ಮಲ್ಪೆಯಲ್ಲಿ ತೇಲುವ ಸೇತುವೆ…! | ಪ್ರವಾಸಿಗರಿಗೆ ಹೊಸ ಅನುಭವದ ನಿರೀಕ್ಷೆ ಕನಸಾಯಿತು ಈಗ… | ತೇಲುವ ಸೇತುವೆ ತಾತ್ಕಾಲಿಕ ಸ್ಥಗಿತ…!

May 8, 2022
8:34 PM

 ಕಡಲತೀರವನ್ನು ಹೆಚ್ಚು ಆಕರ್ಷಕವಾಗಿಸಲು ಮಲ್ಪೆ ಕಡಲತೀರದಲ್ಲಿ ತೇಲುವ ಸೇತುವೆಯನ್ನು ವಾರದ ಹಿಂದಷ್ಟೇ ನಿರ್ಮಿಸಲಾಗಿದೆ. ಮಲ್ಪೆಯಲ್ಲಿರುವ ಪ್ರವಾಸಿಗರು ಮತ್ತು ಬೀಚ್ ಪ್ರೇಮಿಗಳು ಈಗ ಸಮುದ್ರದ ಅಲೆಗಳ ಮೇಲೆ ನಡೆಯುವ ಅನುಭವವನ್ನು ಇಲ್ಲಿ ಆನಂದಿಸುವ ಕನಸು ತೆರೆಯಲಾಗಿತ್ತು. ಆದರೆ ಉದ್ಘಾಟನೆಗೊಂಡ ಎರಡನೇ ದಿನದಲ್ಲಿ ಸೇತುವೆ ಕಾರ್ಯಚರಣೆ ಸ್ಥಗಿತಗೊಂಡಿದೆ. ಸಮುದ್ರದ ಅಲೆಯ ರಭಸಕ್ಕೆ 80  ಲಕ್ಷ ರೂಪಾಯಿ ವೆಚ್ಚದ ಸೇತುವೆಯ ಕೆಲ ಭಾಗ ಕಳಚಿಕೊಂಡಿದೆ.

Advertisement
Advertisement
Advertisement
Advertisement

ಕೇರಳದ ಬೇಪೋರ್ ಕಡಲತೀರದ ತೇಲುವ ಸೇತುವೆಯ ನಂತರ, ಕರ್ನಾಟಕದಲ್ಲಿ ಅದರಲ್ಲೂ ಉಡುಪಿ ಜಿಲ್ಲೆಯಲ್ಲಿ ತೇಲುವ ಸೇತುವೆಯೊಂದಿಗೆ ಬಂದಿದೆ. ರಾಜ್ಯದಲ್ಲಿ ಈ ರೀತಿಯ ಮೊದಲನೆಯ ಸೇತುವೆ  ಇದಾಗಿದೆ.  100 ಮೀಟರ್ ಉದ್ದ ಮತ್ತು ಮೂರು ಮೀಟರ್ ಅಗಲದ ಸೇತುವೆಯನ್ನು ಸುಲಭವಾಗಿ ಸ್ಥಳಾಂತರಿಸಬಹುದಾಗಿದೆ. ಇದು ಶಾಶ್ವತವಾಗಿ ಜೋಡಿಸಲಾದ ರಚನೆಯಲ್ಲ ಮತ್ತು ಏಕಕಾಲದಲ್ಲಿ 100 ಜನರು ನಡೆದಾಡಬಹುದು. ಸೇತುವೆಯ ಕೊನೆಯಲ್ಲಿ, 12 ಮೀಟರ್ ಉದ್ದ ಮತ್ತು 7.5 ಮೀಟರ್ ಅಗಲದ ಆಯತಾಕಾರದ ವೇದಿಕೆಯನ್ನು ಸಹ ನಿರ್ಮಿಸಲಾಗಿತ್ತು. ಸುರಕ್ಷತಾ ಉದ್ದೇಶಗಳಿಗಾಗಿ ಸೇತುವೆಯ ಬಳಿ ಸುಮಾರು 10 ಜೀವರಕ್ಷಕರನ್ನು ಕೂಡ ಇರಿಸಲಾಗಿತ್ತು. ಸಮುದ್ರದ ಅಲೆಗಳು ಹರಿದಾಗ, ಉಬ್ಬರವಿಳಿತದ ಉಬ್ಬರವಿಳಿತದೊಂದಿಗೆ ಸೇತುವೆಯು ಮೇಲಕ್ಕೆ ಮತ್ತು ಕೆಳಕ್ಕೆ ಇಳಿಯುತ್ತದೆ ಮತ್ತು ಸಮುದ್ರದ ಅಲೆಗಳ ಮೇಲೆ ತೇಲುತ್ತಿರುವ ವಿಶಿಷ್ಟ ಅನುಭವವನ್ನು ನೀಡುತ್ತದೆ.

Advertisement

ಆದರೆ ಈ ವಿಶಿಷ್ಠ ಸೇತುವೆಯು ಉದ್ಘಾಟನೆಗೊಂಡ ಎರಡೇ ದಿನದಲ್ಲಿ  ಅಂದರೆ ಭಾನುವಾರ ಸಂಜೆ ಕಾರ್ಯಾಚರಣೆ ಸ್ಥಗಿತೊಂಡಿದೆ. ಸಮುದ್ರದ ಅಲೆಯ ರಭಸಕ್ಕೆ ತಾಂತ್ರಿಕ ಕಾರಣದಿಂದ ಕಳಚಿಕೊಂಡಿದೆ. ಹೀಗಾಗಿ ಸದ್ಯ ಪ್ರವಾಸಿಗರು ಇದರಲ್ಲಿ  ಓಡಾಟ ನಡೆಸುವಂತಿಲ್ಲ. ಸುಮಾರು 80  ಲಕ್ಷ ರೂಪಾಯಿ ವೆಚ್ಚದಲ್ಲಿ ಈ ಸೇತುವೆ ರಚನೆ ಮಾಡಲಾಗಿತ್ತು. ಕಳೆದ ವಾರ ಶುಕ್ರವಾರ ಸೇತುವೆ ಉದ್ಘಾಟನೆಗೊಂಡಿತ್ತು. ಮೂವರು ಉದ್ಯಮಿಗಳ ಬಂಡವಾಳದಿಂದ ಸೇತುವೆ ನಿರ್ಮಾಣ ಮಾಡಲಾಗಿತ್ತು. ಅಲ್ಲದೇ ಜಿಲ್ಲಾಡಳಿತದ ಅನುಮತಿಯೊಂದಿಗೆ ಉದ್ಯಮಿಗಳಿಂದ ಸೇತುವೆ ನಿರ್ಮಾಣ ಮಾಡಿ ಖಾಸಗಿ ನಿರ್ವಹಣೆಯ ತೇಲುವ ಸೇತುವೆ ಇದೆ. ಥಾಯ್ ಲ್ಯಾಂಡ್ ನಿಂದ 8೦ ಲಕ್ಷ ವೆಚ್ಚದಲ್ಲಿ ಆಮದು ಮಾಡಿಕೊಂಡಿದ್ದ ತೇಲುವ ಸೇತುವೆ ಇದಾಗಿದೆ. ಇದೀಗ ಅಲೆಗಳ ಪ್ರಕ್ಷುಬ್ಧತೆಗೆ ತೇಲುವ ಸೇತುವೆ ಪ್ರತ್ಯೇಕಗೊಂಡಿದೆ.

ಸಮುದ್ರದ ಅಲೆಗಳ ಅಬ್ಬರದಿಂದ ತಾಂತ್ರಿಕ ದೋಷವುಂಟಾಗಿ  ತೇಲುವ ಸೇತುವೆ ಸ್ಥಗಿತಗೊಂಡಿದೆ.ಕಳೆದ ಕೆಲ ದಿನಗಳಿಂದ ರಾಜ್ಯದ ವಿವಿಧ ಭಾಗಗಳಲ್ಲಿ ಮಳೆಯ ಅಬ್ಬರ ಹೆಚ್ಚಿರುವುದರಿಂದ ಸಮುದ್ರದಲ್ಲಿ ಅಲೆಗಳ ಅಬ್ಬರ ಜೋರಾಗಿದೆ. ಅಲೆಗಳ ಅಬ್ಬರಕ್ಕೆ ಸೇತುವೆಯಲ್ಲಿ ತಾಂತ್ರಿಕ ದೋಷ ಕಾಣಿಸಿಕೊಂಡಿದ್ದು, ಸೇತುವೆಗೆ ಅಳವಡಿಸಿರುವ ಬ್ಲಾಕ್‌ಗಳು ಕಿತ್ತುಹೋಗಿವೆ. ನಿನ್ನೆ ಸಂಜೆಯಿಂದ ಸಮುದ್ರದ ಅಲೆಗಳ ಅಬ್ಬರ ಜೋರಾಗಿದ್ದರಿಂದ ಸೇತುವೆಯಲ್ಲಿ ತಾಂತ್ರಿಕ ದೋಷಕಂಡುಬಂದ ಹಿನ್ನಲೆ ನಿರ್ವಹಣೆಯ ದೃಷ್ಟಿಯಿಂದ ತೇಲುವ ಸೇತುವೆ ಕಾರ್ಯ ಸ್ಥಗಿತಗೊಳಿಸಲಾಗಿದೆ ಎಂದು ನಿರ್ವಾಹಕರು ಮಾಹಿತಿ ನೀಡಿದ್ದಾರೆ. ಈ ಸೇತುವೆ ರಾಜ್ಯದಲ್ಲಿಯೇ ಮೊದಲ ಪ್ರಯತ್ನವಾದ್ದರಿಂದ ತಾಂತ್ರಿಕ ದೋಷದ ಬಗ್ಗೆ ಸಾಕಷ್ಟು ಗಮನಹರಿಸಿದರೂ ಸಹಜವಾಗಿಯೇ ಈಗ ಲೋಪ ಕಂಡುಬಂದಿದೆ. ಸದ್ಯದಲ್ಲೇ ಮತ್ತೆ ಚಾಲನೆಗೆ ಬರುವ ನಿರೀಕ್ಷೆ ಇದೆ.

Advertisement

 

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಕೇಂದ್ರ ಬಜೆಟ್‌ | ರೈತರಿಗೆ ಕಿಸಾನ್ ಕಾರ್ಡ್ ನಿಂದ ಪ್ರಯೋಜನ | ಕೃಷಿ ವಲಯಕ್ಕೆ 137757 ಕೋಟಿ ಅನುದಾನ |
February 6, 2025
7:40 AM
by: The Rural Mirror ಸುದ್ದಿಜಾಲ
ಆನೆಗಳ ಚಲನ ವಲನಗಳ ಬಗ್ಗೆ ಸ್ವದೇಶಿ ನಿರ್ಮಿತ ರೇಡಿಯೊ ಕಾಲರ್ ಅಳವಡಿಕೆ | ಅರಣ್ಯ ಸಚಿವ ಈಶ್ವರ್ ಖಂಡ್ರೆ
February 6, 2025
7:33 AM
by: The Rural Mirror ಸುದ್ದಿಜಾಲ
ತುಮಕೂರು ಜಿಲ್ಲೆ | 10 ಬೆಂಬಲ ಬೆಲೆ ಖರೀದಿ ಕೇಂದ್ರಗಳಲ್ಲಿ ನೋಂದಣಿ ಪ್ರಕ್ರಿಯೆ ಆರಂಭ
February 5, 2025
6:45 AM
by: The Rural Mirror ಸುದ್ದಿಜಾಲ
ಮಕ್ಕಳ ಆರೋಗ್ಯ ಮತ್ತು ಭವಿಷ್ಯದ ಹಿತದೃಷ್ಟಿಯಿಂದ  ಬೆಳೆಗಳಿಗೆ ರಾಸಾಯನಿಕ ಬಳಸಬೇಡಿ
February 5, 2025
6:42 AM
by: The Rural Mirror ಸುದ್ದಿಜಾಲ

You cannot copy content of this page - Copyright -The Rural Mirror