Advertisement
MIRROR FOCUS

ವಯನಾಡು ದುರಂತ | ಅಂತಿಮ ಹಂತದಲ್ಲಿ ಕಾರ್ಯಾಚರಣೆ | 400ಕ್ಕೂ ಹೆಚ್ಚು ಮಂದಿ ಬಲಿ |

Share
  • ವಯನಾಡಿನಲ್ಲಿ ಜು.30 ರಂದು ಸಂಭವಿಸಿದ ಭಾರೀ ಭೂಕುಸಿತದ ದುರ್ಘಟನೆಗೆ 400 ಕ್ಕೂ ಅಧಿಕ ಮಂದಿ ಬಲಿ
  • ರಕ್ಷಣಾ ಕಾರ್ಯಾಚರಣೆ ಅಂತಿಮ ಹಂತಕ್ಕೆ, ಚಾಲಿಯಾರ್ ನದಿ ಪ್ರದೇಶದಲ್ಲಿ ಶೋಧ ಕಾರ್ಯ,40 ಕಿಮೀ ವ್ಯಾಪ್ತಿಯಲ್ಲಿ ಶೋಧ ಕಾರ್ಯಾಚರಣೆ
  • ಅರಣ್ಯ ಪ್ರದೇಶ ನಷ್ಟ, ದುರ್ಬಲವಾದ ಭೂಪ್ರದೇಶದಲ್ಲಿ ಗಣಿಗಾರಿಕೆ ಮತ್ತು ಹವಾಮಾನ ಬದಲಾವಣೆಯ ದುರ್ಘಟನೆ ಪ್ರಮುಖ ಕಾರಣ ಎಂದ ತಜ್ಞರು

ಕೇರಳದ ವಯನಾಡಿನ ಭೀಕರ ದುರ್ಘಟನೆಯಲ್ಲಿ 400 ಕ್ಕೂ ಅಧಿಕ ಮಂದಿ ಬಲಿಯಾದರು. ರಕ್ಷಣಾ ಕಾರ್ಯಾಚರಣೆ  ಬಹುತೇಕ ಅಂತಿಮ ಹಂತದಲ್ಲಿದೆ. ಅತ್ಯಂತ ದುರ್ಗಮ ಪ್ರದೇಶಗಳಿಗೂ ಸ್ವಯಂಸೇವಕರು ಹಾಗೂ ಅಧಿಕಾರಿಗಳ ತಂಡ ಭೇಟಿ ನೀಡಿದೆ. ಚಲಿಯಾರ್‌ ನದಿಯ ಆಸುಪಾಸಿನಲ್ಲೂ ಶೋಧ ಕಾರ್ಯ ನಡೆದಿದೆ. ಸುಮಾರು 40 ಕಿಮೀ ವ್ಯಾಪ್ತಿಯಲ್ಲಿ ಶೋಧ ಕಾರ್ಯ ನಡೆದಿದೆ.

ಭಾರೀ ಮಳೆಯ ನಡುವೆ ವಯನಾಡ್‌ ಜಿಲ್ಲೆಯ  ಮುಂಡಕ್ಕೈ, ಚುರಲ್ಮಲ ಪ್ರದೇಶದಲ್ಲಿ ಭೂಕುಸಿತ ಸಂಭವಿಸಿ ಅಪಾಯ ಹಾನಿಯುಂಟಾಯಿತು. 400 ಕ್ಕೂ ಅಧಿಕ ಮಂದಿ ದುರ್ಘಟನೆಯಲ್ಲಿ ಬಲಿಯಾದರು.ಇನ್ನೂ 200 ರಷ್ಟು ಮಂದಿ ನಾಪತ್ತೆಯಾಗಿದ್ದಾರೆ. ಅವರಿಗಾಗಿ ಪತ್ತೆ ಕಾರ್ಯ ನಡೆಯುತ್ತಿದೆ. ಈ ನಡುವೆ ರಕ್ಷಣಾ ಕಾರ್ಯ ಅಂತಿಮ ಹಂತಕ್ಕೆ ತಲಪಿದೆ.  ತಮ್ಮವರಿಗಾಗಿ ಸಂಬಂಧಿಕರು ಕಾಯುತ್ತಲೇ ಇದ್ದಾರೆ.  ಕಳೆದ ಎರಡು ದಿನಗಳಿಂದ ರಕ್ಷಣಾ ಕಾರ್ಯಗಳು, ದುರ್ಗಮ ಪ್ರದೇಶಗಳ ಮೇಲೆ ಕೇಂದ್ರೀಕರಿಸಲಾಗಿತ್ತು. ಭೂಕುಸಿತದಲ್ಲಿ ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯು  ಅಂತಿಮ ಹಂತವನ್ನು ಪ್ರವೇಶಿಸಿದೆ, ಅಧಿಕಾರಿಗಳು ಈಗ ದುರ್ಗಮ ಪ್ರದೇಶಗಳತ್ತ ಗಮನ ಹರಿಸಿದ್ದಾರೆ.ಎಲ್ಲೆಡೆಯೂ ಶೋಧ ಕಾರ್ಯ ನಡೆಸಿದ್ದಾರೆ.

ನಿರಂತರ ಮಳೆಯಿಂದ ಜುಲೈ 30 ರಂದು ಸಂಭವಿಸಿದ ಭಾರೀ ಭೂಕುಸಿತವು 400 ಕ್ಕೂ ಹೆಚ್ಚು ಸಾವುಗಳಿಗೆ ಕಾರಣವಾಯಿತು.
ಚಾಲಿಯಾರ್ ನದಿ ಜಲಾನಯನ ಪ್ರದೇಶಕ್ಕೆ ಅಂತಿಮ ಹಂತದ ಕಾರ್ಯಾಚರಣೆ ಬಂದಿದ್ದು,  ಈಗ ಚಾಲಿಯಾರ್ ನದಿ ಜಲಾನಯನ ಪ್ರದೇಶ ಮತ್ತು ಸಾಂಪ್ರದಾಯಿಕ ವಿಧಾನಗಳ ಮೂಲಕ ಪ್ರವೇಶಿಸಲಾಗದ ಪ್ರದೇಶಗಳ ಮೇಲೆ ಹೆಚ್ಚು ಕೇಂದ್ರೀಕೃತವಾಗಿದೆ. ಹೆಲಿಕಾಪ್ಟರ್ ಮೂಲಕ ವಿಶೇಷ ತಂಡಗಳ ಜಲಮೂಲದಲ್ಲಿ  ದೇಹಗಳು ಅಥವಾ ಅವಶೇಷಗಳಿಗಾಗಿ ಹುಡುಕಲು ನಿಯೋಜಿಸಲಾಗಿದೆ ಎಂದು ಕೇರಳದ ಪೊಲೀಸ್ ಮಹಾನಿರ್ದೇಶಕ (ಎಡಿಜಿಪಿ) ಎಂ.ಆರ್.ಅಜಿತ್ ಕುಮಾರ್ ಸುದ್ದಿಸಂಸ್ಥೆ ಎಎನ್‌ಐಗೆ ಮಾಹಿತಿ ನೀಡಿದ್ದಾರೆ.

ಏಳನೇ ದಿನದಲ್ಲಿ ಆರು ಮೃತದೇಹಗಳು ಪತ್ತೆಯಾಗಿವೆ. ಸೋಮವಾರ ಸರ್ವಧರ್ಮ ಪ್ರಾರ್ಥನೆಯ ಮೂಲಕ 30 ದೇಹಗಳು ಮತ್ತು 154 ದೇಹದ ಭಾಗಗಳನ್ನು ಸುಡಲಾಗಿದೆ. 30 ಶವಗಳಲ್ಲಿ 14 ಮಹಿಳೆಯರು ಮತ್ತು 13 ಪುರುಷರು, ಮತ್ತು ಮೂವರನ್ನು ಪುರುಷ ಅಥವಾ ಮಹಿಳೆ ಎಂದು ಗುರುತಿಸಲು ಸಾಧ್ಯವಾಗಲಿಲ್ಲ.

Advertisement

ರಕ್ಷಣಾ ಕಾರ್ಯಾಚರಣೆಗಾಗಿ ಆರು ವಲಯಗಳಲ್ಲಿ ವಿವಿಧ ಪಡೆಗಳ ಒಟ್ಟು 1,174 ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. 913 ಸ್ವಯಂಸೇವಕರು ಮತ್ತು ಸ್ಥಳೀಯ ನಿವಾಸಿಗಳು 112 ತಂಡಗಳಲ್ಲಿ ಸೇರಿಕೊಂಡರು ಮತ್ತು 137 ಭಾರತೀಯ ಸೇನೆಯ ಸಿಬ್ಬಂದಿಗಳು ಇದ್ದರು.  ಶೋಧ ಮತ್ತು ರಕ್ಷಣಾ ಕಾರ್ಯಾಚರಣೆಯನ್ನು ವೇಗ ಹೆಚ್ಚಿಸಲು ಹೆಚ್ಚಿನ ಯಂತ್ರಗಳನ್ನು ನಿಯೋಜಿಸಲಾಗಿತ್ತು. ಇವುಗಳನ್ನು ಶಾಲೆ,  ಮತ್ತು ಶಾಲೆಯ ಕೆಳಭಾಗದ ಪ್ರದೇಶಗಳಲ್ಲಿನ ಚಾಲಿಯಾರ್ ನದಿಯ ಜಲಾನಯನ ಪ್ರದೇಶದಲ್ಲಿ ಮತ್ತು ಸುತ್ತಮುತ್ತ  ಬಳಸಲಾಗುತ್ತದೆ. ಸೋಮವಾರ, ಸೇನೆಯೊಂದಿಗೆ ಮೂರು ಪಡೆಗಳ ಶ್ವಾನ ದಳಗಳು ಚುರಲ್ಮಲಾ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಶೋಧ ನಡೆಸಿದರು.

ರಕ್ಷಣಾ ಪಡೆಯ ಕಾರ್ಯಕರ್ತರು ಇದುವರೆಗೆ ವಯನಾಡ್‌ನಿಂದ 150 ಮತ್ತು ನಿಲಂಬೂರಿನಿಂದ 76 ಮೃತದೇಹಗಳನ್ನು ಹೊರತೆಗೆದಿದ್ದಾರೆ ಮತ್ತು ವಯನಾಡ್‌ನಿಂದ 24 ಮತ್ತು ನಿಲಂಬೂರಿನಿಂದ 157 ಸೇರಿದಂತೆ 181 ದೇಹದ ಭಾಗಗಳನ್ನು ಹೊರತೆಗೆದಿದ್ದಾರೆ.

ಎಡಿಜಿಪಿ ಎಂಆರ್ ಅಜಿತ್‌ಕುಮಾರ್ ಅವರು ಎಎನ್‌ಐ ಜೊತೆ ಮಾತನಾಡಿ, ದುರಂತದ ಒಂದು ವಾರದವರೆಗೂ ಶೋಧ ಕಾರ್ಯಾಚರಣೆಗಳು ನಡೆಯುತ್ತಿವೆ, ಕಳೆದ ಕೆಲವು ದಿನಗಳಲ್ಲಿ ಕೆಲವು ಸ್ಥಳೀಯ ಸ್ವಯಂಸೇವಕರು, ತೀರಾ ದುರ್ಗಮ ಪ್ರದೇಶದಲ್ಲಿ ಸಿಕ್ಕಿಬಿದ್ದಿರುವವರನ್ನು ರಕ್ಷಿಸಿದ್ದಾರೆ.  ಸ್ಥಳೀಯ ಸ್ವಯಂಸೇವಕರನ್ನು ಚಾಲಿಯಾರ್ ನದಿಯುದ್ದಕ್ಕೂ ತೀರಾ ದುರ್ಗಮ ಪ್ರದೇಶಗಳಿಗೆ ಕಳುಹಿಸಲಾಗುವುದಿಲ್ಲ. ಅದಕ್ಕಾಗಿ  ಪೊಲೀಸ್ ಎಸ್‌ಒಜಿ ಮತ್ತು ಸೇನಾ ಕಮಾಂಡೋಗಳ ಎರಡು ತಂಡಗಳನ್ನು ರಚಿಸಲು ನಿರ್ಧರಿಸಿದ್ದೇವೆ, ಅವರನ್ನು ಆ ಪ್ರದೇಶಗಳಿಗೆ ಏರ್ ಡ್ರಾಪ್ ಮಾಡಲಾಗುವುದು, ಈಗಲೂ ಆ ಪ್ರದೇಶಗಳಿಗೆ ಜನರನ್ನು ಮತ್ತು ಭಾರೀ ಯಂತ್ರೋಪಕರಣಗಳನ್ನು ಕಳುಹಿಸಲು ಸಾಧ್ಯವಿಲ್ಲ ಎಂದು ತಿಳಿಸಿದ್ದಾರೆ.

ವಯನಾಡಿನ ಈ ದುರ್ಘಟನೆಗೆ , ಅರಣ್ಯ ಪ್ರದೇಶ ನಷ್ಟ, ದುರ್ಬಲವಾದ ಭೂಪ್ರದೇಶದಲ್ಲಿ ಗಣಿಗಾರಿಕೆ ಮತ್ತು ಹವಾಮಾನ ಬದಲಾವಣೆಗಳು ಕಾರಣವೆಂದು ವಿಜ್ಞಾನಿಗಳು ಹಾಗೂ ಸಂಶೋಧಕರು ಹೇಳಿದ್ದಾರೆ.

  • (ಸುದ್ದಿಸಂಸ್ಥೆಗಳ ವರದಿಗಳ ಆಧಾರದಿಂದ)
Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

2025-26 ರಲ್ಲಿ ಅಡಿಕೆ ಕೊಳೆರೋಗ ಮತ್ತು ಎಲೆಚುಕ್ಕಿ ರೋಗ ಪ್ರಕರಣ ವರದಿಯಾಗಿಲ್ಲ…!

ಕೃಷಿ ಮತ್ತು ರೈತರ ಕಲ್ಯಾಣ ಇಲಾಖೆಯ ಕೇಂದ್ರದ ಸಮಗ್ರ ಕೀಟ ನಿರ್ವಹಣಾ ಕೇಂದ್ರಗಳು…

4 hours ago

ಮನೆಯ ಮೇಲ್ಛಾವಣಿಯನ್ನು ಕೃಷಿ ಭೂಮಿಯನ್ನಾಗಿಸಿದ ಆಸಿಯಾ ಇತರ ಮಹಿಳೆಯರಿಗೂ ಇಂದು ಮಾದರಿ..

ಮನಸ್ಸಿದ್ದರೆ ಮಾರ್ಗ ಎಂಬ ಗಾದೆ ಮಾತು ನಾವು ಕೇಳಿದ್ದೇವೆ. ಆದರೆ, ಕೆಲವು ಜನರ…

5 hours ago

ನಮ್ಮ ಹೊಲ ನಮ್ಮ ದಾರಿ : ರಸ್ತೆಗೆ 12.5 ಲಕ್ಷ ಸಹಾಯಧನ

ಕೆಲವು ಕಡೆಗಳಲ್ಲಿ ರೈತರು ತಮ್ಮ ಜಮೀನಿಗೆ ಹೋಗಲು ಸರಿಯಾದ ದಾರಿಯಿಲ್ಲದೆ ಪರದಾಟ ನಡೆಸಬೇಕಾಗುತ್ತದೆ.…

5 hours ago

2025-26 ನೇ ಸಾಲಿನ ಕೃಷಿ ಇಲಾಖೆ ಸಹಾಯಧನ ಯೋಜನೆಗಳು

ಕೃಷಿ ಇಲಾಖೆಯು ರೈತರಿಗೆಂದು ವಿವಿಧ ಸಬ್ಸಿಡಿ ಯೋಜನೆಗಳನ್ನು ಜಾರಿಗೆ ತಂದಿದೆ. ಇದಕ್ಕೆ ಯಾವ…

5 hours ago

ಕುಕ್ಕುಟ ಸಂಜೀವಿನಿ ಯೋಜನೆ : ಉಚಿತ ಕೋಳಿ ಮರಿ ಶೇಡ್ ನಿರ್ಮಾಣಕ್ಕೆ ಆರ್ಥಿಕ ನೆರವು

ಮಹಿಳೆಯರ ಏಳಿಗೆಗೆ ಸರ್ಕಾರವೂ ಹಲವಾರು ರೀತಿಯ ಯೋಜನೆಯನ್ನು ಜಾರಿಗೊಳಿಸಿದೆ. ಇದೀಗ ಗ್ರಾಮೀಣ ಮಹಿಳೆಯರಿಗೆ…

5 hours ago

ಹವಾಮಾನ ವರದಿ | 16-12-2025 | ಮೋಡ ಮಾತ್ರವೇ ಮಳೆ ಇದೆಯೇ…? | ಮುಂದೆ ಚಳಿಯ ಪ್ರಭಾವ ಹೇಗಿರಬಹುದು..?

17.12.2025 ರ ಬೆಳಿಗ್ಗೆ 8 ಗಂಟೆವರೆಗಿನ ಕರ್ನಾಟಕದ ಹವಾಮಾನ ಮುನ್ಸೂಚನೆ : ಕರಾವಳಿ…

22 hours ago