Advertisement
Opinion

ಸುಡಾನ್ ದೇಶದ ರಕ್ಕಸ ಅಂತರ್ಯುದ್ಧದ ಭೀಕರ ಘಟನೆಗಳು

Share

ಆಫ್ರಿಕಾದ(Africa) ಸುಡಾನ್(Sudan) ನಿಂದ ಮನಕಲಕುವ ಸುದ್ದಿ ಪ್ರಸಾರವಾಗುತ್ತಿದೆ. ಅಲ್ಲಿನ ಆಂತರಿಕ ಯುದ್ಧದಿಂದಾಗಿ(war) ಸೂಡಾನ್ ಕೇವಲ ರಕ್ತಸಿಕ್ತವಾಗಿ ಮಾತ್ರವಲ್ಲ ಅತ್ಯಂತ ಅಮಾನವೀಯವಾಗಿ, ಇಡೀ ನಾಗರಿಕ ಸಮಾಜ ತಲೆತಗ್ಗಿಸುವಂತ ಘಟನೆಗಳು ನಡೆಯುತ್ತಿದೆ….

ಈ ರೀತಿಯ ಘಟನೆಗಳು ವಿಶ್ವ ಇತಿಹಾಸದಲ್ಲಿ, ಅದರಲ್ಲೂ ಯುದ್ಧ ಮತ್ತು ದಾಳಿಗಳ ಸಮಯದಲ್ಲಿ ವಿಶೇಷವೇನು ಅಲ್ಲ. ಸಾಮಾನ್ಯವಾಗಿ ಮಹಿಳೆಯರನ್ನು ಲೈಂಗಿಕವಾಗಿ ಶೋಷಿಸುವುದು ಯುದ್ಧಗಳ ಒಂದು ಅನಧಿಕೃತ, ಅನೀತಿಯುತ, ಅನೈತಿಕತೆಯ ಭಾಗವೇ ಆಗಿದೆ…..

ಆದರೆ ಸುಡಾನ್ ನಲ್ಲಿ ಮಹಿಳೆಯರು ತಮ್ಮ ಮಕ್ಕಳು ಮತ್ತು ವೃದ್ಧ ಪೋಷಕರನ್ನು ಸಲುಹಲು ಸರತಿ ಸಾಲಿನಲ್ಲಿ ನಿಂತು, ಸೈನಿಕರಿಗೆ ಅವರ ಒತ್ತಡ ಮತ್ತು ಬಲವಂತಕ್ಕೆ ಮಣಿದು ತಮ್ಮ ದೇಹವನ್ನು ಅರ್ಪಿಸಿ, ತದನಂತರ ಅವರು ನೀಡುವ ಹಣ, ಆಹಾರ ಮತ್ತು ಇತರೆ ವಸ್ತುಗಳನ್ನು ಪಡೆದು ಮನೆಗೆ ತೆರಳುತ್ತಿದ್ದಾರೆ. ಈ ರೀತಿಯ ಸಾಕಷ್ಟು ಘಟನೆಗಳು ನಡೆಯುತ್ತಿರುವುದಾಗಿ ಅಲ್ಲಿನ ಮಹಿಳೆಯರು ದೂರುತ್ತಿದ್ದಾರೆ…..

ಹೀಗೆ ಲೈಂಗಿಕ ಶೋಷಣೆಗೆ ಒಪ್ಪದ ಒಬ್ಬ ಮಹಿಳೆಯ ಕಾಲುಗಳನ್ನು ಸುಟ್ಟು ಹಾಕಲಾಯಿತು…..

ಮೊದಲನೇ ಮಹಾಯುದ್ಧ, ಎರಡನೇ ಮಹಾಯುದ್ಧ, ಮುಂದೆ ಆಗಾಗ ನಡೆದ ಎಲ್ಲಾ ಯುದ್ದಗಳಲ್ಲೂ ಸಹ ಮಹಿಳೆಯರನ್ನು ಅಪಹರಿಸಿ ಅತ್ಯಾಚಾರಕ್ಕೆ ಒಳಪಡಿಸಲಾಗುತ್ತದೆ. ಹಿಂದಿನ ಎಲ್ಲಾ ದೇಶಗಳ, ಎಲ್ಲಾ ಕಾಲದ, ಯುದ್ಧಗಳಲ್ಲೂ ಈ ರೀತಿಯ ಘಟನೆಗಳು ನಡೆಯುತ್ತಲೇ ಇದೆ……

ಕನಿಷ್ಠ ಕೊರೊನಾ ನಂತರದಲ್ಲಾದರೂ ಮಾನವ ಜಗತ್ತು ಕನಿಷ್ಠ ಮಾನವೀಯ ಪ್ರಜ್ಞೆ ಮೆರೆಯಬಹುದು ಎಂಬ ನಿರೀಕ್ಷೆಯು ಸುಳ್ಳಾಗಿದೆ. ಅಂದು ಒಂದು ಸಣ್ಣ ರೋಗಾಣುವಿನ ಕಾರಣಕ್ಕಾಗಿ ಭಯಬಿದ್ದು, ಸಾವಿಗೆ ಅಂಜಿ ಇಡೀ ವಿಶ್ವವೇ ಲಾಕ್ ಡೌನ್ ಆಗಿತ್ತು, ಜೀವ ಉಳಿದರೆ ಸಾಕು ಎನ್ನುವ ಪರಿಸ್ಥಿತಿ ಉಂಟಾಗಿತ್ತು. ಅದು ಮುಗಿದು ಕೇವಲ ಎರಡು ಮೂರು ವರ್ಷಗಳಷ್ಟೇ ಆಗಿದೆ. ಅಷ್ಟರಲ್ಲಾಗಲೇ ರಷ್ಯಾ ಉಕ್ರೇನ್, ಇಸ್ರೇಲ್ ಹಮಾಸ್ ಯುದ್ಧ, ಕೆಲವು ಕಡೆ ಅನೇಕ ಭಯೋತ್ಪಾದಕ ಕೃತ್ಯಗಳು ನಡೆಯುತ್ತಲೇ ಇದೆ. ನಮ್ಮ ಕಾಶ್ಮೀರದಲ್ಲೂ ಸಹ ಇತ್ತೀಚೆಗೆ ಭಯೋತ್ಪಾದನೆ ಕೃತ್ಯಗಳು ಹೆಚ್ಚಾಗುತ್ತಿದೆ. ಚೀನಾ ಸಹ ತೈವಾನ್ ಆಕ್ರಮಿಸಲು ಹೊಂಚು ಹಾಕುತ್ತಿದೆ……

ಈ ನಡುವೆ ಆಫ್ರಿಕಾದ ಕೆಲವು ದೇಶಗಳಲ್ಲಿ ಹಿಂದಿನಿಂದಲೂ ಇದ್ದ ಅಂತರಿಕ ಯುದ್ಧ ಮತ್ತೆ ಶುರುವಾಗಿದೆ. ಶಿಲಾಯುಗ ಕಾಲದ ಮಾನವನನ್ನು ಅನಾಗರಿಕ ಎಂದು ಕರೆಯಲಾಗುತ್ತಿತ್ತು. ಅನಂತರದ ಇತಿಹಾಸವನ್ನು ನಾಗರಿಕ ಇತಿಹಾಸ ಎನ್ನಲಾಗುತ್ತದೆ….

ಇದು ನಿಜವೇ, ಖಂಡಿತ ಇಲ್ಲ. ಆಗಿನ ಅನಾಗರಿಕ ಮಾನವ ತನ್ನ ಅಜ್ಞಾನದಿಂದ, ಅನುಭವದ ಕೊರತೆಯಿಂದ, ತನ್ನೊಳಗಿನ ಪಶುತ್ವದಿಂದ ಅಪ್ರಜ್ಞಾಪೂರ್ವಕವಾಗಿ ಆ ರೀತಿಯ ದುಷ್ಕೃತ್ಯಗಳಲ್ಲಿ ಭಾಗವಹಿಸಿರಬಹುದು. ಆದರೆ ಇಷ್ಟೆಲ್ಲಾ ಅನುಭವ, ತಂತ್ರಜ್ಞಾನ, ಧರ್ಮ, ಸಂಸ್ಕಾರ, ನಾಗರಿಕತೆ, ಅಭಿವೃದ್ಧಿ ಎಲ್ಲವೂ ಆದ ನಂತರ, ನೆಮ್ಮದಿಯಿಂದ ಜೀವನ ನಡೆಸಲು ಬೇಕಾದ ಎಲ್ಲಾ ಸೌಕರ್ಯಗಳು ಪಡೆದ ನಂತರವೂ, ಈ ರೀತಿ ಸರತಿ ಸಾಲಿನಲ್ಲಿ ಹೆಣ್ಣನ್ನು ನಿಲ್ಲಿಸಿ, ಅತ್ಯಾಚಾರ ಮಾಡಿ, ಆಕೆಗೆ ಆಹಾರ ನೀಡುವುದು ಬಹುಶಃ ಅನಾಗರಿಕತೆಗಿಂತಲೂ ಹೀನಾಯವಾದ ಮನಸ್ಥಿತಿ ಎಂದು ಕರೆಯಬೇಕಾಗುತ್ತದೆ…..

ಈಗಿನ ಸಮಾಜವನ್ನು ಅಥವಾ ಕಾಲವನ್ನು ಕ್ರೌರ್ಯಯುಗ ಎಂದು ಕರೆಯಬಹುದೇನೋ. ರಷ್ಯಾ, ಉಕ್ರೇನಿನ ಜನವಸತಿ ಪ್ರದೇಶಗಳು, ಶಾಲೆಗಳು, ಆಸ್ಪತ್ರೆಗಳು ಮುಂತಾದ ಸಾರ್ವಜನಿಕ ಪ್ರದೇಶಗಳ ಮೇಲೆ ಮಿಸೈಲ್ ದಾಳಿ ನಡೆಸಿ ಸಾವಿರಾರು ಜನರನ್ನು ಕೊಲ್ಲುತ್ತಿದೆ. ಹಾಗೆಯೇ ಹಮಾಸ್ ನವರು, ಇಸ್ರೇಲ್ ಒಳಗೆ ನುಗ್ಗಿ ಸಿಕ್ಕ ಸಿಕ್ಕ ಅಮಾಯಕರನ್ನು, ಅಸಹಾಯಕರನ್ನು ಇರಿದುಕೊಂದರು. ಅದಕ್ಕೆ ಪ್ರತಿಯಾಗಿ ಇಸ್ರೇಲ್ ಸಹ ಗಾಜಾ ಪ್ರದೇಶದ ಮಕ್ಕಳ ಆಸ್ಪತ್ರೆಯ ಮೇಲೂ ಬಾಂಬ್ ದಾಳಿ ನಡೆಸಿ ಕ್ರೌರ್ಯ ಮೆರೆದಿದೆ. ಈಗಲೂ ಗಾಜಾ ಪ್ರದೇಶದಲ್ಲಿ ಎಷ್ಟೋ ಜನ ಹಸಿವಿನಿಂದಲೇ ಸಾಯುತ್ತಿದ್ದಾರೆ…..

ಕಾರಣಗಳು, ನೆಪಗಳು ಏನೇ ಇರಲಿ, ಕ್ರೌರ್ಯವಂತೂ ನಡೆಯುತ್ತಲೇ ಇದೆ. ವಿಶ್ವ ಎಷ್ಟೇ ಮುಂದುವರಿದರೂ ಏನು ಪ್ರಯೋಜನ. ನಮ್ಮ ಕಣ್ಣೆದುರೇ ಅಮಾನವೀಯ ಘಟನೆಗಳು ನಡೆಯುವಾಗ, ವಿಶ್ವದ ಅನೇಕ ದೇಶಗಳು ಅದನ್ನು ಮೌನವಾಗಿ ಸಹಿಸಿಕೊಂಡಿರುವಾಗ, ವಿಶ್ವಸಂಸ್ಥೆ ಅಸಹಾಯಕತೆಯಿಂದ ನೋಡುತ್ತಿರುವಾಗ, ಇದನ್ನು ನಾಗರಿಕ ಸಮಾಜ ಎನ್ನಲು ಮನಸ್ಸಾಗೋದಿಲ್ಲ…..

ಆದ್ದರಿಂದ ಕ್ರೌರ್ಯಯುಗದ ಅಂತಿಮ ಕಾಲಘಟ್ಟದಲ್ಲಿ ನಾವಿದ್ದೇವೆ. ಮೂರನೇ ಮಹಾಯುದ್ಧ ಮುಂದೆಂದಾದರು ಸಂಭವಿಸಿದರೆ ಅದು ಈ ಯುಗದ ಅಂತ್ಯವಾಗಬಹುದೇನೋ,….. ಹಾಗಾಗದಿರಲಿ, ಮಾನವೀಯ ಧರ್ಮ ಈ ಜಗತ್ತಿನಲ್ಲಿ ಮತ್ತೆ ಪುನರ್ ಸ್ಥಾಪಿತವಾಗಲಿ ಎಂದು ಆಶಿಸುತ್ತಾ……..

ಬರಹ :
ವಿವೇಕಾನಂದ. ಎಚ್. ಕೆ..
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

Published by
ವಿವೇಕಾನಂದ ಎಚ್‌ ಕೆ

Recent Posts

ಹವಾಮಾನ ವರದಿ | 06-09-2026 | ಕರ್ನಾಟಕದಲ್ಲಿ ಮಳೆ ಇಳಿಮುಖದ ಲಕ್ಷಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…

12 hours ago

ಭಾರತದ ಹಸಿರು ಯೋಜನೆಗಳಿಗೆ ಜಪಾನ್‌ನ ಕಾರ್ಬನ್ ಕ್ರೆಡಿಟ್ ಅವಕಾಶ – ರೈತರೂ ಪಡೆಯಬಹುದೇ ಇದರ ಲಾಭ?

ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ…

14 hours ago

ಹಿಮಾಲಯದಲ್ಲಿ ಮತ್ತೊಂದು ಅಪಾಯದ ಎಚ್ಚರಿಕೆ..!

ಸಿಕ್ಕಿಂನಲ್ಲಿ 40 ಹೆಚ್ಚಿನ ಅಪಾಯದ ಹಿಮನದಿ ಸರೋವರಗಳನ್ನು ಗುರುತಿಸಲಾಗಿದ್ದು, 16 ಸರೋವರಗಳು ಅತ್ಯಂತ…

15 hours ago

ಎಲ್ ನಿನೊ ಮತ್ತಷ್ಟು ಬಲಗೊಳ್ಳುವ ಮುನ್ಸೂಚನೆ..!

2026ರ ಆಗಸ್ಟ್ ವೇಳೆಗೆ ಎಲ್ ನಿನೊ ಆರಂಭವಾಗಿದ್ದು , ವರ್ಷಾಂತ್ಯದ ವೇಳೆಗೆ ಅತ್ಯಂತ…

17 hours ago

ಈಶಾನ್ಯದಿಂದ ಜಾರ್ಖಂಡ್‌ವರೆಗೆ ರಬ್ಬರ್‌ ಕೃಷಿಯ ವಿಸ್ತರಣೆ | ಹೊಸ ಪ್ರದೇಶಗಳಲ್ಲಿ ರಬ್ಬರ್‌ ಕೃಷಿ ವಿಸ್ತರಣೆ – ಅಪಾಯವೇ..? ಅವಕಾಶವೇ..?

ನಾಗಾಲ್ಯಾಂಡ್‌ನಲ್ಲಿ ರಬ್ಬರ್‌ ಕೃಷಿ ಸುಮಾರು 29,794 ಹೆಕ್ಟೇರ್‌ಗೆ ವಿಸ್ತರಿಸಿರುವ ಬೆನ್ನಲ್ಲೇ ಜಾರ್ಖಂಡ್‌ನಲ್ಲಿ ಸೂಕ್ತ…

1 day ago

ದಾವಣಗೆರೆಯಲ್ಲಿ ಮಳೆ ಕೊರತೆ – ಮೆಕ್ಕೆಜೋಳ, ರಾಗಿ ಬೆಳೆ ಶೇ.50 ಹಾನಿ ಭೀತಿ

ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳಿಂದ ಮಳೆ ಕೊರತೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆಯಾಗದಿದ್ದರೆ…

1 day ago