The Rural Mirror ವಾರದ ವಿಶೇಷ

ಉಡುಪಿ ಸೀರೆ | ನಾರಿಯರಿಗೆ ಇದು ಇಷ್ಟವಾಗಬೇಕು ಏಕೆ ? | ಸಚಿವೆ ನಿರ್ಮಲಾ ಸೀತಾರಾಮನ್‌ ಪುತ್ರಿ ವಿವಾಹದಲ್ಲಿ ಕಂಡ ಉಡುಪಿ ಸೀರೆ…! |

Share
FacebookFacebookTwitterTwitterWhatsAppWhatsAppLinkedInLinkedInTelegramTelegramMessengerMessengerGmailGmail

ಒಂದು ಕಾಲದ ವೈಭವದಿಂದ ಕಂಗೊಳಿಸುತ್ತಿದ್ದ ಉಡುಪಿ ಸೀರೆ ಈಗ ಮತ್ತೆ ಪುನಶ್ಚೇತನ ಕಾರ್ಯ ಆರಂಭವಾಗಿದೆ.  ಉಡುಪಿ ಮತ್ತು ದ. ಕ ಜಿಲ್ಲೆಗಳಲ್ಲಿ ತಯಾರಾಗುವ ಶುದ್ಧ ಒಂದೆಳೆ ಹತ್ತಿಯ ಕೈ ಮಗ್ಗ ಸೀರೆಗಳನ್ನು “ಉಡುಪಿ ಸೀರೆ” ಎಂದು ಪ್ರಸಿದ್ಧವಾಗುತ್ತಿದೆ. ಮಹಾತ್ಮಾ ಗಾಂಧೀಜಿಯವರಿಂದ ಪ್ರೇರೇಪಿತರಾಗಿ 8 ನೇಕಾರಿಕೆ ಸಂಘಗಳು ಸ್ಥಾಪನೆಯಾಗಿದ್ದವು.  ಇದೀಗ ದಿಕೆ ಟ್ರಸ್ಟ್‌ ಕಳೆದ ಕೆಲವು ಸಮಯಗಳಿಂದ ಉಡುಪಿ ನೇಕಾರಿಕೆ  ಬಗ್ಗೆ ಕೆಲಸ ಮಾಡುತ್ತಿದೆ. ಪುತ್ತೂರಿನ ಬಹುವಚನಂ ಪದ್ಮಿನೀ ಸಭಾಭವನದಲ್ಲಿ ಈ ಬಗ್ಗೆ ವಿಶೇಷ ಉಪನ್ಯಾಸ ನಡೆಯಿತು. 

Advertisement

ಉಡುಪಿ ಸೀರೆಯನ್ನು ವಿಶೇಷ ವಿನ್ಯಾಸದಲ್ಲಿ  ಒಂದೆಳೆಯ ಹತ್ತಿಯ ನೂಲನ್ನು ಬಳಸಿ ನೇಯಲಾಗುತ್ತದೆ. ಈ ಸೀರೆ ತಯಾರಿಯ ವಿಶಿಷ್ಟ ತಂತ್ರಗಾರಿಕೆ ಮತ್ತು ವಿನ್ಯಾಸಕ್ಕಾಗಿ ಉಡುಪಿ ಸೀರೆಗೆ ಭೌ ಗೋಳಿಕ ಭಿನ್ನತೆ ಅಂಕಿತ, GI Tag 2016ರಲ್ಲಿ ಜಿ ಐ ಮಾನ್ಯತೆ ದೊರೆತಿದೆ. ಹೊಸ ವಿನ್ಯಾಸದ ಉಡುಪಿ ಸೀರೆಗಳು ಉಡಲು ಬಹಳ ಆರಾಮದಾಯಕವಾಗಿದ್ದು ಮನ ಸೆಳೆಯುವ ಬಣ್ಣದಿಂದ ಕೂಡಿರುತ್ತದೆ, ಹೀಗಾಗಿ ಈಚೆಗೆ ಉಡುಪಿ ಸೀರೆ ಹೆಚ್ಚು ಗಮನ ಸೆಳೆದಿದೆ. ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ  ಪುತ್ರಿ ವಾಙ್ಮಯಿ ಅವರ ವಿವಾಹ ಸಮಾರಂಭಕ್ಕೆ ಉಡುಪಿ ಅದಮಾರು ಮಠದ ವಿಶ್ವಪ್ರಿಯ ತೀರ್ಥ ಶ್ರೀಪಾದರು ಮತ್ತು ಈಶಪ್ರಿಯ ತೀರ್ಥ ಶ್ರೀಪಾದರು ವಧು ವರರನ್ನು ಹರಸಿ  ಸೀರೆ, ಶಾಲು ಮೂಲಕ  ಹರಸಿದ್ದರು.

ಕದಿಕೆ ಟ್ರಸ್ಟ್‌ ಈ ಉದ್ಯಮ ಉಳಿಯುವುದಕ್ಕೆ , ಉಳಿಸುವುದಕ್ಕೆ ಸತತ ಪ್ರಯತ್ನ ಮಾಡುತ್ತಿದೆ. ಪುತ್ತೂರಿನ ಬಹುವಚನಂ ಪದ್ಮಿನೀ ಸಭಾಭವನದಲ್ಲಿ ಈ ಬಗ್ಗೆ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಕದಿಕೆ ಟ್ರಸ್ಟ್‌ನ ಮಮತಾ ರೈ ಹಾಗೂ ಬಿಸಿ ಶೆಟ್ಟಿ  ಅವರು ಉಡುಪಿ ಸೀರೆ ಹಾಗೂ ಅಲ್ಲಿನ ನೇಕಾರಿಗೆ ಬಗ್ಗೆ ಮಾಹಿತಿ ನೀಡಿದರು. ನೇಕಾರಿಗೆ ಉಳಿಸುವುದು  ಹಾಗೂ ಹೊಸ ತಲೆಮಾರಿನ ಮಂದಿ ಈ ಉದ್ಯೋಗದಲ್ಲಿ ತೊಡಗಿಸಿಕೊಳ್ಳುವ ಸವಾಲುಗಳ ಬಗ್ಗೆ ಮಾಹಿತಿ ನೀಡಿದರು.

ಕದಿಕೆ ಟ್ರಸ್ಟ್, ತಾಳಿಪಾಡಿ ಸಂಘದ ಜೊತೆ ಸೇರಿ ಅನೇಕ ಬಿಟ್ಟು ಹೋದ ನೇಕಾರರು ಮತ್ತೆ ನೇಕಾರಿಕೆಗೆ ಬರುವಂತೆ ಮಾಡಿದೆ. ಟ್ರಸ್ಟ್, ನಬಾರ್ಡ್ ಸಂಸ್ಥೆಯ ನೆರವಿನಿಂದ ನೇಕಾರಿಕಾ ತರಬೇತಿ ಕಾರ್ಯಕ್ರಮಗಳನ್ನು ಯಶಸ್ವಿಯಾಗಿ ನಡೆಸಿದೆ. 2018 ರಲ್ಲಿ ತಾಳಿಪಾಡಿ ಸಂಘದಲ್ಲಿ 8 ಇದ್ದ ನೇಕಾರರ ಸಂಖ್ಯೆ ಈಗ 34ಕ್ಕೆ ಏರಿದೆ. ಎರಡು ಜಿಲ್ಲೆಗಳಲ್ಲಿ 45 ರಷ್ಟು ಇದ್ದ ನೇಕಾರರ ಸಂಖ್ಯೆ 72 ಕ್ಕೆ ಏರಿದೆ.  ಹೊಸ ನೇಕಾರರು ಉಡುಪಿ ಸೀರೆ ನೇಕಾರಿಕೆ ಮುಂದುವರಿಸುವ ಭರವಸೆ ಮೂಡಿಸಿದ್ದಾರೆ ಎಂದು ಅವರು ವಿವರಿಸಿದರು. ( ಆಡಿಯೋ ಇಲ್ಲಿದೆ )

ಉಡುಪಿ ಸೀರೆಯ ವಿನ್ಯಾಸ ಹಾಗೂ ಹವಾಮಾನದ ಎಲ್ಲಾ ಕಾಲದಲ್ಲೂ ಉಪಯುಕ್ತವಾಗಿ ಈ ಉಡುಗೆಯ ಕಡೆಗೆ ನಾರಿಯರು ಹಾಗೂ ಜನರು ಬೆಂಬಲಿಸಬೇಕಿದೆ. ಈ ಉದ್ಯಮ ಬೆಳೆವಣಿಗೆಯ ಕಾರಣದಿಂದ ಪರಿಸರದ ಮೇಲೂ ಧನಾತ್ಮಕ ಪರಿಣಾಮಗಳು ಇದ್ದರೆ, ಗ್ರಾಮೀಣ ಉದ್ಯಮಗಳು ಬೆಳೆಯುತ್ತವೆ, ಉದ್ಯೋಗ ಸೃಷ್ಟಿ ಸಾಧ್ಯವಿದೆ. ಅದರ ಜೊತೆಗೆ ಗ್ರಾಮೀಣ ಆರ್ಥಿಕತೆಯ ಮೂಲಕ ಸ್ವಾವಲಂಬೀ ಬದುಕು ಸಾಧ್ಯವಿದೆ ಎನ್ನುವುದು  ಆಶಯವಾಗಿದೆ.

ಕಾರ್ಯಕ್ರಮದಲ್ಲಿ ಉಪನ್ಯಾಸಕ ಡಾ.ಶ್ರೀಶಕುಮಾರ್‌ ಸ್ವಾಗತಿಸಿದರು. ಐ ಕೆ ಬೊಳುವಾರು ಪ್ರಸ್ತಾವನೆಗೈದರು.

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮುಂಗಾರು ಮೇ 27 ರಂದು ಆರಂಭ | ನಿಗದಿತ ಸಮಯಕ್ಕಿಂತ ಮೊದಲೇ ಮಳೆಗಾಲ ಆರಂಭ | ಕೇರಳದಲ್ಲಿ ಇಂದು ಮಳೆ ಸಾಧ್ಯತೆ |

ಭಾರತದ ಮೇಲೆ ನೈಋತ್ಯ ಮಾನ್ಸೂನ್‌ನ ಆರಂಭದ ದಿನಾಂಕಗಳ ಪ್ರಕಾರ ಸಾಮಾನ್ಯವಾಗಿ ಮೇ.21 ಅಥವಾ…

20 hours ago

ಈ ರಾಶಿಯವರಿಗೆ, ಮುಟ್ಟಿದ್ದೆಲ್ಲ ಚಿನ್ನ ಆ ರಾಶಿಗಳು ಯಾವುದು ತಿಳಿಯೋಣ

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 953515649

20 hours ago

ಆಪರೇಷನ್ ಸಿಂದೂರ್ ಕೇವಲ ಹೆಸರಲ್ಲ, ಅದು ದೇಶದ ಜನರ ಸಾಮೂಹಿಕ ಭಾವನೆ – ಪ್ರಧಾನಿ ನರೇಂದ್ರ ಮೋದಿ

ಭಾರತವು ಭಯೋತ್ಪಾದನೆಯನ್ನು ಸಹಿಸುವುದಿಲ್ಲ, ಪ್ರತಿಕ್ರಿಯಿಸುತ್ತದೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದ್ದಾರೆ.

1 day ago

ಹವಾಮಾನ ವರದಿ | 12-05-2025 | ಇಂದು ರಾಜ್ಯದಾದ್ಯಂತ ಅಲ್ಲಲ್ಲಿ ಮಳೆಯ ಮುನ್ಸೂಚನೆ

ಮುಂಗಾರು ಅವಧಿಗೂ ಮುನ್ನವೇ ಆರಂಭವಾಗುವ ವರದಿಗಳು ಬರುತ್ತಿವೆ. ಈಗಾಗಲೇ ಹಿಂದುಮಹಾಸಾಗರ ಭಾಗದಿಂದ ಅರಬ್ಬಿ…

2 days ago

ಕೃಷಿ ಅಕಾಡೆಮಿ ರಚನೆ – ಮುಳಿಯ ಕೃಷಿ ಗೋಷ್ಟಿಯಲ್ಲಿ ಕೇಶವ ಪ್ರಸಾದ್ ಮುಳಿಯ |

ಕೃಷಿ ಕ್ಷೇತ್ರ ಅಭಿವೃದ್ಧಿಗಾಗಿ ಮುಳಿಯದ ಸಂಸ್ಥೆ ಸಹಯೋಗದಲ್ಲಿ ಕೃಷಿ ಅಕಾಡೆಮಿ ರಚನೆ ಮಾಡುವ…

2 days ago

ರಾಶಿಗಳಿಗೆ ಲಕ್ಷ್ಮಿದೇವಿ ಆಶೀರ್ವಾದದಿಂದ ಅಪಾರ ಸಂಪತ್ತು ಪ್ರಾಪ್ತಿ | ಏನು ಮಾಡ್ಬೇಕು? |

ಹೆಚ್ಚಿನ ಮಾಹಿತಿಗಾಗಿ ರಾಯರ ಪರಮ ಭಕ್ತರದ ಜ್ಯೋತಿಷಿಗಳನ್ನು ಸಂಪರ್ಕಿಸಿ 9535156490

2 days ago