ಮುಂದಿನ 25 ವರ್ಷದಲ್ಲಿ ಕಾವೇರಿಯಲ್ಲಿ ನೀರಿನ ತೀವ್ರ ಕೊರತೆ | ನೀತಿ ಆಯೋಗ ಎಚ್ಚರ

July 11, 2024
10:48 AM

ಮುಂಗಾರು ಮಳೆ(Monsoon Rain) ಅಧಿಕವಾಗಿ ಸುರಿಯುತ್ತಿದೆ. ಮಳೆ(Rain) ಚೆನ್ನಾಗಿ ಆಗುತ್ತಿದೆ. ಹಳ್ಳ-ಕೊಳ್ಳಗಳು, ಅಣೆಕಟ್ಟುಗಳು(Dam) ಭರ್ತಿಯಾಗುತ್ತಿವೆ ಎಂಬ ವರದಿಗಳನ್ನು ಕೇಳಿ ನಮ್ಮಲ್ಲೇ ನಾವು ನಿಟ್ಟಿಸಿರು ಬಿಡುತ್ತಿದ್ದೇವೆ. ಆದರೆ ವಾಸ್ತವವೇ ಬೇರೆ ಇದೆ. ಇಷ್ಟೆಲ್ಲಾ ಖುಷಿ ಸುದ್ದಿಯನ್ನು ಓದಿದ ರೈತರಿಗೆ(Farmers), ಜನತೆಗೆ ಒಂದು ಶಾಕಿಂಗ್‌ ಸುದ್ದಿ ಇದೆ. ಮುಂಗಾರು ಮಳೆ ಹೊತ್ತಲ್ಲಿ ಆತಂಕ ಮೂಡಿಸುವ ಸುದ್ದಿಯನ್ನು ನೀತಿ ಆಯೋಗ (Niti Aayoga) ನೀಡಿದೆ. ಮುಂದಿನ 25 ವರ್ಷದಲ್ಲಿ ಕಾವೇರಿಯ ಪ್ರದೇಶದಲ್ಲಿ (Basin of The Cauvery River) ನೀರಿನ ತೀವ್ರ ಕೊರತೆಯಾಗಲಿದೆ(Water scarcity) ಎಂದು ಎಚ್ಚರಿಕೆ ನೀಡಿದೆ.

ಕರ್ನಾಟಕ (Karnataka) ಮತ್ತು ತಮಿಳುನಾಡು (Tamilnadu) ರಾಜ್ಯಗಳು ಕಡಿಮೆ ನೀರಿನಲ್ಲಿ ಬೆಳೆ ಬೆಳೆಯುವ ಪದ್ದತಿಯನ್ನು ಅಳವಡಿಸಿಕೊಳ್ಳುವ ಬದಲು ಹೆಚ್ಚು ನೀರನ್ನು ಉಪಯೋಗಿಸುವ ಯೋಜನೆಗಳಿಗೆ ಕೈ ಹಾಕುತ್ತಿವೆ. ಇದರಿಂದ ಕರ್ನಾಟಕ ಮತ್ತು ತಮಿಳುನಾಡು ಮಧ್ಯೆ ಬಿಕ್ಕಟ್ಟು ಹೆಚ್ಚಾಗುವ ಸಂಭವವಿದೆ. ಹೀಗಾಗಿ ಅಂತರ್ಜಲ ಹೆಚ್ಚಳಕ್ಕೆ ಮುಂದಾಗಬೇಕು ಎಂದು ಹೇಳಿದೆ. ಪ್ರಸಕ್ತ ಮುಂಗಾರಿನ ಮೊದಲ 40 ದಿನದಲ್ಲಿ ಚಿಕ್ಕಮಗಳೂರಿನಲ್ಲಿ 28%ರಷ್ಟು, ಕೊಡಗಿನಲ್ಲಿ 21%ರಷ್ಟು, ಶಿವಮೊಗ್ಗದಲ್ಲಿ 20%ರಷ್ಟು ಮಳೆ ಕೊರತೆಯಾಗಿದೆ. ಕೊಡಗಿನಲ್ಲಿ ಮಳೆ ಕಡಿಮೆಯಾದ ಕಾರಣ ಕಾವೇರಿಕೊಳ್ಳದ ಜಲಾಶಯಗಳ ಒಳಹರಿವು ಕೂಡ ಕಡಿಮೆಯಾಗಿದೆ.

– ಅಂತರ್ಜಾಲ ಮಾಹಿತಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬೇಸಿಗೆಯಲ್ಲಿ ನಿಮ್ಮ ಕಿಡ್ನಿಯನ್ನು ಕಾಪಾಡಿ..! ಮೂತ್ರಪಿಂಡದ ಕಲ್ಲು ಸಮಸ್ಯೆ ಏಕೆ ಹೆಚ್ಚುತ್ತಿದೆ?
May 23, 2026
7:12 AM
by: ಡಾ.ಆದಿತ್ಯ ಭಟ್‌, ಚಣಿಲ, BHMS
ಮಳೆಗಾಲ ಆರಂಭ- ಜೂನ್‌ 1ರಿಂದ ರಸ್ತೆ, ಗುಡ್ಡ, ಮಣ್ಣು ಅಗೆತ ಕಾಮಗಾರಿಗೆ ನಿರ್ಬಂಧ – ನಗರಪಾಲಿಕೆ ಎಚ್ಚರಿಕೆ
May 23, 2026
6:45 AM
by: ಮಿರರ್‌ ಡೆಸ್ಕ್
ಅಸ್ಸಾಂನಲ್ಲಿ ಭಾರೀ ಅಕ್ರಮ ಅಡಿಕೆ ವಶ : ಡಿಆರ್‌ಐ ದಾಳಿ, 60 ಸಾವಿರ ಕೆಜಿ ವಿದೇಶಿ ಅಡಿಕೆ ಜಪ್ತಿ
May 22, 2026
8:17 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 22-05-2026 | ಕರ್ನಾಟಕದಲ್ಲಿ ಇನ್ನೂ ಎರಡು ದಿನ ಮಳೆ ಸಾಧ್ಯತೆ – ಮೇ 30ರ ಸುಮಾರಿಗೆ ಮುಂಗಾರು ಪ್ರವೇಶ ಸಾಧ್ಯತೆ
May 22, 2026
1:14 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror