ಆಟಿ ಅಮವಾಸ್ಯೆಗೆ ಬರಬೇಕಿತ್ತು ಮಳೆ…!

August 1, 2019
10:04 AM
ಡಾ.ಚಂದ್ರಶೇಖರ ದಾಮ್ಲೆ

 

 ಬರಹ : ಡಾ.ಚಂದ್ರಶೇಖರ ದಾಮ್ಲೆ , ಸುಳ್ಯ

 

 

 

ತುಳುನಾಡಿನ ಜಾನಪದ ಬದುಕಿನಲ್ಲಿ ಆಟಿ ತಿಂಗಳೆಂದರೆ ಅತಿ ಮಳೆಯಿಂದಾಗಿ ಬಡತನದ ತಿಂಗಳು. ಕೃಷಿಕರ ಪಾಲಿಗೆ ಮತ್ತು ಕೃಷಿ ಕೂಲಿ ಕಾರ್ಮಿಕರಿಗೆ ಕಷ್ಟದ ದಿನಗಳ ಕಾಲ. ತುಳು ಸಂಪ್ರದಾಯದಲ್ಲಿ ಮದುವೆಯಾದ ವರ್ಷ ಮಗಳು ತವರಿಗೆ ಬಂದು ಒಂದು ತಿಂಗಳು ಸುಖವಾಗಿ ಕಳೆಯುವ ಸಂಪ್ರದಾಯ ಇದ್ದ ತಿಂಗಳು. ಅನೇಕ ರೋಗಗಳು ಹರಡುವ ಭಯ ಹುಟ್ಟಿಸುತ್ತಿದ್ದ ಆಟಿ ತಿಂಗಳು ದುಸ್ವಪ್ನದಂತೆ ಕಳೆದು ಹೋಗಬೇಕಾಗಿತ್ತು.

ಈ ಆಟಿ ತಿಂಗಳಲ್ಲಿ ಅಮಾವಾಸ್ಯೆಯ ದಿನ ಬಹಳ ಮುಖ್ಯವಾದದ್ದು. ಏಕೆಂದರೆ ಆ ದಿನ ಹಾಲೆ ಮರದಲ್ಲಿ ಪ್ರಕೃತಿಯ ಎಲ್ಲ ಔಷಧಗಳು ಬಂದು ಸೇರುತ್ತವೆ ಎಂಬ ನಂಬಿಕೆ ಇದೆ. ಅದರ ಪ್ರಕಾರ ಆ ದಿನ ಬೆಳಗ್ಗೆ ಸೂರ್ಯೋದಯಕ್ಕೆ ಮೊದಲು ಹಾಲೆ ಮರದ ಬಳಿಗೆ ಹೋಗಿ ಕಲ್ಲಿನಲ್ಲಿ ಜಜ್ಜಿ ಅದರ ಕೆತ್ತೆಯನ್ನು ತಂದು ಗುದ್ದಿ ರಸತೆಗೆದು ಬರೆ ಹೊಟ್ಟೆಗೆ ಕುಡಿದರೆ ಅದು ಸರ್ವರೋಗ ನಿರೋಧಕ ಎಂಬ ನಂಬಿಕೆ ಇದೆ. ಈ ರೀತಿ ತಮ್ಮ ಆರೋಗ್ಯದ ಬಗ್ಗೆ ರೋಗನಿರೋಧಕ ಪ್ರಯೋಗ ನಡೆಯುತ್ತಿತ್ತು. ಈಗ ಇದು ಮರೆತು ಹೋಗಿರುವ ಸಂಗತಿಯಾಗಿದೆ. ಆಧುನಿಕ ಮಾತ್ರೆ ಸೀರಪ್ ಇಂಜೆಕ್ಷನ್ ಗಳ ಎದುರು ಮೂಢನಂಬಿಕೆ ಎನಿಸಿದೆ. ಆದರೆ ನನಗಿನ್ನೂ ವಿಶ್ವಾಸವಿದೆ. ನಾನು ಪ್ರತಿ ವರ್ಷ ಆಟಿ ಅಮಾವಾಸ್ಯೆಯಂದು ಬೆಳಗ್ಗೆ ಖಾಲಿ ಹೊಟ್ಟೆಗೆ ಹಾಲೆ ಮರದ ರಸ ಕುಡಿಯುವ ವಾಡಿಕೆ ಇಟ್ಟುಕೊಂಡಿದ್ದೇನೆ.

ಪಂಚಾಂಗ ಪ್ರಕಾರ ಇಂದು (1-8-2019) ಆಟಿ ಅಮಾವಾಸ್ಯೆ. ಭಾರೀ ಮಳೆ ಇರಬೇಕಿತ್ತು. ಆದರೆ ಎರಡು ದಿನಗಳಿಂದ ಮಳೆ ಇಲ್ಲ. ಸೂರ್ಯೋದಯಕ್ಕೆ ಮೊದಲೇ ಹಾಲೆ ಮರದ ಕೆತ್ತೆ ತರಲು ಹೋದರೆ ಮರದ ತೊಗಟೆ ಮಳೆ ಇದ್ದರೆ ಇರುವಂತೆ ಮೃದುವಾಗಿಲ್ಲ. ಗಟ್ಟಿಯಾಗಿತ್ತು. ಮರದ ಮೈ ಇಡೀ ಇರುವೆಗಳ ಓಡಾಟ. ಅತಿಯಾಗಿ ಸೊಳ್ಳೆಗಳ ಕಾಟ. ಪ್ರಕೃತಿ ನಿಯಮದಂತೆ ಬರಬೇಕಿದ್ದ ಮಳೆ ಬಾರದೆ ವಾತಾವರಣ ಕಲುಷಿತಗೊಂಡಿದೆ. ಹೀಗೇ ಆದರೆ ಡಿಸೆಂಬರ್ ನಿಂದಲೇ ಬರಗಾಲ ಬಾಧಿಸೀತು. ಹಾಗಾಗಿ ಇನ್ನೀಗ ಬಂದಷ್ಟು ಮಳೆ ನೀರನ್ನು ಇಂಗು ಗುಂಡಿಗಳನ್ನು ಮಾಡಿ ಇಂಗಿಸಿಕೊಳ್ಳುವುದು ಒಳ್ಳೆಯದು.

 

 

 

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಎತ್ತುಗಳಿಂದ ಡ್ರೋನ್‌ವರೆಗೆ… ಇದು ಭಾರತದ ಕೃಷಿಯ 79 ವರ್ಷಗಳ ಪಯಣ..!
August 15, 2026
7:42 AM
by: ದ ರೂರಲ್ ಮಿರರ್.ಕಾಂ
ತೀವ್ರ ವಿರೋಧದ ಹಿನ್ನೆಲೆ – ರಾಜ್ಯದಲ್ಲಿ ಗುಟ್ಕಾ ನಿಷೇಧ ಹಿಂತೆಗೆದುಕೊಳ್ಳಲು ಸರ್ಕಾರ ನಿರ್ಧಾರ – ಹೊರಬೀಳದ ಅಧಿಕೃತ ಆದೇಶ..!
August 15, 2026
7:18 AM
by: ದ ರೂರಲ್ ಮಿರರ್.ಕಾಂ
ಗುಟ್ಕಾ–ಪಾನ್‌ಮಸಾಲಾ ನಿಷೇಧ : ಅಡಿಕೆ ಬೆಳೆಗಾರನ ಮುಂದಿರುವ ನಿಜವಾದ ಪ್ರಶ್ನೆ ಏನು?
August 14, 2026
7:14 AM
by: ಮಹೇಶ್ ಪುಚ್ಚಪ್ಪಾಡಿ
ಹವಾಮಾನ ವರದಿ | 13- 08-2026 | ಕರ್ನಾಟಕದಲ್ಲಿ ಮಳೆ ಮುಂದುವರಿಕೆ| ಸುಳ್ಯ, ಘಟ್ಟದ ಕೆಳಭಾಗದಲ್ಲಿ ಮಧ್ಯಾಹ್ನದ ಬಳಿಕ ಹೆಚ್ಚು ಮಳೆ ಸಾಧ್ಯತೆ
August 13, 2026
2:01 PM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror