Advertisement
ಸುದ್ದಿಗಳು

ಮತ್ತೆ ಮೀನುಗಾರಿಗೆ ಆರಂಭ : ವಿರಾಮದಲ್ಲಿದ್ದ ಕಡಲ ಮಕ್ಕಳಿಂದ ತಣ್ಣೀರುಬಾವಿ ಕಡಲ ತೀರದಲ್ಲಿ ಸಮುದ್ರ ಪೂಜೆ

Share

ಮುಂಗಾರು ಆರಂಭವಾಗುತ್ತಿದ್ದಂತೆ ಮೀನುಗಾರಿಕೆಯನ್ನು(Fishing) ನಿಷೇಧಿಸಲಾಗುತ್ತದೆ. ಇದು ಮೀನುಗಳು ಮೊಟ್ಟೆ ಇಟ್ಟು ಸಂತಾನಾಭಿವೃದ್ಧಿ(Procreation) ಮಾಡುವ ಸಮಯ. ಹಾಗಾಗಿ ಎರಡು ತಿಂಗಳ ಕಾಲ ಆಳ ಸಮುದ್ರ ಮೀನುಗಾರಿಕೆಗೆ ವಿರಾಮ ಕೊಟ್ಟು ಕಡಲ ಮಕ್ಕಳು ಎರಡು ತಿಂಗಳು ತಮ್ಮ ಬಲೆ, ದೋಣಿ, ಹಡಗು ರಿಪೇರಿ ಮಾಡೋದ್ರಲ್ಲಿ ತಲ್ಲೀನರಾಗುತ್ತಾರೆ. ಇದೀಗ ಆ ದಿನಗಳು ಮುಗಿದು ಮತ್ತೆ ಮೀನುಗಾರಿಕೆಗೆ ಹೊರಡುವ ಸಮಯ ಬಂದಿದೆ. ಏಳುಪಟ್ಲ ಮೊಗವೀರ ಸಂಯುಕ್ತ ಸಭಾ(ಕದ್ರಿ) ಇದರ ವತಿಯಿಂದ ಸಾಮೂಹಿಕ ಸಮುದ್ರ ಪೂಜೆಯು ಸೋಮವಾರ ತಣ್ಣೀರುಬಾವಿ ಕಡಲ ಕಿನಾರೆಯಲ್ಲಿ ನೆರವೇರಿತು. ಹೇರಳ ಮತ್ಸ್ಯಸಂಪತ್ತು ಲಭ್ಯವಾಗಲು, ಮತ್ಸ್ಯ ಸಂಪತ್ತು ಉಳಿಯಲು ಮೊಗವೀರ ಸಮಾಜ ಬಂಧುಗಳಿಂದ ನಗರದ ತಣ್ಣೀರುಬಾವಿಯ ಕಡಲ ಕಿನಾರೆಯಲ್ಲಿ ಸಮುದ್ರಪೂಜೆ ನಡೆಸಿದರು.

ಸಮುದ್ರರಾಜನಿಗೆ ಹಾಲು ಸಮರ್ಪಿಸಲು ಪ್ರತೀ ಗ್ರಾಮದಿಂದ ಹಾಲು ಸಂಗ್ರಹಣೆ ಮಾಡಲಾಯಿತು. ಎಲ್ಲಾ ಮೊಗವೀರ ಬಂಧುಗಳು ಬೊಕ್ಕಪಟ್ಣ ಬ್ರಹ್ಮ ಬಬ್ಬರ್ಯ ದೈವಸ್ಥಾನದಲ್ಲಿ ಒಂದಾಗಿ ಬಬ್ಬರ್ಯ ದೈವಕ್ಕೆ ಪ್ರಾರ್ಥನೆ ನೆರವೇರಿಸಿದರು. ಆ ಬಳಿಕ ಸಮುದ್ರ ದಡದಲ್ಲಿ ಭಜನಾ ಸಂಕೀರ್ತನೆ ಹಾಗೂ ಶ್ರೀ ಮಹಾಲಕ್ಷ್ಮಿ ಮಾತೆಗೆ ಪೂಜೆ ನೆರವೇರಿತು. ನಂತರ ಕದ್ರಿ ಜೋಗಿ ಮಠದ ಶ್ರೀರಾಜಯೋಗಿ ನಿರ್ಮಲನಾಥ ಸ್ವಾಮೀಜಿಯವರ ನೇತೃತ್ವದಲ್ಲಿ ಮೊಗವೀರ ಸಮಾಜ ಬಂಧುಗಳಿಂದ ಸಮುದ್ರಕ್ಕೆ ಕ್ಷೀರ ಸಮರ್ಪಣೆಯಾಯಿತು. ಜೊತೆಗೆ ಹಣ್ಣು, ಕಾಯಿಗಳನ್ನು ಸಮುದ್ರಕ್ಕೆ ಸಮರ್ಪಿಸಲಾಯಿತು.

ಮೀನುಗಾರಿಕೆ ಆರಂಭವಾಗುವ ಹೊತ್ತಿಗೆ ಶ್ರಾವಣದ ಹುಣ್ಣಿಮೆಯ ದಿನ ಮೀನುಗಾರಿಕೆ ಕಸಬಿಗೆ ಒಳಿತಾಗಲೆಂದು ಮೊಗವೀರ ಸಮಾಜ ಬಂಧುಗಳಿಂದ ಸಮುದ್ರರಾಜನಿಗೆ ಪೂಜೆ ನೆರವೇರಿಸಲಾಗುತ್ತದೆ. ಈ ದಿನ ಎಲ್ಲಾ ಮೀನುಗಾರರು ಮೀನುಗಾರಿಕೆಗೆ ರಜೆ ಹಾಕಿ ಸಮುದ್ರ ಪೂಜೆಯಲ್ಲಿ ಪಾಲ್ಗೊಳ್ಳುತ್ತಾರೆ. ಆದ್ದರಿಂದ ಇಂದು ಮಂಗಳೂರಿನಲ್ಲಿ ಮೀನುಗಾರಿಕೆ ಸ್ತಬ್ಧವಾಗುತ್ತದೆ. ಆರಂಭದಲ್ಲಿ ಭಜನಾ ಸಂಕೀರ್ತನೆ ಹಾಗೂ ಶ್ರೀ ಮಹಾಲಕ್ಷ್ಮೀ ಮಾತೆಗೆ ಪೂಜೆ ನಡೆಯಿತು. ಆ ಬಳಿಕ ಕದ್ರಿ ಕದಳೀ ಮಠದ ಮಠಾಧೀಶ ಪೂಜ್ಯ ರಾಜಯೋಗಿ ನಿರ್ಮಲಾನಾಥ್‌ಜೀ ಮಹಾರಾಜ್‌ರವರ ನೇತೃತ್ವದಲ್ಲಿ ಸಮುದ್ರಕ್ಕೆ ಹಾಲು-ಹಣ್ಣು ಹಂಪಲುಗಳನ್ನು ಸಮರ್ಪಿಸಲಾಯಿತು.

ಮತ್ಸ್ಯೋದ್ಯಮಿ ಸಂದೀಪ್ ಪುತ್ರನ್, ಉಳ್ಳಾಲ, ಹೊಗೆ ಬಜಾರ್ ಮೊಗವೀರ ಗ್ರಾಮ ಸಭಾದ ಅಧ್ಯಕ್ಷ ಹೇಮಂತ್ ಕುಮಾರ್. ಪದಾಧಿಕಾರಿಗಳಾದ ಹೇಮಚಂದ್ರ ಸಾಲ್ಯಾನ್ ಪಡುಹೊಗೆ, ರಂಜನ್ ಕಾಂಚನ್ ಬೋಳೂರು, ಸುರೇಶ್ ಸುವರ್ಣ ನೀರೇಶ್ವಾಲ್ಯ, ಶ್ಯಾಮಸುಂದರ್ ಸೇರಿದಂತೆ ವಿವಿಧ ಗ್ರಾಮಗಳ ಗುರಿಕಾರರು, ಪ್ರತಿನಿಧಿಗಳು, ಸದಸ್ಯರು ಹಾಗೂ ಮಹಿಳಾ ಸಂಘಗಳ ಸದಸ್ಯೆಯರು ಈ ಸಂದರ್ಭ ಉಪಸ್ಥಿತರಿದ್ದರು.

  • ಅಂತರ್ಜಾಲ ಮಾಹಿತಿ(ಈಟಿವಿ ಭಾರತ್)
ನಿಮ್ಮ ಅಭಿಪ್ರಾಯಗಳನ್ನು ಇಲ್ಲಿ ದಾಖಲಿಸಿ…

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ |13-07-2026 | ಕರ್ನಾಟಕದಲ್ಲಿ ಮುಂಗಾರು ದುರ್ಬಲ – ಮುಂದಿನ 10 ದಿನ ಜೋರು ಮಳೆ ಇಲ್ಲ

ರಾಜ್ಯದಲ್ಲಿ ಮುಂದಿನ 10 ದಿನಗಳವರೆಗೆ ಜೋರು ಮಳೆಯ ಸಾಧ್ಯತೆಗಳು ಕಾಣುತ್ತಿಲ್ಲ. ಕರಾವಳಿಯಲ್ಲಿ ಜುಲೈ…

3 hours ago

ಅಮರನಾಥದ ಹಿಮ ಶಿವಲಿಂಗ 90% ಕರಗಿತು…! ಹವಾಮಾನ ಬದಲಾವಣೆಯೇ ಕಾರಣವೇ?

ಅಮರನಾಥ ಯಾತ್ರೆ ಆರಂಭವಾದ ಕೆಲವೇ ದಿನಗಳಲ್ಲಿ ಹಿಮ ಶಿವಲಿಂಗವು 90%ಕ್ಕೂ ಹೆಚ್ಚು ಕರಗಿರುವುದಾಗಿ…

11 hours ago

16 ವರ್ಷದೊಳಗಿನ ಮಕ್ಕಳಿಗೆ ಸೋಷಿಯಲ್ ಮೀಡಿಯಾ ನಿರ್ಬಂಧ – ಆಸ್ಟ್ರೇಲಿಯಾದ ಕ್ರಮಕ್ಕೆ ಪ್ರಧಾನಿ ಮೋದಿ ಮೆಚ್ಚುಗೆ

16 ವರ್ಷದೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿರ್ಬಂಧ ವಿಧಿಸಿರುವ ಆಸ್ಟ್ರೇಲಿಯಾದ ಕ್ರಮವನ್ನು ಪ್ರಧಾನಿ…

21 hours ago

ಎಲ್‌ ನಿನೊ ಎಫೆಕ್ಟ್‌ – ಮುಂದಿನ ವರ್ಷ ಮತ್ಸ್ಯೋದ್ಯಮಕ್ಕೆ ಸಂಕಷ್ಟ?

ಎಲ್‌ ನಿನೊ ಪರಿಣಾಮದಿಂದ 2027ರಲ್ಲಿ ಎಣ್ಣೆ ಸಾರ್ಡಿನ್ ಮೀನುಗಳ ಉತ್ಪಾದನೆ ಕುಸಿಯುವ ಸಾಧ್ಯತೆ…

21 hours ago

ಮುಂಗಾರು ಇದ್ದಕ್ಕಿದ್ದಂತೆ ದುರ್ಬಲವಾಗಿದ್ದೇಕೆ..? ಇಲ್ಲಿದೆ ವೈಜ್ಞಾನಿಕ ಕಾರಣ

ದೇಶದ ಬಹುತೇಕ ಭಾಗಗಳಿಂದ ಮಳೆ ಮೋಡಗಳು ಕಡಿಮೆಯಾಗಲು ಪಶ್ಚಿಮ ಪೆಸಿಫಿಕ್‌ನ ಪ್ರಬಲ ಚಂಡಮಾರುತ…

1 day ago

ಮತ್ತೆ ಹೆಚ್ಚಿದ ದೇಶದ ಮಳೆ ಕೊರತೆ – ಜುಲೈ ಆರಂಭದ ಚೇತರಿಕೆ ಕುಂಠಿತ, ಮುಂಗಾರು ಮತ್ತೆ ದುರ್ಬಲ

ಜುಲೈ ಮೊದಲ ವಾರದ ಚೇತರಿಕೆಯ ಬಳಿಕ ದೇಶದ ಮುಂಗಾರು ಮತ್ತೆ ದುರ್ಬಲಗೊಂಡಿದ್ದು, ಮಳೆ…

1 day ago