Advertisement
MIRROR FOCUS

ತುಳುನಾಡ ದೈವಾರಾಧನೆ ಟೂರ್‌ ಪ್ಯಾಕೇಜ್‌…! | ಕರಾವಳಿಗರಿಂದ ಭಾರೀ ಖಂಡನೆ |

Share

ತುಳುನಾಡು(Tulunadu) ನಾಗಾರಾಧನೆ ಮತ್ತು ಭೂತಾರಾಧನೆಯ(Bhootharadhane) ನೆಲ. ಭೂತಾರಾಧನೆ ಪರಿಸರದ ಜನರನ್ನು ಒಳಗೊಳಿಸುವ ಬಹುತ್ವದ ಧರ್ಮ. ಭೂತದ ನುಡಿಯಲ್ಲಿಯೇ ಹೇಳುವುದಾದರೆ ಹತ್ತು ತಾಯಿಯ ಮಕ್ಕಳನ್ನು ಒಂದು ಮಡಿಲಲ್ಲಿರಿಸಿ ರಮಿಸಿ ಎದೆ ಹಾಲು ಕುಡಿಸಿ ಪೋಷಿಸುವ ಶಕ್ತಿಗಳು ಇವು. ಇಲ್ಲಿ ಭೂತ ಶಕ್ತಿಗಳು ತಾಯಿ ಶಕ್ತಿಗಳು ಎನ್ನುವುದು ನಂಬಿಕೆ. ಅಂತಹ ತುಳುನಾಡಿನ ಭೂತಾರಾಧನೆಗೆ ಆಚರಣೆಯನ್ನೇ ಉದ್ಯಮ ಮಾಡಲು ಹೊರಟಿರುವುದಕ್ಕೆ ವ್ಯಾಪಕ ಖಂಡನೆ ವ್ಯಕ್ತವಾಗಿದೆ. ಇದೀಗ ಕೋಲವನ್ನು ರದ್ದು ಪಡಿಸುವುದಾಗಿ ಸಂಘಟಕರು ಒಪ್ಪಿಕೊಂಡಿದ್ದಾರೆ.

ದೈವಕೋಲ, ಕಂಬಳದ ಹೆಸರಿನಲ್ಲಿ ದೈವಾರಾಧನೆಯಲ್ಲೂ ಟ್ರಾವೆಲ್ ಏಜೆನ್ಸಿಯೊಂದು ಟೂರ್ ಪ್ಯಾಕೇಜ್ ಪರಿಚಯಿಸಿದ್ದು, ಇದು ಕರಾವಳಿ(Coastal) ಮಂದಿಯ ಆಕ್ರೋಶಕ್ಕೆ ಕಾರಣವಾಗಿದೆ. ಟ್ರಾವೆಲ್ ಸಂಸ್ಥೆಯೊಂದು 2,899 ರೂಪಾಯಿ ದರ ವಿಧಿಸಿ ಬೋಟಿಂಗ್(Boating), ಉಪ್ಪಿನಂಗಡಿಯಲ್ಲಿ ಕಂಬಳ(Kambala), ಪುತ್ತೂರಿನಲ್ಲಿ ಪಾರ್ಟಿ(Party), ಬೊಳ್ಳಾಡಿ ಫಾರ್ಮ್‌ನಲ್ಲಿ ದೈವದ ಕೋಲ, ಬೀರಮಲೆ ಬೆಟ್ಟಕ್ಕೆ ಚಾರಣ(Trucking) ಎಂಬ ಆಫರ್(Offer) ನೀಡಿದೆ. ಫೆಬ್ರವರಿ 10 ಮತ್ತು 11ರಂದು ಎರಡು ದಿನಗಳ ಕಾಲ ಈ ಪ್ರವಾಸ ನಿಗದಿ ಮಾಡಲಾಗಿದೆ. ಸದ್ಯ ಈ ಪ್ಯಾಕೇಜ್ ‌ಬೆಂಗಳೂರು, ಮುಂಬೈಗಳಂತಹ ಮಹಾನಗರಗಳಲ್ಲಿ ಇರುವವರ ವಾಟ್ಸ್ಆ್ಯಪ್ ಗಳಲ್ಲಿ, ಪೇಸ್‌ ಬುಕ್‌ ನಲ್ಲಿ ಹರಿದಾಡಿದೆ.

ತುಳುನಾಡಿನಲ್ಲಿ ದೈವಾರಾಧನೆಗೆ ಅಪಚಾರ ಮಾಡುವುದು ಸರಿಯಲ್ಲ ಎಂದು ದೈವ ನರ್ತಕ ದಯಾನಂದ ಜಿ ಕತ್ತಲ್ ಸಾರ್ ಹೇಳಿದ್ದಾರೆ.

ತುಳುನಾಡ ಭೂತಾರಾಧನೆ ಬಗ್ಗೆ ಒಂದು ಕಾಲದಲ್ಲಿ ಭೂತದ ಹೆಸರು ಹೇಳಲು ಹಿಂದೆ ಮುಂದೆ ನೋಡುತ್ತಿದ್ದ ಕಾಲ ಇತ್ತು. ಅಂತಹದ್ದರಲ್ಲಿ ಈಗ ಭೂತಾರಾಧನೆಯ ಹೆಸರಲ್ಲಿ ಟೂರು ಪ್ಯಾಕೇಜ್‌ ಮಾಡಿ ಬಿಸಿನೆಸ್‌ ಮಾಡಲು ಹೊರಟಿದ್ದಾರೆ. ಕೇವಲ ದೈವಕೋಲವನ್ನು ಭಕ್ತಿಭಾವದಿಂದ ನೋಡಿ ಅದರ ಆಚರಣೆಗೆ ತಲೆ ಭಾಗಿದ್ದರೆ ಸಮಸ್ಯೆಯಾಗುತ್ತಿರಲಿಲ್ಲ.

A travel agency has introduced a tour package in the name of Daivakola and Kambal, which has caused outrage among the coastal people. A travel agency charged Rs 2,899 and offered boating, blanket at Uppinandi, party at Puttur, Daivada Kola at Bolladi Farm, trek to Beeramale hill. The tour is scheduled for two days on February 10 and 11. Currently, this package is circulating in the WhatsApp groups and FBs of people in big cities like Bangalore and Mumbai.
- ಅಂತರ್ಜಾಲ ಮಾಹಿತಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ರೈತರ ಆದಾಯ ಹೆಚ್ಚಿಸಲು ಬಹುಬೆಳೆ, ಪಶುಸಂಗೋಪನೆ, ಮೀನುಗಾರಿಕೆಗೆ ಒತ್ತು

ನೀರಿನ ಕೊರತೆ ಮತ್ತು ಹವಾಮಾನ ಬದಲಾವಣೆಯ ನಡುವೆ ಭತ್ತ–ಗೋಧಿಯಂತಹ ಹೆಚ್ಚಿನ ನೀರು ಮತ್ತು…

4 hours ago

ಹವಾಮಾನ ವರದಿ | 12.09.2026 | ಸೆ.15ರಿಂದ ರಾಜ್ಯದ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು? ಕರಾವಳಿ–ಮಲೆನಾಡಿನಲ್ಲಿ ಸದ್ಯ ಬಿಸಿಲಿನ ವಾತಾವರಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಸದ್ಯ ಬಿಸಿಲು ಹಾಗೂ ಅಲ್ಲಲ್ಲಿ ಮೋಡದ ವಾತಾವರಣ ಮುಂದುವರಿಯುವ…

23 hours ago

ಹಸುವಿನ ಹಾಲಿಗೆ ಬದಲಾಗಿ ‘ಲ್ಯಾಬ್‌ ಹಾಲು’ – ಇನ್ನು ಕೇವಲ ವಿಜ್ಞಾನಕಲ್ಪನೆ ಅಲ್ಲ..! ಹೊಸ ಅಧ್ಯಯನದ ಲೆಕ್ಕಾಚಾರ

ಇಂಪೀರಿಯಲ್ ಕಾಲೇಜ್ ಲಂಡನ್‌ನ ಅಧ್ಯಯನದ ಪ್ರಕಾರ, precision fermentation ಮೂಲಕ ತಯಾರಿಸುವ ಹಾಲಿಗೆ…

1 day ago

ಅಡಿಕೆಗೆ ಉತ್ತಮ ಬೆಲೆ , ಆದರೂ ಬೆಳೆಗಾರರ ಚಿಂತೆ ಮುಂದುವರಿದಿದೆ – ಕಾರಣವೇನು?

ಅಡಿಕೆ ಧಾರಣೆ ಏರಿಳಿತ ಅಡಿಕೆ ಬೆಳೆಗಾರರನ್ನು ಚಿಂತೆಗೀಡು ಮಾಡುತ್ತಿದೆ. ಇದಕ್ಕೆ ಭಾರತ ಮಾತ್ರವಲ್ಲ…

1 day ago

ಚಂಡಮಾರುತಗಳು ಏಕೆ ಕಡಿಮೆಯಾಗುತ್ತಿವೆ? ಎಲ್ ನಿನೋದಿಂದ ಮಳೆ–ಬಿಸಿಲಿನ ಚಿತ್ರಣ ಬದಲಾಗುತ್ತಿದೆಯೇ?

ವಾಯುಭಾರ ಕುಸಿತಗಳು ಚಂಡಮಾರುತವಾಗಿ ಬಲಗೊಳ್ಳಲು ಸಮುದ್ರದ ಉಷ್ಣತೆ ಮಾತ್ರವಲ್ಲದೆ ತೇವಾಂಶ, ವಿಂಡ್ ಶಿಯರ್…

2 days ago

ಹವಾಮಾನ ವರದಿ | 11-09-2026 | ಸೆ.12ರಿಂದ ಬಿಸಿಲು ಹೆಚ್ಚಳ, ಕೆಲವೆಡೆ ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ ಹಾಗೂ ಮಲೆನಾಡಿನಲ್ಲಿ ಮುಂದಿನ ಕೆಲವು ದಿನ ಬಿಸಿಲಿನ ವಾತಾವರಣ ಹೆಚ್ಚಾಗುವ…

2 days ago