Advertisement
MIRROR FOCUS

ಈ ಬಾರಿಯ ಮಳೆಯಿಂದ ಅಡಿಕೆಗೆ ಕೊಳೆರೋಗ | ಮರ ಏರಿ ಔಷಧಿ ಸಿಂಪಡಿಸಿದ ಮಹಿಳೆ |

Share

ಕೃಷಿ ಬದುಕಿನ ಮಹಿಳೆಯೊಬ್ಬರು ತನ್ನದೇ ಕೃಷಿ ಚಟುವಟಿಕೆಯಲ್ಲಿ ಯಾವುದೇ ಸಂಕೋಚ ತೋರದೆ, ಅಡಿಕೆ ಮರ ಏರಿ ಈ ಬಾರಿ ಔಷಧಿ ಸಿಂಪಡಿಸಿದ  ಸಾಧನೆಯೊಂದು ದಕ್ಷಿಣ ಕನ್ನಡ ಜಿಲ್ಲೆಯ ಶಿಬಾಜೆ ಗ್ರಾಮದಲ್ಲಿ ನಡೆದಿದೆ. ತಮ್ಮ ಕೃಷಿ ಉಳಿಸಲು ಈ ಬಾರಿಯ ಔಷಧಿ ಸಿಂಪಡಿಸಿದವರು ಪದವೀಧರೆ, ಕೃಷಿಕ ಮಹಿಳೆ ದಿವ್ಯ.

ಈ ಬಾರಿಯ ಮಳೆಯ ಕಾರಣದಿಂದ ಎಲ್ಲಾ ಅಡಿಕೆ ಬೆಳೆಗಾರರು ಕೊಳೆರೋಗ ಬಗ್ಗೆ ಮಾತನಾಡುತ್ತಿದ್ದಾರೆ. ವಿವಿಧ ಕಡೆ ಕೃಷಿಕರೇ, ಸಮಸ್ಯೆ ಪರಿಹಾರಕ್ಕೆ ತಾವೇ ಔಷಧಿ ಸಿಂಪಡಣೆ ಮಾಡಿದ್ದಾರೆ. ಈ ಮೂಲಕ ಅಡಿಕೆ ಕೊಳೆರೋಗ ನಿಯಂತ್ರಣಕ್ಕಾಗಿ ಹೋರಾಟವನ್ನೇ ಮಾಡಿದ್ದಾರೆ. ಕೆಲವು ಕೃಷಿಕರು ದೋಟಿಯ ಮೂಲಕ ಔಷಧಿ ಸಿಂಪಡಿಸಿದರೆ ಇನ್ನೂ ಕೆಲವರು ಮರ ಏರಿ ತಾವೇ ಸ್ವತ: ಔಷಧಿ ಸಿಂಪಡಣೆ ಮಾಡಿದ್ದಾರೆ. ಆದರೆ ಇದೆಲ್ಲದರ ಹೊರತಾಗಿ ಈ ಬಾರಿ ಗಮನ ಸೆಳೆದದ್ದು ದಕ್ಷಿಣ ಕನ್ನಡ ಜಿಲ್ಲೆಯ ಶಿಬಾಜೆ ಗ್ರಾಮದ ಪಡಂತಾಜೆ ಮನೆಯ ದಿವ್ಯ . ಗೃಹಿಣಿಯಾಗಿರುವ ಇವರು  ಅಭಿಲಾಷ್‌ ಗೌಡ ಎಂಬವರ ಪತ್ನಿ. ಪುಟ್ಟ ಮಗು ಇದೆ. ಕೃಷಿಯೇ ಈ ಕುಟುಂಬದ ಬದುಕಿಗೆ ಆಧಾರ. ಬಿಎಸ್ಸಿ ಫ್ಯಾಶನ್‌ ಡಿಸೈನ್‌ ಓದಿರುವ ದಿವ್ಯ ಅವರ ತವರು ಮನೆ ಕಡಬ ಬಳಿಯ ಮರ್ಧಾಳ. ಮದುವೆಯಾಗಿ ಶಿಬಾಜೆ ಗ್ರಾಮದ ಪಡಂತಾಜೆಯಲ್ಲಿದ್ದಾರೆ. ಕೃಷಿ ಕುಟುಂಬವಾದ್ದರಿಂದ ಇಡೀ ಮನೆಯವರು ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ದಿವ್ಯ ಅವರ ಅತ್ತೆ ವಲ್ಸಲಾ ಅವರು ಕೂಡಾ ಕೃಷಿ ಮಾಹಿತಿಯನ್ನು ಹೊಂದಿದ್ದರು. ಅತ್ತೆ, ಪತಿಯ ಜೊತೆ ದಿವ್ಯ ಕೂಡಾ ಕೃಷಿ ಕೆಲಸವನ್ನೂ ಮಾಡುತ್ತಿದ್ದರು.

ಈ ಬಾರಿ ಮಳೆಗಾಲದ ಮೊದಲು ಎಂದಿನಂತೆ ಅಡಿಕೆ ತೋಟಕ್ಕೆ ಔಷಧಿ ಸಿಂಪಡಿಸಲು ಕಾರ್ಮಿಕರು ಬಂದಿದ್ದಾರೆ. ಆದರೆ ಎರಡನೇ ಸುತ್ತಿನ ಔಷಧಿ ಸಿಂಪಡಣೆಗೆ ಕಾರ್ಮಿಕರಿಗೆ ನಿಗದಿತ ಸಮಯಕ್ಕೆ ಬರಲು ಸಾಧ್ಯವಾಗಲಿಲ್ಲ. ಮಳೆಯೂ ಜೋರಾದ್ದರಿಂದ ಅಡಿಕೆ ತೋಟದಲ್ಲಿ ಕೊಳೆರೋಗ ಕಾಣಿಸಿಕೊಂಡಿತು. ತಕ್ಷಣವೇ ಮನೆಯವರೆಲ್ಲಾ ಒಂದಾಗಿ ಔಷಧಿ ಸಿಂಪಡಣೆಗೆ  ಮುಂದಾದರು. ದಿವ್ಯ ಅವರು ಸ್ವತ: ಮರ ಏರಿ ಔಷಧಿ ಸಿಂಪಡಣೆ ಮಾಡಿದರು. ಸುಮಾರು 100 ಅಡಿಕೆ ಮರಗಳಿಗೆ ತಾವೇ ಸ್ವತ: ಔಷಧಿ ಸಿಂಪಡಣೆ ಮಾಡಿದರು. ಒಟ್ಟು 400 ಕ್ಕೂ ಅಧಿಕ ಅಡಿಕೆ ಮರಗಳಿಗೆ ಔಷಧಿ ಸಿಂಪಡಣೆ ಮಾಡಿದ್ದಾರೆ.  ಕೃಷಿ ಉಳಿಸಲು ಪ್ರಯತ್ನ ಮಾಡಿದ್ದಾರೆ.

ಒಬ್ಬ ಮಹಿಳೆಯ ಈ ಪ್ರಯತ್ನ ಈಗ ಗಮನ ಸೆಳೆದಿದೆ. ಪದವೀಧರೆಯಾಗಿ ಕೃಷಿ ಮುನ್ನಡೆಸುವ ಮಹಿಳೆ ಮಾದರಿಯಾಗಿದ್ದಾರೆ. ಅದರಲ್ಲೂ,  ಅನಿವಾರ್ಯವಾದರೆ ತಾನೇ ಸ್ವತ: ಔಷಧಿ ಕೂಡಾ ಸಿಂಪಡಿಸಬಲ್ಲೆ ಎನ್ನುವ ಸಂದೇಶವನ್ನೂ ಇಲ್ಲಿ ದಿವ್ಯ ಅವರು ನೀಡಿದ್ದಾರೆ. ಮನೆಯವರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಿಂದ ಈ ಕೆಲಸ ಸಾಧ್ಯವಾಯಿತು ಎಂದು ಹೇಳುತ್ತಾರೆ ದಿವ್ಯ.

ಒಟ್ಟಿನಲ್ಲಿ ಈ ಬಾರಿಯ ಮಳೆ ಅಡಿಕೆ ಬೆಳೆಗಾರರಿಗೆ ಸಮಸ್ಯೆಯನ್ನು ನೀಡಿದ್ದರೆ, ಸಾಧನೆ ಮಾಡುವ, ಹೊಸ ಅನುಭವವನ್ನು ಪಡೆಯಲು ಕೂಡಾ ಈ ಬಾರಿಯ ಮಳೆ ಅವಕಾಶ ನೀಡಿದೆ. ಈ ಕಾರಣದಿಂದ ಮಹಿಳೆಯೊಬ್ಬರು ಮಾದರಿಯಾಗಿದ್ದಾರೆ. ಇನ್ನಷ್ಟು ಮಂದಿಗೆ ಪ್ರೇರಣೆಯೂ ಆಗಿದ್ದಾರೆ.

Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
ವಿಶೇಷ ಪ್ರತಿನಿಧಿ

ರೂರಲ್‌ ಮಿರರ್‌ ವಿಶೇಷ ಪ್ರತಿನಿಧಿ.

Published by
ವಿಶೇಷ ಪ್ರತಿನಿಧಿ

Recent Posts

ಮಂಗಳೂರಿನ ಸಚಿವ ಸಂಪುಟ ಸಭೆ | ‘ಅಡಿಕೆ ಜೈವಿಕ ಆರ್ಥಿಕತೆ ಮಿಷನ್’ ಘೋಷಣೆಗೆ ಆಗ್ರಹ

ಮಂಗಳೂರಿನಲ್ಲಿ ಸೆ.18ರಂದು ನಡೆಯಲಿರುವ ವಿಶೇಷ ಸಚಿವ ಸಂಪುಟ ಸಭೆಯಲ್ಲಿ ಅಡಿಕೆ ಬೆಳೆಗಾರರ ಸಮಸ್ಯೆಗಳಿಗೆ…

6 hours ago

ಮಳೆಗೆ ಬೆಂಗಳೂರು ತತ್ತರ – ಸಂಜೆ ಏಕಾಏಕಿ ಸುರಿದ ಧಾರಾಕಾರ ಮಳೆಗೆ ರಸ್ತೆಗಳು ಜಲಾವೃತ

ಬೆಂಗಳೂರಿನಲ್ಲಿ ಮಂಗಳವಾರ ಸಂಜೆ ಏಕಾಏಕಿ ಸುರಿದ ಭಾರೀ ಮಳೆಗೆ ಹಲವು ರಸ್ತೆಗಳು ಜಲಾವೃತವಾಗಿ…

7 hours ago

ಹವಾಮಾನ ವರದಿ | 15-09-2026 | ಕರ್ನಾಟಕದಲ್ಲಿ ಮಳೆ ಮತ್ತೆ ಚುರುಕಾಗುವ ಸೂಚನೆ

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.16ರಿಂದ ಮಲೆನಾಡು, ಸೆ.17ರಿಂದ ಉತ್ತರ ಒಳನಾಡಿನಲ್ಲಿ ಮೋಡ…

17 hours ago

ಹವಾಮಾನ ವರದಿ | 14-09-2026 | ಸೆ.18ರ ಬಳಿಕ ಮಳೆ ಚಿತ್ರಣ ಬದಲಾಗಬಹುದೇ?

ಕರ್ನಾಟಕದಲ್ಲಿ ಸದ್ಯ ಬಿಸಿಲು ಮುಂದುವರಿದಿದ್ದರೂ ಸೆ.18ರಿಂದ ಮಳೆಯ ವ್ಯಾಪ್ತಿ ಹೆಚ್ಚಾಗುವ ಸೂಚನೆಗಳಿವೆ. ಸೆ.19ರಿಂದ…

2 days ago

ನನ್ನ ಚಿತ್ರ-ನನ್ನ ಖುಷಿ | ಬಣ್ಣಗಳ ಮೂಲಕ ಅರಳಿದ ಗಣೇಶ

ಬಣ್ಣಗಳ ಮೂಲಕ ಅರಳಿದ ಗಣೇಶ - ಕುಕ್ಕೆ ಸುಬ್ರಹ್ಮಣ್ಯದ ಕುಮಾರಸ್ವಾಮಿ ವಿದ್ಯಾಲಯದ 8…

2 days ago