Advertisement
Opinion

#WorldHeartDay | ವಿಶ್ವ ಹೃದಯ ದಿನ – ಹೃದಯವನ್ನು ಬಳಸಿ ಹೃದಯವನ್ನು ತಿಳಿಯಿರಿ |

Share

ಇಂದು ವಿಶ್ವ ಹೃದಯ ದಿನ (world Heart day). ಇತ್ತೀಚಿನ ದಿನಗಳಲ್ಲಿ ಸಾವಿಗೆ ದೊಡ್ಡ ಕಾರಣವಾಗಿರುವ ಹೃದಯ ರಕ್ತನಾಳದ ಕಾಯಿಲೆಗಳ ಬಗ್ಗೆ ಜನರಿಗೆ ತಿಳಿಸಲು ‘ವರ್ಲ್ಡ್ ಹಾರ್ಟ್ ಫೌಂಡೇಶನ್’ ಪ್ರತಿ ವರ್ಷ ಸೆಪ್ಟೆಂಬರ್ 29ರಂದು ನಡೆಸುವ ಅಂತರಾಷ್ಟ್ರೀಯ ಅಭಿಯಾನವೇ ವಿಶ್ವ ಹೃದಯ ದಿನ. ಹೃದಯಕ್ಕೆ ಸಂಬಂಧಸಿದ ಕಾಯಿಲೆಗಳನ್ನು ತಡೆಗಟ್ಟುವ ಕ್ರಮಗಳ ಬಗ್ಗೆ ಜಾಗೃತಿ ಮೂಡಿಸಲು ವಿವಿಧ ಚಟುವಟಿಕೆಗಳು ಮತ್ತು ಜಾಗ್ರತಿಕ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಈ ದಿನವನ್ನು ಆಚರಿಸಲಾಗುತ್ತದೆ

ಹೃದಯವು ಮಾನವ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ ಪ್ರತಿಯೊಬ್ಬರೂ ಹೃದಯದ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಬಹಳ ಅವಶ್ಯಕ. ಹೃದಯ ರಕ್ತನಾಳದ ಆರೋಗ್ಯ ಮತ್ತು ಕೆಲವು ಜೀವನ ಶೈಲಿಯ ಅಭ್ಯಾಸಗಳ ಬಗ್ಗೆ ಅರಿವಿನ ಕೊರತೆಯಿಂದಾಗಿ ಹೃದಯ ರಕ್ತನಾಳದ ಕಾಯಿಲೆಗಳು ವಿಶ್ವದಾದ್ಯಂತ ಮರಣಕ್ಕೆ ಪ್ರಮುಖ ಕಾರಣಗಳಲ್ಲಿ ಒಂದಾಗಿದೆ. ಪ್ರತಿ ವರ್ಷ ಸುಮಾರು 1.7 ಕೋಟಿ ಜನರು ಹೃದಯದ ರಕ್ತನಾಳದ ಕಾಯಿಲೆಯಿಂದ ಸಾವಿಗೀಡಾಗುತ್ತಿದ್ದಾರೆ.

 ಈ ವರ್ಷ ವಿಶ್ವ ಹೃದಯ ದಿನದ ಮುಖ್ಯ ಥೀಮ್ :– ಹೃದಯವನ್ನು ಬಳಸಿ ಹೃದಯವನ್ನು ತಿಳಿಯಿರಿ ಹೃದಯಕ್ಕಾಗಿ ಆಯುರ್ವೇದ  ಇಂದಿನ ದಿನಗಳಲ್ಲಿ ಸರ್ವೆ ಸಾಮಾನ್ಯವಾಗಿ ಸಂಭವಿಸುವ ಹೃದಯಾಘಾತ (Heart attack ), ಪಾರ್ಶ್ವವಾಯು,ಹೃದಯದ ರಕ್ತನಾಳಗಳ ಕಾಯಿಲೆಗಳು ಮೊದಲಾದ ಹ್ರದ್ರೋಗಗಳಿಗೆ ಕಾರಣವಾಗಿರುವ ಕೆಲವು ಅಪಾಯಕಾರಿ ಅಂಶಗಳು ಹೀಗಿದೆ, ಅತಿಯಾದ ರಕ್ತದೊತ್ತಡ,  ಅತಿಯಾದ ಬೊಜ್ಜು,  ಅನಿಯಂತ್ರಿತ ಮಧುಮೇಹ, ಅತಿ ಧೂಮಪಾನ, ಅತಿಯಾದ ಮದ್ಯಪಾನ , ಮಾನಸಿಕ ಒತ್ತಡ , ಅನಾರೋಗ್ಯಕರ ಆಹಾರ ಮತ್ತು ಜೀವನಶೈಲಿ ಇತ್ಯಾದಿ.

ಹೃದ್ರೋಗಕ್ಕೆ ಹಲವಾರು ಆಯುರ್ವೇದ ಚಿಕಿತ್ಸೆಗಳಿವೆ. ರೋಗ ನಿರ್ಣಯ ಮಾಡಿ ಅದರ ಕಾರಣಕ್ಕನುಸಾರವಾಗಿ ಹೃದ್ರೋಗದ ಪ್ರಕಾರವನ್ನು ಅರಿತು ಅದರ ತೀವ್ರತೆಯ ಆಧಾರದ ಮೇಲೆ ಚಿಕಿತ್ಸೆಯನ್ನು ಶಿಫಾರಸು ಮಾಡಲಾಗುತ್ತದೆ.

ಹೃದಯ ಬೆಂಬಲ ಚಿಕಿತ್ಸೆಗಳು: ಪಂಚಕರ್ಮ,ಯೋಗ, ಪ್ರಾಣಾಯಾಮ ಮತ್ತು ಧ್ಯಾನದಂತಹ ಆಯುರ್ವೇದ ಚಿಕಿತ್ಸೆಗಳು ನರಮಂಡಲದ ಮೇಲೆ ಪ್ರಭಾವವನ್ನು ಬೀರಿ, ಒತ್ತಡವನ್ನು ಕಡಿಮೆ ಮಾಡಲು ಸಹಾಯಕಾರಿಯಾಗಿದೆ ಹಾಗೂ ಹೃದಯದ ಆರೋಗ್ಯವನ್ನು ಕಾಪಾಡಲು ಪ್ರೇರೇಪಿಸುತ್ತವೆ -ಸಮತೋಲಿತ ಆಹಾರ  ಹಣ್ಣು ತರಕಾರಿಗಳ ಸಮರ್ಪಕ ಸೇವನೆ ಹಾಗೂ ಅತಿಯಾದ ಕೊಬ್ಬು, ಜಂಕ್ ಫುಡ್ ಇವುಗಳ ನಿಷಿದ್ಧ. ಗಿಡಮೂಲಿಕೆ ಪರಿಹಾರ ಮತ್ತು ಆಯುರ್ವೇದ ಔಷಧಗಳು ಹೃದಯಕ್ಕೆ ಆಯುರ್ವೇದ ಔಷಧಿಗಳು ರೋಗಿಯ ಮೂಲ ಕಾರಣವನ್ನು ಗುರಿಯಾಗಿರಿಸಿಕೊಂಡು ಆರೋಗ್ಯ ಸಮಸ್ಯೆಗಳನ್ನು ನಿವಾರಿಸುವ ಗುರಿಯನ್ನು ಹೊಂದಿದೆ. ಆಮಲಕಿ, ಹರಿದ್ರ, ಅರ್ಜುನ, ಅಶ್ವಗಂಧ ಮೊದಲಾದ ಪ್ರಮುಖ ಗಿಡಮೂಲಿಕೆಗಳು ಹೃದಯ ಕಾರ್ಯವನ್ನು ಸುಧಾರಿಸಲು ಸಹಾಯಕಾರಿಯಾಗಿವೆ. ಆಧುನಿಕ ವೈದ್ಯಕೀಯ ವಿಜ್ಞಾನವನ್ನು ಅರಿತು ನೈಸರ್ಗಿಕ ಗಿಡಮೂಲಿಕೆಗಳು ಮತ್ತು ಆಯುರ್ವೇದ ಔಷಧ,ಪಂಚಕರ್ಮ ಯೋಗ, ಧ್ಯಾನ,ಪ್ರಾಣಾಯಾಮ ಉತ್ತಮ ಜೀವನ ಶೈಲಿ ಹಾಗೂ ಆರೋಗ್ಯಕರ ಆಹಾರ ಪದ್ಧತಿಗಳನ್ನು ಅಳವಡಿಸಿಕೊಂಡು ಹೃದಯದ ಕಾಳಜಿಯನ್ನು ವಹಿಸಿ ಹೃದಯದ ಕಾಯಿಲೆಯನ್ನು ತಡೆಗಟ್ಟುವುದು ಅತ್ಯವಶ್ಯಕ. ಹೃದಯ ಆರೋಗ್ಯವಾಗಿದ್ದರೆ ಅದುವೇ ಜೀವನ.

ಬರಹ :
ಡಾ. ಜ್ಯೋತಿ. ಕೆ, ಮಂಗಳೂರು, 94481 68053
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel
The Rural Mirror ಸುದ್ದಿಜಾಲ

ದಿ ರೂರಲ್‌ ಮಿರರ್.com ಸುದ್ದಿಗಳನ್ನು ‌theruralmirror@gmail.com ಅಥವಾ 9449125447 ಗೆ ವ್ಯಾಟ್ಸಪ್ ಮೂಲಕ ಕಳುಹಿಸಿ.

Published by
The Rural Mirror ಸುದ್ದಿಜಾಲ

Recent Posts

ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ; ಒಡಿಶಾದಲ್ಲಿ ಭಾರಿ ಮಳೆ, ಹಲವು ಜಿಲ್ಲೆಗಳಲ್ಲಿ ರೆಡ್ ಅಲರ್ಟ್

ಬಂಗಾಳ ಕೊಲ್ಲಿಯ ವಾಯುಭಾರ ಕುಸಿತದ ಪರಿಣಾಮ ಒಡಿಶಾದ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆ…

4 hours ago

ಭರ್ತಿಯಾಗುವ ಹಂತಕ್ಕೆ ಆಲಮಟ್ಟಿ ಜಲಾಶಯ – 114.896 ಟಿಎಂಸಿ ನೀರು ಸಂಗ್ರಹ, 73 ಸಾವಿರ ಕ್ಯೂಸೆಕ್ ಒಳಹರಿವು

ಆಲಮಟ್ಟಿ ಕೃಷ್ಣಾ ಜಲಾಶಯದಲ್ಲಿ 114.896 ಟಿಎಂಸಿ ನೀರು ಸಂಗ್ರಹವಾಗಿದ್ದು, ಜಲಾಶಯ ಭರ್ತಿಯಾಗಲು ಕೆಲವೇ…

4 hours ago

ಹವಾಮಾನ ವರದಿ | 28-07-2026 | ಕರಾವಳಿ, ಮಲೆನಾಡಿನಲ್ಲಿ ಸಾಮಾನ್ಯ ಮಳೆ ಮುಂದುವರಿಕೆ

ಕರಾವಳಿ, ಮಲೆನಾಡು ಹಾಗೂ ಉತ್ತರ ಒಳನಾಡಿನ ಕೆಲ ಜಿಲ್ಲೆಗಳಲ್ಲಿ ಬಿಟ್ಟುಬಿಟ್ಟು ಮಳೆ ಮುಂದುವರಿಯುವ…

4 hours ago

ಮಳೆ ಕೊರತೆ ತೀವ್ರ – ಬೆಂಗಳೂರು ಗ್ರಾಮಾಂತರದಲ್ಲಿ ಕೇವಲ ಶೇ. 3 ಬಿತ್ತನೆ; ನೀರಿನ ಬಳಕೆಗೆ ಕಟ್ಟುನಿಟ್ಟಿನ ಕ್ರಮ

ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಶೇಕಡಾ 66 ರಷ್ಟು ಮಳೆ ಕೊರತೆಯಿಂದ ಕೇವಲ ಶೇ.…

9 hours ago

ಹವಾಮಾನ ವರದಿ | 28-07-2026 | ಮುಂದಿನ 10 ದಿನ ಸಾಮಾನ್ಯ ಮಳೆ – ಆಗಸ್ಟ್ ಆರಂಭದಲ್ಲಿ ದಕ್ಷಿಣ ಒಳನಾಡಿನಲ್ಲಿ ಮಳೆ ಚುರುಕು ಸಾಧ್ಯತೆ

ಕರಾವಳಿ ಮತ್ತು ಮಲೆನಾಡಿನಲ್ಲಿ ಮುಂದಿನ 10 ದಿನಗಳವರೆಗೆ ಸಾಮಾನ್ಯ ಮಳೆ ಮುಂದುವರಿಯುವ ನಿರೀಕ್ಷೆಯಿದ್ದು,…

1 day ago

200 ಹಸುಗಳಿಂದ ₹2 ಕೋಟಿ ವಾರ್ಷಿಕ ಆದಾಯ…! ಗಮನ ಸೆಳೆದ ಉತ್ತರ ಪ್ರದೇಶದ ಮಾದರಿ

ಉತ್ತರ ಪ್ರದೇಶದಲ್ಲಿ 200 ಹಸುಗಳನ್ನು ಆಧರಿಸಿದ ಸಮಗ್ರ ಗೋ ಆರ್ಥಿಕತೆ ಮಾದರಿಯಲ್ಲಿ ಗೋಮಯದಿಂದ…

1 day ago