ಅನುಕ್ರಮ

ದೇಶಕಟ್ಟಿದ ಸರದಾರನಿಗೆ ನಮೋ ನಮಃ…. |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸರದಾರ ವಲ್ಲಭಭಾಯಿ ಪಟೇಲರ ಜನುಮದಿನ ಅಕ್ಟೋಬರ್‌ 31

Advertisement
Advertisement

1857 ರಲ್ಲಿ ಝಾನ್ಸಿ ಯಲ್ಲಿ ರಾಣಿ ಲಕ್ಷ್ಮೀ ಬಾಯಿ ಆಂಗ್ಲರ ವಿರುದ್ಧದ ಪ್ರಥಮ ಸ್ವಾತಂತ್ರ್ಯ ಸಂಗ್ರಾಮದಲ್ಲಿ ವೀರಾವೇಷದಿಂದ ಹೋರಾಡಿ ಪ್ರಾಣತೆತ್ತಳು. ಆಗ ಹೊಲದಲ್ಲಿ ಊಳುತ್ತಿದ್ದ ಝವೇರಾಬಾಯಿ ,ಈ ಸುದ್ದಿಯನ್ನು ಕೇಳಿ ನೇಗಿಲನ್ನು ಅಲ್ಲೇ ಕೆಳ ಹಾಕಿ ಕತ್ತಿಯನ್ನು ಹಿಡಿದು ಸೈನ್ಯ ಸೇರಿ ಯುದ್ಧಕ್ಕೆ ಹೊರಟ. ಇಂಗ್ಲೀಷರ ಸೈನ್ಯ ದೊಂದಿಗೆ ಶೌರ್ಯ ಸಾಹಸಗಳೊಂದಿಗೆ ಹೋರಾಡಿದ. ಈ ಝವೇರಾಬಾಯಿಯ ಮಗನೇ ವಲ್ಲಭಭಾಯಿ ಪಟೇಲರು.

ತನ್ನ ತಂದೆಯ ಸ್ವಾತಂತ್ರ್ಯ ಹೋರಾಟದ ಕಥೆಗಳನ್ನು ತಾಯಿ ಲಾಡಬಾಯಿ ವಿವರಿಸುತ್ತಿದ್ದರೆ ಬಾಲಕ ವಲ್ಲಭಭಾಯಿಯ ಮೈ ಜುಂ ಎನ್ನುವಂತಾಗುತ್ತಿತ್ತು. ರಕ್ತ ಕುದಿಯುತ್ತಿತ್ತು…… ಗುಜರಾತಿನ ಪುಟ್ಟ ಹಳ್ಳಿ ಕರಮಸದ. ಅಲ್ಲಿನ ರೈತ ದಂಪತಿ ಝವೇರಾ ಭಾಯಿ ಹಾಗೂ ಲಾಡಬಾಯಿ ದಂಪತಿಗಳ ಐವರು ಮಕ್ಕಳಲ್ಲಿ ನಾಲ್ಕನೇಯವರು ವಲ್ಲಭಭಾಯಿ ಪಟೇಲರು. 1875  ಅಕ್ಟೋಬರ್  31  ರಂದು ಜನಿಸಿದರು.

ಬಾಲ್ಯದಿಂದಲೇ ಬ್ರಿಟಿಷ್ ರ ದಬ್ಬಾಳಿಕೆಗಳನ್ನು ನೋಡುತ್ತಾ ಬೆಳೆದುದರಿಂದ ಸಹಜವಾಗಿ ಸ್ವಾತಂತ್ರ್ಯ ಹೋರಾಟದತ್ತ ಮುಖ ಮಾಡಿದರು.ದೇಶಪ್ರೇಮ ಉಕ್ಕಿ ಹರಿಯುತ್ತಿತ್ತು. ಗಾಂಧಿಯವರೊಂದಿಗೆ ಸ್ವಾತಂತ್ರ್ಯ ಹೋರಾಟದಲ್ಲಿ ವಲ್ಲಭಭಾಯಿ ಪಟೇಲ್ ರವರೂ ಜತೆಯಾದರು. ಗಾಂಧೀಜಿಯವರು ಹಾಗೂ ವಲ್ಲಭಭಾಯಿ ಪಟೇಲರವರಿಬ್ಬರೂ ವಕೀಲಿ ವೃತ್ತಿಯಿಂದ ರಾಜಕೀಯ ಪ್ರವೇಶ ಮಾಡಿದವರು. ಅಂದಿನ ಸನ್ನಿವೇಶಗಳು ಹಾಗಿತ್ತು. ವ್ಯಾಪಾರಕ್ಕೆ ತಕ್ಕಡಿ ಹಿಡಿದು ಕೊಂಡು ಬಂದವರು ದೇಶದ ಆಡಳಿತವನ್ನು ಕೈಗೆತ್ತಿಕೊಂಡರೆ ಭಾರತಾಂಬೆಯಕ್ಕಳು ಸುಮ್ಮನಿರುವುದು ಸಾಧ್ಯವೇ. ನಮ್ಮ ಸಂಪತ್ತುಗಳನ್ನು ಕೊಳ್ಳೆ ಹೊಡೆಯುವುದನ್ನು ನೋಡುತ್ತಾ ಕುಳಿತು ಕೊಳ್ಳುವುದು ಹೇಡಿಗಳಿಂದ ಮಾತ್ರ ಸಾಧ್ಯ ಆ ಸಂದಿಗ್ಧ ಪರಿಸ್ಥಿತಿಯಲ್ಲಿ ಹೋರಾಟಕ್ಕೆ ಧುಮುಕಿದವರು ಪಟೇಲರು.

1982 ರಲ್ಲಿ ಬ್ರಿಟಿಷ್ ಸರ್ಕಾರವು ರೈತಾಪಿ ಜನರ ಮೇಲೆ ಹೆಚ್ಚಿನ ತೆರಿಗೆ ವಿಧಿಸಿತು. ಏನು ಮಾಡುವುದೆಂದರಿಯದೆ ಕಂಗಾಲಾದ ರೈತರು ಪಟೇಲರ ಬಳಿ ತಮ್ಮ ಕಷ್ಟವನ್ನು ಹೇಳಿಕೊಂಡರು. ಆಗ ಪಟೇಲರು ” ಭೂಮಿ ನಮ್ಮದು , ದೇಶ ನಮ್ಮದು, ಎಲ್ಲಿಂದಲೋ ಬಂದು ನಮ್ಮ ಮೇಲೆ ದಬ್ಬಾಳಿಕೆ ಮಾಡುವಷ್ಟು ಪೊಗರೇ” ಎಂದು ತೀವ್ರ ಸ್ವರೂಪದ ಹೋರಾಟಕ್ಕಿಳಿದು ಸಫಲರಾದರು. ಈ ಚಳುವಳಿಯಲ್ಲಿ ‌‌ಯಶಸ್ವಿಯಾದುದನ್ನು ಕಂಡು ಗಾಂಧೀಜಿಯವರು ‘ ಸರದಾರ’ ಎಂಬ ಬಿರುದನ್ನು ಕೊಟ್ಟರು. ಅಂದಿನಿಂದ ‘ಸರದಾರ್ ವಲ್ಲಭಭಾಯಿ ಪಟೇಲ್ ‘ ಎಂಬ ಹೆಸರಿನಿಂದ ಪ್ರಸಿದ್ಧರಾದರು.

Advertisement

ಸ್ವಾತಂತ್ರ್ಯ ಹೋರಾಟದಲ್ಲಿ ಮಾತ್ರವಲ್ಲದೆ ಸ್ವತಂತ್ರ ಭಾರತ ಕಟ್ಟುವಲ್ಲಿ ಪ್ರಮುಖ ಪಾತ್ರ ನಿರ್ವಹಿಸಿ ಯಶಸ್ವಿಯಾದವರು ಪಟೇಲರು. ಸ್ವತಂತ್ರವಾದ ಭಾರತದ ಪ್ರಥಮ ಪ್ರಧಾನಿ ಯಾಗುವ ಜನರ ನಿರೀಕ್ಷೆ ಹುಸಿಯಾಯಿತು. ಒಂದು ವೇಳೆ ಪಟೇಲರು ಪ್ರಧಮ ಪ್ರಧಾನ ಮಂತ್ರಿಯಾಗಿರುತ್ತಿದ್ದರೆ……….. ಎಂಬ ಮನದ ಮಾತು ಇಂದಿಗೂ ಮತ್ತೆ ಮತ್ತೆ ಕಾಡುತಿರುವುದು ಸುಳ್ಳಲ್ಲ.
ಉಕ್ಕಿನ ಮನುಷ್ಯನ ಜನುಮದಿನದ ನೆನಪುಗಳು.

# ಅಶ್ವಿನಿಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

ಪತ್ರಿಕೋದ್ಯಮ ಪದವೀಧರೆ, ಲೇಖಕಿ ಗೃಹಿಣಿ,

Published by
ಅಶ್ವಿನಿ ಮೂರ್ತಿ, ಅಯ್ಯನಕಟ್ಟೆ

Recent Posts

ಕೃಷಿ ಉತ್ಪನ್ನಗಳ ಮೌಲವರ್ಧನೆಗೆ ಪ್ರೋತ್ಸಾಹ | ಕೃಷಿ ಉದ್ಯಮಿಗಳಾಗುವಂತೆ ಉತ್ತೇಜನ

ರಾಮನಗರ ಜಿಲ್ಲೆಯಲ್ಲಿ  ಕೃಷಿ ಇಲಾಖೆ ಮತ್ತು ರಾಜ್ಯ ಕೃಷಿ ಉತ್ಪನ್ನಗಳ ಸಂಸ್ಕರಣೆ ಹಾಗೂ…

22 hours ago

ದಾವಣಗೆರೆ ಜಿಲ್ಲೆಗೆ ಮುಂದಿನ 2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಗೆ ಸಿದ್ಧತೆ

ದಾವಣಗೆರೆ ಜಿಲ್ಲೆಗೆ ಮುಂದಿನ 2 ದಿನಗಳಲ್ಲಿ2050 ಮೆಟ್ರಿಕ್ ಟನ್ ಯೂರಿಯಾ ಗೊಬ್ಬರ ಪೂರೈಕೆಯಾಗಲಿದ್ದು…

23 hours ago

ಬಳ್ಳಾರಿಯಲ್ಲಿ ತಾಳೆ ಬೆಳೆ ಕುರಿತ ತರಬೇತಿ ಕಾರ್ಯಕ್ರಮ

ಬಳ್ಳಾರಿ ಜಿಲ್ಲಾ ಪಂಚಾಯಿತಿ, ತೋಟಗಾರಿಕೆ ಇಲಾಖೆ, ಹಗರಿ ಕೃಷಿ ವಿಜ್ಞಾನ ಕೇಂದ್ರದ ಸಹಯೋಗದಲ್ಲಿ…

23 hours ago

ಹಾವೇರಿ ಜಿಲ್ಲೆಯಲ್ಲಿ ಹೆಚ್ಚುವರಿ ಯೂರಿಯಾ ರಸಗೊಬ್ಬರ ಪೂರೈಸುವಂತೆ  ಬೇಡಿಕೆ

ಹಾವೇರಿ ಜಿಲ್ಲೆಯಲ್ಲಿ ಪ್ರಸಕ್ತ ಮುಂಗಾರು ಹಂಗಾಮಿನಲ್ಲಿ 59507 ಟನ್ ಯೂರಿಯಾ ರಸಗೊಬ್ಬರ  ಪೂರೈಕೆಯಾಗಿದ್ದು,…

24 hours ago

ರಾಜ್ಯಕ್ಕೆ ಅಗತ್ಯ ರಸಗೊಬ್ಬರ ಪೂರೈಸುವಂತೆ ಕೇಂದ್ರಕ್ಕೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಾಯ

ರಾಜ್ಯದ ರೈತರ ಸಂಕಷ್ಟ ಪರಿಹರಿಸಲು ಕೊರತೆಯಿರುವ 1.65 ಲಕ್ಷ ಮೆಟ್ರಿಕ್ ಟನ್ ಯೂರಿಯಾ…

24 hours ago

ಅಮರನಾಥ ಯಾತ್ರೆ ಮುಂದುವರಿಕೆ | 9, 482 ಯಾತ್ರಿಕರಿಂದ ಪೂಜೆ ಸಲ್ಲಿಕೆ | 3.52 ಲಕ್ಷ ತಲುಪಿದ ಭಕ್ತರ ಸಂಖ್ಯೆ

ಜಮ್ಮು ಮತ್ತು ಕಾಶ್ಮೀರದದಲ್ಲಿ ಅಮರನಾಥ ಯಾತ್ರೆ ಮುಂದುವರಿದಿದ್ದು, ಪವಿತ್ರ ಗುಹಾ ದೇವಾಲಯದಲ್ಲಿ  ಸುಮಾರು…

24 hours ago