Advertisement
ಮಾಹಿತಿ

ತರಕಾರಿ ಬೀಜಗಳನ್ನು ಯಾವ ತಿಂಗಳು, ವಾರಗಳಲ್ಲಿ ಬಿತ್ತನೆ ಮಾಡಬೇಕು | ಪಿ.ಶಿವಪ್ರಸಾದ, ವರ್ಮುಡಿ ಹೇಳುತ್ತಾರೆ… |

Share

ರೈತ ಬಂಧುಗಳೇ, ಈಗ ಪಾರಂಪರಿಕ ಕೃಷಿ ಬಿಟ್ಟು ತಾಂತ್ರಿಕ ಕೃಷಿ  ಮಾಡುವ ಸಮಯ ಬಂದಿದೆ, ಇದರಿಂದ ಉತ್ಪಾದನೆಯ ಜೊತೆಗೆ ಲಾಭವೂ ಹೆಚ್ಚಬಹುದು.ಯಾವ ತಿಂಗಳು ಯಾವ ತರಕಾರಿಯನ್ನು ಬೆಳೆಯಬಹುದು ಎಂಬುದನ್ನು ಶಿವಪ್ರಸಾದ್ ವರ್ಮುಡಿ ಅವರು ತಿಳಿಸಿಕೊಟ್ಟಿದ್ದಾರೆ.

ನಿರ್ವಿಷ ನಿರಂತರ ತರಕಾರಿ ಕ್ಯಾಲಂಡರ್.

1. April ತಿಂಗಳ 20 ನೇ ತಾರೀಕಿನ ನಂತ್ರ ಬರುವ ಅಮಾವಾಸ್ಯೆಯ ಹಿಂದೆ ಮುಂದಾಗಿ ಶನಿವಾರ/ಬುಧವಾರ,ಮಿ/ ತಿಥಿ ಬಿಟ್ಟು ಗೊಬ್ರಗಳಿಂದ ಮಣ್ಣು ಹದಮಾಡಿದ ಏರು ಮಡಿಗಳಲ್ಲಿ ಎರಡಿಂದ ಮೂರು ಇಂಚು ಆಳದಲ್ಲಿ ಈ ಕೆಳಗಿನ ತರಕಾರಿ ಬೀಜಗಳನ್ನು ಬಿತ್ತುವುದು. ನೀರು ಖಂಡಿತಾ ಹಾಕಲೇಬಾರದು. ಮಳೆ ಬಂದು ಅದರಷ್ಟಕ್ಕೆ ಸ್ವಾಭಾವಿಕವಾಗಿ ಹುಟ್ಟಬೇಕು.
1.ಸೊರೆ.2.ಪಡುವಲ. 3.ದಾರಳೆ. 4.ಋಷಿಕೇಶದಾರಳೆ. 5.ಹಾಗಲ. 6.ಅಳಸಂಡೆ. 7.ಕುಂಬಳ. 8.ಚೀನಿಕಾಯಿ.
ಬೆಂಡೆ ಹಾಕಬೇಡಿ.
2. May ತಿಂಗಳ ಕೊನೆಗೆ ಬರುವ ಅಮವಾಸ್ಯೆ ಯ ಅಕ್ಕ ಪಕ್ಕ , ಮಿ/ ತಿಥಿ ಬಿಟ್ಟು ಶನಿವಾರ/ ಬುಧವಾರ ದಂದು ಬೆಂಡೆ ಬೀಜ ಬಿತ್ತಿ.
3. ಮಳೆಗಾಲ ಬಂದ ತಕ್ಷಣ ಬೇಸಿಗೆಯ ಬದನೆ ಗಿಡಗಳ ಗೆಲ್ಲುಗಳನ್ನು ಸವರಿ ಸಾಲುಬಿಡಿಸಿ ಗೊಬ್ರ ಕೊಡಿ,ಸಮೃದ್ಧ ಬೆಳೆ.
4.June Last week/ July First week ಬರುವ ಅಮವಾಸ್ಯೆ (ಆರ್ಧ್ರಾ ನಕ್ಷತ್ರ ) ಮುಳ್ಳು ಸೌತೆ,ಬೀಜ ಹಾಕುದು.
5. July last week/ August first week ಬರುವ ಆಟಿ ಅಮವಾಸ್ಯೆ ಹತ್ರ ಸೌತೆ,ಕುಂಬಳ ಚೀನಿಕಾಯಿ ಬೀಜ ಬಿತ್ತುವುದು.
ಬಸಾಳೆ ನಡುವುದು.
6. ಮೇಲಿನ ದಿನವೇ ಬದನೆ ಬೀಜ ಬಿತ್ತುವುದು. Oct ನಲ್ಲಿ ನಡಲು ತಯಾರಿಗಾಗಿ.
7.August last ಗೆ ತೊಂಡೆ ಬಳ್ಳಿ ನಡುವುದು,/ ಬಳ್ಳಿ ಕತ್ತರಿಸುವುದು.

8. Oct 20 ರಿಂದ 30 ರ ಅಂದಾಜು ಬದನೆ ಗಿಡ ನಡುವುದು.
9. Nov last week ಬೆಂಡೆ ಬೀಜ ಹಾಕುವುದು.
10. Nov last week/Dec first week ಆಟಿಸೌತೆ ಮಾಡಿದ ಸಾಲನ್ನು ಹರಡಿ , ಕೊಚ್ಚಿ ಹರಿವೆ ಬೀಜ ಬಿತ್ತುವುದು.
11.Dec last week ಅಳಸಂಡೆ, ಪಡುವಲ,ಹಾಗಲ,ದಾರಳೆ ಸಾಲು ಕಣಿ ಮಾಡಿವಬೀಜ ಬಿತ್ತುವುದು.
12.Feb 25/30 ಅಂದಾಜು ಸೌತೆಕಾಯಿ, ಕುಂಬಳ,ಸೊರೆ,ಚೀನಿಕಾಯಿ, ಮುಳ್ಳುಸೌತೆ, ಬೆಂಡೆ ಬೀಜ ಬಿತ್ತುವುದು.
13.April last week/Mayfirst week ಅಳಸಂಡೆ,ಮುಳ್ಳುಸೌತೆ, ಸೌತೆ, ಬೆಂಡೆ ಬೀಜ ಬಿತ್ತುವುದು.

ವಿ.ಸೂ: ಎಲ್ಲಾಬೀಜ ಬಿತ್ತುವ ದಿನ ಮಿ ಯಿಂದ ಅಂತ್ಯಗೊಳ್ಳುವ ತಿಥಿ ಬಿಡಿ.( ಸಪ್ತಮಿ,ಅಷ್ಟಮಿ,ನವಮಿ……..)
ವಾರ : ಶನಿವಾರ,ಬುಧವಾರ, ಬೀಜ ಬಿತ್ತನೆಗೆ ಅತ್ಯಂತ ಯೋಗ್ಯ. ಇವಿಷ್ಟು ಅನುಸರಿಸಿದರೆ ಬೆಳೆ ಸಮೃದ್ಧ. ರೋಗಭಾದೆ ಕಡಿಮೆ. ನೆಲಬಸಾಳೆ, ಗಡ್ಡೆ ತರಕಾರಿ ಜೊತೆಯಲ್ಲಿರಲಿ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!

ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…

2 hours ago

ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!

ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…

2 hours ago

ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?

ಗುಟ್ಕಾ–ಪಾನ್‌ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…

1 day ago

ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ

ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…

2 days ago

ಎಲ್ ನಿನೊ ಪರಿಣಾಮ 15 ರಾಜ್ಯಗಳ 342 ಜಿಲ್ಲೆಗಳಲ್ಲಿ ಮಳೆ ಕೊರತೆ

ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…

2 days ago

ಇನ್ನೊಂದು ಮನೆಯ ಸಮಸ್ಯೆ ನಮಗೆ ಸುದ್ದಿ ; ನಮ್ಮ ಮನೆಯ ನೋವು ಮಾತ್ರ ನಮಗೆ ಸಂಕಟ..! ಯಾಕೆ ?

ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…

2 days ago