ಕೇರಳದ ಕೋಝಿಕ್ಕೋಡ್ ಜಿಲ್ಲೆಯಲ್ಲಿ ಹರಡುತ್ತಿರುವ ನಿಫಾ ವೈರಸ್ ಬಗ್ಗೆ ಈಗ ಕೃಷಿಕರೂ ಆತಂಕಕ್ಕೆ ಒಳಗಾಗಿದ್ದಾರೆ. ಬಾವಲಿಗಳ ಕಾಟ ಹೆಚ್ಚಾಗಿರುವ ಪ್ರದೇಶದಲ್ಲಿ ಈಗ ಅಡಿಕೆ ಸಹಿತ ಕೃಷಿ ಕೆಲಸಕ್ಕೂ ಆತಂಕವಾಗಿದೆ.
ನಿಫಾ ವೈರಸ್ ಹರಡುತ್ತಿರುವ ಹಿನ್ನೆಲೆಯಲ್ಲಿ ಕೃಷಿಕರಿಗೆ ಸವಾಲಾಗಿ ಪರಿಣಮಿಸಿದೆ. ಬಾವಲಿಗಳ ಕೃಷಿಗೂ ಹೆಚ್ಚಾಗಿ ತೊಂದರೆ ಕೊಡುತ್ತವೆ. ಅಡಿಕೆ, ಬಾಳೆ, ತೆಂಗು ಕೃಷಿಯಲ್ಲೂ ಬಾವಲಿಗಳ ಓಡಾಟ ಇರುತ್ತದೆ. ನಿಫಾ ವೈರಸ್ ಬಾವಲಿ ಮೂಲಕ ಹರಡುತ್ತದೆ ಎನ್ನುವ ಸುದ್ದಿಯು ಕೇರಳದ ಕೋಝಿಕ್ಕೋಡ್ ಪ್ರದೇಶದ ಕೃಷಿಕರಿಗೆ ಆತಂಕಕ್ಕೆ ಕಾರಣವಾಗಿದೆ ಎಂದು ಸುದ್ದಿ ಸಂಸ್ಥೆಯೊಂದು ವರದಿ ಮಾಡಿದೆ.
ಕೋಝಿಕ್ಕೋಡ್ ಜಿಲ್ಲೆಯಲ್ಲೂ ಅಡಿಕೆ ಸ್ವಲ್ಪ ಪ್ರಮಾಣದಲ್ಲಿ ಬೆಳೆಯಲಾಗುತ್ತದೆ. ಈಗ ವೈರಸ್ ಹರಡುವ ಪ್ರದೇಶದಲ್ಲೂ ಅಡಿಕೆ ಕೃಷಿ ಇರುವುದರಿಂದ ಈಗ ಅಡಿಕೆ ಬಾವಲಿ ಕಚ್ಚಿ ಕೆಳಗೆ ಬೀಳಿಸುತ್ತದೆ. ಈ ಅಡಿಕೆಯನ್ನು ಹೆಕ್ಕುವ ಸಂದರ್ಭ ಕೃಷಿಕರಿಗೆ ಭಯದ ವಾತಾವರಣ ಉಂಟಾಗಿದೆ. ವೈರಾಣು ಹರಡುವ ಭೀತಿಯಿಂದ ಅಡಿಕೆ ಸಂಗ್ರಹಿಸಲು ಸಾಧ್ಯವಾಗದ ಪರಿಸ್ಥಿತಿ ಇಲ್ಲಿ ಇದೆ. ಬಾಳೆ ಕೃಷಿ ಸೇರಿದಂತೆ ಹಣ್ಣಿನ ಕೃಷಿಗಳನ್ನು ಬೆಳೆಸುವವರೂ ಇದೇ ಬಿಕ್ಕಟ್ಟನ್ನು ಎದುರಿಸುತ್ತಿದ್ದಾರೆ. ನಿಫಾ ಭೀತಿಯಿಂದ ಹಣ್ಣುಗಳ ಬೆಲೆಯೂ ಇಳಿಕೆಯಾಗಿದೆ. ವಿಶೇಷವಾಗಿ ಕೋಝಿಕ್ಕೋಡಿನ ಬಾಳುಶ್ಶೇರಿ ಕ್ಷೇತ್ರದ ಗುಡ್ಡಗಾಡು ಪ್ರದೇಶದಲ್ಲಿ ಭತ್ತದ ಕೃಷಿಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಇದೇ ಭಾಗದಲ್ಲಿ ಅಡಿಕೆ ಹಾಗೂ ಹಣ್ಣಿನ ಕೃಷಿಯೂ ಇದೆ.
ಆಗಸ್ಟ್ 2ರಿಂದ 8ರವರೆಗೆ ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್-11 ಮುಕ್ತ ಹಾಗೂ ಬಾಲಕಿಯರ ಚೆಸ್…
ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…
ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…
ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…
ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…