ಕಾಫಿ ತೋಟದ ಅಭಿವೃದಿಗಾಗಿ ಸಹಾಯಧನ | ಕಾಫಿ ಬೆಳೆಗಾರರು ಇಂದೇ ಅರ್ಜಿ ಸಲ್ಲಿಸಿ..

August 8, 2024
6:40 PM

 ಕಾಫಿ ಬೆಳೆಗಾರರಿಗೆ(Coffee planters) ಸಿಹಿ ಸುದ್ದಿ. 2024-25 ನೆ ಸಾಲಿಗೆ ಕಾಫಿ ಮಂಡಳಿವತಿಯಿಂದ(coffee board) ಒಟ್ಟಾರೆ ಕಾಫಿ ತೋಟದ ಅಭಿವೃದಿ(development) ಪಡಿಸುವ ದೃಷ್ಟಿಯಿಂದ ಈ ಕೆಳಕಂಡ ಕಾರ್ಯಚಟುವಟಿಗಳಿಗಾಗಿ ಸಹಾಯಧನದ(subsidy) ಅನುಮೋದನೆ ದೊರೆತಿರುತ್ತದೆ.

1. ಕಾಫಿ ಮರುನಾಟಿ (Replantation)
2. ನೀರಾವರಿ ಯೋಜನೆಯಡಿ – ಕೆರೆ/ತೆರೆದಬಾವಿ/ರಿಂಗ್ ಬಾವಿ/ಸ್ಪ್ರಿಂಕ್ಲರ್ ಇರ್ರಿಗೇಷನ್ / ಹನಿ ನೀರಾವರಿಗೆ
3. ಕಾಫಿಗೋಡೌನ್ / ಕಾಫಿ ಕಣ /ಪಲ್ಪರ್ ಯುನಿಟ್ /Eco-pulper ಮೆಕಾನಿಕಲ್ ಡ್ರೈಯರ್/ಸೋಲಾರ್ ಟನೆಲ್ ಡ್ರೈಯರ್
4. ಬಿಳಿಕೊಂಡ ಕೊರಕದ ಹತೋಟಿ ಗಾಗಿ- Non-woven Fabric wraping material
5. ಕಾಫಿ ತೋಟದಲ್ಲಿ ಬಳಸಬಹುದಾದ ಯಂತ್ರೋಪಕರಣಗಳು ಇತ್ಯಾದಿ.
ಈ ಮೇಲ್ಕಂಡ ಚಟುವಟಿಕೆಗಳನ್ನು ತಮ್ಮ ತೋಟದಲ್ಲಿ ಅಬಿವೃದ್ದಿ ಪಡಿಸಲಿಚ್ಚಿಸುವ ಆರ್ಹ ಕಾಫಿ ಬೆಳೆಗಾರರಿಂದ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ . ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ 30/09/2024.

ಆರ್ಹತೆ : 25 Ha (62 ಎಕರೆ) ವರೆಗಿನ ಕಾಫಿ ತೋಟ ಹೊಂದಿರುವ ಎಲ್ಲಾ ಬೆಳೆಗಾರರು ಅರ್ಜಿ ಸಲ್ಲಿಸಬಹುದು. ದಾಖಲಾತಿಗಳ ವಿವರ :

  1. ಅರ್ಜಿದಾರರ ಫೋಟೋ
  2. ಆಧಾರ್ ಕಾರ್ಡ್
  3. ಬ್ಯಾಂಕ್ ಪಾಸ್ ಬುಕ್ ಜೆರಾಕ್ಸ್.
  4. 2024-25 ನೇ ಸಾಲಿನ ಪಹಣಿಗಳು
  5. ಖಾತಾ ನಕಲು (katha extract)
  6. ತೋಟದ ಅಂದಾಜು ನಕ್ಷೆ (Estate boundary sketch)
  7. ಕ್ವೇಟೇಷನ್/ ಪ್ಲಾನ್ & ಎಸ್ಟಿಮೇಷನ್.
  8. ಜಾತಿ ಪ್ರಮಾಣ ಪತ್ರ (SC/ST ಕಾಫಿ ಬೆಳೆಗಾರರಿಗೆ ) ಹೆಚ್ಚಿನ ಮಾಹಿತಿಗಾಗಿ ಹತ್ತಿರದ ಕಾಫಿ ಮಂಡಳಿ ಕಚೇರಿಯನ್ನು ಸಂಪರ್ಕಿಸಲು ಈ ಮೂಲಕ ಕೋರಲಾಗಿದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಭಾರೀ ಮಳೆ ಹಿನ್ನೆಲೆ – ದಕ್ಷಿಣ ಕನ್ನಡದಲ್ಲಿ ಇಂದು ಶಾಲೆ, ಪಿಯು ಕಾಲೇಜುಗಳಿಗೆ ರಜೆ ಘೋಷಿಸಿ ಜಿಲ್ಲಾಡಳಿತ ಆದೇಶ
July 23, 2026
7:29 AM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 22.07.2026 | ಉತ್ತರ ಕನ್ನಡ, ಉಡುಪಿಯಲ್ಲಿ ಉತ್ತಮ ಮಳೆಯ ಸಾಧ್ಯತೆ; ರಾಜ್ಯದಲ್ಲಿ ಮಳೆ ಚಟುವಟಿಕೆ ಮುಂದುವರಿಕೆ
July 22, 2026
3:55 PM
by: ಸಾಯಿಶೇಖರ್ ಕರಿಕಳ
ಆಮದು ಕಳಪೆ ಅಡಿಕೆ ಮಿಶ್ರಣದ ಎಚ್ಚರಿಕೆ- ಬೆಳೆಗಾರರಿಗೆ ಕ್ಯಾಂಪ್ಕೊ ಮನವಿ
July 21, 2026
11:55 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 21-07-2026 | ಕರಾವಳಿ-ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಕೆ, ಭಾರೀ ಮಳೆ ಸಾಧ್ಯತೆ ಕಡಿಮೆ
July 21, 2026
4:32 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror