Advertisement
MIRROR FOCUS

ಸುಳ್ಯ ಅತಿವೃಷ್ಟಿ ತಾಲೂಕು ಯಾಕಾಗಲಿಲ್ಲ ? ಇದರಿಂದಾಗಿ ಗ್ರಾಮೀಣ ಜನರಿಗೆ ಸಂಕಷ್ಟವೇನು?

Share
ಕ್ಷಿಣ ಕನ್ನಡ ಜಿಲ್ಲೆಯ ಎಲ್ಲಾ ತಾಲೂಕುಗಳು ಅತಿವೃಷ್ಟಿ ತಾಲೂಕಿನ ಪಟ್ಟಿಯಲ್ಲಿದ್ದರೆ ಸುಳ್ಯ ಮಾತ್ರಾ ಆ ಪಟ್ಟಿಗೆ ಸೇರಲಿಲ್ಲ. ಈ ವರ್ಷ ಮಾತ್ರವಲ್ಲ ಕಳೆದ ವರ್ಷವೂ ಈ ಪಟ್ಟಿಯಿಂದ ಆರಂಭದಲ್ಲಿ  ಹೊರಬಿದ್ದಿತ್ತು. ಒತ್ತಾಯದ ಬಳಿಕ ಸೇರ್ಪಡೆಯಾಗಿತ್ತು. ಈ ಬಾರಿಯೂ ಅದೇ ಪುನರಾವರ್ತನೆಯಾಗಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಸುಳ್ಯ ತಾಲೂಕು ಅತೀ ಹೆಚ್ಚಿನ ಮಳೆ ಬೀಳುವ ಪ್ರದೇಶ. ಮಲೆನಾಡು ತಪ್ಪಲು ಪ್ರದೇಶವಾದ್ದರಿಂದ ಈ ಭಾಗದಲ್ಲಿ  ಮಳೆ ಹೆಚ್ಚು. ಅದರಲ್ಲೂ ಕಲ್ಲಾಜೆ, ಸಂಪಾಜೆ, ಕೊಲ್ಲಮೊಗ್ರ  ಪ್ರದೇಶದಲ್ಲಿ ಹೆಚ್ಚಿನ ಮಳೆ ಬೀಳುತ್ತದೆ. ಸುಳ್ಯ ಸೇರಿದಂತೆ ದ ಕ ಜಿಲ್ಲೆಯ ವಿವಿಧ ತಾಲೂಕುಗಳ ಸುಮಾರು 40  ಮಂದಿ ಕೃಷಿಕರು ಪ್ರತೀ ದಿನದ ಮಳೆ ಲೆಕ್ಕ ಹಾಗೂ ವಾತಾವರಣದ ಉಷ್ಣತೆಯನ್ನೂ ದಾಖಲಿಸುತ್ತಾರೆ. ಇದರ ಪ್ರಕಾರ ಸುಳ್ಯ ತಾಲೂಕು ಹೆಚ್ಚಿನ ಮಳೆ ಬೀಳುವ ಪ್ರದೇಶವೂ ಆಗಿದೆ. ಸರಕಾರಿ ಲೆಕ್ಕದಲ್ಲಿ ಯಾಕೆ ಸುಳ್ಯ ಅತಿವೃಷ್ಟಿ ಪಟ್ಟಿಯಿಂದ ಕೈತಪ್ಪಿದೆ?.

ಗ್ರಾಮೀಣ ಜನರಿಗೆ ಏನು ಸಮಸ್ಯೆ?

ಅತಿವೃಷ್ಟಿ ಪೀಡಿತ ತಾಲೂಕು ಪಟ್ಟಿಯಿಂದ ಬಿಟ್ಟು ಹೋದರೆ ಏನು ಸಮಸ್ಯೆ ಎಂಬುದು ಸಾಮಾನ್ಯ ಪ್ರಶ್ನೆಯಾಗಿದೆ. ಪ್ರತೀ ಬಾರಿ ಅತಿವೃಷ್ಟಿ ಪೀಡಿತ ಪ್ರದೇಶಗಳಿಗೆ ಸರಕಾರವು ಮಳೆಹಾನಿ ಎಂದು ಒಂದಷ್ಟು ಅನುದಾನ ಬಿಡುಗಡೆ ಮಾಡುತ್ತದೆ. ಭಾರೀ ಮಳೆಯ ಕಾರಣದಿಂದ ಜನರ ಮೂಲಭೂತ ಅವಶ್ಯಕತೆಯಾದ ರಸ್ತೆ ಸೇರಿದಂತೆ ತಡೆಗೋಡೆಗಳ ಕುಸಿತವಾಗಿರುತ್ತದೆ. ಇದರ ದುರಸ್ತಿಗೆ ಅನುದಾನಗಳು ಲಭ್ಯವಾಗುತ್ತದೆ. ಈ ಅನುದಾನದಲ್ಲಿ ಕೆಲವು ರಸ್ತೆಗಳ ದುರಸ್ತಿಯೂ ಸಾಧ್ಯವಿದೆ. ಆದರೆ ಅತಿವೃಷ್ಟಿ ತಾಲೂಕು ಪಟ್ಟಿಯಿಂದ ಹೊರಬಂದರೆ ಈ ಅನುದಾನದಲ್ಲಿ ಕೊರತೆಯಾಗಬಹುದು ಎಂಬ ಕಾರಣಕ್ಕೆ ಸುಳ್ಯದ ಜನರು ವಾಸ್ತವದ ನೆಲೆಯಲ್ಲಿ  ಒತ್ತಾಯ ಮಾಡಿದ್ದರು.

ಮಲೆನಾಡು ಹಿತರಕ್ಷಣಾ ವೇದಿಕೆ ಒತ್ತಾಯ:

ರಾಜ್ಯದ ಅತಿವೃಷ್ಟಿ- ಪ್ರವಾಹ ಪೀಡಿತ ತಾಲೂಕುಗಳ ಪಟ್ಟಿಯಿಂದ ಮಲೆನಾಡು ಪ್ರದೇಶವಾದ ಸುಳ್ಯ ತಾಲೂಕು ಕೈಬಿಟ್ಟಿರುವುದಕ್ಕೆ ಇಲಾಖೆಯ ಅಧಿಕಾರಿಗಳ ನಡೆಯನ್ನು ಮಲೆನಾಡು ಹಿತರಕ್ಷಣಾ ವೇದಿಕೆ ಖಂಡಿಸಿದ್ದು, ಈ ಬಗ್ಗೆ ಸರಕಾರ ಗಮನವಹಿಸದಿದ್ದಲ್ಲಿ ತಾಲೂಕು ಕೇಂದ್ರದ ಎದುರು ಪ್ರತಿಭಟನೆ ನಡೆಸುವುದಾಗಿ ತಿಳಿಸಿದೆ.
ಸುಬ್ರಹ್ಮಣ್ಯ ಐನೆಕಿದು ಪ್ರಾಥಮಿಕ ಸಹಕಾರಿ ಸಂಘದಲ್ಲಿ ಜರಗಿದ ವೇದಿಕೆಯ ಸಭೆಯಲ್ಲಿ ಈ ನಿರ್ಧಾರ ಕೈಗೊಳ್ಳಲಾಗಿದೆ. ಸುಳ್ಯ ತಾಲೂಕನ್ನು ಅನೇಕ ಬಾರಿ ಈ ರೀತಿ ನಿರ್ಲಕ್ಷ್ಯ ವಹಿಸಲಾಗಿದೆ. ಜಿಲ್ಲೆಯಲ್ಲಿ ಅಧಿಕ ಮಳೆ ಹಾನಿ ಪೀಡಿತ ಪ್ರದೇಶವಾಗಿ ಸುಳ್ಯವು ರೂಪುಗೊಂಡಿದೆ. ಈ ಬಗ್ಗೆ ಸರಕಾರ ಗಮನಹರಿಸಿ ಅತಿವೃಷ್ಟಿ ಪೀಡಿತ ಪ್ರದೇಶವಾಗಿ ಸೇರ್ಪಡೆ ಗೊಳಿಸಬೇಕು. ಈ ಕುರಿತು ತಹಶೀಲ್ದಾರರ ಮೂಲಕ ಸರಕಾರಕ್ಕೆ ಮನವಿ‌ ಸಲ್ಲಿಸಲು ವೇದಿಕೆ ಸಭೆಯು ನಿರ್ಣಯಿಸಿದೆ.
ಸಭೆಯಲ್ಲಿ ವೇದಿಕೆ ಸಂಚಾಲಕ ಕಿಶೋರ್ ಶಿರಾಡಿ, ಸದಸ್ಯರುಗಳಾದ ಜಯಪ್ರಕಾಶ್ ಕೂಜುಗೋಡು, ರವೀಂದ್ರ ರುದ್ರಪಾದ, ಪ್ರದೀಪ್ ಕುಮಾರ್ ಕರಿಕೆ, ಅಭಿಲಾಷ್ ದುಗಲಡ್ಕ, ಲಿಖಿನ್ ಪೆರುಮುಂಡ, ಭರತ್ ಕನ್ನಡ್ಕ, ಭಾನುಪ್ರಕಾಶ್ ಪೆರುಮುಂಡ, ಅಭಿಷೇಕ್,  ಅಚ್ಚುತ ಗೌಡ, ಟಿ.ಎನ್. ಸತೀಶ ಕುಮಾರ್ ಕಲ್ಮಕಾರು,  ಚಂದ್ರಶೇಖರ ಕೊಲ್ಲಮೊಗ್ರು, ಬಸಪ್ಪ ಕೊಲ್ಲಮೊಗ್ರು, ಶೇಖರಪ್ಪ ಬೆಂಡೋಡಿ, ಉಮೇಶ್ ಕಜ್ಜೋಡಿ ಉಪಸ್ಥಿತರಿದ್ದರು.
ಸುಳ್ಯ ತಾಲೂಕನ್ನು  ಅತಿವೃಷ್ಟಿ ಪೀಡಿತ ಪ್ರದೇಶದ ಪಟ್ಟಿಗೆ ಶೀಘ್ರದಲ್ಲೇ ಸೇರಿಸಬೇಕು.ಇಲ್ಲದೇ ಇದ್ದರೆ ತಾಲೂಕು ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಗುವುದು. – ಕಿಶೋರ್‌ ಶಿರಾಡಿ, ಸಂಚಾಲಕರು, ಮಲೆನಾಡು ಹಿತರಕ್ಷಣಾ ವೇದಿಕೆ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕಸದ ತೆಂಗಿನಕಾಯಿಯೂ ಈಗ ರೈತರ ಸಂಪತ್ತು…! ಭುವನೇಶ್ವರದ ‘ವೇಸ್ಟ್ ಟು ವೆಲ್ತ್’ ಮಾದರಿ

ಭುವನೇಶ್ವರದಲ್ಲಿ ಪ್ರತಿದಿನ ಸಾವಿರಾರು ತೆಂಗಿನಕಾಯಿ ತ್ಯಾಜ್ಯವನ್ನು ಕೊಕೊಪೀಟ್, ಹಗ್ಗ ಹಾಗೂ ಚಾಪೆಗಳಾಗಿ ಪರಿವರ್ತಿಸಿ…

52 minutes ago

ರಾಜ್ಯದಲ್ಲಿ ಬರದ ಛಾಯೆ- ರೈತರಿಗೆ ಎಕರೆಗೆ ₹50 ಸಾವಿರ ಪರಿಹಾರ ನೀಡಿ

ರಾಜ್ಯದಲ್ಲಿ ಮಳೆಯ ಕೊರತೆಯಿಂದ ಬರದಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು, ರೈತರಿಗೆ ಎಕರೆಗೆ ₹50 ಸಾವಿರ…

1 hour ago

ಹುಲಿ-ಚಿರತೆ ಹಾವಳಿ ನಿಯಂತ್ರಣಕ್ಕೆ ಆಗ್ರಹ – ಚಾಮರಾಜನಗರದಲ್ಲಿ ಅರಣ್ಯ ಇಲಾಖೆ ವಿರುದ್ಧ ರೈತ ಸಂಘಟನೆಗಳ ಪ್ರತಿಭಟನೆ

ಚಾಮರಾಜನಗರ ಜಿಲ್ಲೆಯಲ್ಲಿ ಹೆಚ್ಚುತ್ತಿರುವ ಹುಲಿ-ಚಿರತೆ ಹಾವಳಿಯಿಂದ ಕೃಷಿ ಚಟುವಟಿಕೆಗಳಿಗೆ ತೊಂದರೆಯಾಗುತ್ತಿರುವ ಹಿನ್ನೆಲೆಯಲ್ಲಿ ರೈತ…

1 hour ago

ಮುಂಗಾರು ದುರ್ಬಲ: ಯಾದಗಿರಿ ರೈತರಿಗೆ ಕೃಷಿ ಇಲಾಖೆಯ ಮಹತ್ವದ ಸಲಹೆ

ಯಾದಗಿರಿ ಜಿಲ್ಲೆಯಲ್ಲಿ ಮುಂಗಾರು ದುರ್ಬಲವಾಗಿರುವ ಹಿನ್ನೆಲೆಯಲ್ಲಿ ತೇವಾಂಶ ಸಂರಕ್ಷಣೆ, ಬೀಜೋಪಚಾರ ಹಾಗೂ ಕಡಿಮೆ…

1 hour ago

ಬ್ರಿಟನ್‌ನಲ್ಲಿ ಉರಿ ಬಿಸಿಲು – ಎರಡು ತಿಂಗಳಲ್ಲಿ 2,700ಕ್ಕೂ ಹೆಚ್ಚು ಸಾವು..! ಹವಾಮಾನ ಬದಲಾವಣೆಯಿಂದ ಶೇ.40ಕ್ಕೂ ಹೆಚ್ಚು ಜೀವಹಾನಿ ಎಂದ ಅಧ್ಯಯನ

ಬ್ರಿಟನ್‌ನಲ್ಲಿ ಮೇ–ಜೂನ್ ಉಷ್ಣ ಅಲೆಗಳಿಂದ 2,700ಕ್ಕೂ ಹೆಚ್ಚು ಜನರು ಮೃತಪಟ್ಟಿದ್ದಾರೆ. ಈ ಸಾವುಗಳಲ್ಲಿ…

1 hour ago

ನೈಸರ್ಗಿಕ ಕೃಷಿಗೆ ರಾಜಸ್ಥಾನದ ದೊಡ್ಡ ಹೆಜ್ಜೆ : 32 ಸಂಸ್ಥೆಗಳೊಂದಿಗೆ ಒಪ್ಪಂದ, ರೈತರಿಗೆ ತಂತ್ರಜ್ಞಾನ – ಮಾರುಕಟ್ಟೆ ಬೆಂಬಲ

ನೈಸರ್ಗಿಕ ಕೃಷಿ ಮತ್ತು ಕೃಷಿ ತಂತ್ರಜ್ಞಾನ ಅಭಿವೃದ್ಧಿಗೆ ರಾಜಸ್ಥಾನ ಸರ್ಕಾರ 32 ಸಂಸ್ಥೆಗಳೊಂದಿಗೆ…

9 hours ago