ವಿಧವೆಯರು, ಗಂಡನಿಂದ ದೂರವಾಗಿರುವವರು ಅಥವಾ ಮದುವೆಯಾಗದೆ ಒಬ್ಬಂಟಿಯಾಗಿ ಜೀವಿಸುತ್ತಿರುವ ಮಹಿಳೆರಿಗೆ ಆರ್ಥಿಕ ಭದ್ರತೆ ನೀಡುವ ದೃಷ್ಟಿಯಿಂದ ರಾಜ್ಯ ಸರ್ಕಾರವು ಮನಸ್ವಿನೀ ಯೋಜನೆಯನ್ನು ಜಾರಿಗೊಳಿಸಿದೆ. ಈ ಯೋಜನೆಯ ಮೂಲಕ ಪ್ರತಿ ತಿಂಗಳು ರೂ 800 ಪಿಂಚಣಿ ಸಿಗುತ್ತದೆ. ಮಾತ್ರವಲ್ಲ ವೃದ್ಧಾಪ್ಯ ವೇತನದ ಮಾದರಿಯಲ್ಲೇ ನೇರವಾಗಿ ಫಲಾನುಭವಿಯ ಖಾತೆಗೆ ಜಮೆ ಆಗುತ್ತದೆ. ಈ ಯೋಜನೆಯ ನಿಯಮದ ಪ್ರಕಾರ ಈಗಾಗಲೇ ವಿಧವಾ ವೇತನ, ಅಂಗವಿಕಲ ವೇತನ ಅಥವಾ ಸಂಧ್ಯ ಸುರಕ್ಷ ಪಡೆಯುತ್ತಿರುವವರು ಹಾಗೂ ಮರುಮದುವೆ ಆದವರಿಗೆ ಈ ಪಿಂಚಣಿಯು ಸಿಗುವುದಿಲ್ಲ.
ಬೇಕಾಗುವ ದಾಖಲೆ:
• ಬಿಪಿಎಲ್ ರೇಷನ್ ಕಾರ್ಡ್
• ಆಧಾರ್ ಕಾರ್ಡ್
• ಬ್ಯಾಂಕ್ ಪಾಸ್ ಬುಕ್
• ಚುನಾವಣಾ ಗುರುತಿನ ಚೀಟಿ
• ಅವಿವಾಹಿತರಾಗಿದ್ದರೆ-ಮರುಮದುವೆ ಆಗಿಲ್ಲ ಎಂಬ ಪ್ರಮಾಣ ಪತ್ರ
• ವಿಚ್ಛೇದಾರರಿಗೆ- ಗಂಡನಿಂದ ದೂರವಾಗಿರುವ ಪ್ರಮಾಣ ಪತ್ರ
• ಪಾಸ್ಪೋರ್ಟ್ ಅಳತೆಯ ಪೋಟೋ
ಅರ್ಜಿ ಸಲ್ಲಿಸುವ ವಿಧಾನ:
ನಿಮ್ಮ ಹತ್ತಿರದ ನಾಡಕಚೇರಿ ಅಥವಾ ಅಟಲ್ ಜೀ ಜನಸ್ನೇಹಿ ಕೇಂದ್ರ ಕ್ಕೇ ಭೇಟಿ ನೀಡಬೇಕು. ಅಲ್ಲಿ ಫಾರಂ ಪಡೆದು ದಾಖಲೆಯೊಂದಿಗೆ ಅರ್ಜಿ ಸಲ್ಲಿಸಬಹುದು. ಯಾವುದೇ ಆನ್ ಲೈನ್ ವ್ಯವಸ್ಥೆ ಬಂದಿಲ್ಲ.
ಸ್ವಾತಂತ್ರ್ಯದ 79 ವರ್ಷಗಳ ಭಾರತದ ಪಯಣದಲ್ಲಿ ಕೃಷಿ -ಎತ್ತು-ನೇಗಿಲಿನಿಂದ ಡ್ರೋನ್, ಡಿಜಿಟಲ್ ಮಾಹಿತಿ…
ತೀವ್ರ ವಿರೋಧ ಹಾಗೂ ಅಡಿಕೆ ಬೆಳೆಗಾರರ ಮೇಲಿನ ಪರಿಣಾಮದ ಆತಂಕದ ಹಿನ್ನೆಲೆಯಲ್ಲಿ ರಾಜ್ಯದ…
ಗುಟ್ಕಾ–ಪಾನ್ಮಸಾಲಾ ನಿಷೇಧದ ಪರಿಣಾಮ ಅಡಿಕೆ ಮಾರುಕಟ್ಟೆಯ ಮೇಲೆ ಬಿದ್ದರೆ ಅದನ್ನು ಎದುರಿಸಲು ಸರ್ಕಾರ…
ಕರ್ನಾಟಕದ ಕರಾವಳಿ, ಮಲೆನಾಡು ಹಾಗೂ ಒಳನಾಡಿನ ಹಲವು ಜಿಲ್ಲೆಗಳಲ್ಲಿ ಮುಂದಿನ ದಿನಗಳಲ್ಲೂ ಮಳೆ…
ಎಲ್ ನಿನೊದ ಸಂಭಾವ್ಯ ಪರಿಣಾಮಗಳ ಹಿನ್ನೆಲೆಯಲ್ಲಿ ದೇಶದ ಹವಾಮಾನ, ಮುಂಗಾರು ಮತ್ತು ಕೃಷಿ…
ಇತರರ ಮನೆಯ ಸಮಸ್ಯೆ ನಮಗೆ ಕುತೂಹಲದ ಸುದ್ದಿಯಾಗಬಹುದು. ಆದರೆ ಆ ಮನೆಯವರಿಗೆ ಅದು…