Advertisement
MIRROR FOCUS

ಅಂಗನವಾಡಿ ಮಕ್ಕಳಿಗಾಗಿ ಬಾವಿ ತೋಡಿದ ನೀರೆ | ಸತತ ಶ್ರಮದ ಮೂಲಕ ಗಂಗೆಯನ್ನು ಒಲಿಸಿಕೊಂಡ ಗೌರಿ |

Share

ತಮ್ಮ ಜೀವನ ನಿರ್ವಹಣೆಗಾಗಿ ಛಲತೊಟ್ಟು ಕೆಲಸ ಮಾಡಿ ಸಾಧಿಸಿರುವ ಬಹಳ ಮಂಂದಿಯನ್ನು ನಾವು ನೋಡಿದ್ದೇವೆ. ಆದರೆ ಏಕಾಂಗಿಯಾಗಿ ಬೇರೆಯವರಿಗಾಗಿ ಜೀವನ ಸವೆಸಿದವರು ಕೇವಲ ಬೆರಳೆಣಿಕೆಯವರು ಮಾತ್ರ. ಅಂಥವರಲ್ಲಿ ಉತ್ತರ ಕನ್ನಡದ(Uttara Kannada) ಶಿರಸಿಯ(Sirsi) ಗೌರಿ ಪರಮೇಶ್ವರ್ ನಾಯ್ಕ್(Gowri Parameshwar Naik) ಅವರು ಕೂಡ ಒಬ್ಬರು. ಈಕೆ ಮಾಡಿದ ಸಾಧನೆ ಅಂತಿಂಥದ್ದಲ್ಲ. ಶಿರಸಿಯ ಗಣೇಶ ನಗರದ ಅಂಗನವಾಡಿ ಮಕ್ಕಳಿಗೆ(Anganavadi Children) ಗೌರಿ ಅವರು ಬಾವಿ(Well) ತೋಡಿದ್ದಾರೆ. ಇದೀಗ ತಮ್ಮ ಪ್ರಯತ್ನದ ಫಲವಾಗಿ ಬಾವಿಯಲ್ಲಿ ಗಂಗೆ ಕಂಡು ಗೌರಿ ಖುಷಿಯಿಂದ ಭಾವುಕರಾಗಿದ್ದಾರೆ. ಮಾಮೂಲಿ ಭೂಮಿಯಾಗಿದ್ದ ಜಾಗದಲ್ಲಿ ನಿರಂತರ ಒಂದು ತಿಂಂಗಳ ಗೌರಿ ಪರಮೇಶ್ವರ್ ನಾಯ್ಕ್ ಅವರ ಶ್ರಮದ ಫಲವಾಗಿ ಕುಡಿಯುವ ನೀರಿನ (Water) ಬಾವಿ ಕಾಣುತ್ತಿದೆ.

ನಿರಂತರವಾಗಿ ಬಾವಿ ತೋಡಿದ ಗೌರಿ : ಶಿರಸಿ ಗಣೇಶನಗರದಲ್ಲಿ ನೀರಿನ ಸಮಸ್ಯೆ ಇದೆ. ಅದರಲ್ಲೂ ಈಗ ದಿನ ಕಳೆದು ದಿನಕ್ಕೆ ಬಿಡುತ್ತಿರುವ ನೀರು ಸಣ್ಣ ಮಕ್ಕಳ ಆರೋಗ್ಯಕ್ಕೆ ಆಗಿ ಬರೋದಿಲ್ಲ. ಹೀಗಾಗಿ ಈ ಅಂಗನವಾಡಿಯ ಶಿಕ್ಷಕಿ ತಮ್ಮ ಅಂಗನವಾಡಿಯಿಂದ 100 ಮೀಟರ್ ದೂರದಲ್ಲಿ ಇರುವ ಗೋವಿಂದ ನಾಯ್ಕ್ ಅವರ ಮನೆಯ ಬಾವಿಯಿಂದ ಕ್ಯಾನ್‍ಗಳಲ್ಲಿ ನೀರು ತೆಗೆದುಕೊಂಡು ಬರುತ್ತಿದ್ದರು. ಇದನ್ನು ಕಂಡ ಗೌರಮ್ಮನವರು ಬಾವಿ ತೋಡುವ ದಿಟ್ಟ ನಿರ್ಧಾರ ತೆಗೆದುಕೊಂಡರು. ಜನವರಿ 30 ರಿಂದ ನಿರಂತರವಾಗಿ ಬಾವಿ ತೋಡಿದ್ದಾರೆ. ಯಾವುದೇ ಅಡ್ಡಿ ಬಂದರೂ ಅದಕ್ಕೆ ತಲೆಕೆಡಿಸಿಕೊಂಡಿಲ್ಲ.

ಫೋಟೋ ಕೃಪೆ – ಶಿವಾನಂದ ಕಳವೆ

ನಿಸ್ವಾರ್ಥ ಸೇವೆ : 55 ವರ್ಷದ ಗೌರಿ ಅವರು ಛಲ ಬಿಡದೇ ಮಕ್ಕಳಿಗಾಗಿ 45 ಅಡಿ ಬಾವಿ ತೋಡಿ ನೀರು ತರಿಸಿದ್ದಾರೆ, ನೀರು ಬಂದಿದ್ದು ಕಂಡು ಭಾವುಕರಾಗಿದ್ದಾರೆ. ನಿಸ್ವಾರ್ಥ ಸೇವೆ ಮಾಡಿದ ಗೌರಿಗೆ ಎಲ್ಲೆಡೆ ಮೆಚ್ಚುಗೆ ವ್ಯಕ್ತವಾಗಿದೆ. ಗೌರಿ ಪರಮೇಶ್ವರ್ ನಾಯ್ಕ್ ಅವರು ಈ ಹಿಂದೆ ಕೂಡ ಎರಡು ಬಾವಿಯನ್ನು ಏಕಾಂಗಿಯಾಗಿ ತೆಗೆದಿದ್ದರು. 55 ಅಡಿ ಹಾಗೂ 60 ಅಡಿ ಆಳದ ಬಾವಿಯನ್ನು ಇವರು ತಮ್ಮ ತೋಟದ ಬಳಕೆಗೆ ಹಾಗೂ ಸಾರ್ವಜನಿಕರ ಬಳಕೆಗಾಗಿ ತೆಗೆದಿದ್ದರು.

Source : ಅಂತರ್ಜಾಲ ಹಾಗೂ ಶಿವಾನಂದ ಕಳವೆ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 29-07-2026 | ಆ.2 ರಿಂದ ಮಳೆಯ ಸ್ಥಿತಿ ಏನಾಗಬಹುದು..?

ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನಲ್ಲಿ ಇನ್ನೂ ಬಿಟ್ಟುಬಿಟ್ಟು ಮಳೆ ಮುಂದುವರಿಯಲಿದೆ. ಆದರೆ…

17 hours ago

ಆಸ್ಪತ್ರೆಗಳಲ್ಲಿ ಬಳಕೆಯಾಗದ ಔಷಧ ಮರುಬಳಕೆ – ಹಣವೂ ಉಳಿಯುತ್ತದೆ, ಪರಿಸರವೂ ಕಾಪಾಡುತ್ತದೆ..!

ಆಸ್ಪತ್ರೆಗಳಲ್ಲಿ ಬಳಕೆಯಾಗದೆ ಉಳಿಯುವ ಔಷಧಗಳನ್ನು ಸುರಕ್ಷಿತವಾಗಿ ಮರುಬಳಕೆ ಮಾಡಿದರೆ ಆರೋಗ್ಯ ಕ್ಷೇತ್ರದ ವೆಚ್ಚ…

24 hours ago

ಮಲೆನಾಡಿನಿಂದ ಬಯಲುನಾಡಿನತ್ತ ಅಡಿಕೆ ಬೆಳೆ ವಿಸ್ತರಣೆ : ರಾಣೆಬೆನ್ನೂರಿನಲ್ಲಿ ಹೆಚ್ಚಿದ ರೈತರ ಆಸಕ್ತಿ

ಹಾವೇರಿ ಜಿಲ್ಲೆಯ ರಾಣೆಬೆನ್ನೂರು ಭಾಗದಲ್ಲಿ ಅಡಿಕೆ ಬೆಳೆ ವೇಗವಾಗಿ ವಿಸ್ತರಿಸುತ್ತಿದ್ದು, ಉತ್ತಮ ಆದಾಯದ…

1 day ago

ಕೊಂಬೆಯಲ್ಲ, ಕಾಂಡದಲ್ಲೇ ಗೊಂಚಲು ಗೊಂಚಲಾಗಿ ಹಣ್ಣು! ಪಶ್ಚಿಮ ಘಟ್ಟದ ಅಪರೂಪದ ‘ಕೋಳಿಜುಟ್ಟು’ ಹಣ್ಣಿನ ಕಥೆ

ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಕಾಡು ಹಣ್ಣು ಇದೀಗ ರೈತರ ತೋಟಗಳಲ್ಲೂ ಫಲ…

1 day ago

ಕಾಡು ಹಣ್ಣು…. ಕೋಳಿ ಜುಟ್ಟು ಹಣ್ಣು…!

ಪಶ್ಚಿಮ ಘಟ್ಟದ ಅಪರೂಪದ ಕೋಳಿಜುಟ್ಟು ಹಣ್ಣು ಕಾಂಡದ ಮೇಲೆಯೇ ಗೊಂಚಲು ಗೊಂಚಲಾಗಿ ಬೆಳೆಯುವ…

1 day ago

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಒಡಿಶಾದಲ್ಲಿ ಭಾರಿ ಮಳೆ, ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…

2 days ago