Advertisement
ರಾಜ್ಯ

ಹಸಿದ ಹೊಟ್ಟೆಗೆ ಆಸರೆಯಾಗಿˌ ಎಲ್ಲರಿಗೂ ಮಾದರಿಯಾದ ತಂಡ ಇದು…!

Share
ಕೊರೋನಾ ಮಹಾಮಾರಿ ದೇಶವನ್ನೇ ತಲ್ಲಣಿಸಿತು. ಅದು ನಗರ-ಗ್ರಾಮೀಣ ಎಂಬ ಯಾವ ಬೇಧವನ್ನೂ ಮಾಡದೆ ಎಲ್ಲೆಡೆ ಸಂಕಟ ತಂದೊಡ್ಡಿತು. ಅದು ಕರಾವಳಿಯನ್ನೂ ಬಿಡಲಿಲ್ಲ.  ಕರಾವಳಿಯಲ್ಲೂ ಅನೇಕರು ಜನರು ಸಂಕಷ್ಟದಲ್ಲಿ ಇದ್ದರು, ಈಗಲೂ ಇದ್ದಾರೆ.  ಈ ಸಮಯದಲ್ಲಿ ಒಂದು ದಿನದ ಊಟಕ್ಕೂ ತೀರಾ ಸಮಸ್ಯೆ ಇರೋ ಕೆಲವು ಮನೆಗಳನ್ನು ಗುರುತಿಸಿ ಅವರಿಗೆ ಒಂದಷ್ಟು ಆಹಾರ ಕಿಟ್‌ ನೀಡಬೇಕು ಎಂಬ ಮನೋಭಾವದಿಂದ  ಮಂಗಳೂರಿನ ವಿವೇಕ್  ಹಾಗೂ ಸ್ನೇಹಿತರು  ಜೊತೆಗೂಡಿ  ಹಸಿದವರಿಗೆ ತಮ್ಮಿಂದ ಅದಷ್ಟು ಸಹಾಯ ಮಾಡಬೇಕೆಂದು  ನಿರ್ಧರಿಸಿ ಸದ್ದಿಲ್ಲದೆ ಕೆಲಸ ಮಾಡಿದರು. ಆದರೆ ಅವರು ಆರಿಸಿಕೊಂಡದ್ದು ಗ್ರಾಮೀಣ ಭಾಗವನ್ನು.
ಆರಂಭದಲ್ಲಿ ಕಾಡಿನ ಒಳಭಾಗದ ಸ್ಥಳಗಳಲ್ಲಿ ವಾಸಿಸುವ  ಐವತ್ತು ಮನೆಗಳ ಲೆಕ್ಕಾಚಾರ ಮಾಡಿ  ದಿನಕಳೆದಂತೆ 475 ಮನೆಗಳಿಗೆ ಸಹಾಯ ನೀಡುವಲ್ಲಿ  ತಂಡ   ಯಶಸ್ವಿಯಾಯಿತು.ಸುಮಾರು ಐದಿನೈದು ಕೆ.ಜಿ ಅಕ್ಕಿ, ಕೆಲವು ಕಡೆ ಇಪತ್ತು ಹಾಗು ಇಪತೈದು ಕೆ.ಜಿ ಅಕ್ಕಿ, ಇದರ ಜೊತೆಗೆ  ಇತರ ಹನ್ನೆರೆಡು ಆಹಾರ ಪದಾರ್ಥಗಳ ಕಿಟ್ ನ್ನು  ಸಿದ್ದಪಡಿಸಿ ಬಡಕುಟುಂಬಗಳಿಗೆ ತಲುಪಿಸಬೇಕೆಂಬುದು ತಂಡದ ಮುಖ್ಯ ಉದ್ದೇಶವಾಗಿತ್ತು. ಕೆಲಸವಿಲ್ಲದೆ ತೀರಾ ಸಮಸ್ಯೆ ಅನುಭವಿಸುತ್ತಿರುವ ಅಥವಾ ದೈಹಿಕ ಸಮಸ್ಯೆಯಿಂದ ದುಡಿಯಲು ಅನಾನುಕೂಲವಾಗಿರುವ ಮನೆಗಳಿಗೆ  ಕಿಟ್ ತಲುಪಿರುವವುದು ನಿಜಕೂ ತೃಪ್ತಿದಾಯಕವಾದ ವಿಷಯ ಎಂದು ಹೇಳುತ್ತಾರೆ ವಿವೇಕ್.
ವಿವೇಕ್‌
ಎರಡು  ತಿಂಗಳ ಅವಧಿಯಲ್ಲಿ ಇರಾ ಗ್ರಾಮದ 20 ಮನೆಗಳಿಗೆ  ವಿವೇಕ್ ಸ್ನೇಹಿತರಾದ ,ಸ್ನೇಕ್ ಕಿರಣ್ ,ಅಪುಲ್ ಆಳ್ವ ಅವರ ಜೊತೆಗೆ ಆರಂಭಿಸಿದ ಈ ಕೆಲಸ  ದಿನ ಕಳೆದಂತೆ ತವರು ಜಿಲ್ಲೆ ಬಿಟ್ಟು ಪಕ್ಕದ ಜಿಲ್ಲೆಗಳಲ್ಲಿ ಕಿಟ್ ತಲುಪಿಸುವ ಕಾರ್ಯ ಭರದಿಂದ ಸಾಗುತ್ತಲ್ಲಿತ್ತು. ಕೆಲವು ದ್ವೀಪ ಪ್ರದೇಶಗಳಿಗೆ ದೋಣಿ ಮೂಲಕ ತೆರಳಿ ಆಹಾರ ಸಾಮಗ್ರಿಗಳನ್ನು, ಕಾಡಿನ ನಡುವೆಯು 4 ಕಿ.ಮೀ ದೂರ ನಡೆದುಕೊಂಡು ಹೋಗಿ ತಲುಪಿಸಿ ಕಬ್ಬಿನಾಲೆ ಎಂಬ ಕಾಡಿನ ನಡುವೆ ಮೂಲಭೂತ ಸೌಕರ್ಯ ವಂಚಿತ ಮಲೆಕುಡಿಯ ಸಮುದಾಯದ ಇಪತ್ತು ಮನೆಗಳಿಗೆ ನಡೆದುಕೊಂಡು ಹೋಗಿ ಆಹಾರ ಸಾಮಗ್ರಿ ಕೊಡುವಾಗ ಅವರ ಮುಖದಲ್ಲಿ ನಗು ಕಂಡ ಖುಷಿ ತಂಡಕೆ ತೃಪ್ತಿ ನೀಡಿದೆ ಎಂದು ಹೇಳುತ್ತಾರೆ ವಿವೇಕ್.‌
ಈ ತಂಡ ಕಿಟ್ ನೀಡಿದ ಮಾಹಿತಿ ತಿಳಿದು, ಊರ ಕೆಲವು ವ್ಯಕ್ತಿಗಳು ಜಾತಿ, ಧರ್ಮ,ಎಲ್ಲವನ್ನ ಬದಿಗೊತ್ತಿ ಯಾವುದೇ ಬೇದಭಾವವಿಲ್ಲದೆ  ಮೊತ್ತದ ಧನ ಸಹಾಯ ಮಾಡಿ ಬೆಂಬಲಿಸುವ ಮೂಲಕ  ಐನೂರು ಮನೆಗಳಿಗೆ ಕಿಟ್ ಕೊಡುವಲ್ಲಿ ಯಶಸ್ವಿಯಾಗಿ ಮುಂದುವರೆಯಿತು . ನಮ್ಮರಾಜ್ಯದ ದೇಶದ, ಹೊರ ರಾಷ್ಟ್ರಗಳಲ್ಲಿ ಕೆಲಸ ಮಾಡುವಂತಹ ಮಂದಿಯೂ ಕೂಡ ತಂಡದ  ಜೊತೆ ಕೈ ಜೋಡಿಸಿದ್ದಾರೆ.
ಇಷ್ಟು ಮಾತ್ರವಲ್ಲದೆ ಬೀದಿಬದಿ ಆಹಾರವಿಲ್ಲದೆ ಸಂಕಷ್ಟದಲ್ಲಿದ ಶ್ವಾನಗಳಿಗೆ,ಹದ್ದು,ಪಾರಿವಾಳ,ಕಾಗೆ ಇತರ ಪ್ರಾಣಿಗಳಿಗೂ ಹಸಿವು ನೀಗಿಸುವ ಕಾರ್ಯ ಕೂಡ ಮಾಡುವಲ್ಲಿ ಮೂಕ ಪ್ರಾಣಿಗಳ ಹಸಿವು ನೀಗಿಸಿ  ಮಾನವೀಯತೆ ಎಂಬ ಪದಕ್ಕೆ ಜೀವ ತುಂಬುವಲ್ಲಿ ಈ ತಂಡ ಸಾಕ್ಷಿಯಾಗಿದೆ .
ಈ  ಸೇವೆಯಲ್ಲಿ ಬೆನ್ನೆಲುಬಾಗಿ ಸಹಕಾರ ನೀಡಿದ ದಿನೇಶ್ ಹೊಳ್ಳ, ಶಿವಾನಿ ಮಂಗಳೂರು,   ಕ್ರಿಸ್ಟಿ ,ವಿಕ್ಟೋರಿಯ ಟೀಚರ್ ,ಸುಕನ್ಯಾ ಎನ್ ಆರ್, ಸೂರಜ್ ಮಂಗಳೂರು   ,ಅವಿನಾಶ್ ಶಿಶಿಲ, ಸಚಿನ್ ಮುಂಡಾಜೆ, ರಾಜು ಅರಣ್ಯ ಇಲಾಖೆ, ಅಜಯ್, ರಾಕೇಶ್ ಪ್ರತ್ಯಕ್ಷವಾಗಿ ಪರೋಕ್ಷವಾಗಿ ಸಹಕರಿಸಿದ್ದರು ಎಂದು ಹೇಳುತ್ತಾರೆ ವಿವೇಕ್.‌
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಕೇರಳದಲ್ಲಿ ಭಾರಿ ಮಳೆ ಆರ್ಭಟ : ಮಲಪ್ಪುರಂನಲ್ಲಿ ಸರಣಿ ಭೂಕುಸಿತ , ಸಂಚಾರ ಸಂಪೂರ್ಣ ಸ್ಥಗಿತ

ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ಭಾರಿ ಮಳೆಯಿಂದ ರಾಜ್ಯ ಹೆದ್ದಾರಿಯಲ್ಲಿ ಭೂಕುಸಿತ ಸಂಭವಿಸಿ ವಾಹನ…

1 hour ago

ಆಕೆ ಏಕೆ ತನ್ನ ನೋವನ್ನು ಯಾರಿಗೂ ಹೇಳುವುದಿಲ್ಲ..?

ಕುಟುಂಬದ ನೆಮ್ಮದಿಗಾಗಿ ತನ್ನ ನೋವನ್ನೂ ಮರೆಮಾಚುವ ಅಮ್ಮಂದಿರ ಮೌನ ತ್ಯಾಗವನ್ನು 'ತಿರುವು' ಅಂಕಣ…

4 hours ago

ಹಿಂದೂ ಮಹಾಸಾಗರದ ಹವಾಮಾನದಲ್ಲಿ ಹಠಾತ್ ಬದಲಾವಣೆ – ಮತ್ತೆ ಮಹಾಮಳೆಗೆ ಕಾರಣವಾಗುತ್ತಿದೆಯೇ?

ಹಿಂದೂ ಮಹಾಸಾಗರದ ಹವಾಮಾನ ಬದಲಾವಣೆ ಹಾಗೂ ಸಕಾರಾತ್ಮಕ IOD ಪರಿಣಾಮದಿಂದ ಕರ್ನಾಟಕದಲ್ಲಿ ಮುಂಗಾರು…

7 hours ago

ರಾಜ್ಯದಲ್ಲಿ ಭಾರೀ ಮಳೆ ಆರ್ಭಟ – ಕೆಲವು ಜಿಲ್ಲೆಗಳಲ್ಲಿ ಇಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ

ರಾಜ್ಯದ ಹಲವೆಡೆ ಭಾರೀ ಮಳೆಯ ಹಿನ್ನೆಲೆಯಲ್ಲಿ ಕೆಲವು ಜಿಲ್ಲೆಗಳಲ್ಲಿ ಶಾಲೆ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ.…

12 hours ago

ಆಹಾರ-ನಿದ್ರೆ ಪರಸ್ಪರ ಪೂರಕ; ಉತ್ತಮ ನಿದ್ರೆಗೆ ಹಸಿವು ಅಗತ್ಯ: ರಾಘವೇಶ್ವರ ಶ್ರೀ

ಉತ್ತಮ ಆರೋಗ್ಯಕ್ಕೆ ಸರಿಯಾದ ಆಹಾರ ಮತ್ತು ನಿದ್ರೆ ಎರಡೂ ಅವಿಭಾಜ್ಯ ಎಂದು ಶ್ರೀ…

21 hours ago