Advertisement
Opinion

ರಾಷ್ಟ್ರೀಯ ರೈತ ದಿನಾಚರಣೆಯಂದು ಒಂದಷ್ಟು ಸಂಕಲ್ಪ ಮಾಡಿ | ಕೃಷಿ, ನಮ್ಮ ಜೀವ ಎರಡೂ ಉಳಿದೀತು.. |

Share

ಡಿಸೆಂಬರ್ 23,ರಾಷ್ಟ್ರೀಯ ರೈತರ ದಿನಾಚರಣೆಯಂದು(Nation Farmers Day) ಕೆಳಕಂಡ ಸಂಕಲ್ಪ(Resolution) ಮಾಡಲು ಬಯಸುತ್ತೇನೆ ಮತ್ತು ನೀವು ಕೂಡ ಸಂಕಲ್ಪ ಮಾಡಲು ಕೋರುತ್ತೇನೆ.

  • ನಮ್ಮ ಕೃಷಿ ಭೂಮಿ(Agricultural Land) ಮೇಲೆ ಬೀಳುವ ಸೂರ್ಯನ(Sun) ಶಕ್ತಿಯನ್ನು ಹಸಿರೆಲೆಗಳ(Green Leaf) ಮೂಲಕ ಬಂಧಿಸುತ್ತೇನೆ ಮತ್ತು ಎಲೆಗಳಲ್ಲಿ ಬಂಧಿಯಾಗಿರುವ ಸೂರ್ಯನ ಶಕ್ತಿಯನ್ನು ಭೂಮಿಗೆ ವರ್ಗಾಯಿಸಿ ಭೂಮಿಯನ್ನು ಶಕ್ತಿಯುತ ಮಾಡಲು ಪ್ರತಿಯೊಂದು ಮರ ಗಿಡಗಳ ಎಲೆಗಳನ್ನು ರೂಪಾಯಿ ನೋಟಿನಂತೆ ಸಂರಕ್ಷಣೆ ಮಾಡುತ್ತೇನೆ.
  • ಬೆಳೆಗಳು ನಮ್ಮ ಪಾಲು, ಬೆಳೆಯ ತ್ಯಾಜ್ಯಗಳು ಮಣ್ಣಿನ ಪಾಲು. ಕೃಷಿ ತ್ಯಾಜ್ಯಗಳನ್ನು ಸುಡುವುದು ನಮ್ಮ ಹಣ ಮತ್ತು ಶ್ರಮ ಸುಟ್ಟು ಹಾಕಿದಂತೆ. ಕೃಷಿ ತ್ಯಾಜ್ಯಗಳಿಗೆ(Agricultural waste) ಬೆಂಕಿ ಹಾಕಿ ಸುಟ್ಟು ಬೂದಿ ಮಾಡುವುದಿಲ್ಲ, ಕೃಷಿ ತ್ಯಾಜ್ಯಗಳನ್ನು ಭೂಮಿಗೆ ಸೇರಿಸುವ ಕೆಲಸ ಮಾಡುತ್ತೇನೆ.
  • ಸಕಲ ಜೀವರಾಶಿಗಳೊಂದಿಗೆ ಕೃಷಿ ಮಾಡುವ ವಿಧಾನ ಅನುಸರಿಸುತ್ತೇನೆ. ನನಗೆ ಭೂಮಿ ಮೇಲೆ ಜೀವಿಸಲು ಇರುವ ಹಕ್ಕಿನಷ್ಟೇ, ಸಕಲ ಜೀವರಾಶಿಗಳಿಗೂ ಹಕ್ಕಿದೆ ಮತ್ತು ಪ್ರಕೃತಿಯ ಜೀವನ ಚಕ್ರದಲ್ಲಿ ಅವುಗಳಿಗೆ ನಿರ್ವಹಿಸಲು ನಿರ್ದಿಷ್ಟವಾದ ಕರ್ತವ್ಯವಿದೆ. ನಾವು ಬದುಕಿ ಉಳಿಯಲು ಅವುಗಳ ಬದುಕು ಅಷ್ಟೇ ಮುಖ್ಯವಾಗಿದೆ ಎಂದು ತಿಳಿಯುತ್ತೇನೆ.
  • ಕೃಷಿಯನ್ನು ಕೇವಲ ರಾಸಾಯನಶಾಸ್ತ್ರದೊಂದಿಗೆ ನೋಡದೆ ಜೀವಶಾಸ್ತ್ರದೊಂದಿಗೆ ನೋಡುವ ಮನೋಭಾವ ಮತ್ತು ಪ್ರಕೃತಿಗೆ ಪೂರಕವಾದ ಕೃಷಿ ವಿಧಾನ ಅಳವಡಿಸಿಕೊಳ್ಳುತ್ತೇನೆ.
  • ಮಣ್ಣಿನಲ್ಲಿ ಖನಿಜಾಂಶ ಮತ್ತು ಸಾವಯವಾಂಶ ಸಮ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳುತ್ತೇನೆ.
  • ಮಣ್ಣಿಗೆ ವಿಷ ಹಾಕಿ ಅಭಿವೃದ್ಧಿ ಮಾಡುತ್ತಿದ್ದೇವೆ ಎಂಬ ಹುಚ್ಚು ಭ್ರಮೆಯಿಂದ ನಾಶ ಹೊಂದುತ್ತಿದ್ದೇವೆ ಮತ್ತು ದೇಶದ ಶ್ರೀಮಂತಿಕೆ ಆ ದೇಶದ ಮಣ್ಣಿನ ಫಲವತ್ತತೆಯನ್ನು ಅವಲಂಬಿಸಿದೆ ಹೊರತು ಬ್ಯಾಂಕಿನಲ್ಲಿ ಇಟ್ಟಿರುವ ಹಣ ಹಾಗು ಚಿನ್ನದಿಂದ ಅಲ್ಲ ಎಂದು ಬಲವಾಗಿ ನಂಬಿದ್ದೇನೆ.
  • ವಿಷಮುಕ್ತವಾದ, ಗುಣಮಟ್ಟವುಳ್ಳ, ಪೌಷ್ಟಿಕ ಮತ್ತು ಆರೋಗ್ಯಭರಿತ ಆಹಾರ ಬೆಳೆಯುವ ಮತ್ತು ಸಾಧ್ಯವಾದಷ್ಟು ರೈತರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿ ಮಾಡುವ ಅಭ್ಯಾಸ ರೂಢಿಸಿಕೊಳ್ಳುತ್ತೇನೆ.
  • ನಮ್ಮೆಲ್ಲರ ಹೊಟ್ಟೆ ತುಂಬಿಸುತ್ತಿರುವ ಆಹಾರ ಬರುತ್ತಿರುವುದು ಕೃಷಿಯಿಂದಲೇ ಹೊರತು ಕೈಗಾರಿಕೆಗಳಿಂದಲ್ಲ, ಕೃಷಿ ಇಲ್ಲದೇ ಬೇರೆ ಯಾವುದೇ ಉದ್ಯಮ, ವ್ಯವಹಾರ ನಡೆಯುವುದಿಲ್ಲ. ನಮ್ಮೆಲ್ಲರ ಹಸಿವು ನೀಗಿಸುತ್ತಿರುವ ಹಾಗು ಉದ್ಯಮ ಮತ್ತು ವ್ಯವಹಾರ ನೆಡೆಯಲು ಸಹಕಾರಿಯಾಗಿರುವ ರೈತರನ್ನು ಗೌರವದಿಂದ ಕಾಣುವ ಮನೋಭಾವ ಬೆಳಸಿಕೊಳ್ಳುತ್ತೇನೆ.

ರಾಷ್ಟ್ರೀಯ ರೈತರ ದಿನಾಚರಣೆಯ ಶುಭಾಶಯಗಳು.

ಬರಹ :
ಪ್ರಶಾಂತ್ ಜಯರಾಮ್
,
ಮೊಬೈಲ್:9342434530
On December 23, National Farmers Day, I would like to make the following resolution and request you to make a resolution as well.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 22-08-2026 | ಕರಾವಳಿಯಲ್ಲಿ ಮಳೆ ಇಳಿಕೆ, 26ರಿಂದ ಮತ್ತಷ್ಟು ದುರ್ಬಲವಾಗುವ ಸಾಧ್ಯತೆ

ಕರ್ನಾಟಕದಲ್ಲಿ ಆಗಸ್ಟ್ 23ರಿಂದ 25ರವರೆಗೆ ಹಲವೆಡೆ ಅಲ್ಲಲ್ಲಿ ಸಾಮಾನ್ಯ ಮಳೆಯಷ್ಟೇ ನಿರೀಕ್ಷಿಸಲಾಗಿದ್ದು, ಕರಾವಳಿ…

6 hours ago

ಸೆಪ್ಟೆಂಬರ್‌ನಲ್ಲಿ ಪಿಎಂ ಕಿಸಾನ್ ಹಣ ಬರಬೇಕೇ? ರೈತರು ಈಗಲೇ e-KYC ಪೂರ್ಣಗೊಳಿಸಿ

PM-Kisan ಯೋಜನೆಯ 24ನೇ ಕಂತಿನ ಹಣ ಪಡೆಯಲು ಅರ್ಹ ರೈತರು ಬಯೋಮೆಟ್ರಿಕ್ ಅಥವಾ…

13 hours ago

ಬೆಳೆ ವಿಮೆಗೆ ರೈತರಿಗೆ ಮತ್ತೊಂದು ಅವಕಾಶ : ಆಗಸ್ಟ್ 31ರವರೆಗೆ ನೋಂದಣಿ ಅವಧಿ ವಿಸ್ತರಣೆ

ಮುಂಗಾರು ಹಂಗಾಮಿನ ಭತ್ತ ಸೇರಿದಂತೆ ಬೆಳೆಗಳಿಗೆ ಪ್ರಧಾನ ಮಂತ್ರಿ ಫಸಲ್ ಬಿಮಾ ಯೋಜನೆಯಡಿ…

1 day ago

ಹವಾಮಾನ ವರದಿ | 21-08-2026 | ಕರಾವಳಿಯಲ್ಲಿ ಆ.23–25 ರಂದು ಮಳೆ ಹೆಚ್ಚಳ ಸಾಧ್ಯತೆ – ಆ.26ರವರೆಗೆ ಮೋಡ–ಮಳೆ

ಕರಾವಳಿ ಕರ್ನಾಟಕದಲ್ಲಿ ಆ.23ರಿಂದ 25ರವರೆಗೆ ಮಳೆಯ ಪ್ರಮಾಣ ಸ್ವಲ್ಪ ಹೆಚ್ಚಾಗುವ ಸಾಧ್ಯತೆಯಿದ್ದು, ಆ.26ರವರೆಗೂ…

1 day ago

ನಿಮ್ಮ ಹೆಸರಲ್ಲಿ 9 ಸಿಮ್‌ಗಳಿವೆಯೇ? ಆಗಸ್ಟ್ 24ರಿಂದ ಹೊಸ ನಿಯಮ – ಹೆಚ್ಚುವರಿ ನಂಬರ್‌ಗೆ ಬ್ರೇಕ್

ಆಗಸ್ಟ್ 24ರಿಂದ ಒಬ್ಬ ವ್ಯಕ್ತಿಯ ಹೆಸರಿನಲ್ಲಿ 9 ಮೊಬೈಲ್ ಸಂಪರ್ಕಗಳ ಮಿತಿಯನ್ನು ಮೀರಿ…

2 days ago

ತೆಂಗಿನ ಮರದಿಂದ 3 ಕೋಟಿ ಜನರಿಗೆ ಬದುಕು…!, ಈಗ ₹7,038 ಕೋಟಿ ರಫ್ತು!

ಭಾರತದ ತೆಂಗು ವಲಯ ಈಗ ಕಾಯಿ ಮಾರಾಟದಿಂದ ಮೌಲ್ಯವರ್ಧಿತ ಉತ್ಪನ್ನಗಳ ಜಾಗತಿಕ ಮಾರುಕಟ್ಟೆಯತ್ತ…

2 days ago