Advertisement
MIRROR FOCUS

ತೈವಾನ್‌ನಲ್ಲಿ “ಸಿಹಿ ಅಡಿಕೆ” – “ಅಡಿಕೆ ಕ್ಯಾಂಡಿ” ಈಗ ಚರ್ಚೆ : ಮಕ್ಕಳಿಗೆ ನಿಷೇಧ ಬೇಡಿಕೆ ಹೆಚ್ಚಳ

Share

ತೈವಾನ್‌ನಲ್ಲಿ ಅಡಿಕೆ ಮೌಲ್ಯವರ್ಧನೆ ವಿವಿಧ ಮಾದರಿಯಲ್ಲಿ ನಡೆಯುತ್ತಿತ್ತು. ಇದೀಗ  ಸಿಹಿ ಮತ್ತು ವಿವಿಧ ಫ್ಲೇವರ್‌ಗಳಲ್ಲಿ ತಯಾರಾಗುತ್ತಿರುವ ಅಡಿಕೆ ಉತ್ಪನ್ನಗಳು  ಚರ್ಚೆಗೆ ಕಾರಣವಾಗಿದೆ. ಈ ಉತ್ಪನ್ನಗಳು ಯುವಕರನ್ನು ಆಕರ್ಷಿಸುತ್ತಿದ್ದು, ಮಕ್ಕಳಿಗೆ ಸಂಪೂರ್ಣ ನಿಷೇಧ ತರಬೇಕು ಎಂದು ಸರ್ಕಾರವನ್ನು ಕೆಲ ಸಂಘಟನೆಗಳು ಒತ್ತಾಯಿಸಿದೆ.

ಮಾರುಕಟ್ಟೆಗಳು ಮತ್ತು ಆನ್‌ಲೈನ್‌ ವೇದಿಕೆಗಳಲ್ಲಿ ಬೆರಿ, ಕಾಫಿ ಹಾಗೂ ಹಣ್ಣಿನ ರುಚಿಯ ಅಡಿಕೆ ಕ್ಯಾಂಡಿಗಳು ಹೆಚ್ಚಾಗಿ ಮಾರಾಟವಾಗುತ್ತಿರುವುದು ಗಮನಕ್ಕೆ ಬಂದಿದೆ. ಇದರಿಂದ ಯುವಜನರಲ್ಲಿ ಅಡಿಕೆ ಬಳಕೆ ಹೆಚ್ಚುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಎಚ್ಚರಿಸಿದ್ದಾರೆ.

ವಿಶ್ವ ಮಟ್ಟದ ಸಂಶೋಧನೆಗಳು ಅಡಿಕೆ ಚಪ್ಪರಿಸುವುದು ಮೌಖಿಕ ಕ್ಯಾನ್ಸರ್‌, ಗಂಟಲು ಕ್ಯಾನ್ಸರ್‌ ಹಾಗೂ ಆಹಾರನಾಳದ ಕ್ಯಾನ್ಸರ್‌ಗಳಿಗೆ ಸಂಬಂಧ ಹೊಂದಿರುವುದನ್ನು ಸೂಚಿಸುತ್ತಿವೆ. ಆದ್ದರಿಂದ ಈ ರೀತಿಯ ಆಕರ್ಷಕ ಉತ್ಪನ್ನಗಳ ಮೇಲೆ ನಿಯಂತ್ರಣ ಅಗತ್ಯ ಎಂದು ಅಭಿಪ್ರಾಯ ವ್ಯಕ್ತವಾಗಿದೆ.

ಈ ಹಿನ್ನೆಲೆಯಲ್ಲಿ ಅಡಿಕೆ ಹಾನಿಕಾರಕ ಎಂಬ ಕಾನೂನು ಮಸೂದೆ ಇನ್ನೂ ಜಾರಿಗೆ ಬರದಿರುವುದರಿಂದ ಹೊಸ ಉತ್ಪನ್ನಗಳ ಮಾರಾಟಕ್ಕೆ ಸಂಪೂರ್ಣ ನಿಯಂತ್ರಣ ಇಲ್ಲ. ವಿಶೇಷವಾಗಿ ಮಕ್ಕಳು ಮತ್ತು ಗರ್ಭಿಣಿಯರನ್ನು ರಕ್ಷಿಸಲು ತಕ್ಷಣ ಕ್ರಮ ಕೈಗೊಳ್ಳಬೇಕು ಎಂಬ ಒತ್ತಾಯ ಹೆಚ್ಚಾಗಿದೆ.

ಜಾಗತಿಕ ಮಟ್ಟದಲ್ಲಿ ಅಡಿಕೆ ಬಳಕೆಯ ಕುರಿತು ಆರೋಗ್ಯ ಚರ್ಚೆಗಳು ಹೆಚ್ಚುತ್ತಿರುವುದು ಭಾರತ ಸೇರಿದಂತೆ ಅಡಿಕೆ ಉತ್ಪಾದಕ ಪ್ರದೇಶಗಳಿಗೆ ದೀರ್ಘಕಾಲಿಕವಾಗಿ ಮಾರುಕಟ್ಟೆ ಹಾಗೂ ಬ್ರ್ಯಾಂಡ್‌ ಇಮೇಜ್‌ ಮೇಲೆ ಪರಿಣಾಮ ಬೀರುವ ಸಾಧ್ಯತೆ ಇದೆ. ಅಡಿಕೆಯ ಮೌಲ್ಯವರ್ಧನೆ ಉತ್ಪನ್ನಗಳ ಅಭಿವೃದ್ಧಿಯ ಜೊತೆಗೆ ಆರೋಗ್ಯ ಜಾಗೃತಿ ಮತ್ತು ನಿಯಂತ್ರಣ ಕ್ರಮಗಳ ಕಡೆಗೂ ಗಮನ ಬೇಕಿದೆ. ಹೀಗಾಗಿ ಅಡಿಕೆ ಮೌಲ್ಯವರ್ಧನೆಯೂ ಈಗ ವೇಗ ಪಡೆಯುತ್ತಿಲ್ಲ. ಪ್ರತಿದಿನ ಕೃಷಿ-ಗ್ರಾಮೀಣ-ಪರಿಸರ ಹಾಗೂ ಇತರ ಮಾಹಿತಿಗಾಗಿ  ನಮ್ಮ “ದ ರೂರಲ್‌ ಮಿರರ್.ಕಾಂ”WhatsApp Channel  ಗೆ ಇಲ್ಲಿ ಕ್ಲಿಕ್‌ ಮಾಡಿ

Flavoured and sweetened betel nut products in Taiwan have sparked a health debate, with anti-cancer groups demanding a ban for minors. The issue highlights growing global concerns over betel nut consumption and possible long-term impacts on markets and regulations in producing regions.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ಮಿರರ್‌ ಡೆಸ್ಕ್

the rural mirror news

Published by
ಮಿರರ್‌ ಡೆಸ್ಕ್

Recent Posts

ಗೇರುಹಣ್ಣು ಮೌಲ್ಯವರ್ಧನೆಗೆ ಉಚಿತ ತರಬೇತಿ : ಪುತ್ತೂರಿನ DCR ವತಿಯಿಂದ ಅವಕಾಶ

ಪುತ್ತೂರಿನ DCR ಸಂಸ್ಥೆ ಗೇರುಹಣ್ಣು ಮೌಲ್ಯವರ್ಧನೆ ಕುರಿತು ಉಚಿತ CA-VA ತರಬೇತಿ ನೀಡುತ್ತಿದೆ.…

37 minutes ago

ಹೆಚ್ಚುತ್ತಿರುವ ಉಷ್ಣತೆ ಕೃಷಿಗೆ ದೊಡ್ಡ ಸಂಕಷ್ಟ | ಉತ್ಪಾದನೆ ಕುಸಿತದ ಭೀತಿ

ಹವಾಮಾನ ಬದಲಾವಣೆಯಿಂದ ಉಷ್ಣತೆ ಏರಿಕೆ ಕೃಷಿ ಉತ್ಪಾದನೆಗೆ ಗಂಭೀರ ಸವಾಲಾಗಿ ಪರಿಣಮಿಸಿದೆ. ರಬಿ…

1 hour ago

ಏಷ್ಯಾ ರಬ್ಬರ್ ಬೆಲೆ ಕುಸಿತ – ರಬ್ಬರ್‌ ಇಳುವರಿ ಹಾಗೂ ಸರಬರಾಜು ಭೀತಿ ಕಡಿಮೆಯಾದ ಕಾರಣ ಮಾರುಕಟ್ಟೆ ಕುಸಿತ..!

ಪೀಕ್‌ ಹಾರ್ವೆಸ್ಟ್‌ ನಿರೀಕ್ಷೆಯಿಂದ ಏಷ್ಯಾದಲ್ಲಿ ರಬ್ಬರ್ ಬೆಲೆ ಇಳಿಕೆ. ವಾಹನ ಉದ್ಯಮ ಬೇಡಿಕೆ…

2 hours ago

ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆ | ಮೌನದ ಹಿಂದೆ ಅಡಗಿರುವ ದರ ಚಲನೆಯ ಸಂಕೇತಗಳು

ಮಂಗಳೂರು ಚಾಲಿ ಅಡಿಕೆ ಮಾರುಕಟ್ಟೆ ಈಗ ಮೇಲ್ನೋಟಕ್ಕೆ ಸ್ಥಿರವಾಗಿದ್ದರೂ, ಆವಕ ಕುಸಿತ ಮತ್ತು…

2 hours ago

ಅಕಾಲಿಕ ಮಳೆ ಹಾನಿ ಪರಿಶೀಲನೆ : ರೈತರಿಗೆ ತಕ್ಷಣ ಪರಿಹಾರಕ್ಕೆ ಕೇಂದ್ರ ಸೂಚನೆ

ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆಯಿಂದ ಹಾನಿಗೊಳಗಾದ ಬೆಳೆಗಳ ಕುರಿತು ಕೇಂದ್ರ ಕೃಷಿ…

2 hours ago

5 ಗಂಟೆಗಳಲ್ಲಿ 12,000 ಲೀಟರ್ ತೆಂಗಿನ ಹಾಲು ‘ಸೋಲ್ಡ್ ಔಟ್’..!

ಹಬ್ಬದ ಬೇಡಿಕೆ ಏರಿಕೆಯಿಂದ ಮಲೇಶಿಯಾದ ಮಾರುಕಟ್ಟೆಯಲ್ಲಿ 5 ಗಂಟೆಗಳಲ್ಲಿ 12,000 ಲೀಟರ್ ತೆಂಗಿನ…

2 hours ago