ಸಾಹಿತ್ಯ

ನಿನ್ನ ಋಣವ ನಾ ಹೇಗೆ ತೀರಿಸಲಿ?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ನವ ಮಾಸ ಗರ್ಭದಲಿ ಹೊತ್ತು ಸಹಿಸಲಾರದ ನೋವನುಂಡು ಸಾವಿನ ಜೊತೆ ಹೋರಾಟ ಮಾಡಿ ಜನ್ಮ ನೀಡಿ ನನಗೆ ನೀ ತಾಯಿಯಾದೆ ನಿನ್ನ ಋಣವ ನಾ ಹೇಗೆ ತೀರಿಸಲಿ?
Advertisement

ನಿದ್ದೆಯಿಲ್ಲದ ರಾತ್ರಿಗಳನು ಬೇಸರಿಸದೇ ನೀ ಕಳೆದೆ ನಿನ್ನ ಆರೋಗ್ಯವ ಗಮನಿಸದೆ ನನ್ನ  ನೀ ಜೋಪಾನ ಮಾಡಿದೆ. ನಿನ್ನ ಋಣವ ನಾ ಹೇಗೆ ತೀರಿಸಲಿ? ನೀ ನನ್ನ ಸಾಕಿ ಸಲಹಿದೆ ನನಗೆ ನೀ ವಿದ್ಯೆ ನೀಡಿ ಬೆಳೆಸಿದೆ ನೀ  ನನ್ನ  ಬೆನ್ನೆಲುಬಾಗಿ ಇದ್ದೆ ನನ್ನ ಒಳಿತಿಗಾಗಿ ನೀ ಪ್ರಾರ್ಥಿಸಿದೆ ನಿನ್ನ ಋಣವ ನಾ ಹೇಗೆ ತೀರಿಸಲಿ ?

ನನಗಾಗಿ ನಿನ್ನ ಸುಖವ ತ್ಯಾಗ ಮಾಡಿದೆ ನಿನ್ನ ಕನಸುಗಳ ಮುಚ್ಚಿಟ್ಟು ನೀ- ನನ್ನ ಕನಸುಗಳ ನನಸಾಗಿಸಿದೆ ನಿನ್ನ ಬದುಕನ್ನು ನನಗಾಗಿ ಸವೆಸಿದೆ. ನಿನ್ನ ಋಣವ ನಾ ಹೇಗೆ ತೀರಿಸಲಿ?

ನಿನ್ನ ಮುಪ್ಪಿನಲಿ ನೀ ಮಗುವಿನಂತಾದಾಗ ನಿನಗೆ ನಾನು ತಾಯಿಯಾಗುವೆ ಎಳವೆಯಲ್ಲಿ ನಾನು ಮಾಡಿದ ಹಾಗೆ  ಮುಪ್ಪಿನಲಿ    ನೀನು ಮಾಡಿದರೆ ತಾಯಿಯಂತೆ  ನಿನ್ನಾಟ ಆನಂದಿಸುವೆ. ನೀ ನನಗೆ ತೋರಿದ ಮಮತೆಯದೆಷ್ಟು ನೀ ನನಗೆ ಮಾಡಿದ ಸೇವೆಯದೆಷ್ಟು ಬಾಯ್ತುಂಬ “ಅಮ್ಮಾ” ಎಂದರೆ ಸಂದೀತೇ ನಿನ್ನ ಋಣ ಸ್ವಲ್ಪವಾದರೂ!!!! ನಿನ್ನ ಋಣವ ನಾ ಹೇಗೆ ತೀರಿಸಲಿ?

ಒಂದು ಜನ್ಮದಲಿ ತೀರಿಸಲು ಸಾಧ್ಯವೇ ತಾಯಿಯ ತ್ಯಾಗದ ಋಣವದನು? ನನ್ನ ಗರ್ಭದಲಿ ಮುಂದೆ ನೀ ಹುಟ್ಟಿ ಬಾ ನಿನಗೆ ಜನ್ಮ ನೀಡಿ ನಾ ತಾಯಿಯಾಗುವೆ ಹೀಗೆ ತೀರಿಸುವೆ ನಾ ನಿನ್ನ ಋಣವದನು.

 

ಬರಹ :
ರೇಣುಕಾ ಸುಧೀರ್,                   ಅರಸಿನಮಕ್ಕಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಬೈಂದೂರು | ಕಡಲ ತೀರದ ಸ್ವಚ್ಛತೆಯ 100ನೇ ವಾರದ ‘ಕ್ಲೀನ್ ಕಿನಾರ’ ಕಾರ್ಯಕ್ರಮ | 50 ಟನ್ ಗಳಷ್ಟು ಕಸ ಸಂಗ್ರಹಿಸಿ ವಿಲೇವಾರಿ |

ಕಡಲ ತೀರದ ಸ್ವಚ್ಛತೆಯ 100ನೇ ವಾರದ 'ಕ್ಲೀನ್ ಕಿನಾರ' ಕಾರ್ಯಕ್ರಮಕ್ಕೆ ಶಾಸಕ ಗುರುರಾಜ್…

13 hours ago

ಹೊಸರುಚಿ | ಗುಜ್ಜೆ ಚಟ್ನಿ

ಗುಜ್ಜೆ ಚಟ್ನಿಗೆ ಬೇಕಾಗುವ ಸಾಮಗ್ರಿಗಳು ಮತ್ತು ಮಾಡುವ ವಿಧಾನ:  ಗುಜ್ಜೆ 3/4 ಕಪ್ ,ನೀರು…

14 hours ago

ಮಂಗಳ ಗ್ರಹ ಸಂಚಾರ ಯೋಗ | ಈ 7 ರಾಶಿಗೆ ರಾಜಯೋಗ

2025ರಲ್ಲಿ ಮಂಗಳ ಗ್ರಹವು ವಿವಿಧ ನಕ್ಷತ್ರಗಳಲ್ಲಿ ಸಂಚಾರ ಮಾಡುವುದರಿಂದ ಕೆಲ ರಾಶಿಗಳಿಗೆ ವಿಶೇಷ…

14 hours ago

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವ |

ಶಿವಮೊಗ್ಗದ ನವಲೆ ಕೃಷಿ ವಿಜ್ಞಾನ ಕೇಂದ್ರದ ರಜತ ಮಹೋತ್ಸವದ ಅಂಗವಾಗಿ ಮೂರು ದಿನಗಳ…

24 hours ago

ಬಾಗಲಕೋಟೆ ಮುಧೋಳ ಸೇಬು ಬೆಳೆಗಾರನ ಬಗ್ಗೆ ಮನ್ ಕೀ ಬಾತ್ ನಲ್ಲಿ ಪ್ರಧಾನಿ ಮೋದಿ ಮೆಚ್ಚುಗೆ

ಬೆಟ್ಟಗುಡ್ಡಗಳಲ್ಲಿ ಬೆಳೆಯಲಾಗುವ ಸೇಬನ್ನು ಕರ್ನಾಟಕದಲ್ಲಿಯೂ ಬೆಳೆಯಲಾಗುತ್ತಿದೆ ಎಂದು ಮನ್ ಕಿ ಬಾತ್‌ನಲ್ಲಿ ಪ್ರಧಾನಿ…

2 days ago