Advertisement
Opinion

ಹಲಸು ಮೇಳಗಳ ಫಲಪ್ರದದ ಹಿಂದಿನ ಶ್ರಮದ ಕಥಾನಕ “ಫಲಪ್ರದ” ಪುಸ್ತಕ |

Share

ಪುತ್ತೂರಲ್ಲಿ(Puttur) ಹಲಸು ಮೇಳದ ಉದ್ಘಾಟನಾ ಸಮಾರಂಭದಲ್ಲಿ ಹಲಸು ಮೇಳಗಳ ಹಿನ್ನೋಟದ ಪುಸ್ತಕ ಬಿಡುಗಡೆ ಇತ್ತು. ಹಲಸು ಮೇಳಗಳ ಫಲಪ್ರದದ ಹಿಂದಿನ ಶ್ರಮದ ಕಥಾನಕಗಳ ದಾಖಲೀಕರಣದ ಬಗ್ಗೆ ಮಾಹಿತಿಯೇ “ಫಲಪ್ರದ” ಪುಸ್ತಕ. ದಾಖಲಿಸಿ ಪುಸ್ತಕ ರೂಪಕ್ಕೆ ತಂದವರು ನಾ ಕಾರಂತ ಪೆರಾಜೆ.

ಅದೇ ದಿನ ಕೊಂಡು ತಂದ ಪುಸ್ತಕವನ್ನು ಮೂರು ದಿನಗಳಲ್ಲಿ ಓದಿ ಮುಗಿಸಿದೆ. ಓದಿ ಮುಗಿಯುವ ಹೊತ್ತಿಗೆ ಪುತ್ತೂರಿನ ಹಲಸು ಮೇಳವನ್ನು ಸಂಘಟಿಸಿದವರಲ್ಲಿ ಕೇಳಿದಾಗ ಹೆಚ್ಚುಕಮ್ಮಿ 10 ಟನ್ನಿನಷ್ಟು ಹಲಸು ಮೂರು ದಿನದ ಮೇಳದಲ್ಲಿ ವ್ಯಾಪಾರವಾಗಿದೆ ಎಂದರು. ( ಐದು ಟನ್ನಿನಷ್ಟು ಹಲಸಾಗಿ ಉಳಿದದ್ದು ಖಾದ್ಯಗಳ ರೂಪದಲ್ಲಿ )

ಪ್ರಕೃತಿ ಕೊಟ್ಟ ಅಮೂಲ್ಯ ಫಲವಸ್ತು ಹಲಸು ಹೊಲಸೆಂದು ಉಪೇಕ್ಷೆಗೆ ಒಳಗಾಗಿ ಅಲ್ಲಲ್ಲಿಯೇ ಮರಗಳಲ್ಲಿ ಕೊಳೆತು ಉದುರಿ ಹೋಗುತ್ತಿದ್ದ ಕಾಲ ಒಂದಿತ್ತು. ಅಂತಹ ಸಂದರ್ಭದಲ್ಲಿ ಹಲಸಿಗೊಂದು ಮಾನ ತಂದು ಕೊಡುವಲ್ಲಿ ಶ್ರಮಿಸಿದವರು ಹಲಸು ಸ್ನೇಹಿಕೂಟ ಮತ್ತು ಅಡಿಕೆ ಪತ್ರಿಕೆ. ಮಾರ್ಗದರ್ಶಿ:ಹಲಸು ರಾಯಭಾರಿ ಬಿರುದಾಂಕಿತ ಶ್ರೀ ಪಡ್ರೆಯವರು.

ಭವ್ಯ ದಿವ್ಯವಾದ ಕಟ್ಟಡವೊಂದು ಎದ್ದು ನಿಲ್ಲಬೇಕಾದರೆ ಉತ್ತಮ ಅಡಿಪಾಯದೊಂದಿಗೆ ಪಂಚಾಂಗ ಬೇಕು. ಪಂಚಾಂಗ ಕಟ್ಟಬೇಕಾದರೆ ಅನೇಕ ಅಡ್ಡಿ ಆತಂಕಗಳನ್ನು ಎದುರಿಸಿ ನಿರ್ಮಾಣವಾಗಿರುತ್ತದೆ. ಪಂಚಾಂಗದ ಮೇಲೆ ಭವ್ಯ ಕಟ್ಟಡ ಬಂದಾಗ ಕಟ್ಟಡವನ್ನು ವೀಕ್ಷಿಸಿ ಭಲೇ ಶಹಭಾಷ್ ಅಂತ ಅನ್ನುವವರು ಬಹಳಷ್ಟು ಮಂದಿ ಇದ್ದಾರೆ. ಪಂಚಾಂಗ ಕಟ್ಟಿದ ಶ್ರಮದ ಬಗ್ಗೆ ಅರಿವು ಅನೇಕರಿಗೆ ಗೊತ್ತಿರುವುದಿಲ್ಲ. 

ಅದೇ ರೀತಿ ಇತ್ತೀಚಿನ ವರ್ಷಗಳಲ್ಲಿ ವಾರಂತ್ಯದಲ್ಲಿ ನಡೆಯುವ ಹಲಸು ಮೇಳಗಳ ಯಶಸ್ಸಿಗೆ ಪಂಚಾಂಗ ಕಟ್ಟಿದವರು ಹಲಸು ಸ್ನೇಹಿಕೂಟ ಉಬರು ಮತ್ತು ಅಡಿಕೆ ಪತ್ರಿಕೆ ಬಳಗ. ಯಾವುದೇ ಸಾಮಾಜಿಕ ಜಾಲತಾಣಗಳಿಲ್ಲದ ಕಾಲದಲ್ಲಿ ಯಾವುದೇ ಅತಿಯಾದ ಪ್ರಚಾರಕ್ಕೂ ಒಳಗಾಗದೆ,ಕೇವಲ ಆಸಕ್ತಿ ಒಂದರಿಂದಲೇ ಪ್ರಚಾರಕ್ಕೆ ಬಂದ ಹಲಸು ಇಂದು ಮಾನವಂತ ಫಲ. ಮುಂದಿನ ದಿನಗಳಲ್ಲಿ ಕೃಷಿಕನಿಗೊಂದು ಉಪ ಆದಾಯವನ್ನು ತಂದು ಕೊಡಬಲ್ಲುದು ಎಂಬುದಕ್ಕೆ ಮೂರು ದಿನದ ಮೇಳದಲ್ಲಿ ಸುಮಾರು 10 ಟನ್ನಿನಷ್ಟು ಹಲಸು ವ್ಯಾಪಾರವೇ ಸಾಕ್ಷಿ. ಹಲಸಿನ ಮಾನದ ಹಿಂದಿನ ಶ್ರಮದ ಕಥಾಗುಚ್ಚವೇ ಫಲಪ್ರದ ಪುಸ್ತಕ. ಎಲ್ಲರೂ ಕೊಂಡು ಓದಿ.
ಬರಹ :
ಎ ಪಿ ಸದಾಶಿವ ಮರಿಕೆ
ಪ್ರತಿಕ್ರಿಯಿಸಲು....
ಈ ಕೆಳಗಿನ ಲಿಂಕ್‌ ಮೂಲಕ ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು…

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಕಾಡು ಹಣ್ಣು…. ಕೋಳಿ ಜುಟ್ಟು ಹಣ್ಣು…!

ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಹಣ್ಣು ಕಾಂಡದ ಮೇಲೆಯೇ ಗೊಂಚಲು ಗೊಂಚಲಾಗಿ ಬೆಳೆಯುವ…

1 hour ago

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಒಡಿಶಾದಲ್ಲಿ ಭಾರಿ ಮಳೆ, ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…

10 hours ago

ಭರ್ತಿಯಾಗುವ ಹಂತಕ್ಕೆ ಆಲಮಟ್ಟಿ ಜಲಾಶಯ – 114.896 ಟಿಎಂಸಿ ನೀರು ಸಂಗ್ರಹ, 73 ಸಾವಿರ ಕ್ಯೂಸೆಕ್ ಒಳಹರಿವು

ಆಲಮಟ್ಟಿ ಕೃಷ್ಣಾ ಜಲಾಶಯದಲ್ಲಿ 114.896 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೆಲವೇ…

10 hours ago

ಹವಾಮಾನ ವರದಿ | 28-07-2026 | ಕರಾವಳಿ, ಮಲೆನಾಡಿನಲ್ಲಿ ಸಾಮಾನ್ಯ ಮಳೆ ಮುಂದುವರಿಕೆ

ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಬಿಟ್ಟುಬಿಟ್ಟು ಮಳೆ ಮುಂದುವರಿಯುವ…

11 hours ago

ಮಳೆ ಕೊರತೆ ತೀವ್ರ – ಬೆಂಗಳೂರು ಗ್ರಾಮಾಂತರದಲ್ಲಿ ಕೇವಲ ಶೇ. 3 ಬಿತ್ತನೆ; ನೀರಿನ ಬಳಕೆಗೆ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 66 ರಷ್ಟು ಮಳೆ ಕೊರತೆಯಿಂದ ಕೇವಲ ಶೇ.…

15 hours ago

ಹವಾಮಾನ ವರದಿ | 28-07-2026 | ಮುಂದಿನ 10 ದಿನ ಸಾಮಾನ್ಯ ಮಳೆ – ಆಗಸ್ಟ್ ಆರಂಭದಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…

1 day ago