ಕವನ | ಸೋಲೇ ಗೆಲುವಿನ ಮೊದಲ ಮೆಟ್ಟಿಲು

September 12, 2021
10:50 PM
ಸಣ್ಣ ಕಥೆಯನು ನಾನಿಂದು ಹೇಳುವೆ… 
ನಿನ್ನ ಬದುಕಿನ ಕಥೆಯನು ತಿಳಿಸುವೆ…. 
ಕಷ್ಟದಿಂದ ಬದುಕುವ ನೀನು ಗೆದ್ದು ಮುಂದೆ ಬಾ…. 
ನಿನ್ನ ಕಷ್ಟದ ಬಗ್ಗೆ ಇಲ್ಲಿ ಯಾರೂನು ಕೇಳೋದಿಲ್ಲ… 
ನಿನ್ನ ನೋವಿನ ಬದುಕು ಇಲ್ಲಿ ಯಾರಿಗೂ ಬೇಕಾಗಿಲ್ಲ… 
ನಿನ್ನಯ ಬದುಕದು, ನಿನ್ನಯ ಭಾವನೆ ನಿನಗೆ ಮೀಸಲು…
ನಿನ್ನ ಬದುಕಿನ ಭಾವನೆಗಿಲ್ಲಿ ಕಿಂಚಿತ್ತೂ ಬೆಲೆಯೇ ಇಲ್ಲ… 
ನಿನ್ನ ಕಷ್ಟದ ಬದುಕನ್ನಿಲ್ಲಿ ಯಾರೂನೂ ನೋಡೋದಿಲ್ಲ… 
ನಿನ್ನ ಕಷ್ಟಕ್ಕೆ ಸೆಡ್ಡು ಹೊಡೆದು, ಸಾಧನೆಗೆ ಸಲಾಂ ಹೊಡೆದು… 
ಪ್ರತಿಯೊಂದು ಹೆಜ್ಜೆಯಲ್ಲೂ ಗೆಲುವಿನ ಮಂತ್ರವ ಪಠಿಸಿ…
ಮುಂದೆ ನುಗ್ಗಿ ಎದ್ದು ಬಿದ್ದು ಬದುಕಲಿ ಗೆದ್ದು ಬಾ…
ನಿನ್ನ ಬದುಕಿನ ಓಟದಲ್ಲಿ ಸೋಲಿನ ಭಯವು ಇರಲಿ, ಗೆಲುವಿನ ಛಲವು ಇರಲಿ… 
ಸೋಲೇ ಗೆಲುವಿನ ಮೊದಲ ಮೆಟ್ಟಿಲು ಮಾತು ನೆನಪಿರಲಿ… 
ಆ ಸೂರ್ಯನ ಕಿರಣದಂತೆ ನಿನ್ನ ಬದುಕು ಬೆಳಕಾಗಿರಲಿ… 
ಚಂದ್ರನ ನೆರಳಿನಂತೆ ನಿನ್ನ ಬದುಕು ನೆರಳಾಗಿರಲಿ… 
ಸಾಧಿಸುವ ಪ್ರತಿಯೊಂದು ಯುವ ಮನಸಿಗೆ… 
ಬದುಕಲಿ ಸಾಧಿಸುವ ಪ್ರತಿಯೊಂದು ಯುವ ಮನಸಿಗೆ…
✍ಉಲ್ಲಾಸ್ ಕಜ್ಜೋಡಿ
Advertisement
Advertisement

Advertisement
Advertisement
Advertisement

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಮಿರರ್‌ ಡೆಸ್ಕ್‌

ಮಿರರ್‌ ಡೆಸ್ಕ್ -  ಮಿರರ್ ನ್ಯೂಸ್‌ ನೆಟ್ವರ್ಕ್‌

ಇದನ್ನೂ ಓದಿ

ಚುನಾವಣೆ ಹಾಗೂ “ನೀತಿ” ಸಂಹಿತೆ ಮತ್ತು ಜಗಳ…! |
April 18, 2024
3:00 PM
by: ಮಹೇಶ್ ಪುಚ್ಚಪ್ಪಾಡಿ
ದೇವರು ಧರ್ಮ ಭಕ್ತಿ ಒಂದು ಒಣ ಆಡಂಬರವಲ್ಲ, ಅದು ನಮ್ಮ ಆತ್ಮಸಾಕ್ಷಿಯ ನಡವಳಿಕೆ | ರಾಮನವಮಿ ಪ್ರಯುಕ್ತ ಬರೆಯುತ್ತಾರೆ ವಿವೇಕಾನಂದ. ಎಚ್. ಕೆ.
April 17, 2024
4:37 PM
by: ವಿವೇಕಾನಂದ ಎಚ್‌ ಕೆ
ಅಡಿಕೆ ತೋಟಕ್ಕೆ ಉದಿ ಏಕೆ ಹಾಕಬೇಕು…?
April 15, 2024
7:55 PM
by: ಪ್ರಬಂಧ ಅಂಬುತೀರ್ಥ
ಬಾಬಾಸಾಹೇಬರನ್ನು ನೆನೆಯುತ್ತಾ…… ಸಂವಿಧಾನ, ಬಾಬಾ ಸಾಹೇಬ್ ನೀಡಿದ ನೆರಳು
April 13, 2024
4:36 PM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror