ದೇಶಕ್ಕೆ ಬರ್ಮಾ ಅಡಿಕೆ ಅವ್ಯಾಹತವಾಗಿ ಕಳ್ಳಸಾಗಾಣಿಕೆಯಾಗುತ್ತಿದೆ. ಅಲ್ಲಲ್ಲಿ ತಡೆಯಾಗುತ್ತಲೂ ಇದೆ. ಈ ಕಾರಣದಿಂದಲೇ ಅಡಿಕೆ ಮಾರುಕಟ್ಟೆಯಲ್ಲಿ ನಿರೀಕ್ಷಿತ ಏರಿಕೆ ಕಾಣುತ್ತಿಲ್ಲ. ಅಕ್ರಮವಾಗಿ ಅಡಿಕೆ ಭಾರತದೊಳಕ್ಕೆ ಬರುತ್ತಿದ್ದರೂ, ಕೋಟ್ಯಂತರ ತೆರಿಗೆ ನಷ್ಟವಾಗುತ್ತಿದ್ದರೂ ಈ ಕಳ್ಳಸಾಗಾಣಿಕೆಯ ಪ್ರಮುಖ ರುವಾರಿ ಪತ್ತೆಯಾಗದಿರುವುದೇ ಯಕ್ಷ ಪ್ರಶ್ನೆಯಾಗಿದೆ.
ಅಸ್ಸಾಂ ಸೇರಿದಂತೆ ಈಶಾನ್ಯ ರಾಜ್ಯಗಳ ಮೂಲಕ ಅಡಿಕೆ ಕಳ್ಳಸಾಗಾಣಿಕೆ ನಿರಂತರವಾಗಿ ನಡೆಯುತ್ತಿದೆ. ಈಶಾನ್ಯ ರಾಜ್ಯದ ಬಹುತೇಕ ಅಡಿಕೆ ಬೆಳೆಗಾರರು ಕೂಡಾ ಈ ಕಳ್ಳಸಾಗಾಣಿಕೆಗೆ ವಿರೋಧ ವ್ಯಕ್ತಪಡಿಸುತ್ತಿದ್ದರೂ ಅಡಿಕೆ ಸಾಗಾಣಿಕೆಗೆ ತಡೆಯಾಗಿಲ್ಲ. ಗೋಲಾಘಾಟ್-ಮೇರಪಾನಿಯಲ್ಲಿ ಬರ್ಮಾ ಅಡಿಕೆ ಕಳ್ಳಸಾಗಣೆ ಅವ್ಯಾಹತವಾಗಿ ಏರಿಕೆಯಾಗುತ್ತಿದೆ. ಮ್ಯಾನ್ಮಾರ್ನಿಂದ ಗೋಲಾಘಾಟ್ ಜಿಲ್ಲೆಯ ಮೂಲಕ ಅಕ್ರಮ ಬರ್ಮಾ ಅಡಿಕೆ ಸಾಗಾಣಿಕೆ ನಡೆಯುತ್ತಿದೆ. ಅಡಿಕೆ ಕಳ್ಳಸಾಗಾಣಿಕೆಯ ಮಾಫಿಯಾ ಬಹುದೊಡ್ಡ ಜಾಲವಾಗಿ ಈಗ ರೂಪುಗೊಳ್ಳುತ್ತಿದೆ.
ಗೋಲಘಟ್ಟ ನಗರದ ಮೂಲಕ ಬರ್ಮಾ ಅಡಿಕೆ ಸಾಗಾಟದ ವಿರುದ್ಧ ಗೋಲಘಟ್ಟದ ಸಂಘಟನೆಗಳು ಹಾಗೂ ಸಾಮಾಜಿಕ ಹೋರಾಟಗಾರರು ಹಲವು ಬಾರಿ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಆದರೆ ಜಿಲ್ಲಾಡಳಿತ ಹಾಗೂ ಗೋಲಘಟ್ಟ ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ ಎಂಬ ಆರೋಪ ವ್ಯಕ್ತವಾಗಿದೆ. ಈ ಜಾಲದ ಹಿಂದೆ ದೊಡ್ಡ ಕುಳಗಳು ಇರುವುದೇ ಇದಕ್ಕೆ ಕಾರಣವಾಗಿದೆ ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.
ಈ ಜಾಲವು ಬರ್ಮಾ ಅಡಿಕೆಯನ್ನು ನಾಗಾಲ್ಯಾಂಡ್ನ ತಪ್ಪಲಿನಲ್ಲಿ ಸಂಗ್ರಹಿಸುತ್ತಾರೆ ಮತ್ತು ಅದನ್ನು ಮೆರಾಪಾನಿಯಲ್ಲಿರುವ ಸಿಆರ್ಪಿಎಫ್ ಗೇಟ್ ಮೂಲಕ ಮತ್ತು ಮೆರಾಪಾನಿ ಪೊಲೀಸ್ ಠಾಣೆಯ ಮುಂದೆ ಪ್ರತಿದಿನ ವಿವಿಧ ವಾಹನಳಲ್ಲಿ ಸಾಗಿಸುತ್ತಾರೆ. ಇತ್ತೀಚೆಗೆ, ಮೇರಾಪಾನಿಯಲ್ಲಿ ಅಡಿಕೆ ಹೊತ್ತ ಲಾರಿ ಅಪಘಾತಕ್ಕೀಡಾಯಿತು. ಬರ್ಮಾ ಸುಪಾರಿ ತುಂಬಿದ್ದ ಅಡಿಕೆಯನ್ನು ಸ್ಥಳೀಯರು ತಡೆದು ಮೇರಪಾನಿ ಪೊಲೀಸರಿಗೆ ಒಪ್ಪಿಸಿದ್ದಾರೆ. ಆದರೆ, ಅಡಿಕೆ ಸಾಗಾಟದ ಮಾಫಿಯಾ ಮೆರಪಾನಿ ಪೊಲೀಸ್ ಠಾಣೆಯಿಂದ ಅಡಿಕೆ ತುಂಬಿದ್ದ ಟ್ರಕ್ ಬಿಡಿಸಿಕೊಳ್ಳುವ ಯತ್ನವನ್ನು ಮುಂದುವರೆಸಿದೆ ಎಂದು ಹೋರಾಟಗಾರರು ಆರೋಪ ಮಾಡಿದ್ದಾರೆ.
Illegal Burmese Arecanut transportation through Golaghat district from Myanmar has been rising. Locals intercepted the truck loaded with Burmese Arecanut and handed it over to Merapani police. The Merapani police have already seized the truck loaded with smuggled Arecanut and registered a case.
ಅರಣ್ಯದಲ್ಲಿ ಬೆಳೆಯುವ "ಸಿಕ್ಕಿಂ ಬಾಳೆ" ಜಾತಿಯಲ್ಲಿ ಹವಾಮಾನ ಬದಲಾವಣೆಯನ್ನು ತಾಳುವ ಜಿನೀಯ ಗುಣಗಳು…
ಕರ್ನಾಟಕದ ಪ್ರಮುಖ ಮಾರುಕಟ್ಟೆಗಳಲ್ಲಿ ಅಡಿಕೆ ಏರಿಳಿತ ಕಂಡುಬಂದಿದೆ. ಮಲೆನಾಡು ಮಾರುಕಟ್ಟೆಗಳಲ್ಲಿ ಸ್ವಲ್ಪ ಏರಿಕೆ…
ಅಸ್ಸಾಂನಲ್ಲಿ ಐಸಿಎಆರ್–ಐಎಆರ್ಐ ಸಂಸ್ಥೆ “ನೈಸರ್ಗಿಕ ಕೃಷಿ” ವಿಷಯದಡಿ ಕಿಸಾನ್ ಮೇಳ 2026 ಆಯೋಜಿಸಿತು.…
ಜಾಗತಿಕ ತಾಪಮಾನ ಏರಿಕೆಯಿಂದ ಭಾರತದಲ್ಲಿ ಮಾರುತ ಮಳೆಯ ತೀವ್ರತೆ ಹೆಚ್ಚುತ್ತಿರುವುದು ಹೊಸ ಅಧ್ಯಯನದಲ್ಲಿ…
ಮ್ಯಾನ್ಮಾರ್ನಿಂದ ಅಕ್ರಮ ಅಡಿಕೆ ಕಳ್ಳಸಾಗಣೆ ವಿರುದ್ಧ ಮಿಜೋರಾಂ ಸರ್ಕಾರ ಜಾರಿ ಕ್ರಮವನ್ನು ಬಿಗುಗೊಳಿಸಿದೆ.…
ಕೊಲ್ಕತ್ತಾದಲ್ಲಿ ನಡೆದ ಸಭೆಯಲ್ಲಿ ಸೆಣಬು ವಲಯ ಸುಧಾರಣೆ, ಸುಸ್ಥಿರ ಕೃಷಿ ಹಾಗೂ ಮೀನುಗಾರಿಕೆ…