ಚಿತ್ತೂರು ವಿವಿಧ ಮಾವಿನಹಣ್ಣುಗಳಿಗೆ ಹೆಸರುವಾಸಿಯಾದ ಊರಾಗಿದೆ. ಚಿತ್ತೂರು ಮಾವಿನ ಹಣ್ಣು ಗುಣಮಟ್ಟದಲ್ಲೂ ಶ್ರೇಷ್ಟವಾಗಿದೆ. ಹೀಗಾಗಿ ದೇಶದಾದ್ಯಂತದ ವ್ಯಾಪಾರಿಗಳಿಗೂ, ಗ್ರಾಹಕರಿಗೂ ಹೆಚ್ಚು ಬೇಡಿಕೆ ಇರುವ ಮಾವು. ಆದರೆ ಈ ಬಾರಿ ಹವಾಮಾನ ವೈಪರೀತ್ಯದಿಂದಾಗಿ ಮಾವಿನ ಕೃಷಿಯ ಮೇಲೆ ಪರಿಣಾಮವನ್ನು ಬೀರಿದೆ. ಹೂ ಬಿಡುವ ಹಂತದಲ್ಲಿ ವಿಳಂಬವಾಗಿರುವುದರಿಂದ ಈ ವರ್ಷ ಸಾಮಾನ್ಯ 7.9 ಲಕ್ಷ ಟನ್ ಇಳುವರಿ ಕಡಿಮೆಯಾಗಲಿದೆ ಎಂದು ರೈತರು ಆತಂಕ ವ್ಯಕ್ತಪಡಿಸಿದ್ದಾರೆ.
ಮುಂಬರುವ ಬೇಸಿಗೆಯಲ್ಲಿ ಚಿತ್ತೂರು ಜಿಲ್ಲೆಯ ರೈತರು 4.5 ಲಕ್ಷ ಟನ್ ತೋತಾಪುರಿ ತಳಿಯ ಮಾವಿನ ಇಳುವರಿ ನಿರೀಕ್ಷೆಯಲ್ಲಿದ್ದಾರೆ. ಆದರೆ ಹವಾಮಾನ ಪರಿಸ್ಥಿತಿಗಳಲ್ಲಿನ ಬದಲಾವಣೆಯಿಂದಾಗಿ ಈ ನಿರ್ದಿಷ್ಟ ವಿಧದ ತಳಿಯಲ್ಲಿ ಇಳುವರಿಯಲ್ಲಿನ ಕುಸಿತ ಕಾಣುತ್ತಿದೆ. ಸುಮಾರು 70,000 ಹೆಕ್ಟೇರ್ ಪ್ರದೇಶದಲ್ಲಿ ರೈತರು ತೋತಾಪುರಿ ತಳಿಯ ಮಾವು ಬೆಳೆಸಿದ್ದಾರೆ. ಮಾವಿನ ಇಳುವರಿ ಕಡಿಮೆಯಾದರೆ ಕೆಲವು ಉದ್ಯಮಗಳ ಮೇಲೂ ಪರಿಣಾಮ ಬೀರುತ್ತದೆ ಎಂದು ಬಂಗಾರುಪಾಳ್ಯಂ ಪ್ರದೇಶದ ರೈತ ಕೆ. ವೀರಸ್ವಾಮಿ ಹೇಳಿದ್ದಾರೆ.
ಮುಂಗಾರು ಮಳೆ(Manson) ಆರಂಭವಾಗುತ್ತಿದ್ದಂತೆ ಸಾಂಕ್ರಮಿಕ ರೋಗಗಳು(Infectious disease) ಆರಂಭವಾಗುವುದು ಮಾಮೂಲು. ಅದರಲ್ಲೂ ಮಳೆ(Rain)…
ಪ್ರಧಾನಿ ಮೋದಿ(PM Modi) ಬೇರೆ ಬೇರೆ ವಿಚಾರದಲ್ಲಿ ಉಳಿದ ರಾಜಕಾರಣಿಗಳಿಗಿಂತ(Politician) ಭಿನ್ನ. ಈ…
ನಮ್ಮ ದೇಶದಲ್ಲಿ ವಸುದೈವ ಕುಟುಂಬಕಂ ಎಂಬ ನುಡಿಯಿದೆ. ಇದರ ಅರ್ಥ ಇಡೀ ವಿಶ್ವವೇ(World)…
ಕೇಂದ್ರ ಗೃಹ ಸಚಿವಾಲಯವು(Union Home Ministry) ಸಿಎಎ(CAA) ಅಡಿಯಲ್ಲಿ ಪೌರತ್ವ ಪ್ರಮಾಣಪತ್ರಗಳ ಮೊದಲ…
ಉಚಿತ ಉಚಿತ ಉಚಿತ(Free).. ರಾಜ್ಯದ ಪ್ರತೀ ಮನೆಗೂ ವಿದ್ಯುತ್ ಉಚಿತ(Free Current). ಇಂಥ…
ಮಲೆನಾಡಗಿಡ್ಡ ಹಸುಗಳು ಬಹಳ ಮಹತ್ವದ ಅಂಶಗಳನ್ನು ಹೊಂದಿವೆ. ಅಂತಹ ವಿಶೇಷತೆಗಳ ಕಾರಣದಿಂದಲೇ ಈ…