ಸುದ್ದಿಗಳು

ಹೀಗೊಂದು ಗೃಹ ಉದ್ದಿಮೆ | ಸೂರ್ಯನ ಬೆಳಕಿಂದ ಚಕ್ಕುಲಿ ತಯಾರಿಸಿ | ಉತ್ತಮ ಆದಾಯ ಗಳಿಸಿ…!

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಅನೇಕ ಮಹಿಳೆಯರು ಕುರುಕುಲು ತಿಂಡಿ ಚಕ್ಕುಲಿ, ನಿಪ್ಪಟ್ಟು, ಕಾರಕಡ್ಡಿ ಮುಂತಾದವು ಮಾಡಿ, ಮಾರಿ ಜೀವನ ಸಾಗಿಸುತ್ತಾರೆ. ಈ ಕುರುಕುಲು ತಿಂಡಿ ತಿನಿಸುಗಳನ್ನು ಮಾಡೋದೇನೋ ಸರಿ. ಆದರೆ ಈ ಬೇಸಗೆಯ ಬಿಸಿಲಿನ ತಾಪಕ್ಕೆ ಒಲೆಯ ಮುಂದೆ ಬೇಯೋದು ಯಾರು..? ಆದರೆ ವಿಧಿ ಇಲ್ಲ.. ಜೀವನ ಸಾಗಬೇಕಲ್ಲ.. ಆದ್ರೆ ಈ ತಾಪತ್ರಯಗಳಿಗೆ ಈಗೊಂದು ಸುಲಭ ದಾರಿ ಸಿಕ್ಕಿದೆ.

Advertisement
Advertisement

ಸೂರ್ಯನ ಬೆಳಕಿನಿಂದ ಈಗ ಚಕ್ಕುಲಿಯನ್ನೂ ತಯಾರಿಸಬಹುದು.  ಹೌದು, ಸೂರ್ಯನ ಬೆಳಕಿನಿಂದ ಚಕ್ಕುಲಿ ತಯಾರಿಸುವ ವಿಶೇಷ ಸಾಧನವೊಂದನ್ನು ಆವಿಷ್ಕಾರ ಮಾಡಲಾಗಿದೆ. ಸಾಮಾಜಿಕ ಆರ್ಥಿಕ ಅಭಿವೃದ್ಧಿಗೆ ತನ್ನದೇ ಕೊಡುಗೆ ನೀಡುತ್ತಿರುವ ಸೆಲ್ಕೋ ಸಂಸ್ಥೆ ಸೋಲಾರ್ ಚಕ್ಕುಲಿ ಮೇಕರ್ ಸಾಧನವನ್ನು ಕಂಡುಹಿಡಿದೆ. ಈ ಚಕ್ಕುಲಿ ಮೇಕರ್​ನ್ನು ಇತ್ತೀಚಿಗೆ ಉಡುಪಿಯಲ್ಲಿ ನಡೆದ ಕೃಷಿ ಮೇಳದಲ್ಲಿ ಪ್ರದರ್ಶನ ಮಾಡಲಾಗಿದೆ.

ಈ ಸೋಲಾರ್ ಚಕ್ಕುಲಿ ಮೇಕರ್ ಬಳಸಿ ಒಂದೇ ಗಂಟೆಯಲ್ಲಿ 10 ಕೆಜಿ ಚಕ್ಕುಲಿಯನ್ನು ತಯಾರಿಸಬಹುದಾಗಿದೆ. ಚಕ್ಕುಲಿಯೊಂದೇ ಅಲ್ಲದೇ, ಕೋಡುಬಳೆ ಮತ್ತಿತರ ತಿಂಡಿಗಳನ್ನು ಸಹ ಈ ಸಾಧನ ಬಳಸಿ ತಯಾರಿಸಬಹುದಾಗಿದೆ.

ಈ ಸೋಲಾರ್ ಚಕ್ಕುಲಿ ಮೇಕರ್ ಸಾಧನವನ್ನು ಈಗಾಗಲೇ ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಆದರೂ ಬಳಕೆದಾರರ ಪ್ರತಿಕ್ರಿಯೆಯನ್ನು ಆಧರಿಸಿ ಸಂಶೋಧನೆ ಮತ್ತು ಅಭಿವೃದ್ಧಿಯ ಅಂತಿಮ ಹಂತದಲ್ಲಿದ್ದೇವೆ ಎಂದು ಸೆಲ್ಕೋ ಸಂಸ್ಥೆ ತಿಳಿಸಿದೆ.

Advertisement

ಸೋಲಾರ್ ಚಕ್ಕುಲಿ ಮೇಕರ್ ಯಂತ್ರವನ್ನು ಬ್ಲೂಟೂತ್ ಮೂಲಕ ಮೊಬೈಲ್ ಫೋನ್​ಗೆ ಸಂಪರ್ಕಿಸಬಹುದು. ಚಕ್ಕುಲಿ ತಯಾರಿಸುವಾಗ ಮೊಬೈಲ್ ಅಪ್ಲಿಕೇಶನ್ ಮೂಲಕವೇ ಚಕ್ಕುಲಿ ಹಿಟ್ಟಿನ ಪ್ರಮಾಣ, ಗಾತ್ರ ಮತ್ತು ದಪ್ಪ ಮುಂತಾದವುಗಳನ್ನು ನಿರ್ಧರಿಸಬಹುದು ಎಂದು ಸೆಲ್ಕೋ ಪ್ರತಿನಿಧಿ ತಿಳಿಸಿದ್ದಾರೆ.

ಗ್ರಾಮೀಣ ಭಾಗದ ಯುವಕ ಯುವತಿಯರ ಜೀವನವನ್ನು ಸರಳಗೊಳಿಸುವ ನಿಟ್ಟಿನಲ್ಲಿ ಈ ಸೋಲಾರ್ ಚಕ್ಕುಲಿ ಮೇಕರ್ ತಯಾರಿಸಲಾಗಿದೆ. ಈ ಯಂತ್ರ ಹಳ್ಳಿಗಳಲ್ಲಿ ಹೊಸ ವ್ಯವಹಾರಕ್ಕೆ ಕೈಹಾಕುವ ಉತ್ಸಾಹಿಗಳಿಗೆ ನೆರವಾಗಲಿದೆ ಎನ್ನಲಾಗಿದೆ.

ಅಂದಾಜು 2.5 ಲಕ್ಷ ರೂ. ಬೆಲೆಯ ಈ ಚಕ್ಕುಲಿ ಮೇಕರ್ ಯಂತ್ರಕ್ಕೆ ಸೆಲ್ಕೋ ಶೇ.25ರಷ್ಟು ಸಬ್ಸಿಡಿ ನೀಡುವುದಾಗಿ ತಿಳಿಸಿದೆ. ಒಟ್ಟಾರೆ ಈ ಯಂತ್ರದ ಮೂಲಕ ಗ್ರಾಮೀಣ ಭಾಗದ ಉತ್ಸಾಹಿಗಳಿಗೆ ಈ ಸೋಲಾರ್ ಯಂತ್ರ ಹೊಸ ಬ್ಯುಸಿನೆಸ್ ಆರಂಬಿಸಲು ದಾರಿಯಾಗುವ ಲಕ್ಷಣವಿದೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 28-05-2025 | ಮೇ. 31ರಿಂದ ಕಡಿಮೆಯಾಗಿ ಜೂನ್ 3 ರ ತನಕ ಸಾಮಾನ್ಯ ಮಳೆ |

ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಾಗಲಿರುವ ವಾಯುಭಾರ ಕುಸಿತವು ನಾಳೆ ಬಂಗ್ಲಾ ದೇಶದ…

2 hours ago

ಶಶಿ ಆದಿತ್ಯ ಯೋಗ, ಈ 5 ರಾಶಿಗೆ ಬೇಡವೆಂದರೂ ಲಾಭ..!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರಾದ ಜ್ಯೋತಿಷ್ಗಳನ್ನು ಸಂಪರ್ಕಿಸಿ 9535156490  

5 hours ago

ಪ್ರವಾಸಿಗರು ಚಾರಣ, ನದಿ ತೀರ ಹೋಗದಂತೆ  ಸೂಚನೆ

ಭಾರತೀಯ ಹವಾಮಾನ ಇಲಾಖೆ ಮತ್ತು ಕರ್ನಾಟಕ ರಾಜ್ಯ ನೈಸರ್ಗಿಕ ವಿಕೋಪ ಉಸ್ತುವಾರಿ ಕೇಂದ್ರದ…

17 hours ago

ಕೇರಳದಾದ್ಯಂತ ತೀವ್ರಗೊಂಡ ನೈಋತ್ಯ ಮಾನ್ಸೂನ್ | ಪೆರಿಯಾರ್ ನದಿಯ ನೀರಿನ ಮಟ್ಟ ಏರಿಕೆ | ಆಲುವಾ ಶಿವ ದೇವಾಲಯದಲ್ಲಿ ನೀರು |

ಮಳೆಯ ಕಾರಣದಿಂದ ಪೆರಿಯಾರ್ ನದಿಯ ನೀರಿನ ಮಟ್ಟ ಏರಿಕೆಯಾಗಿದೆ. ಹೀಗಾಗಿ ಆಲುವಾ ಶಿವ ದೇವಾಲಯದ…

1 day ago

ಹವಾಮಾನ ವರದಿ | 27-05-2025 | ಜೂ.3 ರವರೆಗೂ ಮಳೆ | ಮೇ.28 ರಿಂದ ಮತ್ತೆ ಮಳೆ ಚುರುಕು | ಮಳೆಯ ತೀವ್ರತೆ ಕಡಿಮೆ |

ಬಂಗಾಳಕೊಲ್ಲಿಯ ಪಶ್ಚಿಮ ಬಂಗಾಳ ಕರಾವಳಿಯಲ್ಲಿ ಉಂಟಗಿರುವ ವಾಯುಭಾರ ಕುಸಿತವು ಮುಂದಿನ 3 ಅಥವಾ…

1 day ago

ಭಾರತದಲ್ಲಿ ಅಡಿಕೆಯ ಬಳಕೆ ಹೇಗೆ..? ಯಾವುದೆಲ್ಲಾ ವಿಭಾಗಗಳು ಇವೆ..? ಮಾರುಕಟ್ಟೆ ಹೇಗೆ..?

ಅಡಿಕೆಯ ಬಹು ಪಾಲು ಬೀಡ, ಸಿಹಿ ಸುಪಾರಿ, ಗುಟ್ಕಾ,ಪಾನ್ ಮಸಾಲ ಇತ್ಯಾದಿಗಳ ತಯಾರಿಯಲ್ಲಿ…

1 day ago