Advertisement
ಅಂಕಣ

ಮತ್ತೊಮ್ಮೆ ನಾವು ಬದುಕಿನ ಶೈಲಿಯ ಆತ್ಮ ವಿಮರ್ಶೆಗೆ ಒಳಪಡಿಸಬೇಕಾಗಿದೆ ಎನ್ನುತ್ತಾರೆ ವಿವೇಕಾನಂದ ಎಚ್‌ ಕೆ |

Share

ಸುಮಾರು ನೂರು ವರುಷಗಳು ಉರುಳಿವೆ. 7 ಮಿಲಿಯನ್ ನಾಗರಿಕರು, 10 ಮಿಲಿಯನ್ ಸೈನಿಕರು ಸತ್ತು ಅಥವಾ ಕೊಲೆಯಾಗಿ ಮತ್ತು 37 ಮಿಲಿಯನ್ ಜನರು ಗಾಯಾಳುಗಳಾಗಿ……., ಅದೇ ಮೊದಲನೇ ಮಹಾಯುದ್ಧದ ಅಂತ್ಯ ಮತ್ತು ಎರಡನೇ ಮಹಾಯುದ್ಧದ ಅಡಿಗಲ್ಲು.

Advertisement
Advertisement

ಬಹುಶಃ ಈಗಿನ ವಿಶ್ವ ಜನಸಂಖ್ಯೆಯ ಸುಮಾರು ಶೇಕಡಾ 30% / 35 % ರಷ್ಟು ಇದ್ದ ದಿನಗಳಲ್ಲೇ ಇಷ್ಟೊಂದು ಸಾವು ನೋವುಗಳು, ಅತ್ಯಂತ ಭೀಕರ ಮತ್ತು ಮನುಷ್ಯ ಪ್ರಾಣಿಯ ಅಜ್ಞಾನಕ್ಕೆ ಉದಾಹರಣೆ. ಇದು ನಡೆದು ಸುಮಾರು 25  ವರ್ಷಗಳ ನಂತರ ಮತ್ತೊಂದು ಮಹಾಯುದ್ಧ ಆಗಿ ಇನ್ನೂ ಹೆಚ್ಚಿನ ಅನಾಹುತಗಳು ಸಂಭವಿಸಿದವು. ಹಿರೋಷಿಮಾ ಮತ್ತು ನಾಗಸಾಕಿಯ ಅಣುಬಾಂಬಿನ ಹತ್ಯೆಗಳು ಇದರಲ್ಲಿ ಸೇರಿದೆ.

Advertisement

ಅಲ್ಲಿಂದ ಈ ಕ್ಷಣ 2021 ರ ನವೆಂಬರ್ ವರೆಗೆ ಮಹಾಯುದ್ಧ ನಡೆದಿಲ್ಲವಾದರೂ ಅದಕ್ಕಿಂತ ಹೆಚ್ಚಿನ ದ್ವಿರಾಷ್ಟ್ರ ಯುದ್ಧ ಮತ್ತು ಭಯೋತ್ಪಾದನೆಯಿಂದ ಜನರು ಸಾಯುತ್ತಿದ್ದಾರೆ.

ಭೂಕಂಪ ಸುನಾಮಿ ಜ್ವಾಲಾಮುಖಿ ಕಾಡ್ಗಿಚ್ಚು ಚಂಡಮಾರುತ ಮುಂತಾದ ನೈಸರ್ಗಿಕ ವಿಕೋಪದಿಂದ ಜೀವಿಗಳು ಸತ್ತರೆ ಅದು ಪ್ರಕೃತಿಯ ನಿರ್ಧಾರ. ಖಾಯಿಲೆ ಅಪಘಾತ ಆತ್ಮಹತ್ಯೆ ಮುಂತಾದ ಕಾರಣಗಳಿಂದ ಸತ್ತರೆ ಅದು ಆಕಸ್ಮಿಕ, ನಿರ್ಲಕ್ಷ್ಯ , ದುರಾದೃಷ್ಟ ಎನ್ನಬಹುದು.

Advertisement

ಆದರೆ ಈ ಯುದ್ಧ ಮತ್ತು ಭಯೋತ್ಪಾದನೆ ಇದೆಯಲ್ಲ ಇದು ಮನುಷ್ಯನ ಅಜ್ಞಾನ ದುರಾಸೆ ದುರಹಂಕಾರ ಮತ್ತು ರಾಕ್ಷಸೀ ಪ್ರವೃತ್ತಿಯ ಸ್ವಯಂಕೃತ ಅಪರಾಧ.

ಜಾಗಕ್ಕಾಗಿಯೋ, ಧರ್ಮಕ್ಕಾಗಿಯೋ, ದ್ವೇಷಕ್ಕಾಗಿಯೋ, ಮಾಡುವ ಯುದ್ದಗಳು ಯಾವ ಕಾರಣಕ್ಕೂ ಸಮರ್ಥನೀಯವಲ್ಲ. ಭಯೋತ್ಪಾದನೆಯಂತೂ ಇನ್ನೂ ಅಸಹ್ಯ.

Advertisement

ಹಿಟ್ಲರ್, ಸದ್ದಾಂ ಹುಸೇನ್‌, ಬಿನ್ ಲಾಡೆನ್, ಇದಿ ಅಮೀನ್ ಮುಂತಾದವರ ಕ್ರೌರ್ಯ ಮತ್ತು ಅಜ್ಞಾನಕ್ಕೆ ಬಲಿಯಾದವರು ಕೋಟಿಗಳ ಲೆಕ್ಕದಲ್ಲಿದ್ದಾರೆ.

ಭಾರತ – ಪಾಕಿಸ್ತಾನ,
ಇರಾನ್ – ಇರಾಕ್,
ಅಮೆರಿಕ – ವಿಯೆಟ್ನಾಂ,
ಚೀನಾ – ಭಾರತ,
ಅಮೆರಿಕಾ – ಇರಾಕ್,
ಅಮೆರಿಕಾ – ಆಪ್ಘಾನಿಸ್ತಾನ,
ಆಫ್ರಿಕಾದ ದೇಶಗಳು, ಕೋರಿಯನ್ ಯುದ್ಧ , ಸಿರಿಯಾದ ಆಂತರಿಕ ಕಲಹ ಹೀಗೆ ಆಧುನಿಕ ಕಾಲದಲ್ಲಿ ಸಹ ಯುದ್ದಗಳು ನಿರಂತರವಾಗಿ ನಡೆಯುತ್ತಲೇ ಇದೆ.

Advertisement

ಈಗಲೂ ಮೂರನೇ ಮಹಾಯುದ್ಧದ ಆ ಭಯ ಎಲ್ಲರನ್ನೂ ಕಾಡುತ್ತಲೇ ಇದೆ. ಶಸ್ತ್ರಾಸ್ತ್ರಗಳ ತಯಾರಿಕೆ ಮತ್ತು ಮಾರಾಟ ವಿಶ್ವದ ಬಹುದೊಡ್ಡ ವ್ಯಾಪಾರಗಳಲ್ಲಿ ಒಂದಾಗಿ ಮುನ್ನಡೆಯುತ್ತಿದೆ.

ಜನ ಸಾಮಾನ್ಯರಾದ ನಮ್ಮ ಅಭಿಪ್ರಾಯ ‌ಈ ವಿಷಯದಲ್ಲಿ ಹೆಚ್ಚಿನ ಪ್ರಾಮುಖ್ಯತೆ ಪಡೆಯುವುದಿಲ್ಲ. ವಿಕೃತ ಮನಸ್ಸುಗಳ ಮತ್ತು ಶಸ್ತ್ರಾಸ್ತ್ರ ವ್ಯಾಪಾರಿಗಳ ಕಿರಾತಕ ಮನಸ್ಥಿತಿ ಮತ್ತು ಮಹತ್ವಾಕಾಂಕ್ಷೆಯೇ ಯುದ್ದದ ಮೂಲ ಕಾರಣ.

Advertisement

ಆಂತರಿಕವಾಗಿ ನಾವು ಎಷ್ಟೇ ನಾಗರಿಕ ಪ್ರಜ್ಞೆ ಬೆಳೆಸಿಕೊಂಡರೂ ಒಂದೇ ಒಂದು ಮಹಾಯುದ್ಧ ಇಡೀ ವಿಶ್ವವನ್ನೇ ನಾಶಪಡಿಸುವುದು.ಇತಿಹಾಸದಿಂದ ನಾವು ಕಲಿಯಬೇಕಾದ ಪಾಠ ಇನ್ನೂ ಸಾಕಷ್ಟಿದೆ.

ಕೊರೋನಾ ನಂತರದ ಬದುಕು, ಪುನೀತ್ ರಾಜ್‍ಕುಮಾರ್ ಅನಿರೀಕ್ಷಿತ ಸಾವು, ಈ ಕ್ಷಣದ ಮಳೆಯೆಂಬ ಪ್ರಕೃತಿಯ ಮುನಿಸು,
ಇದೆಲ್ಲದರ ಪರಿಣಾಮ ಆರ್ಥಿಕ ಕುಸಿತ ಬಹುತೇಕ ಸಾಮಾನ್ಯ ಜನರ ಜೀವನೋತ್ಸಾಹವನ್ನೇ ಕುಸಿಯುವಂತೆ ಮಾಡಿದೆ.

Advertisement

ಇದು ವ್ಯಕ್ತಿಗತವಾಗಿರದೆ ಸಾಮೂಹಿಕ ಮನಸ್ಥಿತಿ ನಿರ್ಮಾಣವಾಗಿದೆ. ಇದರಿಂದ ಹೊರಬರಲು ಮತ್ತೊಮ್ಮೆ ನಾವು ಬದುಕಿನ ಶೈಲಿಯ – ಆಡಳಿತ ವ್ಯವಸ್ಥೆಯ – ಮಾನಸಿಕ ದೃಷ್ಟಿಕೋನ ಎಲ್ಲವನ್ನೂ ಆತ್ಮ ವಿಮರ್ಶೆಗೆ ಒಳಪಡಿಸಬೇಕಾಗಿದೆ.

# ವಿವೇಕಾನಂದ ಎಚ್‌ ಕೆ

Advertisement
Advertisement
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ವಿವೇಕಾನಂದ ಎಚ್‌ ಕೆ

ಸಾಮಾಜಿಕ ಕಾರ್ಯಕರ್ತ ( ಪ್ರಬುದ್ಧ ಮನಸ್ಸು, ಪ್ರಬುದ್ಧ ಸಮಾಜ,ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ ಮನಸ್ಸುಗಳ ಅಂತರಂಗದ ಚಳವಳಿಯನ್ನು  ಜ್ಞಾನ ಭಿಕ್ಷಾ ಪಾದಯಾತ್ರೆಯ ಮೂಲಕ ನಡೆಸುತ್ತಿರುವ ಸಾಮಾಜಿಕ ಕಾರ್ಯಕರ್ತ)

Published by
ವಿವೇಕಾನಂದ ಎಚ್‌ ಕೆ

Recent Posts

ಸುಸ್ಥಿರ ಕೃಷಿ ತರಬೇತಿ ಕಾರ್ಯಗಾರ | ಯುವ ಕೃಷಿಕರಿಗೆ ಕೃಷಿ ಬಗ್ಗೆ ಮಾಹಿತಿ

ಮೂರು ದಿನಗಳ 'ಸುಸ್ಥಿರ ಕೃಷಿ ತರಬೇತಿ'(Sustainable Agriculture Training) ಕಾರ್ಯಾಗಾರ ಮೇ.28 ರಿಂದ…

15 hours ago

ಕೆರೆಯಲ್ಲಿ ಸಾಕಿದ್ದ ಮೀನುಗಳ ಮಾರಣಹೋಮ | ಬೃಹತ್‌ ಗಾತ್ರ ಮೀನು ಸಾವು | ಅಪಾರ ನಷ್ಟ |

ದಾವಣಗೆರೆ(Davanagere) ತಾಲೂಕಿನ ಬೇತೂರು ಗ್ರಾಮದಲ್ಲಿರುವ  ಕೆರೆಯಲ್ಲಿ(Lake) ಮೀನುಗಳ(Fish) ಮಾರಣಹೋಮವಾಗಿದೆ(Dead). ಈ ಕೆರೆಯಲ್ಲಿ 3…

16 hours ago

ಮೇ 31ಕ್ಕೆ ದೇಶದಲ್ಲಿ ಮುಂಗಾರು ಪ್ರವೇಶ ಸಾಧ್ಯತೆ | ಜೂನ್ ಮೊದಲ ವಾರದಲ್ಲಿ ರಾಜ್ಯಕ್ಕೆ ಮುಂಗಾರು ಮಳೆ |

ಮೇ 31ರಿಂದ ದೇಶದಲ್ಲಿ ಮುಂಗಾರು ಮಳೆ ಆರಂಭವಾಗುವ ನಿರೀಕ್ಷೆಯಿದೆ ಎಂದು ಹವಾಮಾನ ಇಲಾಖೆ…

16 hours ago

ಭಾರತ ಚಂದ್ರನಂಗಳದಲ್ಲಿದೆ | ನಮ್ಮ ಮಕ್ಕಳು ಚರಂಡಿಯಲ್ಲಿ ಬಿದ್ದು ಸಾಯುತ್ತಿದ್ದಾರೆ | ಪಾಕ್ ಸಂಸದ ಪಾಕ್‌ ಆಡಳಿತ ವಿರುದ್ಧ ಕಿಡಿ

ಭಾರತ (India) ಚಂದ್ರನನ್ನು(Moon) ತಲುಪಿದೆ. ಆದರೆ ನಮ್ಮ ಮಕ್ಕಳು(Children) ಇಲ್ಲಿ ಚರಂಡಿಯಲ್ಲಿ ಬಿದ್ದು…

16 hours ago

ಎರಡನೇ ವರ್ಷದ ಆನೆ ಗಣತಿಗೆ ದಕ್ಷಿಣ ಭಾರತದ 4 ರಾಜ್ಯಗಳು ಸಜ್ಜು | ಆನೆಗಳ ಸಂಖ್ಯೆ ಹೆಚ್ಚಳವಾಗಿದೆಯೇ..?

ಕರ್ನಾಟಕ(Karnataka), ತಮಿಳುನಾಡು(Tamilnadu), ಆಂಧ್ರಪ್ರದೇಶ(Andra Pradesh) ಮತ್ತು ಕೇರಳ(Kerala) ಒಳಗೊಂಡ ದಕ್ಷಿಣ ಭಾರತದ ನಾಲ್ಕು…

19 hours ago

Karnataka Weather |16-05-2024 | ಹಲವು ಕಡೆ ಗುಡುಗು ಸಹಿತ ಮಳೆ ನಿರೀಕ್ಷೆ | ಮೇ 17 ರಿಂದ ಉತ್ತಮ ಮಳೆ ಸಾಧ್ಯತೆ |

ಮೇ 17 ರಿಂದ ದಕ್ಷಿಣ ಒಳನಾಡು, ಮಲೆನಾಡು ಭಾಗಗಳಲ್ಲಿ ಉತ್ತಮ ಮಳೆಯ ಮುನ್ಸೂಚೆನೆ…

19 hours ago