Advertisement
Opinion

ಸುಡಾನ್ ದೇಶದ ರಕ್ಕಸ ಅಂತರ್ಯುದ್ಧದ ಭೀಕರ ಘಟನೆಗಳು

Share

ಆಫ್ರಿಕಾದ(Africa) ಸುಡಾನ್(Sudan) ನಿಂದ ಮನಕಲಕುವ ಸುದ್ದಿ ಪ್ರಸಾರವಾಗುತ್ತಿದೆ. ಅಲ್ಲಿನ ಆಂತರಿಕ ಯುದ್ಧದಿಂದಾಗಿ(war) ಸೂಡಾನ್ ಕೇವಲ ರಕ್ತಸಿಕ್ತವಾಗಿ ಮಾತ್ರವಲ್ಲ ಅತ್ಯಂತ ಅಮಾನವೀಯವಾಗಿ, ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತ ಘಟನೆಗಳು ನಡೆಯುತ್ತಿದೆ….

ಈ ರೀತಿಯ ಘಟನೆಗಳು ವಿಶ್ವ ಇತಿಹಾಸದಲ್ಲಿ, ಅದರಲ್ಲೂ ಯುದ್ಧ ಮತ್ತು ದಾಳಿಗಳ ಸಮಯದಲ್ಲಿ ವಿಶೇಷವೇನು ಅಲ್ಲ. ಸಾಮಾನ್ಯವಾಗಿ ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸುವುದು ಯುದ್ಧಗಳ ಒಂದು ಅನಧಿಕೃತ, ಅನೀತಿಯುತ, ಅನೈತಿಕತೆಯ ಭಾಗವೇ ಆಗಿದೆ…..

ಆದರೆ ಸುಡಾನ್ ನಲ್ಲಿ ಮಹಿಳೆಯರು ತಮ್ಮ ಮಕ್ಕಳು ಮತ್ತು ವೃದ್ಧ ಪೋಷಕರನ್ನು ಸಲುಹಲು ಸರತಿ ಸಾಲಿನಲ್ಲಿ ನಿಂತು, ಸೈನಿಕರಿಗೆ ಅವರ ಒತ್ತಡ ಮತ್ತು ಬಲವಂತಕ್ಕೆ ಮಣಿದು ತಮ್ಮ ದೇಹವನ್ನು ಅರ್ಪಿಸಿ, ತದನಂತರ ಅವರು ನೀಡುವ ಹಣ, ಆಹಾರ ಮತ್ತು ಇತರೆ ವಸ್ತುಗಳನ್ನು ಪಡೆದು ಮನೆಗೆ ತೆರಳುತ್ತಿದ್ದಾರೆ. ಈ ರೀತಿಯ ಸಾಕಷ್ಟು ಘಟನೆಗಳು ನಡೆಯುತ್ತಿರುವುದಾಗಿ ಅಲ್ಲಿನ ಮಹಿಳೆಯರು ದೂರುತ್ತಿದ್ದಾರೆ…..

ಹೀಗೆ ಲೈಂಗಿಕ ಶೋಷಣೆಗೆ ಒಪ್ಪದ ಒಬ್ಬ ಮಹಿಳೆಯ ಕಾಲುಗಳನ್ನು ಸುಟ್ಟು ಹಾಕಲಾಯಿತು…..

ಮೊದಲನೇ ಮಹಾಯುದ್ಧ, ಎರಡನೇ ಮಹಾಯುದ್ಧ, ಮುಂದೆ ಆಗಾಗ ನಡೆದ ಎಲ್ಲಾ ಯುದ್ದಗಳಲ್ಲೂ ಸಹ ಮಹಿಳೆಯರನ್ನು ಅಪಹರಿಸಿ ಅತ್ಯಾಚಾರಕ್ಕೆ ಒಳಪಡಿಸಲಾಗುತ್ತದೆ. ಹಿಂದಿನ ಎಲ್ಲಾ ದೇಶಗಳ, ಎಲ್ಲಾ ಕಾಲದ, ಯುದ್ಧಗಳಲ್ಲೂ ಈ ರೀತಿಯ ಘಟನೆಗಳು ನಡೆಯುತ್ತಲೇ ಇದೆ……

ಕನಿಷ್ಠ ಕೊರೊನಾ ನಂತರದಲ್ಲಾದರೂ ಮಾನವ ಜಗತ್ತು ಕನಿಷ್ಠ ಮಾನವೀಯ ಪ್ರಜ್ಞೆ ಮೆರೆಯಬಹುದು ಎಂಬ ನಿರೀಕ್ಷೆಯು ಸುಳ್ಳಾಗಿದೆ. ಅಂದು ಒಂದು ಸಣ್ಣ ರೋಗಾಣುವಿನ ಕಾರಣಕ್ಕಾಗಿ ಭಯಬಿದ್ದು, ಸಾವಿಗೆ ಅಂಜಿ ಇಡೀ ವಿಶ್ವವೇ ಲಾಕ್ ಡೌನ್ ಆಗಿತ್ತು, ಜೀವ ಉಳಿದರೆ ಸಾಕು ಎನ್ನುವ ಪರಿಸ್ಥಿತಿ ಉಂಟಾಗಿತ್ತು. ಅದು ಮುಗಿದು ಕೇವಲ ಎರಡು ಮೂರು ವರ್ಷಗಳಷ್ಟೇ ಆಗಿದೆ. ಅಷ್ಟರಲ್ಲಾಗಲೇ ರಷ್ಯಾ ಉಕ್ರೇನ್, ಇಸ್ರೇಲ್ ಹಮಾಸ್ ಯುದ್ಧ, ಕೆಲವು ಕಡೆ ಅನೇಕ ಭಯೋತ್ಪಾದಕ ಕೃತ್ಯಗಳು ನಡೆಯುತ್ತಲೇ ಇದೆ. ನಮ್ಮ ಕಾಶ್ಮೀರದಲ್ಲೂ ಸಹ ಇತ್ತೀಚೆಗೆ ಭಯೋತ್ಪಾದನೆ ಕೃತ್ಯಗಳು ಹೆಚ್ಚಾಗುತ್ತಿದೆ. ಚೀನಾ ಸಹ ತೈವಾನ್ ಆಕ್ರಮಿಸಲು ಹೊಂಚು ಹಾಕುತ್ತಿದೆ……

ಈ ನಡುವೆ ಆಫ್ರಿಕಾದ ಕೆಲವು ದೇಶಗಳಲ್ಲಿ ಹಿಂದಿನಿಂದಲೂ ಇದ್ದ ಅಂತರಿಕ ಯುದ್ಧ ಮತ್ತೆ ಶುರುವಾಗಿದೆ. ಶಿಲಾಯುಗ ಕಾಲದ ಮಾನವನನ್ನು ಅನಾಗರಿಕ ಎಂದು ಕರೆಯಲಾಗುತ್ತಿತ್ತು. ಅನಂತರದ ಇತಿಹಾಸವನ್ನು ನಾಗರಿಕ ಇತಿಹಾಸ ಎನ್ನಲಾಗುತ್ತದೆ….

ಇದು ನಿಜವೇ, ಖಂಡಿತ ಇಲ್ಲ. ಆಗಿನ ಅನಾಗರಿಕ ಮಾನವ ತನ್ನ ಅಜ್ಞಾನದಿಂದ, ಅನುಭವದ ಕೊರತೆಯಿಂದ, ತನ್ನೊಳಗಿನ ಪಶುತ್ವದಿಂದ ಅಪ್ರಜ್ಞಾಪೂರ್ವಕವಾಗಿ ಆ ರೀತಿಯ ದುಷ್ಕೃತ್ಯಗಳಲ್ಲಿ ಭಾಗವಹಿಸಿರಬಹುದು. ಆದರೆ ಇಷ್ಟೆಲ್ಲಾ ಅನುಭವ, ತಂತ್ರಜ್ಞಾನ, ಧರ್ಮ, ಸಂಸ್ಕಾರ, ನಾಗರಿಕತೆ, ಅಭಿವೃದ್ಧಿ ಎಲ್ಲವೂ ಆದ ನಂತರ, ನೆಮ್ಮದಿಯಿಂದ ಜೀವನ ನಡೆಸಲು ಬೇಕಾದ ಎಲ್ಲಾ ಸೌಕರ್ಯಗಳು ಪಡೆದ ನಂತರವೂ, ಈ ರೀತಿ ಸರತಿ ಸಾಲಿನಲ್ಲಿ ಹೆಣ್ಣನ್ನು ನಿಲ್ಲಿಸಿ, ಅತ್ಯಾಚಾರ ಮಾಡಿ, ಆಕೆಗೆ ಆಹಾರ ನೀಡುವುದು ಬಹುಶಃ ಅನಾಗರಿಕತೆಗಿಂತಲೂ ಹೀನಾಯವಾದ ಮನಸ್ಥಿತಿ ಎಂದು ಕರೆಯಬೇಕಾಗುತ್ತದೆ…..

ಈಗಿನ ಸಮಾಜವನ್ನು ಅಥವಾ ಕಾಲವನ್ನು ಕ್ರೌರ್ಯಯುಗ ಎಂದು ಕರೆಯಬಹುದೇನೋ. ರಷ್ಯಾ, ಉಕ್ರೇನಿನ ಜನವಸತಿ ಪ್ರದೇಶಗಳು, ಶಾಲೆಗಳು, ಆಸ್ಪತ್ರೆಗಳು ಮುಂತಾದ ಸಾರ್ವಜನಿಕ ಪ್ರದೇಶಗಳ ಮೇಲೆ ಮಿಸೈಲ್ ದಾಳಿ ನಡೆಸಿ ಸಾವಿರಾರು ಜನರನ್ನು ಕೊಲ್ಲುತ್ತಿದೆ. ಹಾಗೆಯೇ ಹಮಾಸ್ ನವರು, ಇಸ್ರೇಲ್ ಒಳಗೆ ನುಗ್ಗಿ ಸಿಕ್ಕ ಸಿಕ್ಕ ಅಮಾಯಕರನ್ನು, ಅಸಹಾಯಕರನ್ನು ಇರಿದುಕೊಂದರು. ಅದಕ್ಕೆ ಪ್ರತಿಯಾಗಿ ಇಸ್ರೇಲ್ ಸಹ ಗಾಜಾ ಪ್ರದೇಶದ ಮಕ್ಕಳ ಆಸ್ಪತ್ರೆಯ ಮೇಲೂ ಬಾಂಬ್ ದಾಳಿ ನಡೆಸಿ ಕ್ರೌರ್ಯ ಮೆರೆದಿದೆ. ಈಗಲೂ ಗಾಜಾ ಪ್ರದೇಶದಲ್ಲಿ ಎಷ್ಟೋ ಜನ ಹಸಿವಿನಿಂದಲೇ ಸಾಯುತ್ತಿದ್ದಾರೆ…..

ಕಾರಣಗಳು, ನೆಪಗಳು ಏನೇ ಇರಲಿ, ಕ್ರೌರ್ಯವಂತೂ ನಡೆಯುತ್ತಲೇ ಇದೆ. ವಿಶ್ವ ಎಷ್ಟೇ ಮುಂದುವರಿದರೂ ಏನು ಪ್ರಯೋಜನ. ನಮ್ಮ ಕಣ್ಣೆದುರೇ ಅಮಾನವೀಯ ಘಟನೆಗಳು ನಡೆಯುವಾಗ, ವಿಶ್ವದ ಅನೇಕ ದೇಶಗಳು ಅದನ್ನು ಮೌನವಾಗಿ ಸಹಿಸಿಕೊಂಡಿರುವಾಗ, ವಿಶ್ವಸಂಸ್ಥೆ ಅಸಹಾಯಕತೆಯಿಂದ ನೋಡುತ್ತಿರುವಾಗ, ಇದನ್ನು ನಾಗರಿಕ ಸಮಾಜ ಎನ್ನಲು ಮನಸ್ಸಾಗೋದಿಲ್ಲ…..

ಆದ್ದರಿಂದ ಕ್ರೌರ್ಯಯುಗದ ಅಂತಿಮ ಕಾಲಘಟ್ಟದಲ್ಲಿ ನಾವಿದ್ದೇವೆ. ಮೂರನೇ ಮಹಾಯುದ್ಧ ಮುಂದೆಂದಾದರು ಸಂಭವಿಸಿದರೆ ಅದು ಈ ಯುಗದ ಅಂತ್ಯವಾಗಬಹುದೇನೋ,….. ಹಾಗಾಗದಿರಲಿ, ಮಾನವೀಯ ಧರ್ಮ ಈ ಜಗತ್ತಿನಲ್ಲಿ ಮತ್ತೆ ಪುನರ್ ಸ್ಥಾಪಿತವಾಗಲಿ ಎಂದು ಆಶಿಸುತ್ತಾ……..

ಬರಹ :
ವಿವೇಕಾನಂದ. ಎಚ್. ಕೆ..
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

Published by
ವಿವೇಕಾನಂದ ಎಚ್‌ ಕೆ

Recent Posts

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಒಡಿಶಾದಲ್ಲಿ ಭಾರಿ ಮಳೆ, ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…

1 hour ago

ಭರ್ತಿಯಾಗುವ ಹಂತಕ್ಕೆ ಆಲಮಟ್ಟಿ ಜಲಾಶಯ – 114.896 ಟಿಎಂಸಿ ನೀರು ಸಂಗ್ರಹ, 73 ಸಾವಿರ ಕ್ಯೂಸೆಕ್ ಒಳಹರಿವು

ಆಲಮಟ್ಟಿ ಕೃಷ್ಣಾ ಜಲಾಶಯದಲ್ಲಿ 114.896 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೆಲವೇ…

1 hour ago

ಹವಾಮಾನ ವರದಿ | 28-07-2026 | ಕರಾವಳಿ, ಮಲೆನಾಡಿನಲ್ಲಿ ಸಾಮಾನ್ಯ ಮಳೆ ಮುಂದುವರಿಕೆ

ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಬಿಟ್ಟುಬಿಟ್ಟು ಮಳೆ ಮುಂದುವರಿಯುವ…

1 hour ago

ಮಳೆ ಕೊರತೆ ತೀವ್ರ – ಬೆಂಗಳೂರು ಗ್ರಾಮಾಂತರದಲ್ಲಿ ಕೇವಲ ಶೇ. 3 ಬಿತ್ತನೆ; ನೀರಿನ ಬಳಕೆಗೆ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 66 ರಷ್ಟು ಮಳೆ ಕೊರತೆಯಿಂದ ಕೇವಲ ಶೇ.…

6 hours ago

ಹವಾಮಾನ ವರದಿ | 28-07-2026 | ಮುಂದಿನ 10 ದಿನ ಸಾಮಾನ್ಯ ಮಳೆ – ಆಗಸ್ಟ್ ಆರಂಭದಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…

1 day ago

200 ಹಸುಗಳಿಂದ ₹2 ಕೋಟಿ ವಾರ್ಷಿಕ ಆದಾಯ…! ಗಮನ ಸೆಳೆದ ಉತ್ತರ ಪ್ರದೇಶದ ಮಾದರಿ

ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…

1 day ago