ಏಕಕಾಲದಲ್ಲಿ 36 ಡ್ರೋನ್ ಮೂಲಕ ಸೋಯಾ ಬೆಳೆಗೆ ಪೋಷಕಾಂಶಗಳ ಸಿಂಪಡಣೆಗೆ ಬೆಳಗಾವಿಯಲ್ಲಿ ಚಾಲನೆ ನೀಡಲಾಯಿತು. …..ಮುಂದೆ ಓದಿ….
ಬೆಳಗಾವಿ ಜಿಲ್ಲಾ ಪಂಚಾಯಿತಿ, ಕೃಷಿ ಇಲಾಖೆ ಹಾಗೂ ರೋಟರಿ ಕ್ಲಬ್ ವತಿಯಿಂದ ಸೋಯಾ ಬೆಳೆಗೆ ಏಕಕಾಲದಲ್ಲಿ 36 ಡ್ರೋನ್ ಮೂಲಕ ಪೋಷಕಾಂಶ ಹಾಗೂ ಔಷಧಿ ಸಿಂಪಡಣೆ ಕಾರ್ಯಕ್ಕೆ ಬೆಳಗಾವಿ ಜಿಲ್ಲಾ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಚಾಲನೆ ನೀಡಿದರು.ಈ ಸಂದರ್ಭದಲ್ಲಿ ಕೃಷಿ ಇಲಾಖೆಯ ಜಂಟಿ ನಿರ್ದೇಶಕ ಶಿವನಗೌಡ ಪಾಟೀಲ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು..….ಮುಂದೆ ಓದಿ.…
ಈ ವೇಳೆ ಮಾತನಾಡಿದ ಸಚಿವ ಸತೀಶ್ ಜಾರಕಿಹೊಳಿ, ಡ್ರೋನ್ ಮೂಲಕ ಪೋಷಕಾಂಶಗಳ ಸಿಂಪಡಣೆ ರೈತರ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುತ್ತದೆ, ಇದನ್ನು ಸದುಪಯೋಗಪಡಿಸಿಕೊಳ್ಳಬೇಕು ಎಂದರು..….ಮುಂದೆ ಓದಿ….
ಈ ಸಂದರ್ಭ ಮಾತನಾಡಿದ ಕೃಷಿಕ ಮಹಿಳೆ ಸುಜಾತಾ ಬೋರಗಲ್, ಆಧುನಿಕ ತಂತ್ರಜ್ಞಾನದ ಉಪಕರಣಗಳು ರೈತರಿಗೆ ಅನುಕೂಲಕರವಾಗಿವೆ , ಪೋಷಕಾಂಶಗಳು ಹಾಗೂ ಔಷಧಿ ಸಿಂಪಡಣೆ ವೇಳೆ ರೈತರು ಹಚ್ಚಿನ ನಿಗಾ ವಹಿಸಬೇಕಾಗುತ್ತದೆ, ಆದರೆ ಹೊಸ ಯಂತ್ರಗಳ ಮೂಲಕ ರೈತರಿಗೆ ಅಂತಹ ಯಾವುದೇ ಸಮಸ್ಯೆಗಳು ಇಲ್ಲ ಎಂದರು.
ಇಪ್ಕೋ ಸಿಬ್ಬಂದಿ ಸೋಮಶೇಖರ್ ಮಾತನಾಡಿ ಅತಿ ಕಡಿಮೆ ಸಮಯದಲ್ಲಿ ಹೆಚ್ಚು ಕೃಷಿ ಭೂಮಿಗೆ ಔಷಧಿ ಸಿಂಪಡಣೆ ಮಾಡಬಹುದು. ಇದರಿಂದ ರೈತರಿಗೆ ವೆಚ್ಚವೂ ಕಡಿಮೆಯಾಗುತ್ತದೆ ಎಂದರು.
ಕೃಷಿಕ ಶಿವನಗೌಡ ಪಾಟೀಲ ಮಾತನಾಡಿ ಡ್ರೋನ್ ಮೂಲಕ ಪೋಷಕಾಂಶಗಳ ಸಿಂಡಪಣೆ ಕಡಿಮೆ ವೆಚ್ಚದಾಯಕವಾಗಿದ್ದು, ಹೆಚ್ಚು ಅನುಕೂಲವಾಗಿದೆ, ಕಡಿಮೆ ಸಮಯದಲ್ಲಿ ರೈತರಿಗೆ ಅನುಕೂಲಕರವಾಗಿ ಸಿಂಪಡಣೆ ಸಾಧ್ಯವಿದೆ ಎಂದರು.
At the same time, 36 drones were deployed in Belagavi to spray nutrients on soy crops. Belagavi district in-charge minister Satish Jarakiholi oversaw the coordinated effort to apply nutrients and pesticides using the drones. Minister Satish Jarakiholi spoke on the occasion and stated that nutrients can be delivered via drone.
ಭಾರತೀಯ ಸೇನಾಪಡೆಯು, ಪಾಕಿಸ್ತಾನ ಹಾಗೂ ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿರುವ ಉಗ್ರಗಾಮಿಗಳ ನೆಲೆಗಳನ್ನು ನಾಶಗೊಳಿಸಿ…
ರಾತ್ರಿ ಗುಡುಗು ಸಹಿತ ಅಲ್ಲಲ್ಲಿ ಸಾಮಾನ್ಯ ಮಳೆಯ ಮುನ್ಸೂಚನೆ ಇದೆ. ಈಗಿನಂತೆ ಕರಾವಳಿಯಲ್ಲಿ…
ಈ ತಿಂಗಳ ಅಂತ್ಯದೊಳಗೆ ಮೀನ ಕಟಕ ಕುಂಭ ಮಿಥುನ ವೃಶ್ಚಿಕ ವೃಷಭ ಈ…
ಪಾಕಿಸ್ತಾನ ಮತ್ತು ಪಾಕಿಸ್ತಾನ ಆಕ್ರಮಿತ ಜಮ್ಮು ಮತ್ತು ಕಾಶ್ಮೀರದಲ್ಲಿನ ಭಯೋತ್ಪಾದಕ ಮೂಲಸೌಕರ್ಯಗಳ ನೆಲೆಗಳ…
ಯುದ್ಧ ಆದರೆ ಅಥವಾ ಬಿಗುವಿನ ವಾತಾವರಣ ನಿರ್ಮಾಣವಾದರೆ ತಾತ್ಕಾಲಿಕವಾಗಿ ಎಲ್ಲಾ ಉತ್ಪನ್ನಗಳ ಮಾರುಕಟ್ಟೆಗಳು…