Advertisement
MIRROR FOCUS

ಬರಿದಾಗುತ್ತಿದೆ ನೀರು….! | ಹಲವು ಕಡೆ ನೀರಿಗೆ ತತ್ವಾರ | ಬರಿದಾದ ಸುಳ್ಯದ ಪಯಸ್ವಿನಿ ಒಡಲು | ಕೃಷಿಗೆ ನೀರಿಲ್ಲ…! |

Share

ಬೇಸಗೆಯ ಕಾವು ಹೆಚ್ಚಾಗುತ್ತಿದೆ. ಮಳೆ ಸನಿಹಕ್ಕೆ ಬಂದರೂ ದೂರವಾಗುತ್ತಿದೆ. ಕ್ಷಣ ಕ್ಷಣಕ್ಕೂ ಹವಾಮಾನ ಬದಲಾಗುತ್ತಿದೆ ಎಂದು ಹವಾಮಾನ ಅಧ್ಯಯನಕಾರರು ಹೇಳುತ್ತಾರೆ. ಈ ನಡುವೆಯೇ ನೀರು ಬರಿದಾಗುತ್ತಿದೆ. ತೋಟಕ್ಕೆ ಬಿಡಿ, ಕುಡಿಯಲೂ ನೀರಿಲ್ಲದ ಸ್ಥಿತಿ ನಿರ್ಮಾಣವಾಗುತ್ತಿದೆ. ಕೆಲವು ಕಡೆ ಟ್ಯಾಂಕರ್‌ ಮೂಲಕ ಕುಡಿಯುವ ನೀರು ಸಾಗಾಟವಾಗುತ್ತಿದೆ. ತೋಟಕ್ಕೆ ನೀರಿಲ್ಲದೆ ಕೃಷಿ ಒಣಗಲು ಆರಂಭವಾಗಿದೆ. ಸುಳ್ಯದ ಪಯಸ್ವಿನಿ ನದಿಯ ನೀರು ಬರಿದಾಗಿದೆ, ಕೃಷಿ ಪಂಪ್‌ ಚಾಲೂ ಮಾಡದಂತೆ ಹೇಳಲಾಗುತ್ತಿದೆ.

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಈ ಬಾರಿ ವಿಪರೀತ ಬಿಸಿಲಿನ ವಾತಾವರಣ ಕಂಡುಬಂದಿದೆ.ಪ್ರತಿದಿನವೂ ವಾತಾವರಣದ ಉಷ್ಣತೆ 35 ಡಿಗ್ರಿಗಿಂತ ಅಧಿಕವಾಗಿದೆ. ಯಾವತ್ತೂ ಈ ಉಷ್ಣತೆ ತಲಪಿದಾಗ ಪ್ರತೀ ವರ್ಷ ಮಳೆಯಾಗುತ್ತಿತ್ತು. ಸುಳ್ಯ ಹಾಗೂ ಮಲೆನಾಡು ತಪ್ಪಲು ಭಾಗಗಳಲ್ಲಿ  ಈ ಹೊತ್ತಿಗೆ ಕನಿಷ್ಟ ನಾಲ್ಕು-ಐದು ಮಳೆ ಆಗುತ್ತಿತ್ತು. ಈ ಬಾರಿ ಮಳೆಯಾಗದೆ ಹೊಳೆ, ಕೆರೆಗಳು ಮಾತ್ರವಲ್ಲ ಕೊಳವೆಬಾವಿಗಳು ಬತ್ತುತ್ತಿವೆ. ಅಂತರ್ಜಲ ಮಟ್ಟ ತಗ್ಗಿದೆ. ಇದೀಗ ಕುಡಿಯುವ ನೀರಿಗೂ ಹಲವು ಕಡೆ ತತ್ತ್ವಾರ ಆರಂಭವಾಗಿದೆ.ಇದೀಗ ಸುಳ್ಯದಲ್ಲಿ ಪಯಸ್ವಿನಿ ನದಿ ಬತ್ತಲು ಆರಂಭವಾಗಿದೆ. ಇದೀಗ ನಗರವಾಸಿಗಳಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಅಧಿಕಾರಿಗಳು ಕ್ರಮ ವಹಿಸಿದ್ದಾರೆ . ಸುಳ್ಯ ನಗರಕ್ಕೆ ಕುಡಿಯವ ನೀರಿನ ಅಭಾವ ಕಾಡದಂತೆ ಸುಳ್ಯ ಕಲ್ಲು ಮುಟ್ಲು ಪಂಪ್ ಹೌಸ್ ನಿಂದ ಮೇಲೆ ನದಿ ಅಕ್ಕ ಪಕ್ಕದ ತೋಟಗಳ ಕೃಷಿ ಪಂಪ್ ಗಳ ವಿದ್ಯುತ್ ನಿಲುಗಡೆಗೆ ಸೂಚನೆ ನೀಡಲಾಗಿದೆ.

ಇತ್ತ ಕಡೆ ಕೃಷಿ ಭೂಮುಗಳೂ ಒಣಗಲು ಆರಂಭವಾಗಿದೆ. ನೀರಿಲ್ಲದೆ 15 ದಿನಗಳಾದ ತೋಟಗಳು ಒಣಗಲು ಆರಂಭವಾಗಿದೆ. ಅಡಿಕೆ ಬೆಳೆಗಾರರು ನಳ್ಳಿ ಬೀಳುವುದನ್ನು ನೋಡಬೇಕಾದ ಸ್ಥಿತಿ ಬಂದಿದೆ. ಕೆಲವು ಕಡೆ ಕೊಳವೆಬಾವಿಯಲ್ಲೂ ನೀರು ಕಡಿಮೆಯಾಗಿದೆ. ಎರಡು ಗಂಟೆ ಕೂಡಾ ತೋಟಕ್ಕೆ ನೀರುಣಿಸಲು ಸಂಕಷ್ಟಪಡುತ್ತಿದ್ದಾರೆ.ಕೊಳವೆಬಾವಿಯಲ್ಲಿ ನೀರಿನ ಮಟ್ಟ ಇಳಿಕೆಯಾದ ಕಾರಣ ಗುಡ್ಡ ಪ್ರದೇಶಗಳಿಗೆ ನೀರು ಸರಬರಾಜು ಮಾಡಲು ಆಗುತ್ತಿಲ್ಲವಾದರೆ, ಕೆಲವು ಕಡೆ ಪಂಪ್‌ ಮತ್ತಷ್ಟು ಕೆಳಭಾಗಕ್ಕೆ ಇಳಿಕೆ ಮಾಡಲಾಗಿದೆ. ಈಗ  ಮಳೆ ಯಾವಾಗ ಆದೀತು ಎಂದು ನೋಡುತ್ತಿದ್ದಾರೆ. ಈ ಬಾರಿ ನೀರಿಲ್ಲದೆ ತೋಟವೂ ಒಣಗುತ್ತಿದೆ, ಕುಡಿಯಲೂ ನೀರಿಲ್ಲದೆ ಹಾಹಾಕಾರ ಪಡಬೇಕಾದ ಸ್ಥಿತಿ ಬಾರದಿದ್ದರೆ ಸಾಕು ಎಂಬ ಆತಂಕ ಎದುರಾಗುತ್ತಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

Published by
ದ ರೂರಲ್ ಮಿರರ್.ಕಾಂ

Recent Posts

ಮಳೆ ಕೊರತೆ ತೀವ್ರ – ಬೆಂಗಳೂರು ಗ್ರಾಮಾಂತರದಲ್ಲಿ ಕೇವಲ ಶೇ. 3 ಬಿತ್ತನೆ; ನೀರಿನ ಬಳಕೆಗೆ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 66 ರಷ್ಟು ಮಳೆ ಕೊರತೆಯಿಂದ ಕೇವಲ ಶೇ.…

3 hours ago

ಹವಾಮಾನ ವರದಿ | 28-07-2026 | ಮುಂದಿನ 10 ದಿನ ಸಾಮಾನ್ಯ ಮಳೆ – ಆಗಸ್ಟ್ ಆರಂಭದಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…

24 hours ago

200 ಹಸುಗಳಿಂದ ₹2 ಕೋಟಿ ವಾರ್ಷಿಕ ಆದಾಯ…! ಗಮನ ಸೆಳೆದ ಉತ್ತರ ಪ್ರದೇಶದ ಮಾದರಿ

ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…

24 hours ago

ರಬ್ಬರ್ ತೋಟ ಹಸಿರಾಗಿರಬಹುದು… ಆದರೆ ಕಾಡಿಗೆ ಪರ್ಯಾಯವಲ್ಲ…! ಮಲೇಷ್ಯಾ ಅಧ್ಯಯನ ವರದಿ

ರಬ್ಬರ್ ತೋಟಗಳು ಹಸಿರಾಗಿದ್ದರೂ ಅವು ನೈಸರ್ಗಿಕ ಮಳೆಕಾಡಿನ ಜೀವವೈವಿಧ್ಯವನ್ನು ಉಳಿಸಿಕೊಳ್ಳಲು ಸಾಧ್ಯವಿಲ್ಲ ಎಂದು…

1 day ago

ಅಡುಗೆ ಎಣ್ಣೆ ಆಮದು 7% ಏರಿಕೆ – ಭಾರತ ಇನ್ನೂ ಆಮದು ಅವಲಂಬಿತ

ಭಾರತದ ಅಡುಗೆ ಎಣ್ಣೆ ಆಮದು ಎಂಟು ತಿಂಗಳಲ್ಲಿ ಶೇ.7ರಷ್ಟು ಏರಿಕೆಯಾಗಿದೆ. ಜೂನ್‌ನಲ್ಲಿ ಆಮದು…

1 day ago

ಕೇರಳದಲ್ಲಿ ಪ್ರತಿವರ್ಷ ₹1,200 ಕೋಟಿ ಮೌಲ್ಯದ ಹಲಸು ವ್ಯರ್ಥ..! ಮೌಲ್ಯವರ್ಧನೆಗೆ ಸರ್ಕಾರ ಮುಂದಾಗಲಿ ಎಂಬ ಒತ್ತಾಯ

ಕೇರಳದಲ್ಲಿ ಉತ್ಪಾದನೆಯಾಗುವ ಬಹುತೇಕ ಹಲಸು ಬಳಕೆಯಾಗದೆ ವ್ಯರ್ಥವಾಗುತ್ತಿದ್ದು, ವರ್ಷಕ್ಕೆ ಸುಮಾರು ₹1,200 ಕೋಟಿ…

1 day ago