ಕಳೆದು ಹೋದ ಆ ಹೊತ್ತು

June 9, 2019
7:00 PM

ಅಮ್ಮ ಕೊಟ್ಟ ಕೈ ತುತ್ತು
ಅಪ್ಪ ಕೊಟ್ಟ ಸಿಹಿ ಮುತ್ತು
ಅಜ್ಜಿ ಕಥೆಗಾಗಿ ಹಂಬಲಿಸುತ್ತಿದ್ದ ಹೊತ್ತು
ಇಂದು ಕಳೆದು ಹೋದ ಅಮೂಲ್ಯ ಸಂಪತ್ತು||೧||

Advertisement
Advertisement

ಮರಳಲಿ ಮನೆ ಕಟ್ಟಿದ ಆ ದಿನಗಳು
ಅಪ್ಪನ ಹೆಗಲೇರಿ ಆಡಿದ ನೆನಪುಗಳು
ಓಡಿ ಆಡಿ ಬಿದ್ದಾಗ ಆದ ಗಾಯಗಳು
ಇಂದಿನ ಬದುಕಿಗೆ ಸುಂದರ ಸ್ವಪ್ನಗಳು||೨||

Advertisement

ಬಾಲ್ಯ ಕಳೆದಿದೆ,ಯೌವ್ವನ ಬಂದಿದೆ
ಸೈಕಲ್ ಗಾಡಿ ಗುಜುರಿ ಅಂಗಡಿ ಸೇರಿದೆ
ಮನೆಯ ಮುಂದೆ ಕಾರು ಬಂದು ನಿಂತಿದೆ
ಯೌವನದ ಅಮಲಿನಲಿ ಬದುಕೇ ಬದಲಾಗಿದೆ||೩||

ಆಧುನಿಕತೆಯ ಸೋಗಿನಲಿ ಕಾಲ ಓಡುತಿದೆ
ಭರದ ನಡಿಗೆಯಲಿ ಕಾಲ್ಗಳು ಸೋತಿದೆ
ಬಾಲ್ಯದ ನಗು ಇಂದು ಸತ್ತು ಹೋಗಿದೆ
ಹೋರಾಟವೇ ಇಂದಿನ ಬದುಕಾಗಿದೆ||೪||

Advertisement

ಮತ್ತೊಮ್ಮೆ ಹೋಗಬೇಕು ಬಾಲ್ಯದ ನೆನಪಿಗೆ
ಹುರುಪು ತುಂಬುವುದು ಇಂದಿನ ಬದುಕಿಗೆ
ಎಲ್ಲರ ಬಾಳಲ್ಲೂ ಬಾಲ್ಯದ ಸವಿ ಇರಲಿ ಹೀಗೆ
ನೀಡಲಿ ಹೊಸ ಚೈತನ್ಯ ಮುಂದಿನ ಬಾಳಿಗೆ||೫||

 

Advertisement
Advertisement
Advertisement

Advertisement
Advertisement
Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

Advertisement

ಲೇಖಕರ ಪರಿಚಯ​

ಅಪೂರ್ವಚೇತನ್ ಪೆರಂದೋಡಿ

ಶಿಕ್ಷಕಿ

ಇದನ್ನೂ ಓದಿ

ತಾಪಮಾನ – ಬರಗಾಲ – ಪೆನ್ ಡ್ರೈವ್ ಮತ್ತು ಸೆಕ್ಸ್… ಯಾವುದು ನಮ್ಮ ಆದ್ಯತೆಯಾಗಬೇಕು……. |
May 2, 2024
6:51 AM
by: ವಿವೇಕಾನಂದ ಎಚ್‌ ಕೆ
ತಾಪಮಾನದಿಂದ ಅಡಿಕೆ ಕೃಷಿ ರಕ್ಷಣೆ | ಗೋವು ಹಾಗೂ ಗೋಉತ್ಪನ್ನ ಪರಿಣಾಮಕಾರಿ ಹೇಗೆ..? | ಗೋ ಆಧಾರಿತ ಕೃಷಿಯ ಬಗ್ಗೆ ಜಾಗೃತಿ ಏಕೆ ಬೇಕು ?
May 2, 2024
6:38 AM
by: ಮುರಳಿಕೃಷ್ಣ ಕೆ ಜಿ
ಜೀವಕ್ಕೇ ಅಮೃತ – ಜೀವಾಮೃತ | ಜೀವಾಮೃತವು ಗಿಡ-ಮರಗಳನ್ನು ಬಿಸಿ ಮತ್ತು ಬರ, ನೀರಿನ ಕೊರತೆಯ ಸಹಿಷ್ಣುತೆ ಹೆಚ್ಚಿಸುತ್ತದೆ | |
May 1, 2024
5:44 PM
by: The Rural Mirror ಸುದ್ದಿಜಾಲ
ನಮ್ಮ ಮಕ್ಕಳಿಗಾಗಿ ಒಂದು ನೀತಿ ಕಥೆ | ಸಾಧ್ಯವಾದರೆ ಇದನ್ನು ಮಕ್ಕಳಿಗೆ ಓದಿ ಹೇಳಿ ಅಥವಾ ಓದಲು ಹೇಳಿ |
May 1, 2024
4:34 PM
by: ವಿವೇಕಾನಂದ ಎಚ್‌ ಕೆ

You cannot copy content of this page - Copyright -The Rural Mirror