ಸಾಮಾನ್ಯವಾಗಿ ಮದುವೆ(Marriage) ಸಮಾರಂಭವಾಗಲಿ, ಗೃಹಪ್ರವೇಶವಿರಲಿ(House Opening) ಆಮಂತ್ರಣ ಪತ್ರಿಕೆಯ(Invitation) ಮೇಲೆ ಕೆಲವರು ‘ನಿಮ್ಮ ಆಶೀರ್ವಾದವೇ ಉಡುಗೊರೆ’ ಎಂದು ಬರೆಸುತ್ತಾರೆ. ಆದರೆ ಈ ಶುಭಸಂದರ್ಭದಲ್ಲಿ ನೀವು ಇದಕ್ಕಿಂತ ಒಂದು ಒಳ್ಳೆಯ ಕಾರ್ಯ ಮಾಡಬಹುದು.
ನಿಮ್ಮ ಆಮಂತ್ರಣ ಪತ್ರಿಕೆಯ ಮೇಲೆ ಹಾಕಿರುವ ‘ಆಶೀರ್ವಾದವೇ ಉಡುಗೊರೆ’ ಎಂಬ ವಾಕ್ಯದ ಬದಲಿಗೆ ‘ನಿಮ್ಮ ಉಡುಗೊರೆ ಪವಿತ್ರ ಗೋಮಾತೆಗೆ’ ಅಥವಾ ‘ಗೋಶಾಲೆಗೆ’ ಎಂದು ಹಾಕಿ. ಬಂದ ಅತಿಥಿಗಳು ಧಾರಾಳ ಮನಸ್ಸಿನಿಂದ ನೀಡುತ್ತಾರೆ. 100, 200 ಹಾಕುವವರು 500 ರೂ. ಕೂಡ ಹಾಕಬಹುದು. ಒಂದು ಮದುವೆ ಸಮಾರಂಭಕ್ಕೆ ಸಾಮಾನ್ಯವಾಗಿ ಸಾವಿರ ಜನ (500 ಕುಟುಂಬ) ಬರಬಹುದು. ಒಂದು ಕುಟುಂಬಕ್ಕೆ ಕೇವಲ 200 ರೂ. ಎಂದು ಲೆಕ್ಕ ಹಿಡಿದರೂ ಒಂದು ಲಕ್ಷದ ತನಕ ಹಣ ಸಂಗ್ರಹವಾಗುತ್ತದೆ.
ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಗೋಶಾಲೆಗಳಿಗೆ ನೀಡುತ್ತಿರುವ ಅನುದಾನ ಕೂಡಾ ನಿಂತಿದೆ. ಆದ್ದರಿಂದ ಗೋಶಾಲೆಗಳನ್ನು ನಡೆಸುತ್ತಿರುವವರ ಪರಿಸ್ಥಿತಿ ಆರ್ಥಿಕವಾಗಿ ಬಹಳ ಗಂಭೀರವಾಗಿದೆ. ನಿಮ್ಮ ಈ ಒಂದು ಪ್ರಯತ್ನದಿಂದ ನಿಮ್ಮ ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೂ ಹಾಗೂ ನಿಮ್ಮ ಕುಟುಂಬಕ್ಕೂ ಗೋಮಾತೆಯ ಆಶೀರ್ವಾದ ಲಭಿಸುತ್ತದೆ. ಹಾಗೂ ಗೋಶಾಲೆಗೂ ಆರ್ಥಿಕವಾಗಿ ಸಹಾಯವಾಗುತ್ತದೆ. ಇದನ್ನು ಆದಷ್ಟು ಜನರಿಗೆ ಶೇರ್ ಮಾಡಿ, ಇದೊಂದು ದೊಡ್ಡ ಅಭಿಯಾನವಾಗಲಿ. ಜಯತು ಗೋಮಾತಾ!
ಆಗಸ್ಟ್ 2ರಿಂದ 8ರವರೆಗೆ ಮಂಗಳೂರಿನಲ್ಲಿ ರಾಷ್ಟ್ರೀಯ ಅಂಡರ್-11 ಮುಕ್ತ ಹಾಗೂ ಬಾಲಕಿಯರ ಚೆಸ್…
ICAR-CPCRI ಸಂಶೋಧನೆಯ ಪ್ರಕಾರ ಅಡಿಕೆ ತಳಿಗಳಲ್ಲಿ ಆಲ್ಕಲಾಯ್ಡ್ ಪ್ರಮಾಣದಲ್ಲಿ ಗಣನೀಯ ವ್ಯತ್ಯಾಸವಿದೆ. ಮಂಗಳ…
ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯಲ್ಲಿ ನಿರಂತರ ಮಳೆಯಾಗುತ್ತಿರುವ ಹಿನ್ನೆಲೆ ಮುಂಜಾಗೃತಾ ಕ್ರಮವಾಗಿ…
ಮಂಗಳೂರಿನಲ್ಲಿ ಜುಲೈ 30ರಂದು ವಿವಿಧ ಖಾಸಗಿ ಸಂಸ್ಥೆಗಳ ಹುದ್ದೆಗಳ ಭರ್ತಿಗಾಗಿ ನೇರ ಸಂದರ್ಶನ…
ಆಹಾರ ಉತ್ಪಾದನೆಯಲ್ಲಿ ಸ್ವಾವಲಂಬನೆ ಸಾಧಿಸಿರುವ ಭಾರತ, ರಸಗೊಬ್ಬರದಲ್ಲಿ ಇನ್ನೂ ಆಮದು ಅವಲಂಬಿತವಾಗಿದೆ. ದೇಶೀಯ…
ಕರಾವಳಿ ಮತ್ತು ಮಲೆನಾಡಿನಲ್ಲಿ ಸಾಧಾರಣ ಮಳೆ ಮುಂದುವರಿಯಲಿದ್ದು, ಸುಳ್ಯ-ಮಡಿಕೇರಿ ಘಾಟಿ ಭಾಗಗಳಲ್ಲಿ ಮಳೆ…