ಬದುಕಿನಲ್ಲಿ ಅತ್ಯಂತ ಅಪರೂಪದ ಸಂಪತ್ತು ಸಮಯ. ಹಣ, ಸ್ಥಾನಮಾನ, ಆಸ್ತಿ–ಪಾಸ್ತಿ ಕಳೆದುಕೊಂಡರೂ ಮರಳಿ ಪಡೆಯಬಹುದು. ಆದರೆ ಒಂದು ಕ್ಷಣ ಕಾಲವೂ ಮರಳಿ ಸಿಗುವುದಿಲ್ಲ. ಆದ್ದರಿಂದಲೇ ಕಾಲಪ್ರಜ್ಞೆ (Time Awareness) ಮತ್ತು ಕಾಲನಿಯಂತ್ರಣ (Time Management) ಮಾನವನ ಬದುಕಿನಲ್ಲಿ ಮೌಲ್ಯಮಯವಾದ ದಾರ್ಶನಿಕ–ಪ್ರಾಯೋಗಿಕ ಪಾಠಗಳನ್ನು ಕಲಿಸುತ್ತದೆ.“ಕಾಲಃ ಸರ್ವಭೂತಾನಾಂ ಭವತ್ಯಾದಿ ನಿದಾನಮೇ” – ಕಾಲವೇ ಸರ್ವಭೂತಗಳ ಆದಿ–ಕಾರಣ.
ಕಾಲಪ್ರಜ್ಞೆ ಎಂದರೆ ಸಮಯದ ಹರಿವಿನ ಅರಿವು, ಅದರ ಮೌಲ್ಯವನ್ನು ಅರ್ಥಮಾಡಿಕೊಳ್ಳುವುದು, ಮತ್ತು ಪ್ರತಿಯೊಂದು ಕ್ಷಣವನ್ನು ಸರಿಯಾದ ರೀತಿಯಲ್ಲಿ ಉಪಯೋಗಿಸುವ ಜಾಗೃತ ಮನೋಭಾವ.ದಿನಚರ್ಯೆಯ ಪ್ರತಿಯೊಂದು ಅಂಶದಲ್ಲಿ ಸಮಯವನ್ನು ಗಮನಿಸುವುದು.ಸಮಯ ವ್ಯರ್ಥಗೊಳಿಸುವ ಚಟುವಟಿಕೆಗಳನ್ನು ಗುರುತಿಸುವುದು.ಪ್ರತಿಯೊಂದು ಕೆಲಸಕ್ಕೆ ಸೂಕ್ತ ಕಾಲನಿಯೋಜನೆ ಮಾಡುವುದು.
ಉದಾಹರಣೆ: ವಿದ್ಯಾರ್ಥಿ ಪರೀಕ್ಷೆಯ ಮುನ್ನ ದಿನಪೂರ್ತಿ ಮೊಬೈಲ್ನಲ್ಲಿ ಕಾಲಹರಣ ಮಾಡಿದರೆ ಫಲಶ್ರುತಿ ನಕಾರಾತ್ಮಕ. ಆದರೆ ಸಮಯವನ್ನು ಪಾಠಗಳಿಗೆ ಹಂಚಿಕೊಂಡರೆ ಯಶಸ್ಸು ಅವನ ಕೈ ಸೇರಬಹುದು.
ಭಾರತೀಯ ದರ್ಶನಗಳಲ್ಲಿ ಕಾಲಕ್ಕೆ ವಿಶೇಷ ಸ್ಥಾನವಿದೆ : ಉಪನಿಷತ್ತುಗಳು: “ಕಾಲೋ ಹಿ ದುರತಿಕ್ರಮಃ” ಎಂದಿದೆ . ಕಾಲವನ್ನು ಮೀರಲಾಗದು. ಭಗವದ್ಗೀತೆಯಲ್ಲಿ ಶ್ರೀಕೃಷ್ಣನು “ಕಾಲೋಸ್ಮಿ ಲೋಕಕ್ಷಯಕೃತ್” ಎಂದು ಘೋಷಿಸಿದ್ದಾನೆ. ಕಾಲವೇ ಸೃಷ್ಟಿ–ಸ್ಥಿತಿ–ಲಯಗಳ ಚಕ್ರದ ನಿಯಂತ್ರಕ ಎಂಬುದಾಗಿ ಹೇಳಿದ್ದಾನೆ. ಕವಿ ಭಾರವಿ “ಕಾಲಃ ಕ್ರೀಡತಿ ಗಚ್ಛತ್ಯಯುಃ” ಎಂಬುದಾಗಿ ಹೇಳುತ್ತಾನೆ ಕಾಲ ವೆಂಬುದು ಆಟವಾಡುತ್ತಾ ಜೀವವನ್ನು ಕಿತ್ತುಕೊಂಡು ಹೋಗುತ್ತದೆ.ಈ ದೃಷ್ಟಿಯಿಂದ ಕಾಲಪ್ರಜ್ಞೆ ಎಂದರೆ ಜೀವನವನ್ನು ಉದ್ದೇಶಪೂರ್ಣವಾಗಿ ಸಾಗಿಸುವ ಜ್ಞಾನ.
ಕಾಲನಿಯಂತ್ರಣ ಎಂದರೆ ಸಮಯವನ್ನು ಆದ್ಯತೆ , ನಿಯಮ, ಹಾಗೂ ಶಿಸ್ತುಗಳ ಮೂಲಕ ರೂಪಿಸುವುದು. ಇದಕ್ಕಾಗಿ ಕೆಳಗಿನ ಹಂತಗಳು ಮುಖ್ಯ:
ಕಾಲಪ್ರಜ್ಞೆಯ ಸಾಮಾಜಿಕ–ವೈಯಕ್ತಿಕ ಪ್ರಯೋಜನಗಳು :
ಕಾಲಪ್ರಜ್ಞೆಯ ಕೊರತೆಯಯಿಂದಾಗಿ ಕೆಲಸಗಳಲ್ಲಿ ವಿಳಂಬ, ಅಸಮಾಧಾನ.,ಒತ್ತಡ, ಆತಂಕ, ದೈಹಿಕ–ಮಾನಸಿಕ ಹಿಂಸೆ.,ಮತ್ತು ಇತರರ ವಿಶ್ವಾಸ ಕಳೆದುಕೊಳ್ಳುವುದು.ಪರಿಣಾಮವಾಗಿ ಗುರಿಯಿಲ್ಲದ ಜೀವನವಾಗುತ್ತದೆ .
ಕಾಲಪ್ರಜ್ಞೆ ಬೆಳೆಸುವ ಪ್ರಾಯೋಗಿಕ ವಿಧಾನಗಳು :
ಕಾಲಪ್ರಜ್ಞೆ ಎಂದರೆ ಕೇವಲ ಸಮಯಪಾಲನೆ ಅಲ್ಲ; ಅದು ಜೀವನಪಾಲನೆ. ಬದುಕು ಒಂದು ಕ್ಷಣದ ಹರಿವು. ಆ ಹರಿವನ್ನು ಸಾರ್ಥಕಗೊಳಿಸಲು ಕಾಲಪ್ರಜ್ಞೆ ಮಾರ್ಗದರ್ಶಕ. ಕಾಲದೊಂದಿಗೆ ಬದುಕುವವನೇ ಕಾಲವನ್ನು ಮೀರಿ ಬದುಕುತ್ತಾನೆ.
ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…
ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…
ರಬ್ಬರ್ ತೋಟಗಳು ಹಸಿರಾಗಿದ್ದರೂ ಅವು ನೈಸರ್ಗಿಕ ಮಳೆಕಾಡಿನ ಜೀವವೈವಿಧ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು…
ಭಾರತದ ಅಡುಗೆ ಎಣ್ಣೆ ಆಮದು ಎಂಟು ತಿಂಗಳಲ್ಲಿ ಶೇ.7ರಷ್ಟು ಏರಿಕೆಯಾಗಿದೆ. ಜೂನ್ನಲ್ಲಿ ಆಮದು…
ಕೇರಳದಲ್ಲಿ ಉತ್ಪಾದನೆಯಾಗುವ ಬಹುತೇಕ ಹಲಸು ಬಳಕೆಯಾಗದೆ ವ್ಯರ್ಥವಾಗುತ್ತಿದ್ದು, ವರ್ಷಕ್ಕೆ ಸುಮಾರು ₹1,200 ಕೋಟಿ…
ಅವೈಜ್ಞಾನಿಕ ಮಳೆ ಮುನ್ಸೂಚನೆಗಳ ಆಧಾರದ ಮೇಲೆ ಪದೇ ಪದೇ ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸುವುದು…