ಕವನ | ಸೋಲೇ ಗೆಲುವಿನ ಮೊದಲ ಮೆಟ್ಟಿಲು

September 12, 2021
10:50 PM
ಸಣ್ಣ ಕಥೆಯನು ನಾನಿಂದು ಹೇಳುವೆ… 
ನಿನ್ನ ಬದುಕಿನ ಕಥೆಯನು ತಿಳಿಸುವೆ…. 
ಕಷ್ಟದಿಂದ ಬದುಕುವ ನೀನು ಗೆದ್ದು ಮುಂದೆ ಬಾ…. 
ನಿನ್ನ ಕಷ್ಟದ ಬಗ್ಗೆ ಇಲ್ಲಿ ಯಾರೂನು ಕೇಳೋದಿಲ್ಲ… 
ನಿನ್ನ ನೋವಿನ ಬದುಕು ಇಲ್ಲಿ ಯಾರಿಗೂ ಬೇಕಾಗಿಲ್ಲ… 
ನಿನ್ನಯ ಬದುಕದು, ನಿನ್ನಯ ಭಾವನೆ ನಿನಗೆ ಮೀಸಲು…
ನಿನ್ನ ಬದುಕಿನ ಭಾವನೆಗಿಲ್ಲಿ ಕಿಂಚಿತ್ತೂ ಬೆಲೆಯೇ ಇಲ್ಲ… 
ನಿನ್ನ ಕಷ್ಟದ ಬದುಕನ್ನಿಲ್ಲಿ ಯಾರೂನೂ ನೋಡೋದಿಲ್ಲ… 
ನಿನ್ನ ಕಷ್ಟಕ್ಕೆ ಸೆಡ್ಡು ಹೊಡೆದು, ಸಾಧನೆಗೆ ಸಲಾಂ ಹೊಡೆದು… 
ಪ್ರತಿಯೊಂದು ಹೆಜ್ಜೆಯಲ್ಲೂ ಗೆಲುವಿನ ಮಂತ್ರವ ಪಠಿಸಿ…
ಮುಂದೆ ನುಗ್ಗಿ ಎದ್ದು ಬಿದ್ದು ಬದುಕಲಿ ಗೆದ್ದು ಬಾ…
ನಿನ್ನ ಬದುಕಿನ ಓಟದಲ್ಲಿ ಸೋಲಿನ ಭಯವು ಇರಲಿ, ಗೆಲುವಿನ ಛಲವು ಇರಲಿ… 
ಸೋಲೇ ಗೆಲುವಿನ ಮೊದಲ ಮೆಟ್ಟಿಲು ಮಾತು ನೆನಪಿರಲಿ… 
ಆ ಸೂರ್ಯನ ಕಿರಣದಂತೆ ನಿನ್ನ ಬದುಕು ಬೆಳಕಾಗಿರಲಿ… 
ಚಂದ್ರನ ನೆರಳಿನಂತೆ ನಿನ್ನ ಬದುಕು ನೆರಳಾಗಿರಲಿ… 
ಸಾಧಿಸುವ ಪ್ರತಿಯೊಂದು ಯುವ ಮನಸಿಗೆ… 
ಬದುಕಲಿ ಸಾಧಿಸುವ ಪ್ರತಿಯೊಂದು ಯುವ ಮನಸಿಗೆ…
✍ಉಲ್ಲಾಸ್ ಕಜ್ಜೋಡಿ
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಮಾತು ವ್ಯಕ್ತಿತ್ವವನ್ನು ತೋರಿಸುತ್ತದೆ, ಮೌನ ಅದನ್ನು ಎತ್ತುತ್ತದೆ..!
June 21, 2026
3:51 PM
by: ಕುಮಾರಸುಬ್ರಹ್ಮಣ್ಯ ಮುಳಿಯಾಲ
ಹಲಸಿನ ಕಾಯಿ ತಂಬುಳಿ – ಊಟಕ್ಕೆ ತಂಪು ನೀಡುವ ಸಾಂಪ್ರದಾಯಿಕ ಸವಿರುಚಿ
June 20, 2026
10:01 AM
by: ದಿವ್ಯ ಮಹೇಶ್
ಎಳೆಅಡಿಕೆ ಮಾತ್ರವಲ್ಲ, ಬಲಿತ ಅಡಿಕೆಯೂ ಒಡೆದು ಬೀಳುತ್ತಿದೆ…! ಕಾರಣ ಏನು?
June 13, 2026
1:49 PM
by: ಮಹೇಶ್ ಪುಚ್ಚಪ್ಪಾಡಿ
ಸುಲಭವಾಗಿ ಮಾಡಿ ರುಚಿಕರ ಹಲಸಿನ ಕಾಯಿ ಚಟ್ನಿ – ಬಿಸಿ ಅನ್ನಕ್ಕೆ ಸೂಪರ್ ಕಾಂಬಿನೇಷನ್!
June 11, 2026
6:47 AM
by: ದಿವ್ಯ ಮಹೇಶ್

You cannot copy content of this page - Copyright -The Rural Mirror