Advertisement
MIRROR FOCUS

ಸಿರಿಧಾನ್ಯ ಕೃಷಿಯಲ್ಲಿ ಯಶಸ್ಸು | ವಾಣಿಜ್ಯ ಬೆಳೆಯಿಂದ ಹೊರಬಂದ ರೈತರು | 5 ಹಳ್ಳಿಯಲ್ಲಿ ರೈತರಿಂದ ಪ್ರಯೋಗ |

Share

ಇಂದು ಎಲ್ಲೆಲ್ಲೂ ವಾಣಿಜ್ಯ ಬೆಳೆಯದ್ದೇ ಹವಾ. ಬೆಳೆ ಬೆಳೆದು ಹೆಚ್ಚಿನ ಆದಾಯ ಪಡೆಯಬೇಕು ಎನ್ನುವುದಷ್ಟೇ ಎಲ್ಲರ ಗುರಿ. ಆದರೆ ಇದೊಂದು ಹಳ್ಳಿಯ ಜನರು ಹಣ ಮಾತ್ರವಲ್ಲ ಆರೋಗ್ಯವೂ ಬೇಕು ಎಂದು ವಾಣಿಜ್ಯ ಬೆಳೆಯಿಂದ ಸಿರಿಧಾನ್ಯ ಕೃಷಿಯತ್ತ ಮುಖ ಮಾಡಿದ್ದಾರೆ. ಅದರ ಜೊತೆಗೆ ಸಾವಯವ ಮಾದರಿಯನ್ನೂ ಅನುಸರಿಸಿಕೊಂಡು ಈಗ ತಾವೇ ಮಾರುಕಟ್ಟೆ ವ್ಯವಸ್ಥೆಯನ್ನೂ ಕಂಡುಕೊಂಡಿದ್ದಾರೆ. ಬಹುತೇಕ ಯಶಸ್ಸೂ ಕಂಡಿದ್ದಾರೆ. ಈ ಸಾಹಸಗಾಥೆಯ ವರದಿ ಇಲ್ಲಿದೆ……..ಮುಂದೆ ಓದಿ….

ಮಣ್ಣಿನ ಸಾರ, ಜನರ ಆರೋಗ್ಯ ಮತ್ತು ಪರಿಸರದ ಹಿತ ರಕ್ಷಣೆಯ ಉದ್ದೇಶದಿಂದ ಕೆಲವೇ ಕೆಲವು ರೈತರು ಆರಂಭಿಸಿದ ಕನಸೊಂದು ಫಲಕೊಡುತ್ತಿದೆ. ಸಾವಯವ ಧಾನ್ಯಗಳನ್ನು ಸಂಗ್ರಹಿಸಿ ಸಂಸ್ಕರಿಸಿ, ತಾವೇ ಬ್ರಾಂಡಿಂಗ್‌ ಮಾಡಿ ಮಾರಾಟ ಮಾಡುವ ಈ  ಕನಸು ತೆರೆದುಕೊಂಡದ್ದು ರಾಯಚೂರು ಜಿಲ್ಲೆಯ ಚಕ್ಕಲದಿನ್ನಿ ಗ್ರಾಮದಲ್ಲಿ. ಬೆಟ್ಟದ ಬಸವೇಶ್ವರ ರೈತ ಉತ್ಪಾದಕ ಕಂಪನಿಯು ರೈತರಿಗೆ ಬೆಂಗಾವಲಾಗಿ ನಿಂತಿರುವ ಸಂಸ್ಥೆ.

ರಾಯಚೂರು ಜಿಲ್ಲೆಯ ತುಂಗಭದ್ರಾ ನದಿ ನೀರಿನ ಸಮೃದ್ಧ ಕೃಷಿಯಲ್ಲಿ ತೊಡಗಿರುವ ಗ್ರಾಮದ ಪ್ರಗತಿಪರ ರೈತರು ವಾಣಿಜ್ಯ ಬೆಳೆಗಳತ್ತ ಮುಖ ಮಾಡಿದ್ದರು. ಹೆಚ್ಚಿನ ಲಾಭದ ದೃಷ್ಟಿಯಿಂದ ರಾಸಾಯನಿಕ, ಕೀಟನಾಶಕ ಬಳಕೆಯೂ ಅನಿವಾರ್ಯವಾಗಿತ್ತು. ಹೀಗೇ ರಾಸಾಯನಿಕ ಬಳಕೆಯನ್ನು ಕಡಿಮೆ ಮಾಡಲು ಹಾಗೂ ಆರೋಗ್ಯವೂ ಅಗತ್ಯ ಎಂದು ಪರಿಗಣಿಸಿ ಕೆಲವು ರೈತರು  ರಾಸಾಯನಿಕ ಹಾಕುವುದನ್ನು ನಿಲ್ಲಿಸುವ ನಿರ್ಧಾರ ಕೈಗೊಂಡರು. ಪರ್ಯಾಯ ಬೆಳೆಯತ್ತ ಯೋಚಿಸಿದಾಗ ಸಿರಿಧಾನ್ಯ ಗಮನಕ್ಕೆ ಬಂತು. ಇದಕ್ಕಾಗಿ  ಜನರ ಆರೋಗ್ಯ, ಮಣ್ಣಿನ ಫಲವತ್ತತೆ, ಮಾಲಿನ್ಯ ರಹಿತ ಪರಿಸರ ನಿರ್ಮಾಣದ ಕನಸಿನೊಂದಿಗೆ ಸಿರಿಧಾನ್ಯಗಳ ಕೃಷಿಯಲ್ಲಿ ತೊಡಗಿಕೊಂಡರು. ಆದರೆ ಸಹಜವಾಗಿಯೇ ರೈತರಿಗೆ ಮಾರುಕಟ್ಟೆ ಸಮಸ್ಯೆಯಾಯಿತು. ಕಡಿಮೆ ಬೆಲೆಯಲ್ಲಿ ಮಾರುಕಟ್ಟೆಯಲ್ಲಿ ಕೇಳಲು ಆರಂಭಿಸಿದಾಗ , ಸೋತರು. ಆದರೆ ಛಲ ಬಿಡಲಿಲ್ಲ, ಈಗ ತಾವೇ ಬೆಳೆದ ಊದಲು, ಕೊರಲೆ, ಆರಕ ಇತ್ಯಾದಿ ಸಿರಿಧಾನ್ಯಗಳನ್ನು ಸಂಸ್ಕರಿಸಿ ತಾವೇ ನೆರೆ ರಾಜ್ಯಗಳಿಗೆ ಮಾರುಕಟ್ಟೆ ಮಾಡುವ ಮೂಲಕ ಲಾಭವನ್ನೂ ಗಳಿಸುತ್ತಿದ್ದಾರೆ.ಇವರ ಕನಸಿಗೆ ಭಾರತೀಯ ಕೃಷಿ ಸಂಶೋಧನಾ ಕೇಂದ್ರ, ರಾಯಚೂರು ಕೃಷಿ ವಿಶ್ವವಿದ್ಯಾಲಯಗಳು ಘಟಕ ಆರಂಭಿಸಲು ಪ್ರೋತ್ಸಾಹ ನೀಡಿವೆ.ಬಸವೇಶ್ವರ ರೈತ ಉತ್ಪಾದಕ ಕಂಪನಿಯು ಕೆಲಸ ಮಾಡುತ್ತಿದೆ.

ತುಂಗಭದ್ರಾ ಆಸುಪಾಸಿನಲ್ಲಿ ನೀರು ಇರುವುದರಿಂದ ಹೆಚ್ಚು ಆದಾಯವೂ ಬರುತ್ತಿರುವುದರಿಂದ ವಾಣಿಜ್ಯ ಬೆಳೆಯತ್ತ ಆಸಕ್ತರಾಗಿದ್ದರು. ಸಿರಿಧಾನ್ಯ ಬೆಳೆದರೆ  ಮಾರುಕಟೆಯದ್ದೇ ಸಮಸ್ಯೆಯಾಗಿತ್ತು. ಯಾವಾಗ ರೈತ ಉತ್ಪಾದಕ ಕಂಪನಿಯು ರೈತರ ನೆರವಿಗೆ ಬಂದಿತೋ ಆಗ ಸಮಸ್ಯೆಗಳೂ ಬಗೆಹರಿದವು. ಸಂಸ್ಥೆಯಲ್ಲಿ ಸುಮಾರು 700 ಮಂದಿ ರೈತರು ಸದಸ್ಯರಾದರು, ಸುಮಾರು 5 ಗ್ರಾಮಗಳ ರೈತರು ಸಂಸ್ಥೆಯ ಜೊತೆ ಕೈಜೋಡಿಸಿದರು. ತಾವೇ ಸಿರಿಧಾನ್ಯ ಬೆಳೆಯಲು ಆರಂಭಿಸಿದರು. ಬ್ರಾಂಡಿಂಗ್‌ ಮಾಡಿ ಮಾರುಕಟ್ಟೆ ಮಾಡಲು ರೈತ ಉತ್ಪಾದಕ ಕಂಪನಿಯು ಪ್ರೊಸೆಸಿಂಗ್‌ ಯುನಿಟ್‌ ಸ್ಥಾಪಿಸಿ ರೈತರಿಗೂ ಉತ್ತಮ ಧಾರಣೆ ನೀಡಿ ಖರೀದಿ ಮಾಡಿತು. ಬಳಿಕ ತಮಿಳುನಾಡು, ಆಂಧ್ರಪ್ರದೇಶ, ಬೆಂಗಳೂರು ಸೇರಿದಂತೆ ರಾಜ್ಯದ ವಿವಿದೆಡೆಗೆ ಸರಬರಾಜು ಕೂಡಾ ಮಾಡಿತು ಈ ಸಂಸ್ಥೆ. ಈಗ ಉತ್ತಮ ಮಾರುಕಟ್ಟೆಯೂ ಸೃಷ್ಟಿಯಾಗಿದೆ. ರೈತರೂ ಆಸಕ್ತಿಯಿಂದ ಬೆಳೆಯುತ್ತಿದ್ದಾರೆ. ಈಗಾಗಲೇ 500 ಎಕ್ರೆ  ಪ್ರದೇಶದಲ್ಲಿ ರೈತರು ಸಿರಿಧಾನ್ಯ ಬೆಳೆಯುತ್ತಿದ್ದಾರೆ, ಮುಂದೆ ಇನ್ನೂ 200 ಎಕ್ರೆಯಷ್ಟು ಪ್ರದೇಶದಲ್ಲಿ ರೈತರು ಬೆಳೆಯುವ ನಿರೀಕ್ಷೆ ಇದೆ ಎನ್ನುತ್ತಾರೆ ರೈತ ಉತ್ಪಾದಕ ಕಂಪನಿಯ ರೈತ ಶರಣಗೌಡ.

ವಾಣಿಜ್ಯ ಬೆಳೆಗಳಿಗಿಂತಲೂ ಹೆಚ್ಚಿನ ಆದಾಯ ಇದೆ ಎಂದು ರೈತರು ಈಗ ಅನುಭವದಿಂದ ಹೇಳಲು ತೊಡಗಿದ್ದಾರೆ. ರಾಸಾಯನಿಕದ ಬಳಕೆಯೂ ಅಗತ್ಯ ಇಲ್ಲ ಎನ್ನುತ್ತಾರೆ ಯುವ ರೈತ ಅರುಣ್‌ ಕುಮಾರ್.

ಒಟ್ಟಿನಲ್ಲಿ ವಾಣಿಜ್ಯ ಬೆಳೆಗಳಿಂದ ಹೊರಬರಲು ಹಾಗೂ ರೈತರು ಬೆಳೆದ ಉತ್ಪನ್ನಗಳ ಮಾರುಕಟ್ಟೆ ಹಾಗೂ ಸಂಸ್ಕರಣೆಯ ಮೂಲಕ ಬ್ರಾಂಡಿಂಗ್‌ ಮಾಡುವ ರೈತ ಉತ್ಪಾದಕ ಕಂಪನಿಯ ಪ್ರಯತ್ನ ಮಾದರಿಯಾಗಿದೆ.

The objective of everyone is to cultivate commercial crops and increase their income. However, the residents of this village have shifted their focus to millet cultivation from commercial crops, as they prioritize not only financial gain but also health. They have now established a market system and many have achieved success. report on this development…..

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬೇವಿನ ಬೀಜದಿಂದ ಆದಾಯದ ಅವಕಾಶ ! ಚಿಕ್ಕಮಗಳೂರಿನ ಯುವ ರೈತನ ಸಕ್ಸಸ್ ಸ್ಟೋರಿ

ಚಿಕ್ಕಮಗಳೂರಿನ ರೈತ ಶಿವಪ್ರಸಾದ್ ಬೇವಿನ ಬೀಜ ಸಂಸ್ಕರಣೆಯ ಮೂಲಕ ಯಶಸ್ಸು ಕಂಡಿದ್ದಾರೆ. ಅವರ…

21 hours ago

ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು : ಭಾರತದ ಕೃಷಿಗೆ ಎದುರಾಗುತ್ತಿರುವ ಸವಾಲು

ಕಡಿಮೆ ಮಳೆ ಮತ್ತು ಪಶ್ಚಿಮ ಏಷ್ಯಾ ಬಿಕ್ಕಟ್ಟು ಭಾರತೀಯ ಕೃಷಿಗೆ ದೊಡ್ಡ ಹೊಡೆತವಾಗುವ…

1 day ago

ಯಾದಗಿರಿಯಲ್ಲಿ ಬಿಸಿಗಾಳಿ ಎಚ್ಚರಿಕೆ – ‘ಯೆಲ್ಲೋ ಅಲರ್ಟ್’ ಘೋಷಣೆ, ಮುನ್ನೆಚ್ಚರಿಕೆ ಪಾಲಿಸಿ..!

ಯಾದಗಿರಿಯಲ್ಲಿ ಬಿಸಿಗಾಳಿ ಹೆಚ್ಚಾಗುವ ಸಾಧ್ಯತೆ ಹಿನ್ನೆಲೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಸಾರ್ವಜನಿಕರು ಹಾಗೂ…

1 day ago

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ದಾಖಲೆ: ಕಲಬುರಗಿ ಯುವ ರೈತನಿಗೆ ರಾಜ್ಯದ ಮೆಚ್ಚುಗೆ!

ಬೇಸಿಗೆಯಲ್ಲಿಯೂ ಎಳ್ಳು ಬೆಳೆದು ಉತ್ತಮ ಇಳುವರಿ ಪಡೆದ ವಿಜಯಕುಮಾರ್ ಪಾಟೀಲ್ ಇತರ ರೈತರಿಗೆ…

2 days ago

2026 ಮುಂಗಾರು ಮುನ್ಸೂಚನೆ – ಕೇರಳಕ್ಕೆ ನಿರೀಕ್ಷೆಗಿಂತ ಮುನ್ನವೇ ಆಗಮನ? – ಮಳೆ ಕಡಿಮೆಯಾಗುವ ಸಾಧ್ಯತೆ- ಕೃಷಿಗೆ ದೊಡ್ಡ ಸವಾಲು

2026ರ ಮುಂಗಾರು ಬೇಗ ಆರಂಭವಾಗುವ ಸಾಧ್ಯತೆ ಇದ್ದರೂ, ಮಳೆಯ ಪ್ರಮಾಣ ಕಡಿಮೆಯಾಗಬಹುದು. ಇದು…

2 days ago

ಈರುಳ್ಳಿಯಲ್ಲಿ ಇಳುವರಿ ಹೆಚ್ಚಿಸುವ ರಹಸ್ಯ..! ಜೇನುನೊಣಗಳ ಪರಾಗಸ್ಪರ್ಶದಿಂದ ಡಬಲ್ ಲಾಭ

ಈರುಳ್ಳಿ ಬೆಳೆಯಲ್ಲಿ ಜೇನುನೊಣಗಳ ಪರಾಗಸ್ಪರ್ಶದಿಂದ ಇಳುವರಿ ಹೆಚ್ಚಿಸಬಹುದು ಎಂದು ತಜ್ಞರು ತಿಳಿಸಿದ್ದಾರೆ. ರೈತರಿಗೆ…

2 days ago