ಕರಾವಳಿ ಭಾಗದ ಎಲ್ಲಾ ಟೆಕ್ಸ್ಟೈಲ್ಸ್ ಅಂಗಡಿಗಳಲ್ಲಿ ಬಟ್ಟೆ ಕಳ್ಳತನ ಹಾಗೂ ಗ್ರಾಹಕರ ಬ್ಯಾಗ್ನಿಂದ ಮತ್ತು ಮೈಯಲ್ಲಿರುವ ಆಭರಣಗಳ ಕಳ್ಳತನ ಆಗಿರುವ ಹಿನ್ನಲೆಯಿಂದ ಕರಾವಳಿ ಟೆಕ್ಸ್ಟೈಲ್ಸ್, ರೆಡಿಮೇಡ್ಸ್ ಮತ್ತು ಫೂಟ್ವೇರ್ ಡೀಲರ್ಸ್ ಎಸೋಸಿಯೆಶನ್ ವತಿಯಿಂದ ಎಸೋಸಿಯೇಶನ್ ಅಧ್ಯಕ್ಷ , ಆಮ್ ಆದ್ಮಿ ಪಾರ್ಟಿ ಜಿಲ್ಲಾಧ್ಯಕ್ಷ ಸಂತೋಷ್ ಕಾಮತ್ ನೇತೃತ್ವದಲ್ಲಿ ಮಂಗಳೂರು ಪೋಲಿಸ್ ಆಯುಕ್ತರಿಗೆ ದೂರು ನೀಡಲಾಗಿದೆ.
ಹಲವು ಟೆಕ್ಸ್ಟೈಲ್ಸ್ ಅಂಗಡಿಗಳಲ್ಲಿ ಕಳ್ಳತನ ನಡೆದಿರುವುದೆಲ್ಲವೂ ಸಿ.ಸಿ ಟಿ.ವಿ ಪೂಟೇಜ್ನಲ್ಲಿ ದಾಖಲಾಗಿದ್ದು, ಇದನ್ನು ಪ್ರತ್ಯೇಕ ಕಳ್ಳತನವೆಂದು ಭಾವಿಸಿದ್ದೆವು. ಈ ಬಗ್ಗೆ ಎಲ್ಲೆಡೆಯೂ ಕೂಲಂಕುಶವಾಗಿ ಪರಿಶೀಲನೆ ಮಾಡಿದಾಗ ಒಂದೇ ಕುಟುಂಬದವರು ಈ ಕೃತ್ಯದಲ್ಲಿ ಭಾಗಿಯಾಗಿದ್ದಾರೆ ಎಂಬ ಸಂಶಯ ಮೂಡಿದೆ.ಸುಮಾರು 30 ವರ್ಷಗಳಿಂದ ಕಳ್ಳತನ ಮಾಡುವುದೇ ಇವರ ಚಟುವಟಿಕಯಾಗಿದೆ ಎಂಬುದೂ ಈಗ ಸಂದೇಹಕ್ಕೆ ಎಡೆಮಾಡಿದೆ. ಆದುದರಿಂದ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳು ಕಳ್ಳತನ ಮಾಡುವವರ ವಿರುದ್ಧ ಸೂಕ್ತ ರೀತಿಯ ಕಾನೂನು ಕ್ರಮ ಜರಗಿಸಬೇಕಾಗಿದೆ ಎಂದು ಕರಾವಳಿ ಭಾಗದ ಟೆಕ್ಸ್ಟೈಲ್ಸ್, ರೆಡಿಮೇಡ್ಸ್ ಮತ್ತು ಫೂಟ್ವೇರ್ ಡೀಲರ್ಸ್ ಎಸೋಸಿಯೆಶನ್ ಮಂಗಳೂರು ಪೋಲಿಸ್ ಆಯುಕ್ತರಿಗೆ ನೀಡಿದ ದೂರಿನಲ್ಲಿ ಒತ್ತಾಯಿಸಿದ್ದಾರೆ.
2024ರಲ್ಲಿ ಭಾರತದಲ್ಲಿ ರೈತರು ಮತ್ತು ಕೃಷಿ ಕಾರ್ಮಿಕರು ಸೇರಿ 10,546 ಮಂದಿ ಆತ್ಮಹತ್ಯೆಯಿಂದ…
ಕರ್ನಾಟಕದಲ್ಲಿ ಈಗಾಗಲೇ 13,500 ಶಿಕ್ಷಕರ ನೇಮಕಾತಿ ನಡೆದಿದ್ದು, ಶಿಕ್ಷಣ ಇಲಾಖೆಯಲ್ಲಿ ಇನ್ನೂ 16…
ಕರ್ನಾಟಕದ ಹಲವು ಭಾಗಗಳಲ್ಲಿ ಸೆ.5ರಿಂದ ಕೆಲವು ದಿನ ಮಳೆಯ ತೀವ್ರತೆ ಕಡಿಮೆಯಾಗುವ ಲಕ್ಷಣಗಳಿವೆ.…
ಹಿಮನದಿ ಕುಸಿತದಿಂದ ಸಂಭವಿಸಿದ ಭೀಕರ ಪ್ರವಾಹದ ಬಳಿಕ ನೇಪಾಳ ಪ್ರಧಾನಿ ಬಾಲೆಂದ್ರ ಶಾ…
2023ರಿಂದ 2026ರವರೆಗೆ ದೇಶದ 23 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಪರೀಕ್ಷಿಸಿದ 70,652…
ಕಾಸರಗೋಡಿನ ICAR-CPCRIನಲ್ಲಿ ವಿಶ್ವ ತೆಂಗು ದಿನ–2026 ಆಚರಿಸಿ, ಹವಾಮಾನ ಅನಿಶ್ಚಿತತೆಯ ನಡುವೆ ತೆಂಗು…