ಅನುಕ್ರಮ

ಟೈಲರ್ ಮಾವ.‌..

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail
ಪ್ರತಿಯೊಂದು ವೃತ್ತಿಗೂ ಅದರದೇ ಗೌರವವಿದೆ. ಜೀವನೋಪಾಯಕ್ಕಾಗಿ ಎಲ್ಲರೂ ಒಂದೊಂದು ಕೆಲಸವನ್ನು ನಿಭಾಯಿಸುವುದು ಅನಿವಾರ್ಯ. ಆಯಾ ವೃತ್ತಿಯನ್ನು ನಿರ್ವಹಿಸಿ ಯಶಸ್ಸು ಗಳಿಸುವುದು ಅವರವರ ಜವಾಬ್ದಾರಿ.
Advertisement

ನಾನೀಗ ಹೇಳ ಹೊರಟಿರುವುದು ಟೈಲರ್ ಮಾವನ ಬಗ್ಗೆ. ನಮ್ಮ ನಿಮ್ಮ ನೆಚ್ಚಿನ ಟೈಲರ್ ಮಾಮ. ಕಟ ಕಟ ಸದ್ದು ಮಾಡುತ್ತಾ, ಕೈ , ಕಾಲಿಗೆರಡಕ್ಕೂ ಕೆಲಸ ಕೊಡುತ್ತಾ, ಟೇಪಿನಲ್ಲಿ ಅಳತೆ ಮಾಡುತ್ತಾ ಪೆನ್ಸಿಲ್ ನಲ್ಲಿ ಗುರುತಿಸುತ್ತಾ , ಕತ್ತರಿಯಲ್ಲಿ ಬಟ್ಟೆಯನ್ನು ಕತ್ತರಿಸುತ್ತಾ ,ಒಂದಿಲ್ಲೊಂದು ಕೆಲಸದಲ್ಲಿ ‌‌ನಿರತರಾಗಿರುತ್ತಿದ್ದ ಟೈಲರ್ ಮಾಮ ಮಕ್ಕಳ ಆಕರ್ಷಣೆಯ ಕೇಂದ್ರ ಬಿಂದು. ಆಟದ ಮೈದಾನದ ಪಕ್ಕದಲ್ಲೇ ‌ಆತನ ಕಟ್ಟಡವಿದ್ದ ಕಾರಣ ಆಟಕ್ಕೆಂದು ಬಂದ ಮಕ್ಕಳು ಒಂದು ಬಾರಿ ಇಣುಕದೆ ಹೋಗಲಾರರು. ಟೈಲರ್ ಮಾವನ ಕೈ ಚಳಕವನ್ನು ಬೆಕ್ಕಸ ಬೆರಗಾಗಿ ನೋಡುತ್ತಾ ಕುಳಿತ ಮಕ್ಕಳು ನೋಡಿಯೇ ಬಾಕಿ. ಬಣ್ಣ ಬಣ್ಣದ ಬಟ್ಟೆಗಳು ಆತನ ಕೈಯಲ್ಲಿ ವಿವಿಧ ಉಡುಗೆಗಳಾಗಿ ಪರಿವರ್ತನೆಗೊಳ್ಳುವುದನ್ನು ಆಸಕ್ತಿಯಿಂದ ನೋಡುವ ಮಕ್ಕಳು ಟೈಲರ್ ಮಾಮನ ನಿತ್ಯ ವೀಕ್ಷಕರು. ಸಮಯಕ್ಕೆ ಮಕ್ಕಳು ಬಾರದಿದ್ದರೆ ಏನನ್ನೋ ಕಳೆದು ಕೊಂಡಂತಾಗುತ್ತದೆ ಟೈಲರ್ ಮಾವನಿಗೆ.

ಅಲ್ಲದೆ ಮಕ್ಕಳ ಮನೆಯ ಯಾವುದೇ ಹೊಲಿಗೆ ಕೈಂಕರ್ಯಗಳು ಅದೇ ಕೈಗಳಲ್ಲೇ ಆಕಾರ ಪಡೆಯುವುದು ತಾನೇ? ! ಆತನಷ್ಟು ಚೆನ್ನಾಗಿ ಹೊಲಿಯುವವರೇ ಇಲ್ಲ ಎಂಬ ಬಿಟ್ಟಿ ಪ್ರಚಾರಕರು ಈ ಮಕ್ಕಳೇ!! ಹಾಗಾಗಿ ಮಕ್ಕಳ ಸ್ವಲ್ಪ ತರಲೆ , ಹರಟೆ, ಗಲಾಟೆಗಳನ್ನೆಲ್ಲಾ ಮನಸಿಗೆ ಹಚ್ಚಿ ಕೊಳ್ಳದೆ ನಗು ನಗುತ್ತಾ ಅವರೊಂದಿಗೆ ಬೆರೆಯುವುದು ಟೈಲರ್ ಮಾವನ ಇಷ್ಟದ ಕೆಲಸಗಳಲ್ಲೊಂದು. ಮಕ್ಕಳು ಬರದೇ ಇದ್ದರೆ ಏನೋ ಕಳೆದು ಕೊಂಡ ಅನುಭವ.

ಶಾಲೆಗೆ ರಜೆ ಇದ್ದಾಗ ‌ಗಲಗಲವೆನ್ನುತ್ತಿದ್ದ ಟೈಲರ್ ‌ಮಾಮನ ಬಟ್ಟೆ ಅಂಗಡಿ, ಶಾಲೆ ಸುರುವಾಯಿತೆಂದರೆ ಹೊಲಿಗೆ ಯಂತ್ರದ ಶಬ್ದಕ್ಕೇ ಸೀಮಿತವಾಗುತ್ತಿತ್ತು. ಹೊಲಿಗೆ ಕೆಲಸವೂ ವೇಗವಾಗುತ್ತಿತ್ತು. ಸಂಜೆ ಮನೆಗೆ ಮರಳುವ ಮಕ್ಕಳಿಗಾಗಿ ಕಾಯುವುದು ಟೈಲರ್ ಮಾವನ ಮೆಚ್ಚಿನ ಕೆಲಸ .

ಒಂದು ಹಳ್ಳಿಯಲ್ಲಿ ಒಬ್ಬನೋ‌ ಇಬ್ಬರೋ‌ ದರ್ಜಿಗಳಿದ್ದರಾಯಿತು. ಜನಸಂಖ್ಯೆಯೂ ಸೀಮಿತವಾಗಿದ್ದ ಕಾಲದಲ್ಲಿ ವರ್ಷಕ್ಕೊಂದೋ‌ ಎರಡೋ‌ ಜೊತೆ ಬಟ್ಟೆಗಳನ್ನು ಹೊಲಿಸಿದರಾಯಿತು. ಊರ ಜಾತ್ರೆಗೋ, ಮನೆಯಲ್ಲಿ ನಡೆಯುವ ವಿಶೇಷ ಶುಭಸಮಾರಂಭಗಳಿಗೆ ಹೊಸ ವಸ್ತ್ರಗಳನ್ನು ಹೊಲಿಸುವುದು ನಡೆದುಕೊಂಡು ಬಂದ ಪದ್ಧತಿ. ಇನ್ನೂ ಪ್ರತಿ ವರ್ಷ ಶಾಲಾ ಸಮವಸ್ತ್ರಗಳನ್ನು ಹೊಲಿಸುವುದು ದೊಡ್ಡ ವಿಷಯ. ಅದೂ ಇಂದಿನಂತೆ ಕಡ್ಡಾಯವಲ್ಲದಿದ್ದುದರಿಂದ ದೊಡ್ಡ ಮಕ್ಕಳ ಸಣ್ಣದಾದ ಸಮವಸ್ತ್ರಗಳು ಚಿಕ್ಕವರಿಗೆ ವರ್ಗಾವಣೆಗೊಳ್ಳುತ್ತಿದ್ದುವು. ಇನ್ನೂ ಒಂದು ಇಡೀ ಟಾಕಿ ಬಟ್ಟೆಯನ್ನು ಖರೀದಿಸಿ ಮನೆಯವರೆಲ್ಲರೂ ಒಂದೇ ರೀತಿಯಲ್ಲಿ ಹೊಲಿಸಿ ಧರಿಸುತ್ತಿದ್ದರು. ಅಳತೆಯಲ್ಲಿ ಮಾತ್ರ ವ್ಯತ್ಯಾಸ. ಒಂದೇ ರೀತಿಯ ಬಟ್ಟೆಯಲ್ಲಿ ಹೊಲಿಸಿದ ವಸ್ತ್ರಗಳನ್ನು ಇಡೀ ಮನೆಯವರು ಧರಿಸುವುದು ‌ ಆ ದಿನಗಳಲ್ಲಿ ಸಾಮಾನ್ಯ ಸಂಗತಿ. ಬಟ್ಟೆಗಳನ್ನು ನೋಡಿಯೇ ಒಂದೇ ಮನೆಯವರೆನ್ನಬಹುದಿತ್ತು. ಈಗಲೂ ಅಪ್ಪ, ಅಮ್ಮ,ಮಕ್ಕಳು ಒಂದೇ ರೀತಿಯ ಬಟ್ಟೆಗಳನ್ನು ಧರಿಸುತ್ತಾರೆ. ಆದರೆ ಅಂದು ಅನಿವಾರ್ಯತೆ, ಇಂದು ಫ್ಯಾಷನ್ ಅಷ್ಟೇ ವ್ಯತ್ಯಾಸ….!

Advertisement

ಅಂದಿನ ದಿನಗಳಲ್ಲಿ ದರ್ಜಿ ಅನಿವಾರ್ಯ. ಈಗಲೂ ಅನಿವಾರ್ಯವೇ. ಅಂದೂ ದರ್ಜಿ ಹೊಲಿದದ್ದೇ ಸ್ಟೈಲು ಇಂದೂ ದರ್ಜಿ ಹೊಲಿದದ್ದೇ ಸ್ಟೈಲು. ಆದರೆ ಹೆಸರು ಬೇರೆ . ಹೊಲಿಸುವವರು ಬಟ್ಟೆ , ಅಳತೆ ಕೊಟ್ಟು ಬಂದರಾಯಿತು. ಟೈಲರ್ ‌ ಹೊಲಿದದ್ದೇ ಅಂತಿಮ. ಆದರೆ ಈಗ ಹಾಗಲ್ಲ. ಕಸ್ಟಮರ್ ಏನು ಹೇಳುತ್ತಾನೋ ಹಾಗೇ ಹೊಲಿಯಬೇಕು. ಇಲ್ಲವಾದರೆ ಅದೇ ಬಟ್ಟೆಯನ್ನು ಟೈಲರ್ ಮುಖಕ್ಕೆ ಬಿಸಾಡುವ ಕಸ್ಟಮರ್ ಗಳೇ ಜಾಸ್ತಿ. ಅದೇ ಕಾಯಕವಾದರೂ ಭಾವನೆಗಳು ಬೇರೆ ಬೇರೆ.

ಇಂದು ಉತ್ತಮ ಟೈಲರ್ ಗೆ ಒಳ್ಳೆಯ ಬೇಡಿಕೆಯಿದೆ. ಇದು ಬಹು ಬೇಡಿಕೆಯ ಉದ್ಯಮವಾಗಿದೆ. ಒಬ್ಬ ಟೈಲರ್ ಕೈಕೆಳಗೆ ಹತ್ತಾರು ಜನರು ಕೆಲಸ ಮಾಡುತ್ತಾರೆ. ಪ್ರತಿಯೊಂದು ಕೆಲಸಕ್ಕೂ ಪ್ರತ್ಯೇಕ ಜನರಿರುತ್ತಾರೆ. ಬಟ್ಟೆಗಳನ್ನು ಅಳತೆ ಮಾಡುತ್ತಾರೆ. ಅಳತೆ ಪ್ರಕಾರ ಕತ್ತರಿಸುವವನೊಬ್ಬ, ಹೊಲಿಯುವವನೊಬ್ಬ, ಗುಬ್ಬಿ( ಬಟನ್) ಅಥವಾ ಜಿಪ್ ಹೊಲಿಯುವವ ಮತ್ತೊಬ್ಬ, ಇನ್ನೂ ಕೈ ಹೊಲಿಗೆ ಮಾಡುವವ ಮಗದೊಬ್ಬ. ಎಂಬ್ರಾಯಿಡರಿ ಕೆಲಸಗಳಿದ್ದರೆ ಅದಕ್ಕೆ ಬೇರೆ ಮೆಶಿನ್ ಗಳಿವೆ. ಹೀಗೆ ಒಂದೇ ಬಟ್ಟೆ ವಿವಿಧ ಜನರ ಕೈಚಳಕದಿಂದ ಹೊರಹೊಮ್ಮುವುದು‌ ಇಂದಿನ ವಸ್ತುಸ್ಥಿತಿಗೆ ಹಿಡಿದ ಕನ್ನಡಿ. ಟೈಲರ್ ಎಂದರೆ ನಮ್ಮವ, ಆತ್ಮೀಯ ಮನೆಯ ಸದಸ್ಯ ಎಂಬ ಭಾವನೆ ದೂರವಾಗಿ ಬ್ಯುಸಿನೆಸ್ ‌ಮಾನ್ ಆಗಿ ಕಣ್ಣಮುಂದೆ ಬಂದು‌ ನಿಲ್ಲುತ್ತಾನೆ. ಇವೆಲ್ಲ ಬದಲಾವಣೆಯ ಹೊರತಾಗಿಯೂ ಮಧ್ಯ ರಾತ್ರಿಯಾದರೂ ಸರಿ, ಕರೆಂಟ್ ಕೈ ಕೊಟ್ಟರೂ, ದೀಪದ ಬೆಳಕಿನಲ್ಲಾದರೂ ಹೊಲಿದು ಸಮಯಕ್ಕೆ ಸರಿಯಾಗಿ ತಲುಪಿಸುವ ಕೇಶವಣ್ಣನಂತಹ ಅಣ್ಣಂದಿರಿಗೆ, ಶೀಲಕ್ಕನಂತಹ ಅಕ್ಕಂದಿರಿಗೆ, ನನ್ನ ಈ ಬರಹ ಅರ್ಪಣೆ…….

ಅಶ್ವಿನಿ ಮೂರ್ತಿ ಅಯ್ಯನಕಟ್ಟೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಸಾವಯವ ಕೃಷಿ ಉತ್ತೇಜನ | ಜೋಯಿಡಾ ತಾಲೂಕು ಸಾವಯವ ಕೃಷಿ ತಾಲೂಕು ಗುರಿ

ರಾಸಾಯನಿಕಗಳ ಬಳಕೆಯಿಂದ ಮಣ್ಣಿನ ಫಲವತ್ತತೆ ಕುಗ್ಗುತ್ತಿದ್ದು, ಆರೋಗ್ಯದ ಮೇಲೂ ಪರಿಣಾಮ ಬೀರುತ್ತಿದೆ. ನೈಸರ್ಗಿಕ…

3 hours ago

ವಿಕಸಿತ ಕೃಷಿ ಸಂಕಲ್ಪ ಅಭಿಯಾನ | 1 ಕೋಟಿ 34 ಲಕ್ಷಕ್ಕೂ ಅಧಿಕ ರೈತರೊಂದಿಗೆ ಸಂವಾದ

ವಿಕಸಿತ ಕೃಷಿ ಸಂಕಲ್ಪ ಅಭಿಯಾನದ ಅಡಿಯಲ್ಲಿ 2 ಸಾವಿರದ 170 ತಂಡಗಳನ್ನು ರಚಿಸಲಾಗಿತ್ತು.…

4 hours ago

ರಾಜ್ಯದಲ್ಲಿ 60 ಸಾವಿರ ಮೆಗಾವ್ಯಾಟ್ ವಿದ್ಯುತ್ ಉತ್ಪಾದನೆ ಗುರಿ

ವಿದ್ಯುತ್ ಉತ್ಪಾದನೆಯಲ್ಲಿ ದೇಶದಲ್ಲಿ ರಾಜ್ಯದ ಕೊಡುಗೆ ಅಪಾರ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ತಿಳಿಸಿದ್ದಾರೆ.…

4 hours ago

ಮಲೆನಾಡಿನಲ್ಲಿ “ಭಾರಿ” ಮಳೆಯ ದಿನದಲ್ಲಿ ಶಾಲೆಗೆ ರಜೆ ಕೊಡುವರಾರು…!?

ಮಲೆನಾಡು ಕರಾವಳಿಯ ಪ್ರದೇಶದ ಸರ್ಕಾರಿ ಶಾಲೆಗೆ ಹೋಗುವ ಅನೇಕ ಮಕ್ಕಳು ಹಳ್ಳ-ಹೊಳೆ ದಾಟಬೇಕು,…

4 hours ago

ಗುರು-ಬುಧನಿಂದ ಈ 5 ರಾಶಿಗೆ ಸಕಲೈಶ್ವರ್ಯ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

4 hours ago