ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆ.. ರೈತರಿಗಾಗಿ ಸರ್ಕಾರ ಮಾಡಿದ ಒಂದು ಅತ್ಯನುಕೂಲಕರವಾದ ಯೋಜನೆ. ಈ ಕಾರ್ಡ್ ಮೂಲಕ ರೈತರಿಗೆ ಕ್ರೆಡಿಟ್ ಕಾರ್ಡ್ ನೀಡಲಾಗುತ್ತದೆ. ಈ ಕಾರ್ಡ್ ಮೂಲಕ ಅವರು ತಮ್ಮ ಅಗತ್ಯಕ್ಕೆ ಅನುಗುಣವಾಗಿ 1.6 ಲಕ್ಷ ರೂಪಾಯಿವರೆಗೆ ಸಾಲ ಪಡೆಯಬಹುದು. ಅವರು ತಮ್ಮ ಹೊಲಗಳಿಗೆ ಬಿತ್ತನೆ ಮಾಡುವುದು, ಬೆಳೆ ಪೋಷಣೆ, ಬೆಳೆಗಳಿಗೆ ರಸಗೊಬ್ಬರ ಹಾಕುವುದು ಮೊದಲಾದ ಕೃಷಿ ಚಟುವಟಿಕೆಗಳಿಗೆ ಸಾಲ ಪಡೆಯಲು ಕಿಸಾನ್ ಕ್ರೆಡಿಟ್ ಕಾರ್ಡ್ ಬಳಸಬಹುದು.
ಈ ಕಾರ್ಡ್ ಮೂಲಕ ಸಾಲ ಪಡೆಯಲು ಅರ್ಹತೆ:
ಬಾಡಿಗೆ ಕೃಷಿಕರು, ಸ್ವಂತ ಹಿಡುವಳಿದಾರರು, ಸ್ವಂತ ಹಿಡುವಳಿಯುಳ್ಳ ಬೆಳೆ ಪಾಲುದಾರರು, ಭೋಗ್ಯ ಕೃಷಿಕರು, ಸ್ವ ಸಹಾಯ ಸಂಘಗಳು, ಕೃಷಿಕರು, ಕೃಷಿಕರ ಸಂಯುಕ್ತ ಋಣಭಾರ ಗುಂಪುಗಳು ಸಾಲ ಸೌಲಭ್ಯ ಪಡೆಯಬಹುದು.
ಯಾವುದಕ್ಕೆಲ್ಲ ಸಾಲ ಸೌಲಭ್ಯವಿದೆ:
ಬೆಳೆ ಬೆಳೆಯಲು ಬೇಕಾಗುವ ಬೀಜ, ಗೊಬ್ಬರ ಇತ್ಯಾದಿ ಅಲ್ಪಾವಧಿ ಖರ್ಚುಗಳಿಗೆ ಫಸಲು ಬಂದ ಅನಂತರ ಬೆಳೆಯ ಸಂಸ್ಕರಣೆಗೆ ಮಾಡಬೇಕಾದ ಖರ್ಚು ವೆಚ್ಚಗಳಿಗೆ, ಬೆಳೆಗೆ ಮಾರುಕಟ್ಟೆಯಲ್ಲಿ ಸರಿಯಾದ ದರ ಬರುವವರೆಗೆ ಕಾಯ್ದಿಡಬೇಕಾದ ಅವಧಿಯಲ್ಲಿ ಅಗತ್ಯವಿರುವ ಕೃಷಿ ಖರ್ಚು, ರೈತನ ಮನೆಯ ಗೃಹಸಂಬಂಧಿ ಖರ್ಚು, ಕೃಷಿಗೆ ಸಂಬಂಧಿಸಿದ ಪರಿಕರಗಳ ರಿಪೇರಿ ಮತ್ತು ನಿರ್ವಹಣೆಗೆ, ಹೈನುಗಾರಿಕೆ, ಕುರಿ, ಕೋಳಿ ಸಾಕಾಣಿಕೆ ಇತ್ಯಾದಿಗೆ ಕಿಸಾನ್ ಕ್ರೆಡಿಟ್ ಕಾರ್ಡ್ನಲ್ಲಿ ಸಾಲ ಪಡೆಯಬಹುದು.
ಬಡ್ಡಿ ದರ ಎಷ್ಟಿರುತ್ತೆ..? :
ಮೂರು ಲಕ್ಷದವರೆಗಿನ ಅಲ್ಪಾವಧಿ ಸಾಲಕ್ಕೆ ಈಗ ಶೇ.7 ಬಡ್ಡಿ ಇದ್ದು ಪ್ರಾಮಾಣಿಕವಾಗಿ ಮರುಪಾವತಿ ಮಾಡಿದವರಿಗೆ ಶೇ.4 ರ ಬಡ್ಡಿಯಲ್ಲಿ ಸಾಲ ದೊರೆಯುತ್ತದೆ. ಅವಧಿ ಸಾಲಗಳಿಗೆ ತುಸು ಹೆಚ್ಚಿನ ಬಡ್ಡಿ ಅಂದರೆ, ಶೇ.10.50 ರಿಂದ ಶೇ.11ರ ವರೆಗೆ ಇದೆ. ಒಂದು ಲಕ್ಷದವರೆಗಿನ ಸಾಲಕ್ಕೆ ಯಾವುದೇ ಭದ್ರತೆಯ ಅವಶ್ಯಕತೆಯಿಲ್ಲ.
ಕಿಸಾನ್ ಕ್ರೆಡಿಟ್ ಕಾರ್ಡ್ ಪ್ರಾಥಮಿಕವಾಗಿ ಕೃಷಿ ಸಂಬಂಧಿತ ಸಾಲವಾಗಿದೆ, ಇದನ್ನು ನಬಾರ್ಡ್ ಅಡಿಯಲ್ಲಿ ಅಭಿವೃದ್ಧಿಪಡಿಸಲಾಗಿದೆ ಮತ್ತು 1998 ರಲ್ಲಿ ಭಾರತದ ವಿವಿಧ ಸಾರ್ವಜನಿಕ ವಲಯದ ಬ್ಯಾಂಕ್ಗಳು ಪರಿಚಯಿಸಿದವು. ಈ ಸಾಲದ ಅಂತಿಮ ಗುರಿ ರೈತನ ಒಟ್ಟಾರೆ ಕೃಷಿ ಅಗತ್ಯಗಳನ್ನು ಪೂರೈಸುವುದಾಗಿದೆ.
ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲವು ಕೃಷಿ ಭವನದಿಂದ ಲಭ್ಯವಿಲ್ಲ, ಆದರೆ ಇದು ಕೇವಲ ಬ್ಯಾಂಕ್ಗಳ ಮೂಲಕ ಜಾರಿಗೊಳಿಸಲಾದ ಯೋಜನೆಯಾಗಿದೆ. ಇದು ರೈತರಿಗೆ ‘ಕ್ರೆಡಿಟ್ ಕಾರ್ಡ್’ ಸಾಲ ಯೋಜನೆಯಾಗಿದೆ. ಅಂದರೆ ಸಾಲದ ಜೊತೆಗೆ ರೈತರಿಗೆ ಎಲೆಕ್ಟ್ರಾನಿಕ್ ಕ್ರೆಡಿಟ್ ಕಾರ್ಡ್ ಕೂಡ ಸಿಗುತ್ತದೆ. ಈ ಕಾರ್ಡ್ನೊಂದಿಗೆ ರೈತರು ತಮ್ಮ ಕೃಷಿ ಅಗತ್ಯಗಳಿಗಾಗಿ ಎಟಿಎಂ ಮೂಲಕ ಹಣವನ್ನು ಪಡೆಯಬಹುದು.
ನೀವು ಸಾಲದ ಖಾತೆಯಿಂದ1 ಲಕ್ಷ ರೂ. ಗಳನ್ನು ಹಿಂತೆಗೆದುಕೊಳ್ಳುವ ಮತ್ತು ಉಳಿತಾಯ ಖಾತೆಯಲ್ಲಿ ಮೊದಲ ಹಂತದಲ್ಲಿ ಠೇವಣಿ ಮಾಡಿದರೆ, ನೀವು ಅದರಿಂದ 10,000 ರೂ.ಗಳನ್ನು ತೆಗೆದುಕೊಂಡರೂ, ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ ಸಾಲವನ್ನು ಸ್ವಂತ ಖಾತೆಯಿಂದ ಹಿಂಪಡೆದು ಮರುಪಾವತಿಸಲು ವಿಶೇಷ ಗಮನ ಹರಿಸಬೇಕು. ಬ್ಯಾಂಕ್ಗಳಿಂದ ಕಿಸಾನ್ ಕ್ರೆಡಿಟ್ ಕಾರ್ಡ್ ಯೋಜನೆಯಡಿ ಎಲೆಕ್ಟ್ರಾನಿಕ್ ಕ್ರೆಡಿಟ್ ಕಾರ್ಡ್ಗಳನ್ನು ಕೇಳಿ ಪಡೆಯಿರಿ.
ಕೃಷಿ ಭೂಮಿ ಹೊಂದಿರುವ ಯಾವುದೇ ರೈತರು ಕಿಸಾನ್ ಕ್ರೆಡಿಟ್ ಕಾರ್ಡ್ಗೆ ಅರ್ಜಿ ಸಲ್ಲಿಸಬಹುದು. ಗೇಣಿದಾರ ರೈತರಿಗೆ, ರೈತರ ಗುಂಪುಗಳು ನೋಂದಾಯಿತ ಗುತ್ತಿಗೆ ಒಪ್ಪಂದ ಮತ್ತು ಸಾಗುವಳಿ ಜಮೀನಿನ ಸ್ವಯಂ ಪಾವತಿ ರಸೀದಿಯನ್ನು ಸಲ್ಲಿಸುವ ಮೂಲಕ ಸಾಲಕ್ಕೆ ಅರ್ಜಿ ಸಲ್ಲಿಸಬಹುದು. ಪ್ರತಿ ಬೆಳೆಗೆ ನಿಗದಿತ ಪ್ರಮಾಣದ ಹಣಕಾಸು ಸಾಲಗಳು ಲಭ್ಯವಿರುತ್ತವೆ.
ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…
ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…
ಗುಟ್ಕಾ–ಪಾನ್ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…