ಸಾಹಿತ್ಯ

ನಿನ್ನ ಋಣವ ನಾ ಹೇಗೆ ತೀರಿಸಲಿ?

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ನವ ಮಾಸ ಗರ್ಭದಲಿ ಹೊತ್ತು ಸಹಿಸಲಾರದ ನೋವನುಂಡು ಸಾವಿನ ಜೊತೆ ಹೋರಾಟ ಮಾಡಿ ಜನ್ಮ ನೀಡಿ ನನಗೆ ನೀ ತಾಯಿಯಾದೆ ನಿನ್ನ ಋಣವ ನಾ ಹೇಗೆ ತೀರಿಸಲಿ?
Advertisement
Advertisement

ನಿದ್ದೆಯಿಲ್ಲದ ರಾತ್ರಿಗಳನು ಬೇಸರಿಸದೇ ನೀ ಕಳೆದೆ ನಿನ್ನ ಆರೋಗ್ಯವ ಗಮನಿಸದೆ ನನ್ನ  ನೀ ಜೋಪಾನ ಮಾಡಿದೆ. ನಿನ್ನ ಋಣವ ನಾ ಹೇಗೆ ತೀರಿಸಲಿ? ನೀ ನನ್ನ ಸಾಕಿ ಸಲಹಿದೆ ನನಗೆ ನೀ ವಿದ್ಯೆ ನೀಡಿ ಬೆಳೆಸಿದೆ ನೀ  ನನ್ನ  ಬೆನ್ನೆಲುಬಾಗಿ ಇದ್ದೆ ನನ್ನ ಒಳಿತಿಗಾಗಿ ನೀ ಪ್ರಾರ್ಥಿಸಿದೆ ನಿನ್ನ ಋಣವ ನಾ ಹೇಗೆ ತೀರಿಸಲಿ ?

ನನಗಾಗಿ ನಿನ್ನ ಸುಖವ ತ್ಯಾಗ ಮಾಡಿದೆ ನಿನ್ನ ಕನಸುಗಳ ಮುಚ್ಚಿಟ್ಟು ನೀ- ನನ್ನ ಕನಸುಗಳ ನನಸಾಗಿಸಿದೆ ನಿನ್ನ ಬದುಕನ್ನು ನನಗಾಗಿ ಸವೆಸಿದೆ. ನಿನ್ನ ಋಣವ ನಾ ಹೇಗೆ ತೀರಿಸಲಿ?

ನಿನ್ನ ಮುಪ್ಪಿನಲಿ ನೀ ಮಗುವಿನಂತಾದಾಗ ನಿನಗೆ ನಾನು ತಾಯಿಯಾಗುವೆ ಎಳವೆಯಲ್ಲಿ ನಾನು ಮಾಡಿದ ಹಾಗೆ  ಮುಪ್ಪಿನಲಿ    ನೀನು ಮಾಡಿದರೆ ತಾಯಿಯಂತೆ  ನಿನ್ನಾಟ ಆನಂದಿಸುವೆ. ನೀ ನನಗೆ ತೋರಿದ ಮಮತೆಯದೆಷ್ಟು ನೀ ನನಗೆ ಮಾಡಿದ ಸೇವೆಯದೆಷ್ಟು ಬಾಯ್ತುಂಬ “ಅಮ್ಮಾ” ಎಂದರೆ ಸಂದೀತೇ ನಿನ್ನ ಋಣ ಸ್ವಲ್ಪವಾದರೂ!!!! ನಿನ್ನ ಋಣವ ನಾ ಹೇಗೆ ತೀರಿಸಲಿ?

Advertisement

ಒಂದು ಜನ್ಮದಲಿ ತೀರಿಸಲು ಸಾಧ್ಯವೇ ತಾಯಿಯ ತ್ಯಾಗದ ಋಣವದನು? ನನ್ನ ಗರ್ಭದಲಿ ಮುಂದೆ ನೀ ಹುಟ್ಟಿ ಬಾ ನಿನಗೆ ಜನ್ಮ ನೀಡಿ ನಾ ತಾಯಿಯಾಗುವೆ ಹೀಗೆ ತೀರಿಸುವೆ ನಾ ನಿನ್ನ ಋಣವದನು.

 

ಬರಹ :
ರೇಣುಕಾ ಸುಧೀರ್,                   ಅರಸಿನಮಕ್ಕಿ
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

Published by
ಮಿರರ್‌ ಡೆಸ್ಕ್‌

Recent Posts

ಅಡುಗೆಯ ಕಚ್ಚಾ ಎಣ್ಣೆಯ ಮೇಲಿನ ಆಮದು ಸುಂಕ ಕಡಿತ | ತೆಂಗಿಗಿಲ್ಲ ಆತಂಕ.. | ಧಾರಣೆ ಇಳಿಕೆಯ ಆತಂಕವಿಲ್ಲ |

ಆಮದಾಗುವ ಕಚ್ಚಾ ಉತ್ಪನ್ನದ ಪ್ರಭಾವ ತೆಂಗು ಮತ್ತು ಅದರ ಉತ್ಪನ್ನಗಳ ಮೇಲೆ ಇಲ್ಲದೇ…

14 hours ago

ಅರಣ್ಯದ ಬಗ್ಗೆ ಹೊಸ ಪ್ರಜ್ಞೆಯನ್ನು ಜನರು ಜಾಗೃತಗೊಳಿಸಬೇಕು

"ಜನರು ಪ್ರಕೃತಿಯ ಬಗ್ಗೆ ಪ್ರೀತಿ ಮತ್ತು ಗೌರವ, ಸರಳ ಜೀವನಶೈಲಿ ಮತ್ತು ಅರಣ್ಯದ…

18 hours ago

ಒಂದು ಕ್ರೀಡಾ ಗೆಲುವಿಗೆ ಅಷ್ಟು ಅತಿರೇಕದ ಪ್ರತಿಕ್ರಿಯೆ ಒಳ್ಳೆಯ ಲಕ್ಷಣವಲ್ಲ……

ಕ್ರೀಡೆಯನ್ನು ಅಸಹಜ ಶಕ್ತಿಯ ರೂಪದಲ್ಲಿ ನೋಡಿದರೆ ಅದು ತನ್ನ ಮೂಲ‌ ಆಶಯವನ್ನೇ ಕಳೆದುಕೊಳ್ಳುತ್ತದೆ.…

18 hours ago

ಸೂರ್ಯ-ಶನಿಯಿಂದ ಶಕ್ತಿಶಾಲಿ ಪಂಚಮಿ ಯೋಗ.. | ಏನಿದು ಯೋಗ..? ಯಾವ ರಾಶಿಗೆ ವಿಶೇಷವಾದ ಅನುಕೂಲ..?

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

19 hours ago

ಐಪಿಎಲ್‌ ಫೈನಲ್‌ ಕದನ | ರಾಯಲ್​ ಚಾಲೆಂಜರ್ಸ್​ ಬೆಂಗಳೂರು ಭರ್ಜರಿ ಗೆಲವು

ಐಪಿಎಲ್  ಫೈನಲ್ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ತಂಡವನ್ನು ಮಣಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು…

24 hours ago

ಈಶಾನ್ಯ ರಾಜ್ಯಗಳಲ್ಲಿ ಭಾರಿ ಮಳೆಯಿಂದ ಪ್ರವಾಹ | ನೂರಾರು ಗ್ರಾಮಗಳು ಜಲಾವೃತ, ಬೆಳೆ ನಷ್ಟ | 5 ಲಕ್ಷಕ್ಕೂ ಅಧಿಕ ಜನರು ಸಂತ್ರಸ್ತರು |

ಈಶಾನ್ಯ ರಾಜ್ಯಗಳ ಬಹುತೇಕ ಭಾಗಗಳಲ್ಲಿ ಮುಂದುವರಿದ ಭಾರಿ ಮಳೆಯಿಂದ ಪ್ರವಾಹ ಉಂಟಾಗಿದೆ. ಮಣಿಪುರ,…

1 day ago