗಳಿಗೆ ಅವಕಾಶ ನೀಡಬಾರದುಎಂದು ಉದ್ಯಮ ಸಂಸ್ಥೆಗಳು ಹೇಳಿವೆ. ದೇಶೀಯ ಟಯರ್ ಉದ್ಯಮವು 5 ಲಕ್ಷಕ್ಕೂ ಹೆಚ್ಚು ಜನರಿಗೆ ಉದ್ಯೋಗ ನೀಡಿದೆ ಮತ್ತು 10 ಲಕ್ಷ ರಬ್ಬರ್ ಬೆಳೆಗಾರರನ್ನು ಬೆಂಬಲಿಸುತ್ತದೆ, ಈ ಕಾರಣಕ್ಕಾಗಿ ದೇಶದ ರಬ್ಬರ್‌ ಉದ್ಯಮವನ್ನು ಬೆಂಬಲಿಸಬೇಕು ಎಂದೂ ATMA ಹೇಳಿದೆ.
Source :IRJournal
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಜಗತ್ತು ನಮ್ಮ ಜೊತೆಗಿದೆ ಎಂಬ ಭ್ರಮೆ
August 26, 2026
5:00 PM
by: ಮಹೇಶ್ ಪುಚ್ಚಪ್ಪಾಡಿ
ತೆಂಗಿನ ಎಣ್ಣೆಯಿಂದ ವಿಮಾನದ ಇಂಧನ ? ಜೆಟ್‌ ಎಂಜಿನ್‌ ಪರೀಕ್ಷೆಯಲ್ಲಿ ಕುತೂಹಲ ಮೂಡಿಸಿದ ಫಲಿತಾಂಶ
August 26, 2026
10:44 AM
by: ದ ರೂರಲ್ ಮಿರರ್.ಕಾಂ
ಕೃಷಿ ಇನ್ನು ಕೇವಲ ಬೆಳೆ ಬೆಳೆಯುವುದಲ್ಲ – ಯುವಕರಿಗೆ ಸ್ಟಾರ್ಟ್‌ಅಪ್ ಕ್ಷೇತ್ರ
August 26, 2026
6:52 AM
by: ದ ರೂರಲ್ ಮಿರರ್.ಕಾಂ
ಬರಪೀಡಿತ ಪ್ರದೇಶಗಳ ರೈತರಿಗೆ ಗುಡ್‌ನ್ಯೂಸ್ ; ಬೆಳೆ ವಿಮೆ ನೋಂದಣಿ ಅವಧಿ ವಿಸ್ತರಣೆ
August 25, 2026
10:36 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror