Advertisement
ಸುದ್ದಿಗಳು

ಹೈನುಗಾರಿಕೆ ಮಾಡುವ ರೈತರಿಗೆ ಇರುವ ಸರ್ಕಾರದ ಯೋಜನೆ ಯಾವೆಲ್ಲಾ? ಸಂಪೂರ್ಣ ಮಾಹಿತಿ

Share

ಹೈನುಗಾರಿಕೆ, ಕುರಿ ಸಾಕಾಣಿಕೆ, ಕೋಳಿ ಸಾಕಾಣಿಕೆ ಮಾಡುವ ರೈತರಿಗೆ ತಮಗಾಗಿ ಸರ್ಕಾರದಿಂದ ಯಾವೆಲ್ಲ ಸಹಾಯಧನ ಆದಾರಿತ ಯೋಜನೆಗಳು ಜಾರಿಯಾಗಿದೆ ಎಂಬ ಮಾಹಿತಿಗಳು ಸರಿಯಾಗಿ ತಿಳಿದಿರುವುದಿಲ್ಲ.  ಆ ಯೋಜನೆಗೆ ಯಾವ ರೀತಿಯಾಗಿ ಅರ್ಜಿ ಸಲ್ಲಿಸುವುದು..? ಈ ಮಾಹಿತಿಯನ್ನು ರೈತರಿಗೆ ಇಲ್ಲಿ ನೀಡಲಾಗಿದೆ…

ರಾಜ್ಯದಲ್ಲಿ ಪ್ರಸ್ತುತ ಪಶುಪಾಲನಾ ಇಲಾಖೆಯಿಂದ ರೈತರಿಗೆ ಲಭ್ಯವಿರರುವ ಸಹಾಯಧನ ಆಧಾರಿತ ಯೋಜನೆಗಳು ಈ ರೀತಿಯಾಗಿವೆ:

  • ಹಸುಗಳ ಆಕಸ್ಮಿಕ ಸಾವಿಗೆ ಸಹಾಯಧನ: ಜಾನುವಾರು, ಎಮ್ಮೆ, ಹೋರಿಗಳು ಆಕಸ್ಮಿಕವಾಗಿ ಮರಣ ಹೊಂದಿದರೆ ರೈತರಿಗೆ ಉಂಟಾಗುವ ಆರ್ಥಿಕ ನಷ್ಟಕ್ಕೆ ಪರಿಹಾರವಾಗಿ 15,000 ಪರಿಹಾರ ಧನವನ್ನು ನೀಡಲಾಗುತ್ತದೆ.
  • ಕುರಿ ಮೇಕೆಗಳ ಸಾವಿಗೆ: ಒಂದುವೇಳೆ ಕುರಿ, ಮೇಕೆಗಳು ಆಕಸ್ಮಿಕವಾಗಿ ಮರಣ ಹೊಂದಿದರೆ ಅವುಗಳ ಮಾಲೀಕನಿಗೆ ಸಹಾಯಧನ ನೀಡಲಾಗುವುದು.
  • ಜಾನುವಾರು ವಿಮೆ: ರೈತರು ಸಾಕಾಣಿಕೆ ಮಾಡುವ ಜಾನುವಾರುಗಳಿಗೆ ವಿಮೆ/ ಇನ್ಸುರೆನ್ಸ್ ಅನ್ನು ಮಾಡಿಸಲು ಆರಂಭಿಕ ಹಂತದಲ್ಲಿ ವಿಮೆ ಪ್ರೀಮೀಯಂ ದರವನ್ನು ಪಾವತಿ ಮಾಡಲು ಇಲಾಖೆಯಿಂದ ಶೇ.85% ಸಬ್ಸಿಡಿ ಅನ್ನು ಪಾವತಿಸಲಾಗುತ್ತದೆ ರೈತರು ಕೇವಲ ಶೇ15% ಪ್ರೀಮೀಯಂ ಅನ್ನು ಪಾವತಿ ಮಾಡಿದರೆ ಸಾಕಾಗುತ್ತದೆ.
  • ಮೇವು ಕತ್ತರಿಸುವ ಯಂತ್ರ ವಿತರಣೆ: ಹೈನುಗಾರಿಕೆ ಮತ್ತು ಕುರಿ/ ಮೇಕೆ ಸಾಕಾಣಿಕೆಯನ್ನು ಮಾಡುತ್ತಿರುವ ರೈತರಿಗೆ ಹಸಿ ಮೇವನ್ನು ಕತ್ತರಿಸಿಕೊಳ್ಳಲು ಶೇ.50% ಸಹಾಯಧನದಲ್ಲಿ ಒಟ್ಟು ಪೂರ್ಣ ದರ 34,000 ಕ್ಕೆ ರೂ 17,000 ಸರಕಾರದಿಂದ ಸಬ್ಸಿಡಿ ನೀಡಲಾಗುತ್ತದೆ ಬಾಕು ಉಳಿದ ರೂ 17,000 ಪಾವತಿ ಮಾಡಿ ರೈತರು ಮೇವು ಕತ್ತರಿಸುವ ಯಂತ್ರವನ್ನು ಪಡೆದುಕೊಳ್ಳಬಹುದು.
  • ರಬ್ಬರ್ ನೆಲ ಹಾಸುಗಳ ವಿತರಣೆ: ಕೊಟ್ಟಿಗೆಯಲ್ಲಿ ಹಸು ಉತ್ತಮ ನೆಲ ಹಾಸು ವ್ಯವಸ್ಥೆಯನ್ನು ರೂಪಿಸಲು ಶೇ.50% ಸಹಾಯಧನ ಕೌ ಮ್ಯಾಟ್ ಅನ್ನು ರೈತರು ಪಶು ಪಾಲನಾ ಇಲಾಖೆಯಂದ ಪಡೆಯಲು ಅವಕಾಶವಿದ್ದು ಒಟ್ಟು ಪೂರ್ಣ ದರ ರೂ 2,849 ಇದಕ್ಕೆ ರೂ1424 ಸಬ್ಸಿಡಿಯನ್ನು ಇಲಾಖೆಯಿಂದ ಒದಗಿಸಲಾಗುತ್ತದೆ.
  • ಮೇವಿನ ಬೀಜ ಕಿರು ಪೊಟ್ಟಣಗಳ ವಿತರಣೆ: ಪಶು ಪಾಲನಾ ಇಲಾಖೆಯಿಂದ ರೈತರಿಗೆ ಹಸಿ ಮೇವನ್ನು ಉತ್ಪಾದನೆ ಮಾಡಿಕೊಳ್ಳಲು ಶೇ.50% ಸಬ್ಸಡಿಯಲ್ಲಿ ಮೇವಿನ ಬೀಜಗಳನ್ನು ವಿತರಣೆ ಮಾಡಲಾಗುತ್ತದೆ.
  • ಪರಿಶಿಷ್ಟ ಜಾತಿ ಮತ್ತು ಪಂಗಡ ಸದಸ್ಯರುಗಳಿಗೆ ಕುರಿ/ಮೇಕೆ ವಿತರಣೆ: ಪರಿಶಿಷ್ಟ ಜಾತಿ ಮತ್ತು ಪಂಗಡ ಸದಸ್ಯರುಗಳಿಗೆ ಕುರಿ/ ಮೇಖೆ ಸಾಕಾಣಿಕೆಯನ್ನು ಮಾಡಲು ಶೇ.90% ಅಂದರೆ ಗರಿಷ್ಠ 90,000 ಸಬ್ಸಿಡಿಯನ್ನು ಒದಗಿಸಲಾಗುತ್ತದೆ ರೈತರು ಶೇ.10% ರೂ 10,000 ಪಾವತಿ ಮಾಡಬೇಕು ಈ ಯೋಜನೆಯಡಿ 10 ಕುರಿ 1 ಟಗರು ಮರಿಯನ್ನು ವಿತರಣೆ ಮಾಡಲಾಗುತ್ತದೆ.
  • ನಾಟಿ ಕೋಳಿ ಮರಿಗಳ ವಿತರಣೆ: ನಾಟಿ ಕೋಳಿಯನ್ನು ಸಾಕಾಣಿಕೆ ಂಆಡ ಅನುಭವವನ್ನು ಹೊಂದಿರುವ ಅರ್ಹ ಮಹಿಳಾ ಅಭ್ಯರ್ಥಿಗಳಿಗೆ ಇಲಾಖೆಯಿಂದ 5 ವಾರಗಳ 20ಕೋಳಿ ಮರಿಗಳನ್ನು ಉಚಿತವಾಗಿ ವಿತರಣೆ ಮಾಡಲಾಗುತ್ತದೆ.
  • ಹಾಲು ಉತ್ಪಾದಕರಿಗೆ ಉತ್ತೇಜನ: ಪ್ರಾಥಮಿಕ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಹಾಲು ಸರಬರಾಜ ಮಾಡುವ ಸದಸ್ಯರಿಗೆ ಪ್ರತಿ ಲೀಟರ್ ಗುಣಾತ್ಮಕ ಹಾಲಿಗೆ ರೂ.5% ಪ್ರೋತ್ಸಾಹಧನವನ್ನು ನೀಡಲಾಗುತ್ತದೆ.

ಅರ್ಜಿ ಸಲ್ಲಿಸಲು ಬೇಕಾಗುವ ದಾಖಲೆಗಳು:
• ಆಧಾರ್ ಕಾರ್ಡ್
• ಪಾನ್ ಕಾರ್ಡ್
• ರೇಶನ್ ಕಾರ್ಡ್
• ಜಾತಿ ಮತ್ತು ಆದಾಯ ಪ್ರಮಾಣ ಪತ್ರ
• ಬ್ಯಾಂಕ್ ಪಾಸ್ ಬುಕ್
• ಫೋಟೋ
ಎಲ್ಲಿ ಅರ್ಜಿ ಸಲ್ಲಿಸುವುದು:
ಈ ಮೇಲಿನ ಯೋಜನೆಗಳನ್ನು ಪಡೆಯಲು ರೈತರು ಆಯಾ ತಾಲ್ಲೂಕಿನ ಪಶು ಸಂಗೋಪನಾ ಆಸ್ಪತ್ರೆಗಳಿ ಭೇಟಿ ನೀಡಿ ಅಲ್ಲಿಯೇ ಅರ್ಜಿಯನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಯನ್ನು ಪಡೆಯಬಹುದು.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
Advertisement
ರೂರಲ್‌ ಮಿರರ್ ಸುದ್ದಿಜಾಲ

Published by
ರೂರಲ್‌ ಮಿರರ್ ಸುದ್ದಿಜಾಲ

Recent Posts

ಮಳೆಯ ನಡುವೆಯೂ ಉರಿಯುವ ಬಿಸಿಲು..! ಏಪ್ರಿಲ್–ಜೂನ್‌ನಲ್ಲಿ ಹವಾಮಾನ ಸವಾಲು..!

ಏಪ್ರಿಲ್‌ನಲ್ಲಿ ಮಳೆ ಹೆಚ್ಚಾದರೂ ಬಿಸಿಲು ಕಡಿಮೆಯಾಗುವುದಿಲ್ಲ ಎಂದು IMD ಎಚ್ಚರಿಸಿದೆ. ಏಪ್ರಿಲ್–ಜೂನ್ ಅವಧಿಯಲ್ಲಿ…

9 hours ago

ಗ್ಯಾಸ್ ಸಿಲಿಂಡರ್ ಕೊರತೆ ಪರಿಣಾಮ : ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆ

ಗ್ಯಾಸ್ ಸಿಲಿಂಡರ್ ಕೊರತೆಯಿಂದ ರಾಜ್ಯದಲ್ಲಿ ವಿದ್ಯುತ್ ಬಳಕೆ 10% ಏರಿಕೆಯಾಗಿದೆ. ಕೇಂದ್ರದ ನೀತಿಗಳ…

9 hours ago

ಹಸಿರು ಅಮೋನಿಯಾ ಒಪ್ಪಂದಗಳು | ಭಾರತದ ಇಂಧನ ಭದ್ರತೆಗೆ ಹೊಸ ಬಲ..! 2030 ಗುರಿಗೆ ವೇಗ

ಹಸಿರು ಅಮೋನಿಯಾ ಒಪ್ಪಂದಗಳು ಭಾರತದ ಇಂಧನ ಭದ್ರತೆಗೆ ದೊಡ್ಡ ಬಲ ನೀಡಲಿವೆ. 2030ರೊಳಗೆ…

9 hours ago

ಕರಾವಳಿಯಲ್ಲಿ ಮಳೆಯ ರಭಸ | ಸುಬ್ರಹ್ಮಣ್ಯ ಆಸುಪಾಸಿನಲ್ಲಿ 50 ಮಿಮೀಗೂ ಹೆಚ್ಚು! ರಾಜ್ಯದ ಹಲವೆಡೆ ಇನ್ನೂ 2 ದಿನ ಮಳೆ ಅಲರ್ಟ್

ಮಾರ್ಚ್ ತಿಂಗಳಲ್ಲಿ ಅಪರೂಪದ ಭಾರೀ ಮಳೆ ಸುಬ್ರಹ್ಮಣ್ಯದಲ್ಲಿ ದಾಖಲಾಗಿದೆ. ರಾಜ್ಯದ ಹಲವೆಡೆ ಇನ್ನೂ…

10 hours ago

“ಕೃಷಿ ಕೂಳೆ ಸುಡುವುದು ಮುಗಿದುಹೋಯ್ತು…!” | ರೈತರಿಗೆ ಹೊಸ ಆದಾಯದ ದಾರಿ, ಕೂಳೆಯಿಂದ ಬಿಟುಮೆನ್ ತಯಾರಿ

ಕೃಷಿ ಕೂಳೆ ಈಗ ಮಾಲಿನ್ಯದ ಮೂಲವಲ್ಲ, ರೈತರಿಗೆ ಆದಾಯದ ಮೂಲವಾಗುತ್ತಿದೆ. ಬಯೋ-ಬಿಟುಮೆನ್ ತಂತ್ರಜ್ಞಾನ…

1 day ago

“ಮಹಿಳೆಯರಿಗೆ ಶಕ್ತಿ ನೀಡಿದರೆ ಕೃಷಿ ಬಲವಾಗುತ್ತದೆ..!” | ವಿಶ್ವದ ಗಮನ ಸೆಳೆಯುತ್ತಿದೆ ಇನ್‌ಕ್ಲೂಸಿವ್‌ ಅಗ್ರಿಕಲ್ಚರ್‌ ಮಾದರಿ

ಮಹಿಳೆಯರನ್ನು ಕೃಷಿ ಮೌಲ್ಯ ಸರಪಳಿಯಲ್ಲಿ ಸೇರಿಸಿದರೆ ಆದಾಯ ಮತ್ತು ಉತ್ಪಾದನೆ ಹೆಚ್ಚುತ್ತದೆ. Inclusive…

1 day ago