Advertisement
Opinion

ಇಂದು ರೈತ ದಿನಾಚರಣೆ | ನಾವು ರೈತರು ನಮಗೆ “ನಾವೇ” ಶುಭಾಶಯ ಕೋರಿಕೊಳ್ಳಬೇಕಾಗಿದೆ…!

Share

ಇವತ್ತು ರೈತರ ದಿನಾಚರಣೆ(Farmers day) ಅಂತೆ. ಕೃಷಿ ಗುಂಪುಗಳಲ್ಲಿ ಇತರೆ ಜಾಲತಾಣದಲ್ಲಿ(Social Media)”ರೆಡಿಮೇಡ್”(Ready-made) ಶುಭಾಶಯಗಳ(greetings) ಹಂಚಿಕೆಯಾಗುತ್ತಿದೆ. ದುರಂತ(tragedy) ಎಂದರೆ ಬೇರೆಲ್ಲಾ ದಿನಾಚರಣೆಗಳನ್ನು ಆಚರಿಸಲು(celebration ) ಸಮಾಜಕ್ಕೆ(Social) ಮತ್ತು ನಮ್ಮ ರಾಜಕೀಯ ವ್ಯವಸ್ಥೆಗಿರುವ(Political system) ಖುಷಿ “ರೈತ ದಿನಾಚರಣೆ” ಆಚರಣೆಗಿಲ್ಲ..!? ನಾವು ರೈತರು(Farmers) ನಮಗೆ “ನಾವೇ” ಶುಭಾಶಯಗಳನ್ನ‌” ಕೋರಿಕೊಳ್ಳಬೇಕಾಗಿದೆ”…

ಬದಲಾದ ಋತುಮಾನ, ಯಾವುದೇ ಔಷಧಕ್ಕೂ ಬಗ್ಗದ ಕೃಷಿ ರೋಗಗಳು, ಉತ್ಪಾದನಾ ವೆಚ್ಚಕ್ಕೂ ಮಾರುಕಟ್ಟೆ ಬೆಲೆಗೂ ತಾಳೆಯಾಗದ ಕೃಷಿ ಉತ್ಪನ್ನದ ಬೆಲೆಗಳೂ, ಕೃಷಿ ಬದುಕನ್ನ ಮಾಡಲು ಬರದ ಮೂರು ನಾಲ್ಕನೇ ತಲೆಮಾರಿನ ಪೀಳಿಗೆ… ಕೃಷಿಯಲ್ಲೀಗ ವೃದ್ದ ಕೃಷಿಕರು ಮತ್ತು ಕೂಲಿ ಕಾರ್ಮಿಕರು… ಸರ್ಕಸ್ ಕಂಪೆನಿಯವರು ಊರ ಬಯಲಿನಲ್ಲಿ ಪ್ರದರ್ಶನ ಹಾಕಿ ಒಂದು ದಿನ ಪ್ರದರ್ಶನ ‌ಮುಗಿಸಿ ಟೆಂಟು ಕಿತ್ತು ತಮ್ಮ ಸಾಮಾನು ಸರಂಜಾಮಿನ ಸಹಿತ ಇನ್ನೊಂದು ಊರಿಗೆ ಹೋಗುವಂತೆ ಕೃಷಿ ಬದುಕೂ ಟೆಂಟ್ ಕಿತ್ತು ಇನ್ನೊಂದು ಬದುಕಿನತ್ತ ಹೋಗುವ ಬದಲಾವಣೆ ಆಗುವ “ಆಟ” ದಂತೆ ಎನಿಸುತ್ತಿದೆ.

ಈ ಅಸ್ಥಿರ ಅಭದ್ರ ಯಾರಿಗೂ ಬೇಡವಾದ ಅನ್ನ ಆಹಾರ ಕೊಡುವ ರಂಗದ ” ಕಿಸಾನ”ರಿಗೆ ಶುಭಾಶಯ ಹೇಳುವುದೋ  “ಶುಭ ವಿದಾಯ” ಹೇಳುವುದೋ ಅರಿವಾಗದಾಗಿದೆ..‌‌.!! ಸದ್ಯಕ್ಕೆ ನಮಗೆ ನಾವೇ ಜಯ್ ಎನ್ನೋಣ…. “ಜಯ್ ಕಿಸಾನ್ “… ರೈತ ಬಂಧುಗಳೇ ಪರಸ್ಪರ ಶುಭಾಶಯಗಳು…

Today is Farmers Day. “Ready-made” greetings are being shared among farming groups and other websites. The tragedy is that there is no celebration of “Farmer’s Day” for the society and our political system to celebrate all the other days..!? We farmers have to “wish” for “ourselves”…

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ಪ್ರಬಂಧ ಅಂಬುತೀರ್ಥ

ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ ತಾಲ್ಲೂಕಿನ ಅಂಬುತೀರ್ಥದ ನಿವಾಸಿ ಪ್ರಬಂಧ. ಬಿ ಎ. ವಿಧ್ಯಾಭ್ಯಾಸ ಮುಗಿಸಿದ ಮೇಲೆ ಕೃಷಿ ಕೆಲಸ. ಕಥೆ , ಪರಿಸರ, ಕೃಷಿ , ವಿಜ್ಞಾನ , ಸಾಮಾಜಿಕ ಮತ್ತು ರಾಜಕೀಯ ವಿಚಾರಗಳ ಲೇಖನ ಬರೆಯುವ ಹವ್ಯಾಸ. ಮಲೆನಾಡು ಗಿಡ್ಡ ಗೋ ತಳಿ ಸಂವರ್ಧನೆ, ಜೀರಿಗೆ ಮೆಣಸಿನಕಾಯಿ ಬೆಳೆಯ ಸಂಪನ್ಮೂಲ ವ್ಯಕ್ತಿಯಾಗಿ ಕಾರ್ಯ ನಿರ್ವಹಣೆ. ಮಲೆನಾಡು ಗಿಡ್ಡ ತಳಿ ಹಸುಗಳ ಸೆಗಣಿಯನ್ನು ಮೌಲ್ಯ ವರ್ಧನೆ ಮಾಡಿ ಕೃಷಿ ಸ್ನೇಹಿ ಸೂಕ್ಷ್ಮಾಣು ಜೀವಿಯುಕ್ತ ಸಾವಯವ ಗೊಬ್ಬರ ತಯಾರಿಸಿ ಮಾರಾಟ ಮಾಡುವ ಕೆಲಸವನ್ನೂ ಮಾಡುತ್ತಿದ್ದಾರೆ.

Published by
ಪ್ರಬಂಧ ಅಂಬುತೀರ್ಥ

Recent Posts

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!

ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…

17 hours ago

ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!

ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…

17 hours ago

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

2 days ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

2 days ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

3 days ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

3 days ago