Advertisement
Opinion

ರಾಷ್ಟ್ರೀಯ ರೈತ ದಿನಾಚರಣೆಯಂದು ಒಂದಷ್ಟು ಸಂಕಲ್ಪ ಮಾಡಿ | ಕೃಷಿ, ನಮ್ಮ ಜೀವ ಎರಡೂ ಉಳಿದೀತು.. |

Share

ಡಿಸೆಂಬರ್ 23,ರಾಷ್ಟ್ರೀಯ ರೈತರ ದಿನಾಚರಣೆಯಂದು(Nation Farmers Day) ಕೆಳಕಂಡ ಸಂಕಲ್ಪ(Resolution) ಮಾಡಲು ಬಯಸುತ್ತೇನೆ ಮತ್ತು ನೀವು ಕೂಡ ಸಂಕಲ್ಪ ಮಾಡಲು ಕೋರುತ್ತೇನೆ.

  • ನಮ್ಮ ಕೃಷಿ ಭೂಮಿ(Agricultural Land) ಮೇಲೆ ಬೀಳುವ ಸೂರ್ಯನ(Sun) ಶಕ್ತಿಯನ್ನು ಹಸಿರೆಲೆಗಳ(Green Leaf) ಮೂಲಕ ಬಂಧಿಸುತ್ತೇನೆ ಮತ್ತು ಎಲೆಗಳಲ್ಲಿ ಬಂಧಿಯಾಗಿರುವ ಸೂರ್ಯನ ಶಕ್ತಿಯನ್ನು ಭೂಮಿಗೆ ವರ್ಗಾಯಿಸಿ ಭೂಮಿಯನ್ನು ಶಕ್ತಿಯುತ ಮಾಡಲು ಪ್ರತಿಯೊಂದು ಮರ ಗಿಡಗಳ ಎಲೆಗಳನ್ನು ರೂಪಾಯಿ ನೋಟಿನಂತೆ ಸಂರಕ್ಷಣೆ ಮಾಡುತ್ತೇನೆ.
  • ಬೆಳೆಗಳು ನಮ್ಮ ಪಾಲು, ಬೆಳೆಯ ತ್ಯಾಜ್ಯಗಳು ಮಣ್ಣಿನ ಪಾಲು. ಕೃಷಿ ತ್ಯಾಜ್ಯಗಳನ್ನು ಸುಡುವುದು ನಮ್ಮ ಹಣ ಮತ್ತು ಶ್ರಮ ಸುಟ್ಟು ಹಾಕಿದಂತೆ. ಕೃಷಿ ತ್ಯಾಜ್ಯಗಳಿಗೆ(Agricultural waste) ಬೆಂಕಿ ಹಾಕಿ ಸುಟ್ಟು ಬೂದಿ ಮಾಡುವುದಿಲ್ಲ, ಕೃಷಿ ತ್ಯಾಜ್ಯಗಳನ್ನು ಭೂಮಿಗೆ ಸೇರಿಸುವ ಕೆಲಸ ಮಾಡುತ್ತೇನೆ.
  • ಸಕಲ ಜೀವರಾಶಿಗಳೊಂದಿಗೆ ಕೃಷಿ ಮಾಡುವ ವಿಧಾನ ಅನುಸರಿಸುತ್ತೇನೆ. ನನಗೆ ಭೂಮಿ ಮೇಲೆ ಜೀವಿಸಲು ಇರುವ ಹಕ್ಕಿನಷ್ಟೇ, ಸಕಲ ಜೀವರಾಶಿಗಳಿಗೂ ಹಕ್ಕಿದೆ ಮತ್ತು ಪ್ರಕೃತಿಯ ಜೀವನ ಚಕ್ರದಲ್ಲಿ ಅವುಗಳಿಗೆ ನಿರ್ವಹಿಸಲು ನಿರ್ದಿಷ್ಟವಾದ ಕರ್ತವ್ಯವಿದೆ. ನಾವು ಬದುಕಿ ಉಳಿಯಲು ಅವುಗಳ ಬದುಕು ಅಷ್ಟೇ ಮುಖ್ಯವಾಗಿದೆ ಎಂದು ತಿಳಿಯುತ್ತೇನೆ.
  • ಕೃಷಿಯನ್ನು ಕೇವಲ ರಾಸಾಯನಶಾಸ್ತ್ರದೊಂದಿಗೆ ನೋಡದೆ ಜೀವಶಾಸ್ತ್ರದೊಂದಿಗೆ ನೋಡುವ ಮನೋಭಾವ ಮತ್ತು ಪ್ರಕೃತಿಗೆ ಪೂರಕವಾದ ಕೃಷಿ ವಿಧಾನ ಅಳವಡಿಸಿಕೊಳ್ಳುತ್ತೇನೆ.
  • ಮಣ್ಣಿನಲ್ಲಿ ಖನಿಜಾಂಶ ಮತ್ತು ಸಾವಯವಾಂಶ ಸಮ ಪ್ರಮಾಣದಲ್ಲಿ ಇರುವಂತೆ ನೋಡಿಕೊಳ್ಳುತ್ತೇನೆ.
  • ಮಣ್ಣಿಗೆ ವಿಷ ಹಾಕಿ ಅಭಿವೃದ್ಧಿ ಮಾಡುತ್ತಿದ್ದೇವೆ ಎಂಬ ಹುಚ್ಚು ಭ್ರಮೆಯಿಂದ ನಾಶ ಹೊಂದುತ್ತಿದ್ದೇವೆ ಮತ್ತು ದೇಶದ ಶ್ರೀಮಂತಿಕೆ ಆ ದೇಶದ ಮಣ್ಣಿನ ಫಲವತ್ತತೆಯನ್ನು ಅವಲಂಬಿಸಿದೆ ಹೊರತು ಬ್ಯಾಂಕಿನಲ್ಲಿ ಇಟ್ಟಿರುವ ಹಣ ಹಾಗು ಚಿನ್ನದಿಂದ ಅಲ್ಲ ಎಂದು ಬಲವಾಗಿ ನಂಬಿದ್ದೇನೆ.
  • ವಿಷಮುಕ್ತವಾದ, ಗುಣಮಟ್ಟವುಳ್ಳ, ಪೌಷ್ಟಿಕ ಮತ್ತು ಆರೋಗ್ಯಭರಿತ ಆಹಾರ ಬೆಳೆಯುವ ಮತ್ತು ಸಾಧ್ಯವಾದಷ್ಟು ರೈತರಿಂದ ನೇರವಾಗಿ ಉತ್ಪನ್ನಗಳನ್ನು ಖರೀದಿ ಮಾಡುವ ಅಭ್ಯಾಸ ರೂಢಿಸಿಕೊಳ್ಳುತ್ತೇನೆ.
  • ನಮ್ಮೆಲ್ಲರ ಹೊಟ್ಟೆ ತುಂಬಿಸುತ್ತಿರುವ ಆಹಾರ ಬರುತ್ತಿರುವುದು ಕೃಷಿಯಿಂದಲೇ ಹೊರತು ಕೈಗಾರಿಕೆಗಳಿಂದಲ್ಲ, ಕೃಷಿ ಇಲ್ಲದೇ ಬೇರೆ ಯಾವುದೇ ಉದ್ಯಮ, ವ್ಯವಹಾರ ನಡೆಯುವುದಿಲ್ಲ. ನಮ್ಮೆಲ್ಲರ ಹಸಿವು ನೀಗಿಸುತ್ತಿರುವ ಹಾಗು ಉದ್ಯಮ ಮತ್ತು ವ್ಯವಹಾರ ನೆಡೆಯಲು ಸಹಕಾರಿಯಾಗಿರುವ ರೈತರನ್ನು ಗೌರವದಿಂದ ಕಾಣುವ ಮನೋಭಾವ ಬೆಳಸಿಕೊಳ್ಳುತ್ತೇನೆ.

ರಾಷ್ಟ್ರೀಯ ರೈತರ ದಿನಾಚರಣೆಯ ಶುಭಾಶಯಗಳು.

ಬರಹ :
ಪ್ರಶಾಂತ್ ಜಯರಾಮ್
,
ಮೊಬೈಲ್:9342434530
On December 23, National Farmers Day, I would like to make the following resolution and request you to make a resolution as well.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಭಾರೀ ಮಳೆಯ ಎಚ್ಚರಿಕೆ : 24 ಗಂಟೆ ಸನ್ನದ್ಧವಾಗಿರಲು ಡಿಸಿ ಸೂಚನೆ, ಭೂಕುಸಿತ ಪ್ರದೇಶಗಳ ಮೇಲೆ ಕಟ್ಟೆಚ್ಚರ

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆಯಲ್ಲಿ ಎಲ್ಲಾ ಇಲಾಖೆಗಳನ್ನು 24…

11 hours ago

ಹುಬ್ಬಳ್ಳಿಯಲ್ಲಿ ಹಲಸು ಮೇಳಕ್ಕೆ ಚಾಲನೆ – 50ಕ್ಕೂ ಹೆಚ್ಚು ಮಳಿಗೆಗಳು, ಹಲಸಿನ ಬಿರಿಯಾನಿಯಿಂದ ಕಬಾಬ್‌ವರೆಗೆ ಸವಿಯುವ ಅವಕಾಶ

ಹುಬ್ಬಳ್ಳಿಯಲ್ಲಿ ಆರಂಭವಾದ ಮೂರು ದಿನಗಳ ಹಲಸು ಮೇಳಕ್ಕೆ ಜನರಿಂದ ಉತ್ತಮ ಸ್ಪಂದನೆ ವ್ಯಕ್ತವಾಗಿದೆ.…

11 hours ago

ರಾಜ್ಯಾದ್ಯಂತ ಆರ್ಭಟಿಸುತ್ತಿರುವ ವರುಣ – ಭದ್ರಾ-ನೇತ್ರಾವತಿ ಅಪಾಯದ ಮಟ್ಟ ಮೀರಿ ಪ್ರವಾಹ

ಕರಾವಳಿ ಹಾಗೂ ಮಲೆನಾಡಿನಲ್ಲಿ ಭಾರಿ ಮಳೆ ಮುಂದುವರಿದಿದ್ದು, ಭದ್ರಾ ಹಾಗೂ ನೇತ್ರಾವತಿ, ಕುಮಾರಧಾರಾ…

11 hours ago

ಶಿರಾಡಿ ಘಾಟ್‌ನಲ್ಲಿ ಭೂಕುಸಿತ – ರೈಲು ಸಂಚಾರಕ್ಕೆ ತಾತ್ಕಾಲಿಕ ಅಡ್ಡಿ

ಶಿರಾಡಿ ಘಾಟ್‌ನ ಎಡಕುಮರಿ–ಶಿರಿಬಾಗಿಲು ನಡುವೆ ಭೂಕುಸಿತದಿಂದ ರೈಲು ಸಂಚಾರಕ್ಕೆ ಅಡಚಣೆ ಉಂಟಾಗಿದೆ. ಪರಿಹಾರ…

12 hours ago

ಮೊಬೈಲ್ ನೋಡುತ್ತಾ ಊಟ ಮಾಡಬೇಡಿ, ಶಿಸ್ತಿನ ಜೀವನವೇ ಆರೋಗ್ಯದ ರಹಸ್ಯ – ರಾಘವೇಶ್ವರ ಶ್ರೀ

ಆಹಾರ, ನಿದ್ರೆ ಮತ್ತು ಬ್ರಹ್ಮಚರ್ಯ ಸಮತೋಲನದಲ್ಲಿದ್ದಾಗ ಮಾತ್ರ ಆರೋಗ್ಯ ಹಾಗೂ ಆಧ್ಯಾತ್ಮಿಕ ಪ್ರಗತಿ…

23 hours ago

ಭಾರೀ ಮಳೆಯ ಎಚ್ಚರಿಕೆ | ಕರಾವಳಿ ಕರ್ನಾಟಕದಲ್ಲಿ ಅತಿ ಭಾರೀ ಮಳೆ – ಪ್ರವಾಹ- ಭೂಕುಸಿತದ ಎಚ್ಚರಿಕೆ

ಕರಾವಳಿ ಕರ್ನಾಟಕ, ದಕ್ಷಿಣ ಒಳನಾಡು ಕರ್ನಾಟಕ ಹಾಗೂ ಕೇರಳದಲ್ಲಿ ಇಂದು ಭಾರೀ ಮಳೆಯ…

1 day ago