Advertisement
Opinion

ಸಕ್ಕರೆ ತ್ಯಜಿಸಿದರೆ ಏನೆಲ್ಲಾ ಆರೋಗ್ಯ ಲಾಭಗಳು..? ದೇಹದಲ್ಲಿ ಈ 5 ಬದಲಾವಣೆಗಳನ್ನು ಕಾಣಬಹುದು : ತೂಕ ಕೂಡ ಬೇಗ ಕಡಿಮೆಯಾಗುತ್ತದೆ

Share

ಸಕ್ಕರೆ(Sugar) ನಮ್ಮ ಆಹಾರದ(Food) ಪ್ರಮುಖ ಅಂಶವಾಗಿದೆ. ಟೀ-ಕಾಫಿ(Tea-Coffee), ಸಿಹಿತಿಂಡಿಗಳು(Sweet) ಅಥವಾ ಯಾವುದೇ ಪ್ಯಾಕೆಟ್ ಆಹಾರ(Packed food), ಬೇಕರಿ(Bakery) ಉತ್ಪನ್ನಗಳಲ್ಲಿ ಸಕ್ಕರೆ ಇದ್ದೇ ಇರುತ್ತದೆ. ಆದರೆ, ಈ ಸಕ್ಕರೆ ಆರೋಗ್ಯಕ್ಕೆ(Health) ತುಂಬಾ ಅಪಾಯಕಾರಿ. ಇದು ಗೊತ್ತಿದ್ದರೂ ಸಕ್ಕರೆ ಸೇವನೆಯನ್ನು ನಿಯಂತ್ರಿಸಲು ಕಷ್ಟ. ಆದರೆ, ಒಮ್ಮೆ ಸಕ್ಕರೆ ಸೇವನೆಯನ್ನು ನಿಯಂತ್ರಿಸಿಕೊಂಡರೆ ಅನೇಕ ಆರೋಗ್ಯ ಸಮಸ್ಯೆಗಳನ್ನು ಖಂಡಿತಾ ದೂರವಿಡಬಹುದು.

ಕೇವಲ ಮಧುಮೇಹ, ಬೊಜ್ಜು ಸಮಸ್ಯೆ ಇರುವವರು ನಿಯಂತ್ರಣದಲ್ಲಿರಬೇಕು ಎಂದು ನಾವು ಅಂದುಕೊಳ್ಳುತ್ತೇವೆ. ಆದರೆ, ಮಧುಮೇಹ ಅಥವಾ ಇನ್ನಾವುದೇ ಸಮಸ್ಯೆ ಇಲ್ಲದವರೂ ಆರೋಗ್ಯವಾಗಿರಲು ಸಕ್ಕರೆ ಸೇವನೆಯನ್ನು ನಿಯಂತ್ರಣದಲ್ಲಿಟ್ಟುಕೊಳ್ಳಬೇಕು. ಖ್ಯಾತ ಪೌಷ್ಟಿಕತಜ್ಞೆ ಶ್ವೇತಾ ಶಾ-ಪಾಂಚಾಲ್ ಇವರು ಸಕ್ಕರೆ ಕಡಿತ ಆರೋಗ್ಯಕ್ಕೆ ಯಾವ ರೀತಿ ಪ್ರಯೋಜನಕಾರಿ ಎಂದು ಹೇಳುತ್ತಾರೆ.

ಸಕ್ಕರೆ ತ್ಯಜಿಸುವುದರಿಂದ ದೇಹಕ್ಕೆ ಆಗುವ ಅದ್ಭುತ ಪ್ರಯೋಜನಗಳು..

1. ನಿಮ್ಮ ದೇಹದಲ್ಲಿ ಸಶಕ್ತತೆಯ ಅನುಭವವಾಗುತ್ತದೆ. ಆಹಾರದಲ್ಲಿ ಸಕ್ಕರೆ ಇಲ್ಲದಿರುವುದರಿಂದ ರಕ್ತದಲ್ಲಿ ಸಕ್ಕರೆಯ ಪ್ರಮಾಣದಲ್ಲಿ ಹೆಚ್ಚಿನ ಏರಿಳಿತಗಳು ಇರುವುದಿಲ್ಲ. ಇದರಿಂದ ಯಾವಾಗಲೂ ಸಬಲತೆಯ ಅನುಭವವಾಗುತ್ತದೆ.

2. ಬೆಳಗಿನ ಉಪಾಹಾರ, ಮಧ್ಯಾಹ್ನ ಅಥವಾ ರಾತ್ರಿಯ ಊಟದಲ್ಲಿ ನೀವು ಹೆಚ್ಚು ಸಕ್ಕರೆಯನ್ನು ಸೇವಿಸದ ಕಾರಣ ನಿಮಗೆ ಗೊತ್ತಿಲ್ಲದೆಯೇ ನೀವು ಅನಾವಶ್ಯಕವಾದ ತೂಕವನ್ನು ಕಳೆದುಕೊಳ್ಳುತ್ತೀರಿ. ಊಟ ಅಥವಾ ತಿಂಡಿಗಳ ನಡುವೆ ನಾವು ಸಿಹಿ ಆಹಾರಗಳನ್ನು ಸೇರಿಸುತ್ತೇವೆ. ಆದರೆ, ಈ ಮಧ್ಯಾಹ್ನದ ಸಿಹಿತಿಂಡಿಗಳನ್ನು ನಿಲ್ಲಿಸುವುದರಿಂದ ತಿಳಿಯದೆ ತೂಕ ನಷ್ಟವಾಗುತ್ತದೆ.

3. ನೀವು ಬೆಳಿಗ್ಗೆ ಎದ್ದಾಗ ಇದು ನಿಮಗೆ ಅರಿವಿಲ್ಲದೆ ತುಂಬಾ ತಾಜಾತನವನ್ನು ಅನುಭವಿಸಲು ಸಹಾಯ ಮಾಡುತ್ತದೆ. ಸಕ್ಕರೆಯಿಂದಾಗಿ ದೇಹದಲ್ಲಿ ನಿಯೋಪೆಪ್ಟೈಡ್ ಹೆಚ್ಚಾಗುತ್ತದೆ ಮತ್ತು ಅದು ನಮಗೆ ದಣಿವು ಅಥವಾ ಆಲಸ್ಯವನ್ನುಂಟು ಮಾಡುತ್ತದೆ. ಆದರೆ ಸಕ್ಕರೆ ನಿಲ್ಲಿಸಿದರೆ ಈ ಘಟಕಾಂಶವು ಹೆಚ್ಚಾಗುವುದಿಲ್ಲ ಮತ್ತು ತಾಜಾತನವನ್ನು ಅನುಭವಿಸಲು ಸಹಾಯ ಮಾಡುತ್ತದೆ.

4. ಈ ಅಂಶದ ಪ್ರಮಾಣವು ಕಡಿಮೆಯಾದಂತೆ, ಇದು ನಿದ್ರೆಯ ಮೇಲೂ ಉತ್ತಮ ಪರಿಣಾಮ ಬೀರುತ್ತದೆ. ಇದು ಬೇಗನೆ ಮತ್ತು ಉತ್ತಮ ಆಳವಾದ ನಿದ್ರೆಯನ್ನು ಪಡೆಯಲು ಸಹಾಯ ಮಾಡುತ್ತದೆ. ಮಗುವು ಆಳವಾಗಿ ನಿದ್ರಿಸುವಂತೆಯೇ, ಆಳವಾದ ನಿದ್ರೆಯು ಹೆಚ್ಚು ತೃಪ್ತಿಕರವಾಗಿರುತ್ತದೆ.

5. ಸಕ್ಕರೆಯನ್ನು ತಿನ್ನದಿರುವ ಇನ್ನೊಂದು ಪ್ರಮುಖ ಪರಿಣಾಮವೆಂದರೆ ಸೌಂದರ್ಯವನ್ನು ಹೆಚ್ಚಿಸುವುದು. ಸಕ್ಕರೆಯನ್ನು ತಪ್ಪಿಸುವುದು ಹೊಳೆಯುವ ಮತ್ತು ನಯವಾದ ಚರ್ಮಕ್ಕೆ ಪ್ರಯೋಜನಕಾರಿಯಾಗಿದೆ. ಇದಲ್ಲದೆ, ಸಕ್ಕರೆಯನ್ನು ತ್ಯಜಿಸುವುದರಿಂದ ಮಧುಮೇಹ, ಬಿಪಿ, ಥೈರಾಯ್ಡ್ ಮುಂತಾದ ಕಾಯಿಲೆಗಳನ್ನು ತಡೆಯಬಹುದು ಎಂಬುದನ್ನು ಬೇರೆ ಹೇಳಬೇಕಾಗಿಲ್ಲ.

ಡಾ. ಸುನಿಲ್ ಇನಾಮದಾರ ಕನ್ನಡಕ್ಕೆ: ಡಾ. ಪ್ರ. ಅ. ಕುಲಕರ್ಣಿ

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಹವಾಮಾನ ವರದಿ | 06-09-2026 | ಕರ್ನಾಟಕದಲ್ಲಿ ಮಳೆ ಇಳಿಮುಖದ ಲಕ್ಷಣ

ಕರ್ನಾಟಕದ ಬಹುತೇಕ ಭಾಗಗಳಲ್ಲಿ ಮಳೆಯ ಸಾಧ್ಯತೆ ಇಳಿಮುಖವಾಗುತ್ತಿದ್ದು, ಕರಾವಳಿ–ಮಲೆನಾಡಿನಲ್ಲಿ ಸೆ.8ರಿಂದ 10ರವರೆಗೆ ಅಲ್ಲಲ್ಲಿ…

7 hours ago

ಭಾರತದ ಹಸಿರು ಯೋಜನೆಗಳಿಗೆ ಜಪಾನ್‌ನ ಕಾರ್ಬನ್ ಕ್ರೆಡಿಟ್ ಅವಕಾಶ – ರೈತರೂ ಪಡೆಯಬಹುದೇ ಇದರ ಲಾಭ?

ಭಾರತ–ಜಪಾನ್ JCM ಮೂಲಕ ಭಾರತದಲ್ಲಿ ಕಡಿಮೆ-ಇಂಗಾಲ ಯೋಜನೆಗಳಿಗೆ ಜಪಾನ್ ಹೂಡಿಕೆ ಮತ್ತು ತಂತ್ರಜ್ಞಾನ…

10 hours ago

ಹಿಮಾಲಯದಲ್ಲಿ ಮತ್ತೊಂದು ಅಪಾಯದ ಎಚ್ಚರಿಕೆ..!

ಸಿಕ್ಕಿಂನಲ್ಲಿ 40 ಹೆಚ್ಚಿನ ಅಪಾಯದ ಹಿಮನದಿ ಸರೋವರಗಳನ್ನು ಗುರುತಿಸಲಾಗಿದ್ದು, 16 ಸರೋವರಗಳು ಅತ್ಯಂತ…

11 hours ago

ಎಲ್ ನಿನೊ ಮತ್ತಷ್ಟು ಬಲಗೊಳ್ಳುವ ಮುನ್ಸೂಚನೆ..!

2026ರ ಆಗಸ್ಟ್ ವೇಳೆಗೆ ಎಲ್ ನಿನೊ ಆರಂಭವಾಗಿದ್ದು , ವರ್ಷಾಂತ್ಯದ ವೇಳೆಗೆ ಅತ್ಯಂತ…

12 hours ago

ಈಶಾನ್ಯದಿಂದ ಜಾರ್ಖಂಡ್‌ವರೆಗೆ ರಬ್ಬರ್‌ ಕೃಷಿಯ ವಿಸ್ತರಣೆ | ಹೊಸ ಪ್ರದೇಶಗಳಲ್ಲಿ ರಬ್ಬರ್‌ ಕೃಷಿ ವಿಸ್ತರಣೆ – ಅಪಾಯವೇ..? ಅವಕಾಶವೇ..?

ನಾಗಾಲ್ಯಾಂಡ್‌ನಲ್ಲಿ ರಬ್ಬರ್‌ ಕೃಷಿ ಸುಮಾರು 29,794 ಹೆಕ್ಟೇರ್‌ಗೆ ವಿಸ್ತರಿಸಿರುವ ಬೆನ್ನಲ್ಲೇ ಜಾರ್ಖಂಡ್‌ನಲ್ಲಿ ಸೂಕ್ತ…

24 hours ago

ದಾವಣಗೆರೆಯಲ್ಲಿ ಮಳೆ ಕೊರತೆ – ಮೆಕ್ಕೆಜೋಳ, ರಾಗಿ ಬೆಳೆ ಶೇ.50 ಹಾನಿ ಭೀತಿ

ದಾವಣಗೆರೆ ಜಿಲ್ಲೆಯಲ್ಲಿ 15 ದಿನಗಳಿಂದ ಮಳೆ ಕೊರತೆಯಾಗಿದ್ದು, ಮುಂದಿನ ಕೆಲ ದಿನಗಳಲ್ಲೂ ಮಳೆಯಾಗದಿದ್ದರೆ…

1 day ago