#Arecanut| ಮಳೆಗಾಲದಲ್ಲಿ ಅಡಿಕೆ ಕಾಪಾಡಿಕೊಳ್ಳುವುದೇ ಸವಾಲು | ಅಡಿಕೆಯ ಸೀಳುರೋಗಕ್ಕೆ ಕಾರಣಗಳು ಮತ್ತು ನಿರ್ವಹಣೆ

July 17, 2023
12:02 PM
ಅಡಿಕೆ ಕಾಯಿಗಳು ಮಾಗುವ ಮುನ್ನವೇ ಹಳದಿ ಬಣ್ಣಕ್ಕೆ ತಿರುಗಿ ಕಾಯಿಗಳ ತೊಟ್ಟು ಎರಡು ಹೋಳಾಗಿ ಸೀಳುತ್ತದೆ. ಅಂತಹ ಕಾಯಿಗಳು ಗೊಂಚಲಿನಿಂದ ಕೆಳಗೆ ಬೀಳುತ್ತವೆ. ಇದಕ್ಕೆ ಪರಿಹಾರಕ್ಕಾಗಿ ಕೃಷಿಕರು ಹೇಳುತ್ತಾರೆ.

ಅಡಿಕೆ, ಕರಾವಳಿ ಹಾಗೂ ಮಲೆನಾಡಿನ ಜನರ ಜೀವನಾಧಾರ. ಅನೇಕ ರೈತರ ಬದುಕು ಅಡಿಕೆ ಮೇಲೆಯೇ ಅವಲಂಬಿತವಾಗಿದೆ. ಕಳೆದ ಎರಡು ವರ್ಷಗಳಿಂದ ಅಡಿಕೆಗೆ ಬೆಲೆಯೇನೋ ಇದೆ. ಆದರೆ ಅಡಿಕೆಗೆ ವಿವಿಧ ರೋಗಗಳು ಉಲ್ಬಣಿಸುತ್ತಿರುವುದು ರೈತರನ್ನು ಕಂಗೆಡಿಸಿದೆ. ಕೃಷಿಕರಿಗೆ ಬೆಳೆ ಉಳಿಸಿಕೊಳ್ಳುವುದೇ ಸವಾಲಾಗಿ ಪರಿಣಮಿಸಿದೆ.

ಹಳದಿ ರೋಗ, ಎಲೆ ಚುಕ್ಕೆ ರೋಗ, ಸಿಂಗಾರ ಒಣಗುವಿಕೆ, ಎಳೆ ಕಾಯಿಗಳು ಬೀಳುವುದು ಹೀಗೆ.. ಹೊಸ ಹೊಸ ರೋಗಗಳು ಕಾಣಿಸಿಕೊಳ್ಳುತ್ತಿವೆ. ಈ ರೋಗಗಳಿಂದ ಮುಕ್ತಿ ಹೇಗೆ ಅನ್ನೋದು ಈವರೆಗೆ ಯಕ್ಷ ಪ್ರಶ್ನೆಯಾಗಿದೆ. ಇರುವ ಒಂದಷ್ಟು ಮದ್ದುಗಳನ್ನೇ ಸಿಂಪಡಿಸಿ ರೈತರು ಸಮಾಧಾನ ಪಟ್ಟುಕೊಳ್ಳುತ್ತಿದ್ದಾರೆ. ಇದರ ಜೊತೆಗೆ ಅಡಿಕೆಗೆ ಮಳೆಗಾಲ ಹಾಗೆ ಚಳಿಗಾಲದಲ್ಲಿ ಕಾಣಿಸಿಕೊಳ್ಳುವ ಅಂಡೋಡಕ ರೋಗವೂ ಕಾಯಿ ಉಳಿಸಿಕೊಳ್ಳಲು ಪರದಾಡುವಂತೆ ಮಾಡುತ್ತವೆ.

ಅಡಿಕೆಯಲ್ಲಿ ಅಂಡೋಡಕ ಕಾರಣಗಳು ಮತ್ತು ನಿರ್ವಹಣೆ: 

1. ಇದೊಂದು ಶಾರೀರಿಕ ವ್ಯವಸ್ಥೆಯಾಗಿದ್ದು ಪೋಷಕಾಂಶಗಳ ಕೊರತೆ ಮತ್ತು ಅಹಿತಕರ ವಾತಾವರಣದಿಂದಾಗಿ ಅಡಿಕೆ ಸೀಳುವ ಸಮಸ್ಯೆ ಎದುರಾಗುತ್ತದೆ.

2. ಇದರ ಪ್ರಮುಖ ಲಕ್ಷಣಗಳೆಂದರೆ ಕಾಯಿಗಳು ಮಾಗುವ ಮುನ್ನವೇ ಹಳದಿ ಬಣ್ಣಕ್ಕೆ ತಿರುಗಿ ಕಾಯಿಗಳ ತೊಟ್ಟು ಎರಡು ಹೋಳಾಗಿ ಸೀಳುತ್ತದೆ. ಅಂತಹ ಕಾಯಿಗಳು ಗೊಂಚಲಿನಿಂದ ಕೆಳಗೆ ಬೀಳುತ್ತದೆ.  ಎಳೆಯ ಅಡಿಕೆ ಮರಗಳಲ್ಲಿ ಅದರಲ್ಲೂ ಚಳಿಗಾಲದಲ್ಲಿ ಈ ಸಮಸ್ಯೆ ಹೆಚ್ಚು.

3.ಬೋರಾನ್ ಮತ್ತು ಪೊಟ್ಯಾಷಿಯಂ ಪೋಷಕಾಂಶದ ಕೊರತೆ ಕಾಯಿ ಸೀಳುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ

ನಿರ್ವಹಣೆ

1. ತೋಟದಲ್ಲಿ ನೀರು ನಿಲ್ಲದಂತೆ ಸೂಕ್ತ ಬಸಿಗಾಲುವೆಗಳನ್ನು ನಿರ್ಮಿಸಬೇಕು.

2. ರೋಗದ ಪ್ರಾರಂಭದ ಹಂತದಲ್ಲಿಯೇ ಶೇಕಡ 0.2% ಬೋರ್ಡೆಕ್ಸ್ ಮಿಶ್ರಣವನ್ನು ಸಿಂಪಡಿಸಬೇಕು.

3. ಬೋರಾನ್ ಮತ್ತು ಪೊಟ್ಯಾಶಿಯಂ ಪೋಷಕಾಂಶದ ಕೊರತೆಯಾಗದಂತೆ ನೋಡಿಕೊಳ್ಳಬೇಕು.

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ:

ಸಂತೋಷ್ ನಿಲುಗುಳಿ, ತೋಟಗಾರಿಕಾ ಸಲಹೆಗಾರರು, ಸಿದ್ಧಾರ್ಥ ಅಗ್ರಿ ಸಲ್ಯೂಷನ್ಸ್. 9916359007

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಬೇರೊಬ್ಬರ ಬದುಕಿನ ಅಳತೆಯಲ್ಲಿ ನಮ್ಮ ಬದುಕನ್ನು ಅಳೆಯುತ್ತಿದ್ದೇವೆಯೇ?
September 5, 2026
7:23 AM
by: ಮಹೇಶ್ ಪುಚ್ಚಪ್ಪಾಡಿ
ಗೂಗಲ್‌ ಮತ್ತು AIಯ ಕಾಲದಲ್ಲೂ ಗುರು ಏಕೆ ಬೇಕು..?
September 5, 2026
6:54 AM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಮಳೆ ಹೆಚ್ಚಿಸಲು ಮೋಡ ಬಿತ್ತನೆಗೆ ಚಾಲನೆ – ಮೋಡ ಬಿತ್ತನೆಯಿಂದ ಮಳೆ ಬರುತ್ತದೆಯೇ?
September 4, 2026
10:47 PM
by: ದ ರೂರಲ್ ಮಿರರ್.ಕಾಂ
3,000 ವರ್ಷಗಳ ಹಿಂದೆಯೇ ರೈತರು ಹವಾಮಾನ ಬದಲಾವಣೆಗೆ ಹೊಂದಿಕೊಂಡಿದ್ದರು..! ಬಿಹಾರದ ಪುರಾತನ ಬೀಜಗಳು ಹೇಳಿದ ಕೃಷಿ ಪಾಠ
September 4, 2026
8:50 PM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror