ರಾಜ್ಯ

ತಾಲೂಕಿಗೊಂದು ಗೋಶಾಲೆ | ಸುಳ್ಯದಲ್ಲಿ ಗೋಶಾಲೆ ನಿರ್ಮಾಣಕ್ಕೆ 10 ವರ್ಷಗಳ ಹೋರಾಟ… ! | ಗೋಮಳವಿದ್ದರೂ ಏಕೆ ಮೌನವಾಗಿವೆ ಆಡಳಿತ.. ? |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಸುಳ್ಯದಲ್ಲಿ ಗೋಶಾಲೆ ನಿರ್ಮಾಣವಾಗಬೇಕು. ಹೀಗೊಂದು ಬೇಡಿಕೆ ಕಳೆದ 10 ವರ್ಷಗಳಿಂದ ಇದೆ. ಹಾಗಿದ್ದರೂ ಆಡಳಿತಗಳು ಏಕೆ ಮೌನ ವಹಿಸಿವೆ ? ಹೀಗೆ ಪ್ರಶ್ನೆ ಕೇಳಿರುವುದು ಕೊಡಿಯಾಲ ಬೈಲು ಹಾಲು ಉತ್ಪಾದಕರ ಸಹಕಾರಿ ಸಂಘದ ಅಧ್ಯಕ್ಷ ಸೀತಾರಾಮ ನಾಯಕ್…!.‌ ಕಳೆದ 10 ವರ್ಷಗಳ ಬೇಡಿಕೆ, ಹೋರಾಟಕ್ಕೆ ಬೆಲೆಯೇ ಸಿಕ್ಕಿಲ್ಲ…!. ಗೋಮಳ ಇದ್ದರೂ ಪಶುಸಂಗೋಪನಾ ಇಲಾಖೆಗಳು ಮೌನವಾಗಿವೆ…!

Advertisement
Advertisement

ಗೋಮಾತೆಯ ರಕ್ಷಣೆ ನಿತ್ಯವೂ ನಡೆಯುತ್ತಿದೆ. ಅಕ್ರಮವಾಗಿ ಗೋಸಾಗಾಟ ನಡೆಸುವ ಪ್ರಕರಣಗಳು ಆಗಾಗ ನಡೆಯುತ್ತಲೇ ಇರುತ್ತವೆ. ಗೋಪ್ರೇಮಿಗಳು ಗೋರಕ್ಷಣೆಯಲ್ಲಿ ತೊಡಗಿಸಿಕೊಳ್ಳುತ್ತಲೇ ಇರುತ್ತಾರೆ. ಹೀಗೆ ಗೋರಕ್ಷಣೆಯ ಬಳಿಕ ಗೋವುಗಳನ್ನು ಏನು ಮಾಡುವುದು  ಎನ್ನುವ ಪ್ರಶ್ನೆಯ ನಡುವೆಯೇ ಗೋಶಾಲೆಯ ಬೇಡಿಕೆ ಕಳೆದ ಹತ್ತಾರು ವರ್ಷಗಳಿಂದ ಇದೆ. ಕೃಷಿರಲ್ಲೂ ಹೋರಿ ಕರುಗಳು ಇದ್ದರೆ ಏನು ಮಾಡುವುದು  ಎನ್ನುವ ಪ್ರಶ್ನೆಗಳಿಗೂ ಉತ್ತರವಿಲ್ಲ. ಕೆಲವರು ದೂರದ ಗೋಶಾಲೆಗಳಿಗೆ ತಲುಪಿಸಿದರೆ ಇನ್ನೂ ಕೆಲವರು ಸಾಕುವ ಹೆಸರಿನಲ್ಲಿ ಯಾರ್ಯಾರಿಗೋ ಕೊಡಬೇಕಾದ್ದು ಅನಿವಾರ್ಯವೂ ಆಗಿದೆ. ಇಂತಹ ಸಂದರ್ಭದಲ್ಲಿ ಸುಳ್ಯದ ಕೊಡಿಯಾಲಬೈಲು ಹಾಲು ಉತ್ಪಾದರ ಸಹಕಾರಿ ಸಂಘವು ಕಳೆದ 10 ವರ್ಷಗಳಿಂದ ಗೋಶಾಲೆ ನಿರ್ಮಾಣದ ಕಡೆಗೆ ಬೇಡಿಕೆ, ಹೋರಾಟ ನಡೆಸುತ್ತಲೇ ಇದೆ. ಕಂದಾಯ ಇಲಾಖೆ ಸಹಿತ ಪಶುಸಂಗೋಪನಾ ಇಲಾಖೆಗೂ ಮನವಿ ಮಾಡಿದೆ. ಜಾಗ ಮಂಜೂರು ಕೂಡಾ ಆಗಿದೆ. ಗೋಮಳ ಇದೆ, ಅದರಲ್ಲಿ ಕನಿಷ್ಟ ಹತ್ತು ಎಕರೆ ಸಹಕಾರಿ ಸಂಘಕ್ಕೆ ನೀಡಿ, ಕೆಎಂಎಫ್‌ ಸಹಿತ ಗೋಪ್ರೇಮಿಗಳ ನೆರವಿನಿಂದ ಗೋಶಾಲೆ ಮಾಡುತ್ತೇವೆ ಎಂದೂ ಹೇಳಿತ್ತು. ಆದರೂ ಗೋಶಾಲೆ ತೆರೆಯಲು ಸಾಧ್ಯವಾಗಿಲ್ಲ.

2008 ರಲ್ಲಿ ಗೋಮಳ ಜಾಗದಲ್ಲಿ ಗೋಶಾಲೆಗೆ ಎಂದು 7ಎಕ್ರೆಯಷ್ಟು ಜಾಗವನ್ನು ಮೀಸಲಿಡಲಾಗಿತ್ತು. ಅದಾಗಿ ಹಲವು ಪ್ರಯತ್ನ ನಡೆದರೂ ಸಾಧ್ಯವಾಗಿಲ್ಲ. ಶಾಸಕ ಅಂಗಾರ ಅವರೂ ಈ ಹಿಂದೆ ಪತ್ರ ಬರೆದಿದ್ದರು. 2021 ರಲ್ಲಿ ಸಚಿವ ಎಸ್‌ ಅಂಗಾರ ಅವರು ಕೊಡಿಯಾಲಬೈಲು ಹಾಲು ಉತ್ಪಾದಕರ ಸಹಕಾರಿ ಸಂಘದ ಮನವಿಯ ಮೇರೆಗೆ ಮತ್ತೆ ಪಶುಸಂಗೋಪನಾ ಇಲಾಖೆಗೆ ಪತ್ರ ಬರೆದು ಜಮೀನು ಕಾಯ್ದಿರಿಸಿ ಸೂಕ್ತ ಕ್ರಮ ಕೈಗೊಳ್ಳಲು ಸೂಚನೆಯನ್ನೂ ನೀಡಿದ್ದಾರೆ.

ಸುಮಾರು 10 ವರ್ಷದ ಹಿಂದೆ ಪುತ್ತೂರು-ಸುಳ್ಯ ನಡುವೆ ಅಕ್ರಮ ಗೋಸಾಗಾಟ ತಡೆಯುವ ವೇಳೆ ಸುಳ್ಯದ ಯುವಕನೊಬ್ಬ ಮೃತಪಟ್ಟಿದ್ದ , ಈ ಸಂದರ್ಭ ಅವರದೇ ಊರಿನಲ್ಲಿ ಗೋಶಾಲೆ ತೆರೆಯುವ ಬಗ್ಗೆಯೂ ಭರವಸೆ ಕೇಳಿಬಂದಿತ್ತು. ಆದರೆ 10 ವರ್ಷಗಳ ನಂತರವೂ ಈ ಕನಸು ಈಡೇರಿಲ್ಲ. ಗೋಪ್ರೇಮಿಗಳೇ ಇರುವ ನಾಡಿನಲ್ಲಿ ಗೋಶಾಲೆಯನ್ನು ತೆರೆಯಲು ಆಗದೇ ಇರುವುದು  ಹಾಗೂ ಹಾಲು ಉತ್ಪಾದಕರ ಸಹಕಾರಿ ಸಂಘವೇ ಅದರ ನೇತೃತ್ವ ವಹಿಸಿಕೊಂಡರೂ ಸರ್ಕಾರ, ಆಡಳಿತ ಸ್ಪಂದಿಸದೇ ಇರುವುದು ವಿಪರ್ಯಾಸವೇ ಸರಿ.

Advertisement

 

ಕಳೆದ 10 ವರ್ಷಗಳಿಂದ ಸುಳ್ಯದಲ್ಲಿನ ಗೋಮಳ ಜಾಗದಲ್ಲಿ ಗೋಶಾಲೆಯ ತೆರೆಯುವ ಬಗ್ಗೆ ಮನವಿಗಳು, ಒತ್ತಾಯ, ಹೋರಾಟ ನಡೆಯುತ್ತಿದೆ. ಇದುವರೆಗೂ ಆಶಾದಾಯಕ ಬೆಳವಣಿಗೆ ಕಂಡಿಲ್ಲ.- ಸೀತಾರಾಮ ನಾಯಕ್‌, ಅಧ್ಯಕ್ಷರು, ಕೊಡಿಯಾಲಬೈಲು ಹಾಲು ಉತ್ಪಾದಕರ ಸಹಕಾರಿ ಸಂಘ

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಆತ್ಮನಿರ್ಭರ ಯೋಜನೆಯಿಂದ ಸ್ವಾವಲಂಬಿ ಬದುಕು | ಸಾವಯವ ಕೃಷಿಯಲ್ಲಿ ಕಬ್ಬು ಬೆಳೆದು ಯಶಸ್ವಿ

ಆತ್ಮನಿರ್ಭರ ಯೋಜನೆಯಡಿ ಸ್ವಾವಲಂಬಿ ಬದುಕಿನ ಕನಸು ಕಂಡಿದ್ದ ಬಿ. ನಂದೀಶ್ ತಮ್ಮ ಜಮೀನಿನಲ್ಲಿ…

15 hours ago

ಹೊಸರುಚಿ | ನೆಕ್ಕರೆ ಮಾವಿನ ಕಾಯಿ ಪಲ್ಯ

ನೆಕ್ಕರೆ ಮಾವಿನ ಕಾಯಿ ಪಲ್ಯ ಮಾಡುವ ವಿಧಾನ..

18 hours ago

ಜೂನ್ ಮೂರನೇ ವಾರ ಗುರು ಆದಿತ್ಯ ರಾಜಯೋಗ, ಈ 5 ರಾಶಿಗೆ ಅದೃಷ್ಟವೋ ಅದೃಷ್ಟ.!

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತಾರಾದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

19 hours ago

ಮುಂದುವರಿದ ಮಳೆಯಬ್ಬರ | 4 ಜಿಲ್ಲೆಗಳಲ್ಲಿ ಶಾಲೆಗಳಿಗೆ ರಜೆ ಘೋಷಣೆ |

ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಮಳೆ ಸುರಿಯುತ್ತಿದ್ದು, ಜನಜೀವನ ಅಸ್ತವ್ಯಸ್ತಗೊಂಡಿದೆ.  ದಕ್ಷಿಣ ಕನ್ನಡ ಜಿಲ್ಲೆಯಾದ್ಯಂತ…

1 day ago

ವಿದೇಶದಿಂದ ಹಳ್ಳಿಗೆ ಬಂದು ಕೃಷಿ ಸಾಧನೆ ಮಾಡಿದ ಯುವಕ

ಕೃಷಿಯನ್ನು ನಂಬಿ ಕೆಲಸ ಮಾಡಿದರೆ ಯಶಸ್ಸು ಕಾಣಬಹುದು ಎಂಬುದನ್ನು ರೈತ  ಯೋಗೇಶ್ ತೋರಿಸಿಕೊಟ್ಟಿದ್ದಾರೆ.…

2 days ago