Advertisement
ಅನುಕ್ರಮ

ಸತ್ಯಮೇವ ಜಯತೇ

Share
ಸ್ವಾತಂತ್ರ್ಯ ನಮ್ಮ ಜನ್ಮಸಿದ್ಧ ಹಕ್ಕು. ವಾಕ್ ಸ್ವಾತಂತ್ರ್ಯ ಪ್ರತಿಯೊಬ್ಬರಿಗೂ ಇದೆ. ಸಂವಿಧಾನವು ಭಾರತದ ಪ್ರಜೆಗಳಿಗೆ ವಿಶೇಷವಾದ ಹಕ್ಕುಗಳನ್ನು ಕೊಟ್ಟಿದೆ. ಸಮಾನತೆಯ ಹಕ್ಕು, ಸ್ವಾತಂತ್ರ್ಯದ ಹಕ್ಕುಗಳು, ಶೋಷಣೆಯ ವಿರುದ್ಧದ ಹಕ್ಕುಗಳು ಅವುಗಳಲ್ಲಿ ಕೆಲವು. ನಮ್ಮ ದೇಶ , ನಮ್ಮ ನೆಲ ಯಾವತ್ತೂ ನಮಗೆ ಮುಖ್ಯವೇ. ಇಲ್ಲಿನ ಸಂಸ್ಕೃತಿ , ಧರ್ಮ, ಆಚಾರಣೆಗಳು ಎಲ್ಲವೂ ಕೂಡ ಅದರದ್ದೇ ಆದ ಐತಿಹ್ಯವನ್ನು ಹೊಂದಿದೆ. ನಾವು ಮೂಲ ಭಾರತೀಯರು ತಲೆ ಬಾಗ ಬೇಕಾದುದು ಮಾತೃಭೂಮಿ ಹಾಗೂ ಮಾತೆಗೆ ಮಾತ್ರ. ಹೀಗಿರುವಾಗ ದೇಶದ ಬಗ್ಗೆ ಕೀಳಾಗಿ ಮಾತನಾಡುವರನ್ನ,
ದೇಶದ ಸಂಪತ್ತನ್ನು ಲೂಟಿ ಹೊಡೆಯುವವರ ವಿರುದ್ಧ ಮಾತನಾಡಿದರೆ ತಪ್ಪಾಗುತ್ತದೆ.

ನಮ್ಮ ದೇಶದಲ್ಲಿ ಹುಟ್ಟಿ, ಅನ್ನ ನೀರು ಉಂಡು , ಇಲ್ಲಿನ ಶಾಲೆಗಳಲ್ಲೇ ಕಲಿತು, ದೇಶದ ಋಣದಲ್ಲೇ ಬಿದ್ದುಕೊಂಡಿದ್ದು ಭಾರತಕ್ಕೆ ದ್ರೋಹ ಬಗೆಯುತ್ತಿರುವವರ ಮುಖವಾಡವನ್ನು ಕಿತ್ತೊಗೆಯುವುದು ತಪ್ಪಾಗುತ್ತದೆ. ರಿಪಬ್ಲಿಕ್ ಟಿ.ವಿಯ ಮುಖ್ಯಸ್ಥ ಅರ್ನಬ್ ಗೋಸ್ವಾಮಿಯ ಬಂಧನದ ಹಿಂದಿನ ಕತೆಯೂ ಇದುವೆ. ಹೊಗಳು ಭಟ್ಟ ಪತ್ರಿಕೋದ್ಯಮಿಗಳಿಂದ ವಿಭಿನ್ನವಾಗಿರುವ ಅರ್ನಬ್ ನಿಜವಾದ ಜರ್ನಲಿಸ್ಟ್.

ಪತ್ರಕರ್ತರು ನಿಜವಾಗಿಯೂ ಮಾಡಬೇಕಾದದ್ದೇನು? ಸುತ್ತಲಿನ ಪ್ರಪಂಚದಲ್ಲಿ ಏನೇನು ನಡೆಯುತ್ತಿದೆ, ನಿಜವಾಗಿಯೂ ಏನಾಗ ಬೇಕು ಎಂಬುದರ ಕೂಲಂಕುಷ ವಿವರ. ಇದು ಸಮಾಜದ ಕೊನೆಯ ವ್ಯಕ್ತಿಯನ್ನು ತಲುಪುವಂತೆ ಮಾಡುವುದು ಪತ್ರಕರ್ತನ ಕರ್ತವ್ಯ. ಸಮಸ್ಯೆಗಳನ್ನು ತೆರೆದಿಡುವುದು, ಪರಿಹಾರದ ನಿಟ್ಟಿನಲ್ಲಿ ಮಾಡಬಹುದಾದ ಕೆಲಸಗಳೇನು ಎಂಬ ಚರ್ಚೆಗಳಿಗೆ ವೇದಿಕೆಯನ್ನು ಒದಗಿಸುವುದು , ಸಂಬಂದ ಪಟ್ಟವರ ಗಮನಕ್ಕೆ ತರುವುದು. ಇದು ಸದ್ಯದ ಕಮಿಲ ಗ್ರಾಮದ ಹೋರಾಟವಾದರೂ ಸರಿ , ರಾಷ್ಟ್ರಮಟ್ಟದ ಸಮಸ್ಯೆಗಳಾದರೂ ಸರಿ ಹೋರಾಟದಲ್ಲಿ ಪತ್ರಕರ್ತನ ಪ್ರಾಮುಖ್ಯತೆ ಎದ್ದು ಕಾಣುತ್ತದೆ. ಸಮಸ್ಯೆಗಳನ್ನು ಎತ್ತಿ ತೋರಿಸಲು ಅವರೇ ಆಗ ಬೇಕಷ್ಟೇ.

ಆದರೆ ಪಟ್ಟಭದ್ರ ಹಿತಾಸಕ್ತಿಗಳು ಇಂತಹ ನಿಜ ಹೋರಾಟಗಾರರ ಬಾಯಿ ಮುಚ್ಚಿಸುವಲ್ಲಿ ವ್ಯವಸ್ಥಿವಾಗಿ ಕೆಲಸ ಮಾಡುತ್ತವೆ. ಅರ್ನಬ್ ಗೋಸ್ವಾಮಿಯ ಬಂಧನದಲ್ಲೂ ಇಂತಹ ವಿಷಯಗಳೇ ಪ್ರಮುಖ ಪಾತ್ರವಹಿಸಿದ್ದು. ಆದರೆ ಇಂದು ಜನರು ಎಚ್ಚೆತ್ತು ಕೊಂಡಿದ್ದಾರೆ. ದೇಶದ ಒಳಿತು ಯಾರ ಕೈಯಲ್ಲಿದೆ ಎಂಬುದನ್ನು ಅರ್ಥಮಾಡಿಕೊಳ್ಳುತ್ತಿದ್ದಾರೆ. ಕುರ್ಚಿ ರಾಜಕೀಯದಿಂದ,ಜಾತಿ ರಾಜಕಾರಣದಿಂದ , ರಾಜಕಾರಣಿಗಳು ಹೊರಬರಬೇಕಾಗಿದೆ. ಭಾರತವನ್ನು ಒಡೆದು ಆಳಲು ಪ್ರಯತ್ನಿಸುತ್ತಿರುವ ಶತ್ರುಗಳಿಂದ ದೇಶವನ್ನು ಕಾಪಾಡುವುದು ಇಂದಿನ ನಮ್ಮ ಅನಿವಾರ್ಯತೆ. ದೇಶ ಕಟ್ಟುವ ಕೆಲಸಕ್ಕೆ ನಿರತರಾಗಿರುವ ಎಲ್ಲರಿಗೂ ನೈತಿಕ ಬೆಂಬಲದ ಅಗತ್ಯ ಬಹಳವಿದೆ. ಎಲ್ಲರೂ ತಳ ಮಟ್ಟದಿಂದಲೇ ಒಂದಾಗ ಬೇಕಾಗಿದೆ. ಸತ್ಯಮೇವ ಜಯತೇ..
ವಂದೇ ಮಾತರಂ.

-ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ

ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…

18 hours ago

ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…

1 day ago

ಉದ್ಯೋಗಾಕಾಂಕ್ಷಿಗಳಿಗೆ ಸುವರ್ಣಾವಕಾಶ: ಜುಲೈ 30ರಂದು ಮಂಗಳೂರಿನಲ್ಲಿ ನೇರ ಸಂದರ್ಶನ

ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…

1 day ago

ರಸಗೊಬ್ಬರದಲ್ಲಿ ಆತ್ಮನಿರ್ಭರತೆ ಅನಿವಾರ್ಯ – ಸಂಕಷ್ಟದಿಂದ ಅವಕಾಶದತ್ತ ಭಾರತ ಸಾಗಬೇಕಿದೆ

ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…

1 day ago

ಹವಾಮಾನ ವರದಿ | 24-07-2026 | ಕರಾವಳಿಯಲ್ಲಿ ಮುಂದುವರಿಯುವ ಮಳೆ, ಜುಲೈ ಅಂತ್ಯದ ವೇಳೆಗೆ ಮುಂಗಾರು ಹೇಗೆ..?

ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…

1 day ago