Advertisement
Opinion

#MahalayaAmavasye | ಮಹಾಲಯ ಅಮಾವಾಸ್ಯೆಯನ್ನು ಏಕೆ ಆಚರಿಸಬೇಕು | ಮೃತರಿಗೆ ಪೂರ್ವಿಕರ ಸಂಸ್ಕಾರ, ತರ್ಪಣ ಬಿಡುವುದು ಸಂಪ್ರದಾಯ |

Share

ಮನುಷ್ಯರಾದ ನಾವು ದೇವತಾರಾಧನೆಗೆ ಎಷ್ಟು ಪ್ರಾಮುಖ್ಯ ನೀಡುತ್ತೇವೋ ಅಷ್ಟೇ ಪ್ರಾಮುಖ್ಯವನ್ನು ಪಿತೃದೇವತೆಗಳಿಗೆ ನೀಡಬೇಕು ಎಂದು ಶಾಸ್ತ್ರಗಳು ಹೇಳುತ್ತವೆ. ನಮ್ಮ ಸನಾತನ ಧರ್ಮದಲ್ಲಿ ಮೃತರಿಗೆ ಪೂರ್ವಿಕರ ಸಂಸ್ಕಾರ, ತರ್ಪಣ ಬಿಡುವುದು ಸಂಪ್ರದಾಯ.

ಮನೆಯಲ್ಲಿ ಯಾರಾದರೂ ಸತ್ತಾಗ ಕೆಲವು ಕಾರಣಗಳಿಂದ ಪಿತೃಕರ್ಮಗಳನ್ನು ಮಾಡಲಾಗದೇ ಇದ್ದರೆ, ಕೆಲವೊಮ್ಮೆ ಅವಘಡಗಳಲ್ಲಿ ಸತ್ತಾಗ ಅವರು ಯಾವಾಗ ಸತ್ತರು ಎಂಬ ಸಮಯ, ಘಳಿಗೆ ತಿಳಿಯದ ಸಂದರ್ಭದಲ್ಲಿ ಭಾದ್ರಪದ ಪಿತೃಪಕ್ಷ ಮಾಸದ ಸಮಯದಲ್ಲಿ ಕಾರ್ಯಗಳನ್ನು ಮಾಡುವುದು ಯೋಗ್ಯ ಎಂದು ಹೇಳುತ್ತವೆ. ಪ್ರತಿ ತಿಂಗಳ ಅಮಾವಾಸ್ಯೆಯಂದು ಪಿತೃತರ್ಪಣ ಅರ್ಪಿಸಬೇಕು ಎನ್ನುವ ಮಾತು ಸಹ ಇದೆ. ಪ್ರತಿ ತಿಂಗಳು ಮಾಡಲು ಸಾಧ್ಯವಾಗದೇ ಇದ್ದವರು ಮಹಾಲಯ ಮಾಸದಂದು ಮಹಾಲಯ ಅಮಾವಾಸ್ಯೆಯಂದು ಗತಿಸಿದ ಹಿರಿಯರಿಗೆ ಅಥವಾ ಪಿತೃಗಳಿಗೆ ತರ್ಪಣ ಕಾರ್ಯ ಮಾಡಿದರೆ ವರ್ಷಪೂರ್ತಿ ಫಲ ಸಿಕ್ಕಂತೆ ಎನ್ನುತ್ತಾರೆ.

ಮಹಾಲಯವನ್ನು ಏಕೆ ಆಚರಿಸಬೇಕು ? : ‌ ಆಷಾಢ ಮಾಸದ ಹದಿನೈದು ದಿನಗಳಿಂದ ಆರಂಭಿಸಿ, ಭಾದ್ರಪದ ಕೃಷ್ಣ ಪಕ್ಷಕ್ಕೆ ಹಿಂತಿರುಗುವವರೆಗೆ ನಮ್ಮ ಪಿತೃದೇವತೆಗಳು ಹಲವು ತೊಂದರೆಗಳನ್ನು ಎದರಿಸುತ್ತಾರೆ. ತುಲಾ ರಾಶಿಯಿಂದ ವೃಶ್ಚಿಕ ರಾಶಿಯವರೆಗೆ ಸೂರ್ಯನು ಇಲ್ಲದೇ ಇರುವುದು ಇದಕ್ಕೆ ಕಾರಣ ಎಂದು ಪುರಾಣಶಾಸ್ತ್ರಗಳು ಹೇಳುತ್ತವೆ. ಆ ಸಮಯದಲ್ಲಿ ಪಿತೃಗಳು ಆಶೀರ್ವಾದವನ್ನು ಬಯಸಿ ಭೂಮಿಯ ಮೇಲಿನ ತಮ್ಮ ಮನೆಗಳಲ್ಲಿ ಬರುತ್ತಾರೆ ಎನ್ನುವ ಪ್ರತೀತಿ ಇದೆ.

ಆ ಕಾರಣದಿಂದಲೇ ಮರಣಾನಂತರ ಮಾಡುವ ಈ ಆಚರಣೆಗಳು ಎಷ್ಟು ಪ್ರಾಮುಖ್ಯವನ್ನು ಪಡೆದಿವೆ. ನೂರು ಯಜ್ಞಗಳನ್ನು ಮಾಡುವುದಕ್ಕಿಂತಲೂ ನಮ್ಮ ಪಿತೃದೇವತೆಗಳ ತರ್ಪಣ ಬಿಡುವುದು ಮುಖ್ಯವೆಂದು ಹೇಳಲಾಗುತ್ತದೆ. ಈ ವಿಷಯದಲ್ಲಿ ನಿರಾಸಕ್ತಿ ಬೇಡ.

ದೇವತೆಗಳ ಕಾಲವಾದ್ದರಿಂದ ಉತ್ತರಾಯಣವು ಅತ್ಯುತ್ತಮ ಕಾಲವೆಂದೂ, ಪಿತೃಕಾಲವಾದ್ದರಿಂದ ದಕ್ಷಿಣಾಯಣವು ಅಶುಭ ಕಾಲವೆಂದೂ ನಮ್ಮ ಪೂರ್ವಜರು ನಂಬಿದ್ದಾರೆ. ಮಹಾಲಯ ಎಂದರೆ ಭಾದ್ರಪದ ಮಾಸ ಕೃಷ್ಣ ಪಕ್ಷದ ಪಾಡ್ಯಮಿಯಿಂದ ಆರಂಭವಾಗಿ ಅಮಾವಾಸ್ಯೆಯಂದು ಮುಗಿಯುವ ಹದಿನೈದು ದಿನಗಳು. ಇದನ್ನು ಪಿತೃಪಕ್ಷ ಮತ್ತು ಮಹಾಲಯ ಎಂದು ಕರೆಯಲಾಗುತ್ತದೆ. ಇದರಲ್ಲಿ ಅತ್ಯಂತ ಪ್ರಮುಖವಾದ ತಿಥಿ ತ್ರಯೋದಶಿ. ಅಂದರೆ ಭಾದ್ರಪದ ಕೃಷ್ಣ ತ್ರಯೋದಶಿ ಮಾಘ ನಕ್ಷತ್ರದೊಂದಿಗೆ ಸೇರಿದಾಗ ಶ್ರಾದ್ಧದಿಂದ ಕೂಡಿದ ಯಾವುದೇ ವಸ್ತು ಪಿತೃಗಳಿಗೆ ಚಿರತೃಪ್ತಿ ನೀಡುತ್ತದೆ.

ಈ ವಿಶೇಷ ಮಹಾಲಯ ಪಕ್ಷದಲ್ಲಿ, ಎಲ್ಲಾ ಜಾತಿಗಳ ಜನರು ತಮ್ಮ ಶಕ್ತಿಗೆ ಅನುಗುಣವಾಗಿ ಹದಿನೈದು ದಿನಗಳ ಕಾಲ ತಿಥಿಯನ್ನು ಆಚರಿಸುತ್ತಾರೆ. ಶಕ್ತಿ ಇಲ್ಲದವರು ತಮ್ಮ ಹಿರಿಯರ ಮರಣದ ತಿಥಿಯಂದು ತರ್ಪಣ ಶ್ರಾದ್ಧವನ್ನು ಮಾಡುತ್ತಾರೆ. ಸತ್ತವರ ತಿಥಿ ನೆನಪಿಲ್ಲದೇ ಇದ್ದರೆ, ಮಹಾಲಯ ಅಮಾವಾಸ್ಯೆಯನ್ನು ನಿರ್ಧರಿಸಬಹುದು.

(ಅಂತರ್ಜಾಲ ಮಾಹಿತಿ)

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಅಡಿಕೆಯಷ್ಟೇ ಅಲ್ಲ ಅದೇ ಮರಕ್ಕೆ ವೆನಿಲ್ಲಾ ಬಳ್ಳಿ | ಅಸ್ಸಾಂನಲ್ಲಿ ಅಡಿಕೆಯ ಜೊತೆಗೆ ಇನ್ನೊಂದು ಬೆಳೆ..

ಅಸ್ಸಾಂನ ಗುಹಾಟಿ ಸಮೀಪದ 10 ಅರಣ್ಯ ಅಂಚಿನ ಗ್ರಾಮಗಳಲ್ಲಿ ಅಡಿಕೆ, ತೆಂಗು ಮತ್ತು…

7 hours ago

ದೇಶಾದ್ಯಂತ ಮುಂಗಾರು ಬಿತ್ತನೆ 1,086 ಲಕ್ಷ ಹೆಕ್ಟೇರ್ ದಾಟಿದೆ – ಕರ್ನಾಟಕದಲ್ಲಿ ಭತ್ತ, ದ್ವಿದಳ ಧಾನ್ಯ ಕೃಷಿ ಕುಸಿತ

ದೇಶದ ಪ್ರಸಕ್ತ ಮುಂಗಾರು ಬೆಳೆಗಳ ಬಿತ್ತನೆ ಪ್ರದೇಶ 1,086 ಲಕ್ಷ ಹೆಕ್ಟೇರ್ ದಾಟಿದ್ದರೂ…

8 hours ago

ಜಾನುವಾರುಗಳ ಮೇವಿನ ಕೊರತೆಗೆ ಅಜೋಲಾ ಪರಿಹಾರ – ರಾಜ್ಯದಲ್ಲಿ 12 ಸಾವಿರ ಘಟಕಗಳ ಸ್ಥಾಪನೆಗೆ ಚಾಲನೆ

ರಾಜ್ಯದಲ್ಲಿ ಜಾನುವಾರುಗಳಿಗೆ ಪೌಷ್ಟಿಕ ಪೂರಕ ಮೇವು ಒದಗಿಸಲು ₹3.78 ಕೋಟಿ ವೆಚ್ಚದಲ್ಲಿ 12…

8 hours ago

ಹವಾಮಾನ ವರದಿ | 08-09-2026 | ಕರಾವಳಿಯಲ್ಲಿ ಮೋಡ ಹೆಚ್ಚಳ – ಸೆ.12ರ ಬಳಿಕ ಬಂಗಾಳಕೊಲ್ಲಿ ಬದಲಾವಣೆ?

ಕರಾವಳಿಯಲ್ಲಿ ಮೋಡದ ವಾತಾವರಣ ಹೆಚ್ಚಾಗಿದ್ದು, ಮಧ್ಯಾಹ್ನದ ನಂತರ ತೀರ ಮತ್ತು ಘಟ್ಟದ ಕೆಳಭಾಗಗಳಲ್ಲಿ…

15 hours ago

‘ಅರ್ಧ ಎಕರೆ ಸಾಕು… ಹಳ್ಳಿಯಲ್ಲೇ ಜೀವನ ಮಾಡಬಹುದು’ ಈ ಮಾತಿನ ಹಿಂದೆ ಇರುವ ದೊಡ್ಡ ಪ್ರಶ್ನೆ ಏನು..?

“ಅರ್ಧ ಎಕರೆ ಇದ್ದರೂ ಕುಟುಂಬ ಜೀವನ ಮಾಡಬಹುದು” ಎನ್ನುವ ರೈತನ ಮಾತು, ಭೂಮಿ…

20 hours ago

ಭಾರತದ ಆಹಾರ ನಾಳೆ ಬೆಳೆಯೋರು ಯಾರು? ರೈತರ ವಯಸ್ಸು ಹೆಚ್ಚುತ್ತಿದೆ, ಯುವಕರು ಕೃಷಿಯಿಂದ ದೂರವಾಗುತ್ತಿದ್ದಾರೆ..!

ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…

1 day ago