ಅಲರ್ಜಿ ಏಕಾಗುತ್ತದೆ? : ಯಾವುದಾದರೂ ಪದಾರ್ಥದ ಅಲರ್ಜಿ ಏಕೆ ಉಂಟಾಗುತ್ತದೆ?

February 3, 2024
2:15 PM

ವಿಜ್ಞಾನಿಗಳ(Scientist) ಪ್ರಕಾರ ಬ್ಯಾಕ್ಟೀರಿಯಾ(Bacteria), ವೈರಸ್‌ಗಳು(Virus) ಮತ್ತು ಶಿಲೀಂಧ್ರಗಳಂತಹ ಸೂಕ್ಷ್ಮಜೀವಿಗಳ(microorganism) ಸಾಗರದಲ್ಲಿ ನಾವು ಈಜುತ್ತಿದ್ದೇವೆ. ಅಂದರೆ, ನಮ್ಮ ಆರೋಗ್ಯಕ್ಕೆ(Health) ಹಾನಿ ಮಾಡುವ ಹಲವಾರು ಸೂಕ್ಷ್ಮಾಣುಜೀವಿಗಳು ನಮ್ಮ ಸುತ್ತಲೂ ಇವೆ. ಇದೆಲ್ಲವೂ, ಮತ್ತು ಶಕ್ತಿಯುತವಾದ ಸೂಕ್ಷ್ಮದರ್ಶಕಗಳ ಸಹಾಯದಿಂದ ಸಹ ನೋಡಲಾಗದ ಸೂಕ್ಷ್ಮಜೀವಿಗಳೊಂದಿಗೆ ವ್ಯವಹರಿಸುವುದೆಂದರೆ ಹಗಲು ರಾತ್ರಿ ಯುದ್ಧ ಭೂಮಿಯಲ್ಲಿ ಬದುಕಿದಂತೆ ಎಂದು ಒಬ್ಬ ಸಂತರು ಹೇಳಿದ್ದಾರೆ. ಆದರೆ ಅಂತಹ ಕಠಿಣ ಪರಿಸ್ಥಿತಿಯಲ್ಲಿಯೂ ನಾವು ಗೆಲ್ಲುವ ವ್ಯವಸ್ಥೆಯೂ ಸಹ ಪ್ರಕೃತಿಯಿಂದ ನಿರ್ಮಿಸಲ್ಪಟ್ಟಿದೆ.

ನಮ್ಮ ರಕ್ಷಣಾ ಕವಚದಂತಿರುವ ಸುವ್ಯವಸ್ಥಿತ, ಸುಸಂಘಟಿತ ಮತ್ತು ಸಮರ್ಥ ರಕ್ಷಣಾ ವ್ಯವಸ್ಥೆಯನ್ನು ನಮಗೆ ಲಭ್ಯವಿದೆ. ಈ ರಕ್ಷಣಾ ವ್ಯವಸ್ಥೆಯ ಆಯುಧಗಳು ಪ್ರತಿರಕ್ಷಣಾ ವ್ಯವಸ್ಥೆಯ ನಮ್ಮ ರಕ್ತದಲ್ಲಿನ ದುಗ್ಧರಸ ಕೋಶಗಳಾಗಿವೆ. ಇದರ ಜಾಲ ವಿವಿಧ ದುಗ್ಧರಸ ಗ್ರಂಥಿಗಳ ರೂಪದಲ್ಲಿ ದೇಹದಾದ್ಯಂತ ಹರಡಿವೆ. ರೋಗಕಾರಕಗಳು ದೇಹವನ್ನು ಪ್ರವೇಶಿಸುವ ಎಲ್ಲಾ ಸ್ಥಳಗಳಲ್ಲಿ ತಮ್ಮ ವಾಸಸ್ಥಾನವನ್ನು ಹೊಂದಿವೆ. ಇದಲ್ಲದೆ, ಅವು ರಕ್ತದಲ್ಲಿನ ಜೀವಕೋಶಗಳ ರೂಪದಲ್ಲಿ ರಕ್ತದ ಮುಖಾಂತರ ದೇಹದಾದ್ಯಂತ ಗಸ್ತು ತಿರುಗುತ್ತವೆ. ಈ ದುಗ್ಧರಸ ಕೋಶಗಳು ನಮ್ಮ ದೇಹದ ಭಾಗವಾಗಿದೆ.

ತನ್ನವರು ಯಾರು ಮತ್ತು ಅಪರಿಚಿತರು ಯಾರು ಎಂಬುದನ್ನು ಗುರುತಿಸುವ ಸಾಮರ್ಥ್ಯ ಇದಕ್ಕಿದೆ. ಪ್ರತಿ ಅಣುವಿನ ಮೇಲ್ಮೈಯಲ್ಲಿ ವಿಶಿಷ್ಟವಾದ ಪರಮಾಣು ರಚನೆಯ ರೂಪದಲ್ಲಿ ಗುರುತಿನ ಚೀಟಿಯನ್ನು ಓದುವ ಮೂಲಕ ಸಂದರ್ಶಕನು ಸ್ನೇಹಿತ ಅಥವಾ ಶತ್ರು ಎಂಬುದನ್ನು ಲಿಂಫೋಸೈಟ್ಸ್ ನಿರ್ಣಯಿಸುತ್ತದೆ, ಅದು ಅದರ ಸ್ಪಷ್ಟ ಗುರುತನ್ನು ಸ್ಥಾಪಿಸುತ್ತದೆ. ಅಂದರೆ ನಮ್ಮ ಶರೀರದಲ್ಲಿ ಹೊರಗಿನಿಂದ ಪ್ರವೇಶಿಸುವ ಅಥವಾ ಪ್ರಭಾವ ಬೀರುವ ಪ್ರತಿಯೊಂದು ಪದಾರ್ಥವನ್ನು ಪ್ರಯೋಜನಕಾರಿಯೋ ಅಥವಾ ಅಪಾಯಕಾರಿಯೋ ಎಂದು ಗುರುತಿಸುವ ಸಾಮರ್ಥ್ಯ ಈ ಪ್ರತಿರಕ್ಷಣಾ ವ್ಯವಸ್ಥೆಗೆ ಇರುತ್ತದೆ.

ಅಪಾಯಕಾರಿಯು ಪದಾರ್ಥಗಳ ವಿರುದ್ಧ ಹೋರಾಡಲು ಕೆಲವು ನಿರ್ದಿಷ್ಟ ಪ್ರೋಟೀನ್‌ಗಳಿಗೆ ಪ್ರತಿಕಾಯಗಳು ಉತ್ಪತ್ತಿಯಾಗುತ್ತವೆ. ಈ ಪ್ರತಿಕಾಯಗಳು ಆ ಗುರುತಿಗೆ ಮಾತ್ರ ಪ್ರತಿಕ್ರಿಯಾತ್ಮಕವಾಗಿರುತ್ತವೆ. ಅಪಾಯಕಾರಿ ಪದಾರ್ಥವನ್ನು ನಾಶಪಡಿಸುತ್ತವೆ. ಆದ್ದರಿಂದ, ಆ ಅಣು ನಿಷ್ಪರಿಣಾಮಕಾರಿಯಾಗುತ್ತದೆ. ಆದರೆ, ಕೆಲವು ದುಗ್ಧರಸ ಕೋಶಗಳು ಕೆಲವೊಮ್ಮೆ ಕೆಲವು ಅಣುಗಳಿಗೆ ಸಂಬಂಧಿಸಿದಂತೆ ಅತಿಯಾಗಿ ಪ್ರಚೋದಿಸಲ್ಪಡುತ್ತವೆ. ಅವು ಆ ಅಣುವಿನ ವಿರುದ್ಧ ಬಲವಾಗಿ ಪ್ರತಿಕ್ರಿಯಿಸುತ್ತವೆ. ಉದಾಹರಣೆಗೆ, ಒಂದು ಸಣ್ಣ ವಿಷಯಕ್ಕೆ ತೀವ್ರ ಸಂಕಟಪಡುವಂತೆ ಅಥವಾ ಬೆರಳಿನ ಉಗುರಿನಿಂದ ಸುಲಭವಾಗಿ ಮಾಡಬಹುದಾದ ಕೆಲಸಕ್ಕೆ ಕೊಡಲಿಯನ್ನು ಬಳಸಿದಂತೆ ಅಥವಾ ಕೇವಲ ಇಬ್ಬರು ಭಯೋತ್ಪಾದಕರನ್ನು ಕೊಲ್ಲಲು ಒಂದು ಲಕ್ಷ ಸೈನಿಕರು ಒಮ್ಮೆಲೆ ದಾಳಿ ಮಾಡಿದಂತೆ. ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯ ಈ ಅನಗತ್ಯ ಅತಿಯಾದ ಪ್ರತಿಕ್ರಿಯೆಯನ್ನು ಅಲರ್ಜಿ ಎಂದು ಕರೆಯಲಾಗುತ್ತದೆ.

ಈ ಪ್ರತಿರಕ್ಷಣಾ ವ್ಯವಸ್ಥೆಯು ನಮ್ಮನ್ನು ಕೆಲವು ಅಪಾಯಕಾರಿ ಪದಾರ್ಥಗಳಿಂದ ರಕ್ಷಿಸುವುದಕ್ಕಾಗಿ ಕೆಲಸ ಮಾಡಬೇಕು. ಆದರೆ, ಆ ಉತ್ಸಾಹದಲ್ಲಿರುವ ಕೆಲವು ರಾಸಾಯನಿಕಗಳು ಶ್ವಾಸನಾಳ ಮತ್ತು ರಕ್ತನಾಳಗಳು ಮುಚ್ಚಿಹೋಗುವಂತೆ ಮಾಡುತ್ತವೆ. ಇದರಿಂದ ಉಸಿರಾಡಲು ಕಷ್ಟವಾಗುತ್ತದೆ. ರಕ್ತದ ಹರಿವು ಸಹ ಅಡಚಣೆಯಾಗುತ್ತದೆ. ಹೃದಯದ ಕಾರ್ಯದ ಮೇಲೂ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದನ್ನು ಅತಿಸೂಕ್ಷ್ಮ ಪ್ರತಿಕ್ರಿಯೆ ಅಥವಾ ಅಲರ್ಜಿ ಎಂದು ಕರೆಯಲಾಗುತ್ತದೆ. ಅಲರ್ಜಿಗಳು ಏಕೆ ಸಂಭವಿಸುತ್ತವೆ ಎಂಬುದನ್ನು ನಾವು ಇಂದು ಅರ್ಥಮಾಡಿಕೊಂಡಿದ್ದರೂ, ಕೆಲವು ಪದಾರ್ಥಗಳು ಏಕೆ ಅಲರ್ಜಿಯನ್ನು ಉಂಟುಮಾಡುತ್ತವೆ ಎಂಬ ರಹಸ್ಯವನ್ನು ಇನ್ನೂ ಪರಿಹರಿಸಲಾಗಿಲ್ಲ.

ಯಾವ ಪದಾರ್ಥಗಳು ಅಲರ್ಜಿಯನ್ನು ಉಂಟುಮಾಡಬಹುದು? : ವೈದ್ಯಕೀಯ ಕ್ಷೇತ್ರದಲ್ಲಿ ಆಂಗ್ಲ ಭಾಷೆಯಲ್ಲಿ ಒಂದು ಮಾತಿದೆ ಎನಿಥಿಂಗ್ ಅಂಡರ್ ದಿ ಸನ್ ಇನ್ಕ್ಲೂಡಿಂಗ್ ದಿ ಸನ್ ಕ್ಯಾನ್ ಕಾಜ್ ಅಲರ್ಜಿ ಅಂದರೆ ಸೂರ್ಯ ಮತ್ತು ಅದರ ವ್ಯಾಪ್ತಿಗೆ ಬರುವ ಯಾವುದೇ ಪದಾರ್ಥವು ಅಲರ್ಜಿಯನ್ನು ಉಂಟುಮಾಡಬಹುದು. ಅಂದರೆ, ಯಾವುದೇ ಪದಾರ್ಥದಿಂದ ಬೇಕಾದರೂ ಅಲರ್ಜಿ ಉಂಟಾಗಬಹುದು. ಒಬ್ಬ ವ್ಯಕ್ತಿಯು ಒಂದು ನಿರ್ದಿಷ್ಟ ಪದಾರ್ಥಕ್ಕೆ ಏಕೆ ಅಲರ್ಜಿಯನ್ನು ಹೊಂದಿದ್ದಾನೆ ಎಂಬುದಕ್ಕೆ ನಿಖರವಾದ ಉತ್ತರವಿಲ್ಲ. ಆದರೆ, ಅಲರ್ಜಿಯ ಮುಖ್ಯ ಕಾರಣ ಎರಡು ವಿಷಯಗಳಿಗೆ ಸಂಬಂಧಿಸಿದೆ ಎಂಬುದು ನಿಜ, ವಂಶವಾಹಿನಿಗಳಲ್ಲಿ ದೋಷ ಮತ್ತು ಜೀವನಶೈಲಿಯ ತಪ್ಪುಗಳು.

ಯಾವ ಪದಾರ್ಥದ ಅಲರ್ಜಿ ಆಗಿದೆ ಎಂದು ಹೇಗೆ ತಿಳಿಯುವುದು?: ಯಾವ ಪದಾರ್ಥ ಅಲರ್ಜಿ ಇದೆ ಎಂಬುದನ್ನು ಸ್ವತಃ ರೋಗಿಯೇ ಹೇಳಬೇಕು. ಏಕೆಂದರೆ, ಒಬ್ಬ ವ್ಯಕ್ತಿಗೆ ಯಾವ ಪದಾರ್ಥದಿಂದ ತೊಂದರೆಯಾಗುತ್ತದೆಂದು ವೈದ್ಯರು ಹೇಳಲು ಸಾಧ್ಯವಿಲ್ಲ. ಉದಾಹರಣೆಗೆ, ಒಬ್ಬ ವ್ಯಕ್ತಿಗೆ ತೊಗರಿ ಬೇಳೆ ತಿಂದ ನಂತರ ತುರಿಕೆಯಾಗುತ್ತಿದ್ದರೆ ಈ ವಿಷಯ ವೈದ್ಯರಿಗೆ ಗೊತ್ತಿರುವುದಿಲ್ಲ. ಆ ವ್ಯಕ್ತಿಯೇ ಇದನ್ನು ನಿರೀಕ್ಷಣೆ ಮಾಡಿ ವೈದ್ಯರಿಗೆ ತಿಳಿಸಬೇಕು. ಕೆಲ ಸಂದರ್ಭಗಳಲ್ಲಿ ಯಾವ ಪದಾರ್ಥದಿಂದ ಅಲರ್ಜಿ ಆಗುತ್ತಿದೆ ಎಂದು ತಿಳಿಯುವುದೇ ಇಲ್ಲ. ಇತಹ ಸಂದರ್ಭಗಳಲ್ಲಿ ಕೆಲವು ಪರೀಕ್ಷಣೆಗಳನ್ನು ಮಾಡುತ್ತಾರೆ. ಅಲರ್ಜಿ ಉಂಟು ಮಾಡಬಹುದಾದಂತಹ ವಿವಿಧ ಪದಾರ್ಥಗಳನ್ನು ಪ್ರಯೋಗಾಲಯದಲ್ಲಿ ರೋಗಿಗೆ ಚುಚ್ಚುಮದ್ದಿನ ರೂಪದಲ್ಲಿ ನೀಡಿ ಅದರ ಫಲಿತಾಂಶಗಳನ್ನು ಅವಲೋಕಿಸಿ ವರದಿಯನ್ನು ಕೊಡುತ್ತಾರೆ. ಹೀಗೆ ವ್ಯಕ್ತಿಯು ಆ ಪದಾರ್ಥದಿಂದ ದೂರವಿರಲು ಅನುಕೂಲವಾಗುತ್ತದೆ.

ಸಂಗ್ರಹ ಮತ್ತು ಸಂಪಾದನೆ: ಡಾ. ಪ್ರ. ಅ. ಕುಲಕರ್ಣಿ

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು[email protected] ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

ಇದನ್ನೂ ಓದಿ

ತೋಟಗಾರಿಕಾ ಬೆಳೆಗಾರರ ಪರ ಲೋಕಸಭೆಯಲ್ಲಿ ಧ್ವನಿ – ಹವಾಮಾನ ಆಧಾರಿತ ಬೆಳೆ ವಿಮೆ ಮರುಪರಿಷ್ಕರಣೆಗೆ ಕ್ಯಾ. ಚೌಟ ಒತ್ತಾಯ
August 12, 2026
6:58 AM
by: ದ ರೂರಲ್ ಮಿರರ್.ಕಾಂ
ಅಡಿಕೆ ಅಕ್ರಮ ಆಮದು ಕಡಿವಾಣ – ರೋಸ್ಟೆಡ್ ಅಡಿಕೆಗೆ ₹351 ಕನಿಷ್ಠ ದರ – ಕಸ್ಟಮ್ಸ್‌ ನಿಗಾ ಎಂದ ಕೇಂದ್ರ
August 11, 2026
10:31 PM
by: ದ ರೂರಲ್ ಮಿರರ್.ಕಾಂ
ತೆಂಗು ಬೆಳೆಗೆ ವಿಮೆ : ಕೇಂದ್ರದ ಮಹತ್ವದ ಉತ್ತರ
August 11, 2026
9:56 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 11-08-2026 | ಕರ್ನಾಟಕದ ಹವಾಮಾನದಲ್ಲಿ ಮುಂದಿನ ದಿನಗಳಲ್ಲಿ ಏನು ಬದಲಾವಣೆ ?
August 11, 2026
9:12 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror