ಒಳಚರಂಡಿಯ 2.87 ಕೋಟಿ ರೂಪಾಯಿ ವ್ಯರ್ಥ : ವೆಂಕಪ್ಪ ಗೌಡ

May 10, 2019
6:44 PM

ಸುಳ್ಯ: 13 ವರ್ಷಗಳ ಹಿಂದೆ ಆರಂಭಗೊಂಡು ಕುಂಟುತ್ತಾ ಸಾಗಿದರೂ ಸುಳ್ಯ ನಗರದಲ್ಲಿ ಒಳಚರಂಡಿ ಯೋಜನೆ ಸಮರ್ಪಕವಾಗಿ ಅನುಷ್ಠಾನವಾಗಿಲ್ಲ. ಅಸಮರ್ಪಕ ಕಾಮಗಾರಿಯಿಂದ,ಒಳಚರಂಡಿಯ ಒಳಗಡೆ ಹರಿದು ಹೋಗಬೇಕಾಗಿದ್ದ ತ್ಯಾಜ್ಯ, ಕೊಳಚೆ ನೀರು ಕಣಿವೆಯಲ್ಲಿ ಹರಿದು ಕಂದಡ್ಕ ಹೊಳೆಗೆ ಸೇರಿ ಅದರ ನೀರು ಮಲೀನಗೊಂಡು ಪಯಸ್ವಿನಿ ನದಿ ಸೇರಿ ಮತ್ತೆ ಅದೇ ನೀರನ್ನು ಸುಳ್ಯದ ತಳಭಾಗದ ಜನ ಕುಡಿಯುವಂತಾಗಿದೆ. ಇದರಿಂದ ಒಳಚರಂಡಿ ಯೋಜನೆಗೆ ಬಳಸಿದ 2.87 ಕೋಟಿ ರೂ ವ್ಯರ್ಥವಾಗಿದೆ ಎಂದು ಕೆ.ಪಿ.ಸಿ.ಸಿ. ಕಾರ್ಯದರ್ಶಿ ಎಂ.ವೆಂಕಪ್ಪ ಗೌಡ ಹೇಳಿದ್ದಾರೆ.

Advertisement
Advertisement

ಸುಳ್ಯ ನಗರದ ಒಳಚರಂಡಿ ಯೋಜನೆ ಕಾರ್ಯಗತ ಸಂಪೂರ್ಣಗೊಂಡಿದೆ ಎಂದು ನಗರ ಆಡಳಿತ ಹೇಳುತ್ತಿದ್ದರೂ ಕಾಮಗಾರಿಯಿಂದ ನಗರಕ್ಕೆ ಯಾವುದೇ ಪ್ರಯೋಜನ ಇಲ್ಲದಂತಾಗಿದೆ. ಜಯನಗರದಲ್ಲಿರುವ ಇದರ ಶುದ್ದೀಕರಣ ಘಟಕ ಪಾಳು ಬಿದ್ದಿರುವುದು ಕಂಡು ಬಂದಿದೆ. ಇದರಿಂದ 2.87 ಕೋಟಿ ಹಣ ಎಲ್ಲಿ ಹೋಗಿದೆ ಎಂಬುದರ ಬಗ್ಗೆ ಆಡಳಿತದಲ್ಲಿ ಇದ್ದವರು ಜನತೆಗೆ ತಿಳಿಸಬೇಕಾಗಿದೆ ಎಂದರು.ಕಲ್ಚರ್ಪೆಯಲ್ಲಿ ಹಾಕಲಾಗಿದ್ದ ನಗರದ ಕಸವನ್ನು ಸಂಸ್ಕರಣೆ ಮಾಡುವ ಯೋಜನೆಗೆಂದು ಲಕ್ಷಾಂತರ ಹಣ ವ್ಯಯ ಮಾಡಲಾಗಿದ್ದರೂ ವಾಸ್ತವವಾಗಿ ಒಂದು ಕಟ್ಟಡವನ್ನು ಹೊರತುಪಡಿಸಿದರೆ ಕಸ ನಿರ್ವಹಣೆಗೆ ಕೈಗೊಂಡ ವೈಜ್ಞಾನಿಕ ಕ್ರಮ ಶೂನ್ಯವಾಗಿದೆ. ತ್ಯಾಜ್ಯದ ಮಲಿನಗೊಂಡ ನೀರು ಪಯಸ್ವಿನಿ ನದಿಗೆ ಹರಿದು ಅದನ್ನೇ ನಗರದ ಜನತೆ ಕುಡಿಯುವಂತಾಗಿದ್ದು ನಗರದ ಜನತೆಯ ದುರಂತವೇ ಸರಿ ಎಂದು ಅವರು ಹೇಳಿದರು.

Advertisement

Advertisement

Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ sullianews@gmail.com / theruralmirror@gmail.com ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಫಸಲ್ ಭೀಮಾ ಯೋಜನೆ ಹಣ ಬಿಡುಗಡೆ | ಕಲಬುರಗಿ ಜಿಲ್ಲೆಗೆ ಹೆಚ್ಚಿನ ಬೆಳೆ ವಿಮೆ
July 26, 2025
3:56 PM
by: The Rural Mirror ಸುದ್ದಿಜಾಲ
ಲಡಾಖ್‌ನ ದ್ರಾಸುದಲ್ಲಿ ಕಾರ್ಗಿಲ್ ವಿಜಯ್ ದಿವಸ್ ಆಚರಣೆ| ವೀರಯೋಧರಿಗೆ ಪಾದಯಾತ್ರೆ ಮೂಲಕ ಗೌರವ
July 26, 2025
3:16 PM
by: The Rural Mirror ಸುದ್ದಿಜಾಲ
ಬದುಕಿಗೆ ಧರ್ಮದ ತಳಹದಿ ಅಗತ್ಯ : ರಾಘವೇಶ್ವರ ಶ್ರೀ
July 26, 2025
2:08 PM
by: ದ ರೂರಲ್ ಮಿರರ್.ಕಾಂ
ಹವಾಮಾನ ವರದಿ | 26-07-2025 | ಜುಲೈ ಅಂತ್ಯದವರೆಗೂ ಸಾಮಾನ್ಯ ಮಳೆ | ಕಾರಣ ಏನು ?
July 26, 2025
11:18 AM
by: ಸಾಯಿಶೇಖರ್ ಕರಿಕಳ

You cannot copy content of this page - Copyright -The Rural Mirror

Join Our Group