ರಾಜ್ಯದಲ್ಲಿ ಜಾನುವಾರುಗಳಿಗೆ, ವಿಶೇಷವಾಗಿ ಹಾಲು ನೀಡುವ ದನ-ಕರುಗಳಿಗೆ ಸ್ಥಳೀಯವಾಗಿಯೇ ಪೌಷ್ಟಿಕ ಪೂರಕ ಮೇವು ಒದಗಿಸುವ ಉದ್ದೇಶದಿಂದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆ 12 ಸಾವಿರ ಅಜೋಲಾ ಉತ್ಪಾದನಾ ಘಟಕಗಳನ್ನು ಸ್ಥಾಪಿಸುವ ಯೋಜನೆಗೆ ಚಾಲನೆ ನೀಡಿದೆ. ಮಳೆ ಕೊರತೆ, ಹಸಿರು ಮೇವಿನ ಅಭಾವ ಹಾಗೂ ಮೇವು ಲಭ್ಯತೆಯಲ್ಲಿ ವ್ಯತ್ಯಾಸ ಉಂಟಾಗುವ ಸಂದರ್ಭಗಳಲ್ಲಿ ಅಜೋಲಾವನ್ನು ಪೂರಕ ಆಹಾರವಾಗಿ ಬಳಸಲು ಉತ್ತೇಜನ ನೀಡಲಾಗುತ್ತಿದೆ.
ಅಜೋಲಾದಲ್ಲಿ ಪ್ರೋಟೀನ್, ಖನಿಜಾಂಶ ಸೇರಿದಂತೆ ವಿವಿಧ ಪೌಷ್ಟಿಕಾಂಶಗಳು ಇರುವುದರಿಂದ ಹೈನುಗಾರಿಕೆಯಲ್ಲಿ ಪೂರಕ ಆಹಾರವಾಗಿ ಬಳಸಬಹುದಾಗಿದೆ. ರೈತರ ಮನೆ ಅಥವಾ ಕೊಟ್ಟಿಗೆಯ ಸಮೀಪವೇ ಕಡಿಮೆ ಜಾಗದಲ್ಲಿ ಅಜೋಲಾ ಘಟಕ ನಿರ್ಮಿಸಿ ನಿರಂತರವಾಗಿ ಉತ್ಪಾದನೆ ಮಾಡಿಕೊಳ್ಳುವ ಅವಕಾಶವಿದೆ.
31 ಜಿಲ್ಲೆಗಳಲ್ಲಿ 12 ಸಾವಿರ ಘಟಕ : ಯೋಜನೆಯಡಿ ರಾಜ್ಯದ 31 ಜಿಲ್ಲೆಗಳ 240 ತಾಲ್ಲೂಕುಗಳಲ್ಲಿ ಒಟ್ಟು 12,000 ಅಜೋಲಾ ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಜಿಲ್ಲಾವಾರು ಭೌತಿಕ ಹಾಗೂ ಆರ್ಥಿಕ ಗುರಿ ನಿಗದಿಪಡಿಸಲಾಗಿದೆ. ಒಟ್ಟು ₹3.78 ಕೋಟಿ ವೆಚ್ಚದ ಈ ಯೋಜನೆಯಲ್ಲಿ ಪ್ರತಿ ಅಜೋಲಾ ಘಟಕಕ್ಕೆ ಅಂದಾಜು ₹3,150 ವೆಚ್ಚವಾಗಲಿದೆ.
ಜಿಲ್ಲಾವಾರು ಗುರಿಯಲ್ಲಿ ಬೆಳಗಾವಿಗೆ ಗರಿಷ್ಠ 750 ಘಟಕಗಳು, ವಿಜಯಪುರಕ್ಕೆ 650, ಉತ್ತರ ಕನ್ನಡಕ್ಕೆ 600 ಹಾಗೂ ಕಲಬುರಗಿಗೆ 550 ಘಟಕಗಳನ್ನು ನಿಗದಿಪಡಿಸಲಾಗಿದೆ.
| ಜಿಲ್ಲೆ | ಘಟಕಗಳ ಗುರಿ | ಅನುದಾನ |
|---|---|---|
| ಬೆಳಗಾವಿ | 750 | ₹23.62 ಲಕ್ಷ |
| ವಿಜಯಪುರ | 650 | ₹20.47 ಲಕ್ಷ |
| ಉತ್ತರ ಕನ್ನಡ | 600 | ₹18.90 ಲಕ್ಷ |
| ಕಲಬುರಗಿ | 550 | ₹17.32 ಲಕ್ಷ |
| ಬಾಗಲಕೋಟೆ | 500 | ₹15.75 ಲಕ್ಷ |
| ತುಮಕೂರು | 500 | ₹15.75 ಲಕ್ಷ |
| ಚಿಕ್ಕಮಗಳೂರು | 450 | ₹14.17 ಲಕ್ಷ |
| ದಕ್ಷಿಣ ಕನ್ನಡ | 450 | ₹14.17 ಲಕ್ಷ |
| ಮೈಸೂರು | 450 | ₹14.17 ಲಕ್ಷ |
| ಬೀದರ್ | 400 | ₹12.60 ಲಕ್ಷ |
| ಚಿಕ್ಕಬಳ್ಳಾಪುರ | 400 | ₹12.60 ಲಕ್ಷ |
| ಧಾರವಾಡ | 400 | ₹12.60 ಲಕ್ಷ |
| ಹಾಸನ | 400 | ₹12.60 ಲಕ್ಷ |
| ಹಾವೇರಿ | 400 | ₹12.60 ಲಕ್ಷ |
| ರಾಯಚೂರು | 400 | ₹12.60 ಲಕ್ಷ |
| ಗದಗ | 350 | ₹11.02 ಲಕ್ಷ |
| ಕೊಪ್ಪಳ | 350 | ₹11.02 ಲಕ್ಷ |
| ಮಂಡ್ಯ | 350 | ₹11.02 ಲಕ್ಷ |
| ಶಿವಮೊಗ್ಗ | 350 | ₹11.02 ಲಕ್ಷ |
| ಉಡುಪಿ | 350 | ₹11.02 ಲಕ್ಷ |
| ಚಿತ್ರದುರ್ಗ | 300 | ₹9.45 ಲಕ್ಷ |
| ದಾವಣಗೆರೆ | 300 | ₹9.45 ಲಕ್ಷ |
| ಕೋಲಾರ | 300 | ₹9.45 ಲಕ್ಷ |
| ವಿಜಯನಗರ | 300 | ₹9.45 ಲಕ್ಷ |
| ಯಾದಗಿರಿ | 300 | ₹9.45 ಲಕ್ಷ |
| ಬೆಂಗಳೂರು ನಗರ | 250 | ₹7.87 ಲಕ್ಷ |
| ಬಳ್ಳಾರಿ | 250 | ₹7.87 ಲಕ್ಷ |
| ಚಾಮರಾಜನಗರ | 250 | ₹7.87 ಲಕ್ಷ |
| ಕೊಡಗು | 250 | ₹7.87 ಲಕ್ಷ |
| ರಾಮನಗರ | 250 | ₹7.87 ಲಕ್ಷ |
| ಬೆಂಗಳೂರು ಗ್ರಾಮಾಂತರ | 200 | ₹6.30 ಲಕ್ಷ |
10 ಅಡಿ ಉದ್ದದ ತೊಟ್ಟಿಯಲ್ಲಿ ಅಜೋಲಾ : ಅಜೋಲಾ ಘಟಕವನ್ನು ರೈತರ ಮನೆ ಅಥವಾ ಕೊಟ್ಟಿಗೆಯ ಸಮೀಪ ಕಡಿಮೆ ಜಾಗದಲ್ಲೇ ನಿರ್ಮಿಸಬಹುದು. ಸುಮಾರು 10 ಅಡಿ ಉದ್ದ, 4 ಅಡಿ ಅಗಲ ಮತ್ತು 1 ಅಡಿ ಆಳದ ತೊಟ್ಟಿಯಲ್ಲಿ ಅಜೋಲಾ ಬೆಳೆಸುವ ವ್ಯವಸ್ಥೆ ಮಾಡಲಾಗುತ್ತದೆ. ಪ್ರತಿ ಘಟಕಕ್ಕೆ ₹3,150 ವೆಚ್ಚ ನಿಗದಿಯಾಗಿದ್ದು, ಇದರಲ್ಲಿ ಸಾಮಗ್ರಿ ಮತ್ತು ಕೂಲಿ ವೆಚ್ಚ ಸೇರಿದೆ.
ಸಾಮಗ್ರಿಗಳ ವೆಚ್ಚ:
ಹೀಗಾಗಿ ಪ್ರತಿ ಘಟಕಕ್ಕೆ ಒಟ್ಟು ₹3,150 ವೆಚ್ಚವಾಗಲಿದೆ.
ಸ್ವಚ್ಛ ನೀರು ಕಡ್ಡಾಯ : ಜಿಲ್ಲೆಗೆ ನಿಗದಿಪಡಿಸಿದ ಗುರಿಯನ್ನು ತಾಲ್ಲೂಕು ಮತ್ತು ಗ್ರಾಮ ಪಂಚಾಯಿತಿ ಮಟ್ಟದಲ್ಲಿ ಹಂಚಿಕೆ ಮಾಡಲಾಗುತ್ತದೆ. ಸೂಕ್ತ ಸ್ಥಳ ಮತ್ತು ನೀರಿನ ಲಭ್ಯತೆ ಇರುವ ಜಾನುವಾರು ಸಾಕಣೆದಾರರನ್ನು ಆದ್ಯತೆಯ ಮೇಲೆ ಆಯ್ಕೆ ಮಾಡಲಾಗುತ್ತದೆ.
ಅಜೋಲಾ ಬೆಳೆಯಲು ಸ್ವಚ್ಛ ನೀರು ಲಭ್ಯವಿರುವ ಸ್ಥಳವನ್ನೇ ಆಯ್ಕೆ ಮಾಡಬೇಕು ಎಂದು ಇಲಾಖೆ ಸೂಚಿಸಿದೆ. ಕಲುಷಿತ ನೀರಿನಲ್ಲಿ ಅಜೋಲಾ ಬೆಳೆಸಿದರೆ ಮಾಲಿನ್ಯಕಾರಕಗಳ ಅಪಾಯ ಇರುವ ಹಿನ್ನೆಲೆಯಲ್ಲಿ ಈ ಅಂಶಕ್ಕೆ ವಿಶೇಷ ಒತ್ತು ನೀಡಲಾಗಿದೆ. ಫಲಾನುಭವಿಗಳಿಗೆ ಅಜೋಲಾ ಉತ್ಪಾದನೆ, ಕೊಯ್ಲು, ಸ್ವಚ್ಛತೆ, ಸಂಸ್ಕರಣೆ ಹಾಗೂ ಜಾನುವಾರುಗಳಿಗೆ ನೀಡುವ ವಿಧಾನದ ಕುರಿತು ತಾಂತ್ರಿಕ ತರಬೇತಿಯನ್ನೂ ನೀಡಲಾಗುತ್ತದೆ.
GPS ದಾಖಲೆ, ಛಾಯಾಚಿತ್ರ ಕಡ್ಡಾಯ : ಯೋಜನೆಯನ್ನು ನಿಗದಿತ ಮಾರ್ಗಸೂಚಿಗಳು ಹಾಗೂ ಗ್ರಾಮ ಪಂಚಾಯಿತಿ ಅಭಿವೃದ್ಧಿ ಯೋಜನೆಯೊಂದಿಗೆ ಸಂಯೋಜಿಸಿ ಅನುಷ್ಠಾನಗೊಳಿಸಲಾಗುತ್ತದೆ. ಪ್ರತಿಯೊಂದು ಘಟಕದ ಫಲಾನುಭವಿಯ ವಿವರಗಳು, ಆಧಾರ್ ಮಾಹಿತಿ, GPS ಸ್ಥಳದ ವಿವರ, ಘಟಕ ಕಾರ್ಯಾರಂಭಕ್ಕೂ ಮುನ್ನ ಮತ್ತು ನಂತರದ ಛಾಯಾಚಿತ್ರಗಳನ್ನು ಕಡ್ಡಾಯವಾಗಿ ದಾಖಲಿಸಬೇಕು.
ಜಿಲ್ಲಾ ಉಪ ನಿರ್ದೇಶಕರು ಮಾಸಿಕ ವೇಳಾಪಟ್ಟಿ ಸಿದ್ಧಪಡಿಸಿ ಯೋಜನೆ ಅನುಷ್ಠಾನಗೊಳಿಸಲಿದ್ದು, ಪ್ರತಿ ತಿಂಗಳ 5ನೇ ತಾರೀಖಿನೊಳಗೆ ಪ್ರಗತಿ ವರದಿಯನ್ನು ರಾಜ್ಯ ಕಚೇರಿಗೆ ಸಲ್ಲಿಸಬೇಕು ಎಂದು ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವೆಗಳ ಇಲಾಖೆಯ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ರೈತರಿಗೆ ಏನು ಪ್ರಯೋಜನ? : ಅಜೋಲಾ ಘಟಕಕ್ಕೆ ಹೆಚ್ಚು ಜಾಗದ ಅಗತ್ಯವಿಲ್ಲದಿರುವುದು ಸಣ್ಣ ಮತ್ತು ಮಧ್ಯಮ ಪ್ರಮಾಣದ ಹೈನುಗಾರಿಕೆ ನಡೆಸುವ ರೈತರಿಗೆ ಅನುಕೂಲ. ಹಸಿರು ಮೇವು ಕಡಿಮೆಯಾಗುವ ಅವಧಿಯಲ್ಲಿ ಪೂರಕ ಆಹಾರವಾಗಿ ಬಳಸಿಕೊಳ್ಳುವ ಮೂಲಕ ಸ್ಥಳೀಯವಾಗಿ ಪೌಷ್ಟಿಕ ಮೇವು ಉತ್ಪಾದಿಸುವ ಅವಕಾಶವೂ ಸಿಗಲಿದೆ.
ವಿಶೇಷವಾಗಿ ದಕ್ಷಿಣ ಕನ್ನಡ, ಕೊಡಗು, ಚಿಕ್ಕಮಗಳೂರು, ಉಡುಪಿ ಸೇರಿದಂತೆ ಮಲೆನಾಡು-ಕರಾವಳಿ ಭಾಗಗಳಲ್ಲಿನ ಹೈನುಗಾರರಿಗೆ ಈ ಯೋಜನೆಯ ಅನುಷ್ಠಾನ ಹೇಗಿರಲಿದೆ ಎಂಬುದು ಗಮನಾರ್ಹವಾಗಿದೆ.
Karnataka’s Department of Animal Husbandry and Veterinary Services has launched a programme to establish 12,000 Azolla production units across 31 districts and 240 taluks at a total estimated cost of ₹3.78 crore. Each unit will cost around ₹3,150 and will help livestock farmers produce nutrient-rich supplementary feed locally, particularly during periods of green fodder shortage.
ದೇಶದ ಪ್ರಸಕ್ತ ಮುಂಗಾರು ಬೆಳೆಗಳ ಬಿತ್ತನೆ ಪ್ರದೇಶ 1,086 ಲಕ್ಷ ಹೆಕ್ಟೇರ್ ದಾಟಿದ್ದರೂ…
ಕರಾವಳಿಯಲ್ಲಿ ಮೋಡದ ವಾತಾವರಣ ಹೆಚ್ಚಾಗಿದ್ದು, ಮಧ್ಯಾಹ್ನದ ನಂತರ ತೀರ ಮತ್ತು ಘಟ್ಟದ ಕೆಳಭಾಗಗಳಲ್ಲಿ…
“ಅರ್ಧ ಎಕರೆ ಇದ್ದರೂ ಕುಟುಂಬ ಜೀವನ ಮಾಡಬಹುದು” ಎನ್ನುವ ರೈತನ ಮಾತು, ಭೂಮಿ…
ಭಾರತ ಯುವ ದೇಶವಾಗಿದ್ದರೂ ಕೃಷಿಕರ ಸರಾಸರಿ ವಯಸ್ಸು 50–55 ವರ್ಷವಾಗಿದ್ದು, ಗ್ರಾಮೀಣ ಯುವಕರಲ್ಲಿ…
ಹಸು ಕರು ಹಾಕಿದ ಬಳಿಕ ಸಿಗುವ ಪ್ಲಾಸೆಂಟಾ ಅಥವಾ ‘ಮಾಸ’ವನ್ನು ತ್ಯಾಜ್ಯವಾಗಿ ಬಿಸಾಡದೆ,…
ಸೆ.8 ರಿಂದ 10ರವರೆಗೆ ಕರಾವಳಿಯಲ್ಲಿ ಮೋಡ ಹೆಚ್ಚಾಗಿ ಅಲ್ಲಲ್ಲಿ ತುಂತುರು ಅಥವಾ ಸಾಮಾನ್ಯ…