ಸಾಮಾನ್ಯವಾಗಿ ಮದುವೆ(Marriage) ಸಮಾರಂಭವಾಗಲಿ, ಗೃಹಪ್ರವೇಶವಿರಲಿ(House Opening) ಆಮಂತ್ರಣ ಪತ್ರಿಕೆಯ(Invitation) ಮೇಲೆ ಕೆಲವರು ‘ನಿಮ್ಮ ಆಶೀರ್ವಾದವೇ ಉಡುಗೊರೆ’ ಎಂದು ಬರೆಸುತ್ತಾರೆ. ಆದರೆ ಈ ಶುಭಸಂದರ್ಭದಲ್ಲಿ ನೀವು ಇದಕ್ಕಿಂತ ಒಂದು ಒಳ್ಳೆಯ ಕಾರ್ಯ ಮಾಡಬಹುದು.
ನಿಮ್ಮ ಆಮಂತ್ರಣ ಪತ್ರಿಕೆಯ ಮೇಲೆ ಹಾಕಿರುವ ‘ಆಶೀರ್ವಾದವೇ ಉಡುಗೊರೆ’ ಎಂಬ ವಾಕ್ಯದ ಬದಲಿಗೆ ‘ನಿಮ್ಮ ಉಡುಗೊರೆ ಪವಿತ್ರ ಗೋಮಾತೆಗೆ’ ಅಥವಾ ‘ಗೋಶಾಲೆಗೆ’ ಎಂದು ಹಾಕಿ. ಬಂದ ಅತಿಥಿಗಳು ಧಾರಾಳ ಮನಸ್ಸಿನಿಂದ ನೀಡುತ್ತಾರೆ. 100, 200 ಹಾಕುವವರು 500 ರೂ. ಕೂಡ ಹಾಕಬಹುದು. ಒಂದು ಮದುವೆ ಸಮಾರಂಭಕ್ಕೆ ಸಾಮಾನ್ಯವಾಗಿ ಸಾವಿರ ಜನ (500 ಕುಟುಂಬ) ಬರಬಹುದು. ಒಂದು ಕುಟುಂಬಕ್ಕೆ ಕೇವಲ 200 ರೂ. ಎಂದು ಲೆಕ್ಕ ಹಿಡಿದರೂ ಒಂದು ಲಕ್ಷದ ತನಕ ಹಣ ಸಂಗ್ರಹವಾಗುತ್ತದೆ.
ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಗೋಶಾಲೆಗಳಿಗೆ ನೀಡುತ್ತಿರುವ ಅನುದಾನ ಕೂಡಾ ನಿಂತಿದೆ. ಆದ್ದರಿಂದ ಗೋಶಾಲೆಗಳನ್ನು ನಡೆಸುತ್ತಿರುವವರ ಪರಿಸ್ಥಿತಿ ಆರ್ಥಿಕವಾಗಿ ಬಹಳ ಗಂಭೀರವಾಗಿದೆ. ನಿಮ್ಮ ಈ ಒಂದು ಪ್ರಯತ್ನದಿಂದ ನಿಮ್ಮ ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೂ ಹಾಗೂ ನಿಮ್ಮ ಕುಟುಂಬಕ್ಕೂ ಗೋಮಾತೆಯ ಆಶೀರ್ವಾದ ಲಭಿಸುತ್ತದೆ. ಹಾಗೂ ಗೋಶಾಲೆಗೂ ಆರ್ಥಿಕವಾಗಿ ಸಹಾಯವಾಗುತ್ತದೆ. ಇದನ್ನು ಆದಷ್ಟು ಜನರಿಗೆ ಶೇರ್ ಮಾಡಿ, ಇದೊಂದು ದೊಡ್ಡ ಅಭಿಯಾನವಾಗಲಿ. ಜಯತು ಗೋಮಾತಾ!
ಸೆ.8ರಿಂದ ಮಲೆನಾಡು ಹಾಗೂ ದಕ್ಷಿಣ ಒಳನಾಡಿನಲ್ಲಿ ಮತ್ತೆ ಮಳೆ ಚಟುವಟಿಕೆ ಹೆಚ್ಚಾಗುವ ಸಾಧ್ಯತೆಯಿದೆ.…
ಬೇರೊಬ್ಬರ ಬದುಕಿನೊಂದಿಗೆ ನಿರಂತರ ಹೋಲಿಕೆ ನಮ್ಮ ನೆಮ್ಮದಿ ಮತ್ತು ಆತ್ಮವಿಶ್ವಾಸವನ್ನು ಕಸಿದುಕೊಳ್ಳಬಹುದು. ಮತ್ತೊಬ್ಬರ…
ಶಿಕ್ಷಕರ ದಿನಾಚರಣೆ ಶಿಕ್ಷಕರನ್ನು ಸನ್ಮಾನಿಸುವ ದಿನ ಮಾತ್ರವಲ್ಲ, ಶಿಕ್ಷಕತ್ವ ಮತ್ತು ಶಿಕ್ಷಣದ ನಿಜವಾದ…
ಮುಂಗಾರು ಮಳೆ ಕೊರತೆ ಹಿನ್ನೆಲೆಯಲ್ಲಿ ಕರ್ನಾಟಕದಲ್ಲಿ ₹28.52 ಕೋಟಿ ವೆಚ್ಚದ 60 ದಿನಗಳ…
ಬಿಹಾರದ ಯುರೆನ್ನಲ್ಲಿ ಪತ್ತೆಯಾದ 5 ಲಕ್ಷಕ್ಕೂ ಹೆಚ್ಚು ಸುಟ್ಟ ಬೀಜಗಳ ಅಧ್ಯಯನವು ಭಾರತದ…
ಶ್ರೀಕೃಷ್ಣನನ್ನು ಕೇವಲ ದೇವರ ಅವತಾರವಾಗಿ ನೋಡುವುದಕ್ಕಿಂತ, ಮನುಷ್ಯರ ನಡುವೆ ನಿಂತು ಉಪದೇಶಿಸಿದ ಮಾನವಶಿಕ್ಷಕನಾಗಿಯೂ…