ಸಾಮಾನ್ಯವಾಗಿ ಮದುವೆ(Marriage) ಸಮಾರಂಭವಾಗಲಿ, ಗೃಹಪ್ರವೇಶವಿರಲಿ(House Opening) ಆಮಂತ್ರಣ ಪತ್ರಿಕೆಯ(Invitation) ಮೇಲೆ ಕೆಲವರು ‘ನಿಮ್ಮ ಆಶೀರ್ವಾದವೇ ಉಡುಗೊರೆ’ ಎಂದು ಬರೆಸುತ್ತಾರೆ. ಆದರೆ ಈ ಶುಭಸಂದರ್ಭದಲ್ಲಿ ನೀವು ಇದಕ್ಕಿಂತ ಒಂದು ಒಳ್ಳೆಯ ಕಾರ್ಯ ಮಾಡಬಹುದು.
ನಿಮ್ಮ ಆಮಂತ್ರಣ ಪತ್ರಿಕೆಯ ಮೇಲೆ ಹಾಕಿರುವ ‘ಆಶೀರ್ವಾದವೇ ಉಡುಗೊರೆ’ ಎಂಬ ವಾಕ್ಯದ ಬದಲಿಗೆ ‘ನಿಮ್ಮ ಉಡುಗೊರೆ ಪವಿತ್ರ ಗೋಮಾತೆಗೆ’ ಅಥವಾ ‘ಗೋಶಾಲೆಗೆ’ ಎಂದು ಹಾಕಿ. ಬಂದ ಅತಿಥಿಗಳು ಧಾರಾಳ ಮನಸ್ಸಿನಿಂದ ನೀಡುತ್ತಾರೆ. 100, 200 ಹಾಕುವವರು 500 ರೂ. ಕೂಡ ಹಾಕಬಹುದು. ಒಂದು ಮದುವೆ ಸಮಾರಂಭಕ್ಕೆ ಸಾಮಾನ್ಯವಾಗಿ ಸಾವಿರ ಜನ (500 ಕುಟುಂಬ) ಬರಬಹುದು. ಒಂದು ಕುಟುಂಬಕ್ಕೆ ಕೇವಲ 200 ರೂ. ಎಂದು ಲೆಕ್ಕ ಹಿಡಿದರೂ ಒಂದು ಲಕ್ಷದ ತನಕ ಹಣ ಸಂಗ್ರಹವಾಗುತ್ತದೆ.
ಕಾಂಗ್ರೆಸ್ ಸರ್ಕಾರ ಬಂದಾಗಿನಿಂದ ಗೋಶಾಲೆಗಳಿಗೆ ನೀಡುತ್ತಿರುವ ಅನುದಾನ ಕೂಡಾ ನಿಂತಿದೆ. ಆದ್ದರಿಂದ ಗೋಶಾಲೆಗಳನ್ನು ನಡೆಸುತ್ತಿರುವವರ ಪರಿಸ್ಥಿತಿ ಆರ್ಥಿಕವಾಗಿ ಬಹಳ ಗಂಭೀರವಾಗಿದೆ. ನಿಮ್ಮ ಈ ಒಂದು ಪ್ರಯತ್ನದಿಂದ ನಿಮ್ಮ ಕಾರ್ಯಕ್ರಮಕ್ಕೆ ಬಂದ ಅತಿಥಿಗಳಿಗೂ ಹಾಗೂ ನಿಮ್ಮ ಕುಟುಂಬಕ್ಕೂ ಗೋಮಾತೆಯ ಆಶೀರ್ವಾದ ಲಭಿಸುತ್ತದೆ. ಹಾಗೂ ಗೋಶಾಲೆಗೂ ಆರ್ಥಿಕವಾಗಿ ಸಹಾಯವಾಗುತ್ತದೆ. ಇದನ್ನು ಆದಷ್ಟು ಜನರಿಗೆ ಶೇರ್ ಮಾಡಿ, ಇದೊಂದು ದೊಡ್ಡ ಅಭಿಯಾನವಾಗಲಿ. ಜಯತು ಗೋಮಾತಾ!
ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…
ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…
ಗುಟ್ಕಾ–ಪಾನ್ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…