ಭಾರತ ಸರ್ಕಾರವು ವಿಶ್ವಸಂಸ್ಥೆ ಆಹಾರ ನೆರವು ಯೋಜನೆಯ ಪ್ರಕಾರ ಪಂಜಾಬ್ ವಿಧಾನಸಭೆ ಚುನಾವಣೆ ಬಳಿಕ ಪಾಕಿಸ್ತಾನದ ರಸ್ತೆಯ ಮೂಲಕ ಗೋಧಿಯನ್ನು ಲಾರಿಗಳ ಮೂಲಕ ಬೆಂಗಾವಲು ಪಡೆಯೊಂದಿಗೆ ಕಳುಹಿಸಿಕೊಡಲಿದೆ. ಮಾತ್ರವಲ್ಲದೆ ಒಪ್ಪಂದದ ಪ್ರಕಾರ ಮಾನವೀಯ ನೆರವಿನ ಅನ್ವಯ ಅಫ್ಫಾನಿಸ್ತಾನಕ್ಕೆ 50,000 ಮೆಟ್ರಿಕ್ ಟನ್ ಗೋಧಿಯನ್ನು ಸರಬರಾಜು ಮಾಡಲಿದೆ.
Advertisement
ಆಹಾರದ ಕೊರತೆ ಎದುರಿಸುತ್ತಿರುವ ಅಫ್ಘಾನಿಸ್ತಾನಕ್ಕೆ ಗೋಧಿ ಪೂರೈಕೆ ಮಾಡುವುದು ಮಾನವೀಯ ನೆರವಿನ ಹೆಗ್ಗುರುತು ಆಗಲಿದೆ ಎಂದು ರೋಮ್ನಲ್ಲಿರುವ ಡಬ್ಲ್ಯೂಎಫ್ಟಿ ಮುಖ್ಯ ಕಚೇರಿ ಟ್ವೀಟ್ ಮಾಡಿದೆ. ವಿಶ್ವಸಂಸ್ಥೆ ಆಹಾರ ನೆರವು ಯೋಜನೆಗೆ ಭಾರತ ಸಹಿ ಹಾಕಿರುವ ಒಪ್ಪಂದದ ಪ್ರಕಾರ ಫೆಬ್ರವರಿ 20 ರ ಬಳಿಕ ಗೋಧಿ ರವಾನೆ ಮಾಡುವ ಕಾರ್ಯ ಆರಂಭವಾಗಲಿದೆ. ಪಾಕಿಸ್ತಾನದ ಮೂಲಕ ಅಫ್ಘಾನ್ ಗಡಿ ದಾಟಿ, ಕಂದಹಾರ್ನಲ್ಲಿ ಡಬ್ಲ್ಯೂಎಫ್ಪಿ ಅಧಿಕಾರಿಗಳಿಗೆ ಹಸ್ತಾಂತರ ಮಾಡಲಾಗುತ್ತದೆ.
Advertisement
Advertisement
Advertisement
ಇದು ನಮ್ಮ YouTube ಚಾನೆಲ್ -
Subscribe ಮಾಡಿ ಬೆಂಬಲಿಸಿ
Advertisement
Rural Mirror Special |
Subscribe Our Channel
Advertisement