ಧರ್ಮಸ್ಥಳ ಲಕ್ಷದೀಪೋತ್ಸವದಲ್ಲಿ ಲಲಿತಮ್ಮನ ವ್ಯವಹಾರ ಸುಲಲಿತ

November 25, 2019
9:07 AM

ಧರ್ಮಸ್ಥಳ: ಲಕ್ಷದೀಪೋತ್ಸವ ಸಂದರ್ಭದಲ್ಲಿ ಅರುವತ್ತು ವರ್ಷದ ಮಹಿಳೆಯೊಬ್ಬರು ಸುಲಲಿತ ವ್ಯವಹಾರ ನಡೆಸಿ ಎಲ್ಲರ ಗಮನ ಸೆಳೆದಿದ್ದಾರೆ.

ಜೀವನೋಪಾಯಕ್ಕಾಗಿ ಧರ್ಮಸ್ಥಳದಲ್ಲಿ ನಡೆಯುವ ಲಕ್ಷದೀಪೋತ್ಸವ ಸಂದರ್ಭ ವ್ಯಾಪಾರದ ಪುಟ್ಟ ಅಂಗಡಿಯನ್ನುತೆರೆದವರು ಲಿತಮ್ಮ. ನೆಲ್ಲಿಕಾಯಿ, ಮಾವಿನ ಮಿಡಿ, ಪೇರಳೆ ಮೊದಲಾದ ಸತ್ವಪೂರ್ಣ ಗ್ರಾಮೀಣ ಪೌಷ್ಠಿಕ ಆಹಾರಗಳು ಇವರಲ್ಲಿ ಮಿತದರದಲ್ಲಿ ಸಿಗುತ್ತವೆ. 25 ವರ್ಷಗಳ ಹಿಂದೆ ಇವರ ಗಂಡ ನಿಧನರಾದ ಬಳಿಕ “ಕಾಯಕವೇ ಕೈಲಾಸ” ಎಂದು ನಂಬಿ ಪುಟ್ಟ ಅಂಗಡಿ ಪ್ರಾರಂಭಿಸಿದ ಇವರು ಪ್ರಾಮಾಣಿಕ ವ್ಯವಹಾರ ನಡೆಸುತ್ತಾರೆ. ಅತಿಯಾದ ಲಾಭಗಳಿಸುವ ಹಂಬಲ ಈಕೆಗಿಲ್ಲ.

ಎಲ್ಲಾಖರ್ಚು, ವೆಚ್ಚ ಕಳೆದು ದಿನಕ್ಕೆ ಇನ್ನೂರು ರೂ.ನಿವ್ವಳ ಲಾಭಗಳಿಸುತ್ತೇನೆ. ಇದರಲ್ಲೆ ತನಗೆ ತೃಪ್ತಿ, ಸಂತೋಷವಿದೆ ಎಂದು ಲಲಿತಮ್ಮ ಮಂದಹಾಸ ಬೀರುತ್ತಾರೆ.
ವ್ಯವಹಾರದಲ್ಲಿ ಎದುರಾಗುವ ಸಣ್ಣಪುಟ್ಟ ಸವಾಲುಗಳನ್ನು ಸಮಸ್ಯೆಗಳನ್ನು ಧೈರ್ಯದಿಂದ ಎದುರಿಸುತ್ತೇನೆ ಎಂದು ಆತ್ಮವಿಶ್ವಾಸದಿಂದ ನುಡಿಯುತ್ತಾರೆ ಲಲಿತಮ್ಮ.
ಸಾಮಾನ್ಯವಾಗಿ 60ರ ನಂತರ ಅರಳು ಮರಳು ಎನ್ನುತ್ತಾರೆ. ಆದರೆ ಲಲಿತಮ್ಮನ ಜೀವನದಲ್ಲಿ 60ರ ಹರೆಯ ಮರಳಿ ಅರಳುವ ಪ್ರಾಯ. ಏಕೆಂದರೆ ಅವರಲ್ಲಿ ಜೀವನ ಪ್ರೀತಿ ಹಾಗೂ ಲವಲವಿಕೆ ನಿತ್ಯನೂತನವಾಗಿದೆ.

Advertisement
Advertisement
Advertisement
ಇದು ನಮ್ಮ YouTube ಚಾನೆಲ್ - Subscribe ಮಾಡಿ ಬೆಂಬಲಿಸಿ
Advertisement
Rural Mirror Special | Subscribe Our Channel

ಲೇಖಕರ ಪರಿಚಯ​

ದ ರೂರಲ್ ಮಿರರ್.ಕಾಂ

ರೂರಲ್‌ ಮಿರರ್‌ ಪ್ರಕಾಶನದ ವತಿಯಿಂದ ನಡೆಸಲ್ಪಡುವ ಡಿಜಿಟಲ್‌ ಮಾಧ್ಯಮ ಇದಾಗಿದೆ.  ಕೃಷಿ, ಗ್ರಾಮೀಣ ಸಹಿತ ಸಮಗ್ರವಾದ ಸುದ್ದಿಗಳನ್ನು "ದಿ ರೂರಲ್‌ ಮಿರರ್‌.ಕಾಂ" ನಲ್ಲಿ ನೀವು ಓದಬಹುದು. ಯಾವುದೇ ಸುದ್ದಿಗಳು ಇದ್ದರೆ [email protected] / [email protected] ಮೈಲ್ ಅಥವಾ 9449125447 ನಂಬರ್ ಗೆ ವ್ಯಾಟ್ಸಪ್ ಮೂಲಕ ಕಳುಹಿಸಬಹುದು.

ಇದನ್ನೂ ಓದಿ

ಅಡಿಕೆ ತಳಿಗಳ ಬಗ್ಗೆ ಹೊಸ ವೈಜ್ಞಾನಿಕ ಅಧ್ಯಯನ – ಅಡಿಕೆ ತಳಿಗಳಲ್ಲೂ ಆಲ್ಕಲಾಯ್ಡ್ ಪ್ರಮಾಣದಲ್ಲಿ ವ್ಯತ್ಯಾಸ
July 25, 2026
6:46 AM
by: ದ ರೂರಲ್ ಮಿರರ್.ಕಾಂ
ಭಾರೀ ಮಳೆಯ ಮುನ್ಸೂಚನೆ ಹಿನ್ನೆಲೆ – ದಕ್ಷಿಣ ಕನ್ನಡ- ಉಡುಪಿ ಜಿಲ್ಲೆಯಲ್ಲಿ ಜು.25ರಂದು ಶಾಲೆ-ಕಾಲೇಜುಗಳಿಗೆ ರಜೆ ಘೋಷಣೆ
July 24, 2026
9:47 PM
by: ದ ರೂರಲ್ ಮಿರರ್.ಕಾಂ
ರಸಗೊಬ್ಬರದಲ್ಲಿ ಆತ್ಮನಿರ್ಭರತೆ ಅನಿವಾರ್ಯ – ಸಂಕಷ್ಟದಿಂದ ಅವಕಾಶದತ್ತ ಭಾರತ ಸಾಗಬೇಕಿದೆ
July 24, 2026
5:01 PM
by: ದ ರೂರಲ್ ಮಿರರ್.ಕಾಂ
18 ಕರಿಮೆಣಸು ತಳಿಗಳ ನರ್ಸರಿ ನಿರ್ಮಿಸಿ ಯಶಸ್ಸು ಕಂಡ ಯುವ ರೈತ
July 24, 2026
6:22 AM
by: ದ ರೂರಲ್ ಮಿರರ್.ಕಾಂ

You cannot copy content of this page - Copyright -The Rural Mirror