ಹಲಸು ಮೇಳಗಳ ಫಲಪ್ರದದ ಹಿಂದಿನ ಶ್ರಮದ ಕಥಾನಕ “ಫಲಪ್ರದ” ಪುಸ್ತಕ |

May 29, 2024
9:08 PM
ಹಲಸಿನ ಮಾನದ ಹಿಂದಿನ ಶ್ರಮದ ಕಥಾಗುಚ್ಚವೇ ಫಲಪ್ರದ ಪುಸ್ತಕ. ಎಲ್ಲರೂ ಕೊಂಡು ಓದಿ. ಈ ಪುಸ್ತಕದ ಬಗ್ಗೆ ಬರೆದಿದ್ದಾರೆ ಎ ಪಿ ಸದಾಶಿವ ಮರಿಕೆ.

ಪುತ್ತೂರಲ್ಲಿ(Puttur) ಹಲಸು ಮೇಳದ ಉದ್ಘಾಟನಾ ಸಮಾರಂಭದಲ್ಲಿ ಹಲಸು ಮೇಳಗಳ ಹಿನ್ನೋಟದ ಪುಸ್ತಕ ಬಿಡುಗಡೆ ಇತ್ತು. ಹಲಸು ಮೇಳಗಳ ಫಲಪ್ರದದ ಹಿಂದಿನ ಶ್ರಮದ ಕಥಾನಕಗಳ ದಾಖಲೀಕರಣದ ಬಗ್ಗೆ ಮಾಹಿತಿಯೇ “ಫಲಪ್ರದ” ಪುಸ್ತಕ. ದಾಖಲಿಸಿ ಪುಸ್ತಕ ರೂಪಕ್ಕೆ ತಂದವರು ನಾ ಕಾರಂತ ಪೆರಾಜೆ.

Advertisement
Advertisement

ಅದೇ ದಿನ ಕೊಂಡು ತಂದ ಪುಸ್ತಕವನ್ನು ಮೂರು ದಿನಗಳಲ್ಲಿ ಓದಿ ಮುಗಿಸಿದೆ. ಓದಿ ಮುಗಿಯುವ ಹೊತ್ತಿಗೆ ಪುತ್ತೂರಿನ ಹಲಸು ಮೇಳವನ್ನು ಸಂಘಟಿಸಿದವರಲ್ಲಿ ಕೇಳಿದಾಗ ಹೆಚ್ಚುಕಮ್ಮಿ 10 ಟನ್ನಿನಷ್ಟು ಹಲಸು ಮೂರು ದಿನದ ಮೇಳದಲ್ಲಿ ವ್ಯಾಪಾರವಾಗಿದೆ ಎಂದರು. ( ಐದು ಟನ್ನಿನಷ್ಟು ಹಲಸಾಗಿ ಉಳಿದದ್ದು ಖಾದ್ಯಗಳ ರೂಪದಲ್ಲಿ )

Advertisement

ಪ್ರಕೃತಿ ಕೊಟ್ಟ ಅಮೂಲ್ಯ ಫಲವಸ್ತು ಹಲಸು ಹೊಲಸೆಂದು ಉಪೇಕ್ಷೆಗೆ ಒಳಗಾಗಿ ಅಲ್ಲಲ್ಲಿಯೇ ಮರಗಳಲ್ಲಿ ಕೊಳೆತು ಉದುರಿ ಹೋಗುತ್ತಿದ್ದ ಕಾಲ ಒಂದಿತ್ತು. ಅಂತಹ ಸಂದರ್ಭದಲ್ಲಿ ಹಲಸಿಗೊಂದು ಮಾನ ತಂದು ಕೊಡುವಲ್ಲಿ ಶ್ರಮಿಸಿದವರು ಹಲಸು ಸ್ನೇಹಿಕೂಟ ಮತ್ತು ಅಡಿಕೆ ಪತ್ರಿಕೆ. ಮಾರ್ಗದರ್ಶಿ:ಹಲಸು ರಾಯಭಾರಿ ಬಿರುದಾಂಕಿತ ಶ್ರೀ ಪಡ್ರೆಯವರು.

ಭವ್ಯ ದಿವ್ಯವಾದ ಕಟ್ಟಡವೊಂದು ಎದ್ದು ನಿಲ್ಲಬೇಕಾದರೆ ಉತ್ತಮ ಅಡಿಪಾಯದೊಂದಿಗೆ ಪಂಚಾಂಗ ಬೇಕು. ಪಂಚಾಂಗ ಕಟ್ಟಬೇಕಾದರೆ ಅನೇಕ ಅಡ್ಡಿ ಆತಂಕಗಳನ್ನು ಎದುರಿಸಿ ನಿರ್ಮಾಣವಾಗಿರುತ್ತದೆ. ಪಂಚಾಂಗದ ಮೇಲೆ ಭವ್ಯ ಕಟ್ಟಡ ಬಂದಾಗ ಕಟ್ಟಡವನ್ನು ವೀಕ್ಷಿಸಿ ಭಲೇ ಶಹಭಾಷ್ ಅಂತ ಅನ್ನುವವರು ಬಹಳಷ್ಟು ಮಂದಿ ಇದ್ದಾರೆ. ಪಂಚಾಂಗ ಕಟ್ಟಿದ ಶ್ರಮದ ಬಗ್ಗೆ ಅರಿವು ಅನೇಕರಿಗೆ ಗೊತ್ತಿರುವುದಿಲ್ಲ. 

ಅದೇ ರೀತಿ ಇತ್ತೀಚಿನ ವರ್ಷಗಳಲ್ಲಿ ವಾರಂತ್ಯದಲ್ಲಿ ನಡೆಯುವ ಹಲಸು ಮೇಳಗಳ ಯಶಸ್ಸಿಗೆ ಪಂಚಾಂಗ ಕಟ್ಟಿದವರು ಹಲಸು ಸ್ನೇಹಿಕೂಟ ಉಬರು ಮತ್ತು ಅಡಿಕೆ ಪತ್ರಿಕೆ ಬಳಗ. ಯಾವುದೇ ಸಾಮಾಜಿಕ ಜಾಲತಾಣಗಳಿಲ್ಲದ ಕಾಲದಲ್ಲಿ ಯಾವುದೇ ಅತಿಯಾದ ಪ್ರಚಾರಕ್ಕೂ ಒಳಗಾಗದೆ,ಕೇವಲ ಆಸಕ್ತಿ ಒಂದರಿಂದಲೇ ಪ್ರಚಾರಕ್ಕೆ ಬಂದ ಹಲಸು ಇಂದು ಮಾನವಂತ ಫಲ. ಮುಂದಿನ ದಿನಗಳಲ್ಲಿ ಕೃಷಿಕನಿಗೊಂದು ಉಪ ಆದಾಯವನ್ನು ತಂದು ಕೊಡಬಲ್ಲುದು ಎಂಬುದಕ್ಕೆ ಮೂರು ದಿನದ ಮೇಳದಲ್ಲಿ ಸುಮಾರು 10 ಟನ್ನಿನಷ್ಟು ಹಲಸು ವ್ಯಾಪಾರವೇ ಸಾಕ್ಷಿ. ಹಲಸಿನ ಮಾನದ ಹಿಂದಿನ ಶ್ರಮದ ಕಥಾಗುಚ್ಚವೇ ಫಲಪ್ರದ ಪುಸ್ತಕ. ಎಲ್ಲರೂ ಕೊಂಡು ಓದಿ.
ಬರಹ :
ಎ ಪಿ ಸದಾಶಿವ ಮರಿಕೆ
ಪ್ರತಿಕ್ರಿಯಿಸಲು....
ಈ ಕೆಳಗಿನ ಲಿಂಕ್‌ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು…

Advertisement

 

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ಟರ್ಕಿ ದೇಶದ ಸಜ್ಜೆ ಬೆಳೆದ ರೈತ | ಪ್ರಯೋಗದಲ್ಲಿ ಯಶಸ್ಸು ಕಂಡ ರೈತ |
September 28, 2024
8:39 PM
by: ದ ರೂರಲ್ ಮಿರರ್.ಕಾಂ
ಲಂಚ ಕೇಳಿದರೆ ನನ್ನ ವಿಳಾಸಕ್ಕೆ ಪತ್ರ ಬರೆಯಿರಿ |ಉಪಮುಖ್ಯಮಂತ್ರಿ ಡಿ .ಕೆ. ಶಿವಕುಮಾರ್
September 28, 2024
7:52 PM
by: ದ ರೂರಲ್ ಮಿರರ್.ಕಾಂ
ಅಡಿಕೆ ಆಮದು ಚರ್ಚೆಯಾಗುತ್ತಿದ್ದಂತೆಯೇ ಬರ್ಮಾ ಅಡಿಕೆ ಕಳ್ಳಸಾಗಾಣಿಕೆ ಪತ್ತೆ | ಅಸ್ಸಾಂ ಗಡಿಯಲ್ಲಿ 2 ಕೋಟಿ ರೂಪಾಯಿ ಮೌಲ್ಯದ ಅಡಿಕೆ ವಶಕ್ಕೆ |
September 28, 2024
7:27 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 28.09.2024 | ರಾಜ್ಯದಾದ್ಯಂತ ಗುಡುಗು ಸಹಿತ ಮಳೆ ಸಾಧ್ಯತೆ
September 28, 2024
12:16 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror